ಸಾಂಬಾರು ಪದಾರ್ಥಗಳ ರಾಜ ಎಂದು ಕರೆಸಿಕೊಳ್ಳುವ ಕಾಳು ಮೆಣಸು ಆದಾಯಕದ ಕೃಷಿ. ರೈತರು ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುವ ಕೃಷಿಗಳಲ್ಲಿ ಕಾಳು ಮೆಣಸು ಕೂಡಾ ಒಂದು. ಮಳೆಗಾಲದ ಆರಂಭದಲ್ಲಿ ಇದರ ಕೃಷಿಯನ್ನು ಪ್ರಾರಂಭಿಸಬಹುದು.
ಕಾಳುಮೆಣಸು ಬೇಸಾಯ:
ಕಾಡು ಮೆಣಸು ಬೇಸಾಯವನ್ನು ಮಾಡಬೇಕಾದರೆ ಮೊದಲು ಆರೋಗ್ಯವಂತ ಬಳ್ಳಿಗಳಿಂದ ಕಾಲು ಬಳ್ಳಿಗಳನ್ನು ಸಂಗ್ರಹಿಸಿ ಬಳಸಬೇಕು ಅರ್ಧ ಕೆಜಿ ಅಥವಾ ಒಂದು ಕೆಜಿ ಮಣ್ಣು ಹಿಡಿಸುವಷ್ಟು ಪಾಲಿಥಿನ್ ಕವರ್ ಗಳಲ್ಲಿ ಮಣ್ಣು, ಕೊಟ್ಟಿಗೆ ಗೊಬ್ಬರ, ಮರಳು ಮಿಶ್ರಣವನ್ನು ಸಮ ಪ್ರಮಾಣದಲ್ಲಿ ತುಂಬಬೇಕು ನಂತರ ಬಳ್ಳಿಗಳನ್ನು ಅದರಲ್ಲಿ ನೆಡಬೇಕು.
ಹೀಗೆ ನೆಟ್ಟ ಬಳ್ಳಿಗಳನ್ನು ಸೋಗೆ ಚಪ್ಪರದ ಕೆಳಗೆ ಇಡಬೇಕು ನಂತರ ದಿನ ನೀರನ್ನು ಹಾಕುತ್ತಿರಬೇಕು. ಮೊಳಕೆ ಬಂದ ಬಳ್ಳಿಗಳನ್ನು ಸೂಕ್ತ ಮರಗಳ ಆಯ್ಕೆ ಮಾಡಿ ಅದರ ಕೆಳಗೆ ಇಡಬೇಕು
ತಳಿಗಳ ಆಯ್ಕೆ:
ಪಣಿಯೂರು, ಕೊಟ್ಟನಾಡು, ಮಲ್ಲಿಗೆ ಸರ, ಕರಿಮುಂಡ ಇನ್ನು ಮುಂತಾದ ತಳಿಗಳಿದ್ದು ನಿಮ್ಮ ವಾತಾವರಣಕ್ಕೆ ಸೂಕ್ತ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
ಕಾಳು ಮೆಣಸಿಗೆ ಬರುವ ರೋಗಗಳು:
ಸೂರಗು ರೋಗ:
ಈ ರೋಗ ಹೆಚ್ಚಾಗಿ ಮುಂಗಾರಿನಲ್ಲಿ ಕಾಣಿಸಿಕೊಳ್ಳುತ್ತದೆ. ಎಲೆಗಳಲ್ಲಿ ಕಪ್ಪು ಚುಕ್ಕೆಗಳು ಕಾಣಿಸಿಕೊಂಡು ನಂತರ ಎಲೆ ಉದುರಲು ಪ್ರಾರಂಭವಾಗುತ್ತದೆ. ಆ ರೋಗ ಬಂದರೆ 30 ದಿನಗಳಲ್ಲಿ ಬಳಿಕ ಸಾಯುತ್ತದೆ.
ಚಿಬ್ಬುರೋಗ:
ಈ ರೋಗವು ಮುಂಗಾರಿನಲ್ಲಿ ಕಾಣಿಸಿಕೊಳ್ಳುತ್ತದೆ. ಬೂದುಬಣ್ಣದ ಚುಕ್ಕೆಗಳು ಎಲೆಗಳಲ್ಲಿ ಕಾಣಿಸಿಕೊಳ್ಳುತ್ತದೆ ಕಂದು ಬಣ್ಣದ ಚುಕ್ಕೆಗಳು ಕಾಳಿನಲ್ಲಿ ಕಾಣಿಸಿಕೊಂಡು ಕಪ್ಪು ಬಣ್ಣಕ್ಕೆ ತಿರುಗಿ ಕಾಳು ಒಣಗಿ ಬಿದ್ದು ಹೋಗುತ್ತದೆ.
ಸ್ಟಂಟ್ ರೋಗ:
ಈ ರೋಗ ವೈರಸ್ ಗಳಿಂದ ಉಂಟಾಗುತ್ತದೆ . ಎಲೆಗಳ ಮೇಲೆ ಹಳದಿ ಬಣ್ಣದ ಚುಕ್ಕೆಗಳು ಮತ್ತು ಗೆರೆಗಳು ಕಾಣಿಸಿಕೊಳ್ಳುತ್ತದೆ.
ರೋಗದ ಹತೋಟಿ:
*ರೋಗ ಬಂದಿರುವ ಬಳ್ಳಿಗಳನ್ನು ಬೇರುಸಮೇತ ಕಿತ್ತು ತೋಟದಿಂದ ಹೊರಗೆ ಎಸೆಯಿರಿ.
*ರೋಗವಿಲ್ಲದ ಬಳ್ಳಿಗಳನ್ನು ಬೇಸಾಯದಲ್ಲಿ ಬಳಸಬೇಕು.
* ತೋಟದಲ್ಲಿ ನೀರು ನಿಲ್ಲದಂತೆ ಕಾಲುವೆ ನಿರ್ಮಿಸಬೇಕು
*ಕಾಳುಮೆಣಸು ತೋಟದಲ್ಲಿ ನೈರ್ಮಲ್ಯಕ್ಕೆ ಆದ್ಯತೆ ನೀಡಬೇ