ನವೋದಯ ಸಾಹಿತ್ಯ ರೂಪುಗೊಳ್ಳಲು ಮೂರು ಮುಖ್ಯ ಪ್ರೇರಣೆ ಮತ್ತು ಪ್ರಭಾವಗಳನ್ನು ಗುರುತಿಸಲಾಗುತ್ತದೆ, “ಕನ್ನಡ ನಾಡು-ನುಡಿಗಾಗಿ ಹೋರಾಟ, ಕನ್ನಡ ನವೋದಯ ಸಾಹಿತ್ಯದ ಮೊದಲ ಹಂತದ ಗುರಿಯಾಗಿದ್ದಿತು. ಮಾತೃಭಾಷೆಗಾಗಿ ಶ್ರಮಿಸುವುದು ಆಗ ಭಾರತೀಯ ಎಲ್ಲ ಭಾಷೆಗಳಲ್ಲೂ ಆ ಸಂದರ್ಭದಲ್ಲಿ ಕಂಡು ಬರುತ್ತದೆ. ಮೊದಲ ಹಂತದ ಆಂದೋಲನದಲ್ಲಿ ಹಲವು ಲೇಖಕರು, ಭಾಷಾಭಿಮಾನಿಗಳು, ಅನುವಾದಕರು, ಪಂಡಿತರು, ಪತ್ರಕರ್ತರು, ಸಮಾಜ ಕಾರ್ಯಕರ್ತರು, ರಾಜಕಾರಣಿಗಳು ಮೊದಲಾದವರು ಭಾಗವಹಿಸಿದ್ದರು. ಗಳಗನಾಥ, ವೆಂಕಟಾಚಾರ್ಯ, ಕೆರೂರ ವಾಸುದೇವಾಚಾರ್ಯ ಮೊದಲಾದ ಸಾಹಿತಿಗಳು, ಉತ್ತರ ಕರ್ನಾಟಕದ ಅನಾಡ ಚೆನ್ನವೀರಪ್ಪ, ಮಾದನಶೆಟ್ಟಿ, ಕಲ್ಯಾಣಪ್ಪ, ವಿಭೂತಿ ಹುಚ್ಚಯ್ಯ ಮೊದಲಾದ ಪತ್ರಕರ್ತರು ಸರಕಾರ್ದರು, ಈ ಕಾರ್ಯವನ್ನು ಮುಂದೆ ಆಲೂರು ವೆಂಕಟರಾಯ, ಮುದವೀಡು ಕೃಷ್ಣರಾಯರು, ತಳುಕಿನ ವೆಂಕಣ್ಣಯ್ಯ, ಮುಂದುವರೆಸಿದರು.
ಕನ್ನಡ ನಾಡು-ನುಡಿಗಳ ಹೋರಾಟದ ನಿಚ್ಚಳ ಹೆಜ್ಜೆ ಗುರುತುಗಳು ಸಾಹಿತ್ಯದಲ್ಲಿ ಕಾಣಲಾರಂಭಿಸುವುದು “ಕರ್ನಾಟಕ ವಿದ್ಯಾರ್ವಕ ಸಂಘವು ಮಾಡಿದ ಕಾರ್ಯಗಳಿಂದ ಅದಕ್ಕೂ ಹಿಂದೆ ಡೆಪ್ಯುಟಿ ಚೆನ್ನಬಸಪ್ಪನವರು ಧಾರವಾಡ, ಬಿಜಾಪುರ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಚಳುವಳಿಗೆ ನಾಂದಿ ಹಾಡಿದ್ದರು. “ಕನ್ನಡ ದಾಸಯ್ಯ, ರಕ್ಷಿಸು ಕರ್ನಾಟಕ’ ದೇವಿ’ ಕವಿತೆಗಳನ್ನು ಬರೆದ ಶಾಂತಕವಿಗಳು ಕನ್ನಡಕ್ಕಾಗಿ ತನು-ಮನ-ಧನಗಳನ್ನು ವ್ಯಯಿಸಿ ಹೋರಾಟ ಮಾಡಿದ ರೀತಿಯನ್ನು ನಾವು ಈ ಹಿಂದೆ ಗಮನಿಸಿದ್ದೇವೆ. ತಮ್ಮ ನಾಡು-ನುಡಿಯ ಬಗ್ಗೆ ಜನರ ನಿರುತ್ಸಾಹವನ್ನು ಕುರಿತು ಶಾಂತಕವಿಗಳು ಹೀಗೆ ಬರೆದಿದ್ದಾರೆ: ‘ಎಲ್ಲಿ ನೋಡಲು ಮಹಾರಾಷ್ಟ್ರ ಭಾಷಾಮಯಂ ತಾನಾಯ್ತು ಕರ್ನಾಟಕಂ’ ಸಾಲಿ ರಾಮಚಂದ್ರರಾಯರು ‘ಕನ್ನಡದ ನೆಲದ ಮಲ್ಲೆನಗೆ ಪಾವನ ತುಲಸಿ, ಕನ್ನಡದ ನೆಲದ ನೀರ್ವೊಸಲೆನಗೆ ದೇವನದಿ ಕನ್ನಡದ ನೆಲದ ಕಲ್ಲಿನಗೆ ಶಾಲಗ್ರಾಮ ಶಿಲೆ’ ಎಂದು ಹಾಡಿದ್ದಾರೆ. ‘ನಮ್ಮೆದೆಯಂ ತಾಯೆ ಬಲಿಸು! ಎಲ್ಲರ ಬಾಯಲ್ಲಿ ನೆಲಸು! ನಮ್ಮ ಮನವನೊಂದೆ ಕಲಸು ಎದನೊಂದನೆ ಕೋರುವೆ’ ಎಂದು ಗೋವಿಂದ ಪೈ ಅವರು ಹಾಡಿದ್ದಾರೆ. ಗೋವಿಂದಪ್ಪ ‘ಕರ್ನಾಟಕದ ಗತವೈಭವ’ವನ್ನು ಕುರಿತು ಬರೆಯುವಾಗಲೂ ಕರ್ನಾಟಕದ ವೈಭವವನ್ನು ಕನ್ನಡಿಗರಿಗೆ ಕಾಣಿಸಿ, ಆವರಲ್ಲಿ ಸುಪ್ತವಾಗಿದ್ದ ಕನ್ನಡಾಭಿಮಾಗವನ್ನು ಎಚ್ಚರಗೊಳಿಸುವುದೇ ಗುರಿ ಆಗಿದ್ದಿತು, ‘ಕರ್ನಾಟಕದ ಗತವೈಭವ ‘ಶ್ರೀ ವಿದ್ಯಾರಣ್ಯ’ ಮತ್ತು ‘ಶ್ರೀ ವಿದ್ಯಾರಣ್ಯ ಚಾರಿತ್ರ್ಯ’ ಮೊದಲಾದವು ಈ ದಿಕ್ಕಿನಲ್ಲಿ ರಚನೆಯಾದ ಕೃತಿಗಳು,
ಮೈಸೂರು ಕೇಂದ್ರದಲ್ಲಿ ಕನ್ನಡ ನಾಡು ನುಡಿಯ ಹೋರಾಟ ಪ್ರಾರಂಭವಾಗುವುದು ಕನ್ನಡ ನವೋದಯದ ಆಚಾರ್ಯ ಪುರುಷರೆಂದು ಖ್ಯಾತರಾದ ಬಿ. ಎಂ. ಶ್ರೀ. ಅವರ ಭಾಷಣಗಳು ಮತ್ತು ಕವಿತೆಗಳಿಂದ, ಅವರು `ಕನ್ನಡ ಮಾತು ತಲೆ ಎತ್ತುವ ಬಗ್ಗೆ’ ಎಂಬ ಭಾಷಣದಲ್ಲಿ “ಈಗ ಆನೇಕ ಕಾರಣಗಳಿಂದ ಕನ್ನಡ ಅವನತ ಸ್ಥಿತಿಗೆ ಬಂದಿದೆ. ಕುಗ್ಗಿ ಹೋಗಿದೆ. ಅವರಲ್ಲಿ ಬಲವಿಲ್ಲ, ಅದನ್ನಾಡುವ ಜನರಲ್ಲಿ ಹಲವರಿಗೆ ಅದರಲ್ಲಿ ಪ್ರೇಮವಿಲ್ಲ. ಅದಕ್ಕೆ ಹಾನಿ ತಟ್ಟದಂತೆ ಅವನ್ನು ಕಾಪಾಡಿಕೊಳ್ಳುವ ಉತ್ಸಾಹವಿಲ್ಲ. ಅವರ ಪ್ರೇಮ, ಅವರ ಉತ್ಸಾಹ ಮತ್ತೆಲ್ಲಿಯೋ ಹೋಗಿದೆ” ಇಂಥ
ಸಂದರ್ಭದಲ್ಲಿ ಕನ್ನಡ ಮೊದಲಿಗಿಂತಲೂ ಹೆಚ್ಚು ಪ್ರಬುದ್ಧವಾಗಿ ಹೆಚ್ಚು ಶಕ್ತಿಯುತವಾಗಿ ಬೆಳೆಯಬೇಕೆಂದು ಹಂಬಲಿಸಿ ಕೃನಡಿಗರಲ್ಲಿ ಕನ್ನಡದ ಜಾಗೃತಿ ಅಭಿಮಾನ ಮತ್ತು ಹೋರಾಟ ಪ್ರಶ್ನೆ ಮೂಡಿಸಲು ಪ್ರಯತ್ನಿಸಿದರು. ‘ಹಾರೈಕೆ’, ‘ಕನ್ನಡ ತಾಯ ಕೋಟಿ’, ‘ಕನ್ನಡದ ಬಾವುಟ ಮೊದಲಾದ ಪದಗಳಲ್ಲಿ, ‘ಕನ್ನಡಕ್ಕೆ ಒಂದು ಕಟ್ಟು’, ‘ಕನ್ನಡದ ಸುನರುಜೀವನ’ ಗದ್ಯ ಬರಹಗಳಲ್ಲಿ, ಕನ್ನಡ ನಾಡಿನಾದ್ಯಂತ ಸಂಚರಿಸಿ ಅವರು ಮಾಡಿದ ಭಾಷಣಗಳಿಂದ ಕನ್ನಡ ನಾಡು-ನುಡಿಯ ಹೋರಾಟದ ಸ್ವರೂಪವನ್ನು ಗಮನಿಸಬಹುದಾಗಿದೆ.
ವರಕವಿ ಬೇಂದ್ರೆಯವರ “೩OOOOOOOO” ಕವಿತೆ ಮತ್ತು “ಕನಸಿನೊಳಗೊಂದು ಕಣಸು” ಕವಿತೆಗಳೂ ಇದೇ ಜಾಡಿನಲ್ಲಿ ಬಂದಂತಹವು, ಚಮತ್ಕಾರ ಮತ್ತು ನಾಟಕೀಯತೆಯ ಗುಣಗಳಿಂದ ಕಟ್ಟಿದ “ಕನಸಿನೊಳಗೊಂದು ಕಣಸು – ಜಯಕರ್ನಾಟಕ: ಕವಿತೆ ತಾಯಿ-ಮಗ ಕುವರಿಬ್ಬವರ ಸಂಭಾಷಣೆಯ ರೀತಿಯಲ್ಲಿ ಕವನದ ಶಿಲ್ಪ ಕಟ್ಟಲ್ಪಟ್ಟಿದೆ.
ಇಲ್ಲಿ ತಾಯಿ ಕನ್ನಡ ತಾಯಿಯಾಗಿದ್ದಾಳೆ. ಮಗ ಕನ್ನಡ ಮಗನಾಗಿದ್ದಾನೆ. ತನ್ನ ತಾಯಿಯನ್ನೂ ಮಗ ಗುರುತಿಸುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗೆ ಈ ಕವಿತೆ ಒಡಪಿನಂದದಲ್ಲಿ ಅಂದು ಕನ್ನಡ ನಾಡಿನ ಸ್ಥಿತಿ ಮತ್ತು ಕನ್ನಡಿಗರ ಪರಿಸ್ಥಿತಿಗಳನ್ನು ತಿಳಿಸುತ್ತದೆ. ಮೇಲಿನ ಬಿ.ಎಂ. ಶ್ರೀ. ಅವರ “ಕನ್ನಡ ತಾಯ ನೋಟ” ಕವಿತೆ ಅಕ್ಕ ಪಕ್ಕದ ತಮಿಳು ಮತ್ತು ತೆಲುಗರಿಗೆ ಇಷ್ಟವಾಗದೆ ಹೋಗಬಹುದು ಆದರೆ ಬೇಂದ್ರೆಯವರ “ಕನಸಿನೊಳಗೊಂದು ಕಣಸು” ಕವಿತೆ ಐರಿಷ್ ದೇಶದ ರಾಷ್ಟ್ರಗೀತೆ ಯಾಗಬಲ್ಲದು ಎಂದು ಯು. ಆರ್. ಅನಂತಮೂರ್ತಿ ಹೇಳುತ್ತಾರೆ. ಬೇಂದ್ರೆ ವಿಶ್ವಮಟ್ಟದ ಕವಿಯೆನ್ನುವುದು ಈ ಕಾರಣಕ್ಕಾಗಿ ಅವರ ಕವಿತೆಗಳಲ್ಲಿರುವ ಅಂತಸತ್ವ ಯಾವ ದೇಶದ ಜನರಿಗೂ ಪ್ರಿಯವಾಗಬಲ್ಲದು ಎಂಬ ಕಾರಣಕ್ಕಾಗಿ ಎಂಬುದನ್ನು ವಿದ್ಯಾರ್ಥಿಗಳು ತಿಳಿಯಬೇಕು.
ಕುವೆಂಪು ಅವರ ನಾಡು-ನುಡಿಯ ಭಾವಗೀತೆಗಳು ಸರಳ ಮತ್ತು ಅಭಿಮಾನಪೂರ್ವಕ ಗೀತೆಗಳಾಗಿದ್ದು ಜನಪ್ರಿಯವಾಗಿವೆ: “ಜಯಹೇ ಕರ್ನಾಟಕ ಮಾತೆ”, “ಅಖಂಡ ಕರ್ಣಾಟಕ”, “ಕನ್ನಡ ಡಿಂಡಮ”, “ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರ”, “ಪ್ರಾರ್ಥಿಸಿ, ಓ ಮಕ್ಕಳಿರಾ”, “ಸಾಕು ಈ ಬಲತ್ಕಾರ” ಮುಂತಾದವು.
ಗೋಪಾಲಕೃಷ್ಣ ಅಡಿಗರ “ಕಟ್ಟುವೆವು ನಾವು” ಕವಿತಾ ಸಂಕಲನ ಕೂಡ ನಾಡು-ನುಡಿಯ ಅಭಿಮಾನಗಳಿಂದ ಪ್ರೇರಿತವಾಗಿ ಬಂದಂತಹ ಕವಿತಾ ಸಂಕಲನವಾಗಿದೆ.
“ಕನ್ನಡ ಬರಹಗಾರರು ಮತ್ತು ಕವಿಗಳು ಕನ್ನಡ ಪರ ಹೋರಾಟಕ್ಕೆ ಮತ್ತು ಕನ್ನಡ ನಾಡು-ನುಡಿಗಳನ್ನು ಕುರಿತು ಈ ರೀತಿ ಟೊಂಕ ಕಟ್ಟಿ ನಿಲ್ಲಲು ಕಾರಣ ಜನತೆಯಲ್ಲಿ ತಮ್ಮ ನಾಡು-ನುಡಿಗಾಗಿ ಹೋರಾಟ ನಡೆಸುವ ಅವಶ್ಯಕತೆಯನ್ನು ಮತ್ತು ತ್ಯಾಗ-ಬಲಿದಾನಗಳ ಅವಶ್ಯಕತೆಯನ್ನು ಕುರಿತು ಅವರನ್ನು ಜಾಗೃತರನ್ನಾಗಿ ಮಾಡುವ ಉದ್ದೇಶ ಹೊಂದಿದ್ದರು. ಸ್ವಂತ ನಾಡಿಗಾಗಿ ಜನತೆಯನ್ನು ಬಡಿದೆಬ್ಬಿಸಬೇಕಾದ ಹೊಣೆಗಾರಿಕೆ ಅವರ ಹೆಗಲ ಮೇಲೆ ಇದ್ದುವು. ಇಂತಹ ಹೊಣೆಗಾರಿಕೆಯನ್ನು ಪ್ರತಿಯೊಬ್ಬ ಸಾಹಿತಿಯೂ ಆ ಕಾಲಮಾನದಲ್ಲಿ ಹೆಗಲಮೇಲೆ ಹೊತ್ತಿಕೊಂಡು ನಿಭಾಯಿಸಿದ್ದರು ಎಂಬುದನ್ನು ಇಲ್ಲಿ ತಿಳಿಯಬಹುದು.
Kannada Nadu nudi sahitika koduge
Tank you