ಮಂಗಳೂರು: ಮಂಗಳೂರಿಗೆ ನರೇಂದ್ರ ಮೋದಿ ಬಂದ ಬಳಿಕ ಕಾಂಗ್ರೆಸ್ ಗೆ ಹತಾಶೆಯಾಗಿದೆ. ಮೋದಿಯವರನ್ನು ಕಾಣಲು ಬಂದ ಜನರನ್ನು ಕಂಡು ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಕಾಂಗ್ರೆಸ್ -ಬಿಜೆಪಿ ಕಾರ್ಯಕರ್ತರ ನಡುವೆ ಪ್ರಚಾರದ ವಿಚಾರದಲ್ಲಿ ಮಾತಿನ ಚಕಮಕಿ ವಿಚಾರದ ಕುರಿತು ಶಾಸಕ ವೇದವ್ಯಾಸ್ ಕಾಮತ್ ಪ್ರತಿಕ್ರಿಯಿಸಿದ್ದಾರೆ.
ದೇವಸ್ಥಾನದ ಹೊರಗೆ ಸಾರ್ವಜನಿಕ ರಸ್ತೆಯಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಬಂದು ಇಲ್ಲಿ ಮತಯಾಚನೆ ಮಾಡಬಾರದು ಎಂದಿದ್ದಾರೆ.
ಸರಿಯಾದ ಸಂದರ್ಭದಲ್ಲಿ ನಾನು ಅಲ್ಲಿ ತಲುಪಿದೆ. ಕಾಂಗ್ರೆಸ್ ಅಭ್ಯರ್ಥಿಯೂ ಅಲ್ಲಿ ಮತ ಯಾಚನೆ ಮಾಡಿದ್ದಾರೆ.ಮುಖ್ಯ ರಸ್ತೆಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಯಾಕೆ ಮತಯಾಚನೆ ಮಾಡಬಾರದು.
ದೇವರ ಕಟ್ ಔಟ್ ಇದೆಯೆಂದು ಮತಯಾಚನೆ ಮಾಡಬಾರದಾ ?ಯಾವುದೇ ದೇವಸ್ಥಾನದ ಒಳಗೆ ಹೋಗಿ ಮತಕೇಳುವ ಪರಿಸ್ಥಿತಿ ನಮಗೆ ಬರ್ಲಿಲ್ಲ.
ಚುನಾವಣಾ ಆಯೋಗದ ನೋಟಿಸ್ ನಲ್ಲಿ ಅದು ಸಾರ್ವಜನಿಕ ಜಾಗ ಎಂದು ಉಲ್ಲೇಖವಾಗಿದೆ. ಇಂತಹ ನೋಟಿಸ್ ಗಳು ಕಾಂಗ್ರೆಸ್ ಸರಕಾರದ ಕಾರಣದಿಂದ ಬರುತ್ತಾ ಇರುತ್ತೆ ಎಂದು ವೇದವ್ಯಾಸ್ ಕಾಮತ್ ಪ್ರತಿಕ್ರಿಯಿಸಿದ್ದಾರೆ.