ಮನೆಯ ಮುಂದೆ ಬಣ್ಣಬಣ್ಣದ ಹೂವಿನ ಗಿಡಗಳನ್ನು ನೋಡಿದ್ದರೆ ಏನೋ ಒಂದು ಉಲ್ಲಾಸ. ಗಿಡಗಳಲ್ಲಿ ಸದಾ ಹೂ ಬಿಟ್ಟಿರಬೇಕೆಂಬದು ನಮ್ಮೆಲ್ಲರ ಆಶಯ ಕೂಡ ಹೌದು. ಹಾಗೆ ಹೂ ಬಿಡಬೇಕು ಎಂದರೆ ನಾವು ಗಿಡಗಳ ಆರೈಕೆಯನ್ನು ಕೂಡ ಅಷ್ಟೇ ಚೆನ್ನಾಗಿ ಮಾಡಬೇಕಾಗುತ್ತದೆ. ಗಿಡಕ್ಕೆ ಬೇಕಾದ ಗೊಬ್ಬರ ನೀರನ್ನು ಹಾಕುತ್ತಲೇ ಇರಬೇಕಾಗುತ್ತದೆ. ಚಳಿಗಾಲ ಮತ್ತು ಮಳೆಗಾಲದಲ್ಲಿ ಗಿಡಗಳಿಗೆ ಅಷ್ಟೇನೂ ನೀರಿನ ಅವಶ್ಯಕತೆ ಇರುವುದಿಲ್ಲ. ಆದರೆ ಬೇಸಿಗೆಯಲ್ಲಿ ಗಿಡಗಳು ಒಣಗುತ್ತವೆ ಆದರಿಂದ ನೀರಿನ ಅವಶ್ಯಕತೆ ಹೆಚ್ಚಾಗಿ ಇರುತ್ತದೆ. ಇನ್ನೂ ಬೇಸಿಗೆಯಲ್ಲಿ ತೋಟಗಾರಿಕೆ ಒಂದು ಸವಾಲಿದ್ದಂತೆ. ಬೇಸಿಗೆಯ ಶಾಖದಿಂದ ಸಸ್ಯಗಳು ಹೆಚ್ಚು ಹಾನಿಗೊಳಗಾಗುತ್ತವೆ. ಕೆಲವು ಸಸ್ಯಗಳು ಒಣಗುತ್ತವೆ ಮತ್ತು ಎಲೆಗಳು ಉದುರಿಹೋಗುತ್ತವೆ.
ಸಸ್ಯಗಳಿಗೆ ಗರಿಷ್ಠ ಪ್ರಮಾಣದ ನೀರು ಹಾಕುವುದು ಅಗತ್ಯವಾಗಿರುತ್ತದೆ. ಇವುಗಳೊಂದಿಗೆ ಗೊಬ್ಬರ ಮತ್ತು ಕ್ಯಾಲ್ಸಿಯಂ ಅನ್ನು ಸಹ ಸರಿಯಾಗಿ ಗಿಡಗಳಿಗೆ ನೀಡಬೇಕು. ಸೂರ್ಯನ ಶಾಖವನ್ನು ಗಮನದಲ್ಲಿಟ್ಟುಕೊಂಡು ಸಸ್ಯಗಳನ್ನು ನೆರಳಿನಲ್ಲಿ ಇರಿಸಬೇಕು. ಹಾಗೆ ಮಾಡುವುದರಿಂದ, ಹೆಚ್ಚಿನ ತಾಪಮಾನ ಮತ್ತು ಸೂರ್ಯನ ಬೆಳಕಿನಿಂದ ಸಸ್ಯಗಳು ಸುಡುವುದಿಲ್ಲ.
ಹಾಗೆಯೇ ಹಣ್ಣಿನ ಸಸ್ಯಗಳ ಬಗ್ಗೆ ನೋಡುವುದಾದರೆ ಜನರು ಹೆಚ್ಚು ನಿಂಬೆ, ಮಾವಿನಮರ ಪೇರಲೆ ಗಿಡಗಳನ್ನು ನೆಡುತ್ತಾರೆ. ಬೇಸಿಗೆಯಲ್ಲಿ ಈ ಸಸ್ಯಗಳಿಗೆ ಹೆಚ್ಚಿನ ಬೇಡಿಕೆಯಿದೆ. ಏಕೆಂದರೆ ಈ ಸಸ್ಯಗಳು ಕಡಿಮೆ ಸಮಯದಲ್ಲಿ ಬೆಳೆಯುತ್ತವೆ ಹಾಗೆಯೇ ನೆರಳಿನೊಂದಿಗೆ ಹೆಚ್ಚು ಹಣ್ಣುಗಳನ್ನು ನೀಡುತ್ತದೆ. ಅದಕ್ಕಾಗಿ ನಾವು ಬೇಸಿಗೆಯಲ್ಲಿ ಆ ಗಿಡಗಳಿಗೆ ನೀರನ್ನು ಹಾಕುತ್ತಲೇ ಇರಬೇಕು
ಗಿಡಗಳ ಅಗತ್ಯಕ್ಕೆ ತಕ್ಕಂತೆ ನೀರು ಕೊಡಬೇಕು. ಅಲೋವೆರಾ ಗಿಡಗಳಿಗೆ ಹೋಲಿಸಿದರೆ ಗುಲಾಬಿ ಗಿಡಗಳಿಗೆ ಹೆಚ್ಚು ನೀರು ಬೇಕಾಗುತ್ತದೆ. ಕೆಲವು ರೀತಿಯ ಸಸ್ಯಗಳಿಗೆ ಹೆಚ್ಚು ನೀರು ಬೇಕಾಗುತ್ತದೆ. ಇನ್ನು ಕೆಲವಕ್ಕೆ ಕಡಿಮೆ ನೀರು ಸಾಕಾಗುತ್ತದೆ ಮನುಷ್ಯರಿಗಾದರೆ ನೀರನ್ನು ನಾವು ಕೇಳಿ ಪಡೆಯುತ್ತೇವೆ ಆದರೆ ಗಿಡಗಳಿಗೆ ನಾವು ಕೊಟ್ಟರೆ ಮಾತ್ರ ನೀರು ಹಾಗಾಗಿ ಬೇಸಿಗೆಯಲ್ಲಿ ತುಂಬಾ ನೀರನ್ನು ಹಾಕುತ್ತಲೆ ಇದ್ದರೆ ಮಾತ್ರ ಗಿಡಗಳು ಬದುಕುತ್ತವೆ ಇಲ್ಲ ಆದರೆ ಈ ಸುಡುಬಿಸಿಲಿನಲ್ಲಿ ಅವು ಸತ್ತು ಹೋಗುತ್ತವೆ.
ಉದ್ಯಾನದಲ್ಲಿ ಹೊಸ ಸಸ್ಯಗಳಿಗಾಗಿ ಹೊಸ ಬೀಜಗಳನ್ನು ಹಾಕುವಾಗ, ಆರೋಗ್ಯವಂತ ಬೀಜಗಳನ್ನು ಆರಿಸಿ. ಹಾಗೆಯೇ ಮಣ್ಣಿಗೆ ಹಾಕಿ ಅವು ಮೊಳಕೆಯೊಡೆಯುವವರೆಗೆ ಪ್ರತಿದಿನ ನೀರನ್ನು ಸಿಂಪಡಿಸಬೇಕು. ಗಿಡಗಳಿಗೆ ನೀರುಣಿಸುವುದು ಮಾತ್ರವಲ್ಲದೆ ನಾವು ಅವುಗಳ ಜೊತೆ ಸಮಯವನ್ನು ಕಳೆಯಬೇಕು