ನಾವೆಲ್ಲ ಚಿಕ್ಕವರಿರುವಾಗ ರಿಸಲ್ಟ್ ದಿನ ಎಂದರೆ ಏನೋ ಖುಷಿ…ರಿಸಲ್ಟ್ ಮುಗಿದ್ದಿದ್ದೆ ರಜಾ ಸಿಗುತ್ತಿತ್ತು. ಆಗ ಏನೆನೋ ಯೋಜನೆಗಳನ್ನು ಹಾಕಿಕೊಳ್ಳುತ್ತಾ ಇದ್ವಿ.
ಆಗೆಲ್ಲಾ ಅಜ್ಜಿ ಮನೆ ದೊಡ್ಡಮ್ಮನ ಮನೆ ಎಂದು ತಿರುಗುವುದಕ್ಕೆ ಲೆಕ್ಕವೇ ಇರಲ್ಲಿಲ್ಲ. ಅಕ್ಕ-ತಂಗಿ ಅಣ್ಣ-ತಮ್ಮ ಎಲ್ಲ ಜೊತೆಗೂಡಿ ಹೊಲದಲ್ಲಿ ಆಟ ಆಡೋದು. ಆಗೆಲ್ಲ ಬೆಟ್ಟದ ಹಣ್ಣು ತೆಗೆದು ತಿಂದ ಸವಿಯ ನೆನಪಿನ್ನು ಹಾಗೆ ಇದೆ. ಒಂದಾ ಎರಡಾ ಎಷ್ಟೆಲ್ಲಾ ವಿವಿಧ ಬಗೆಯ ಹಣ್ಣು ಜೊತೆಗೂಡಿ ಸವಿಯೋದ್ರಲ್ಲಿ ಮಜಾ ಇರ್ತಿತ್ತು. ಅಷ್ಟೇನಾ ಇಲ್ಲ, ಇನ್ನು ಪ್ರಸಿದ್ಧ ತಿನ್ನಿಸೆಂದರೆ ಹಲಸಿನ ಕಾಯಿ. ಅದರಿಂದ ಮಾಡುವ ದೋಸೆ, ಹಪ್ಪಳ, ಚಿಪ್ಸ್, ಸಂಡಿಗೆ ಅದ್ಭುತ ಅಲ್ವಾ? ಮಳೆಗಾಲಕ್ಕೆ ಬೇಕಾದ ತಿಂಡಿ ತಿನಿಸುಗಳ ತಯಾರಿ ಸಿದ್ದತಿ ಎಲ್ಲವೂ ಭರ್ಜರಿಯಾಗಿ ನಡೆಯುತ್ತಿತ್ತು. ಎಲ್ಲರೊಂದಿಗೆ ಆಟೋಟ. ಗದ್ದೆಯಲ್ಲಿ ಹೊರಳಾಡಿ ಎಷ್ಟೋ ದಿನ ಬಯಸಿಕೊಂಡಿದುಂಟು. ರವಿವಾರ ಬರುವ ಸಿನಿಮಾದಿಂದ ಅದ್ಭುತ ಜೀವನ ಕಂಡ್ರಿ, ನೆನೆಸಿಕೊಂಡಷ್ಟು ಸಂತಸ ಅಷ್ಟೇ ದುಃಖ ಮತ್ತೆ ಮರಳಿ ಬರಬಾರದಾ ಆ ದಿನಗಳೆಲ್ಲ. ಇಂದು ಆ ದಿನವೆಲ್ಲ ನಮ್ಮೊಟ್ಟಿಗೆ ಇಲ್ಲ ಎನ್ನುವುದೆ ಬೇಸರ.
ಅತ್ಯಂತ ವಿಷಾದ ಸಂಗತಿ ಏನೆಂದರೆ ಈಗಿನ ಮಕ್ಕಳಿಗೆ ಇವೆಲ್ಲದರ ಸೌಭಾಗ್ಯವೇ ಇಲ್ಲವೆಂಬ ನೋವು ಎಲ್ಲಾ ಆಧುನಿಕತೆ …ಬೆಟ್ಟದ ಹಣ್ಣನ್ನೆಲ್ಲ ಅಲ್ಲಿ ಹೋಗಿ ಕಿತ್ತಿ ತಿನ್ನುವ ಮೋಜು ಮಾಯವಾಗಿ ಇಂದು ಪೇಟೆಯಲ್ಲಿ ಹಣಕ್ಕೆ ಕರೆದಿಸಿ ತಿನ್ನುವ ಪರಿಸ್ಥಿತಿ ನಮ್ಮ ಪಾಲಾಗಿದೆ. ಟಿವಿ, ಮೊಬೈಲ್ ಅಷ್ಟೇ ಇಂದಿನ ಮಕ್ಕಳ ಪ್ರಪಂಚ. ಅವರಿಗೆ ಯಾರೊಂದಿಗೆ ಮಾತನಾಡುವುದಾಗಲಿ, ಆಟ ಆಡುವುದಾಗಲಿ ಯಾವುದು ಬೇಡ. ಮೊಬೈಲ್ ಗಾಗಿ ಅಮ್ಮ ಮತ್ತು ಮಕ್ಕಳಿಗೆ ಜಗಳವಾಗುತ್ತಲೇ ಇರುತ್ತದೆ ಆಟಕ್ಕೂ, ಊಟಕ್ಕೂ ಒಂದೇ ಅದುವೇ ಮೊಬೈಲ್ ಅನ್ನುವ ಪ್ರಸಂಗ ನಮ್ಮದಾಗಿದೆ. ಇನ್ನು ರಜೆಯಲ್ಲಾದರೂ ಆಟ ಆಡುತ್ತ ಸ್ವಲ್ಪ ಹೊರ ಪ್ರಪಂಚದಲ್ಲಿ ಕಾಲ ಕಳೆಯುತ್ತಾರೆ ಎಂದು ಕೊಂಡೆ , ಆದರೆ ಈಗಲೇ ಕ್ಲಾಸ್ ಗಳ ಸಾಲು ಸಾಲು. ಮತ್ತೆ ಬಾಲ್ಯ ಮರ ಕಳಿಸುವುದೇ? ಈ ಆಧುನಿಕತೆಯೊಳಗೆ ಹಳೆಯ ಸೊಗಡು ಮತ್ತೆ ಮರಕಳಿಸುವುದೇ?