ಪ್ರಕೃತಿಯ ಕೌತುಕಕ್ಕೆ ಸರಿಸಾಟಿಯೇ ಇಲ್ಲ. ತನ್ನದೇ ಆದ ಕ್ರಿಯಾತ್ಮಕ ಶೈಲಿಯಲ್ಲಿ ನಮ್ಮನ್ನು ಬೆರಗಾಗುವಂತೆ ಮಾಡುತ್ತದೆ. ನೈಸರ್ಗಿಕವಾಗಿ ಕಲ್ಲುಕೋರೆಗಳನ್ನು ಕೆತ್ತಿ ವಿಶಿಷ್ಟವಾದ ಆಕೃತಿಯನ್ನು ಸೃಷ್ಟಿಸುತ್ತದೆ. ಬೆಟ್ಟ ಗುಡ್ಡವನ್ನು ಕಡಿದು ಕಣಿವೆಗಳನ್ನು ಸೃಷ್ಟಿಸುತ್ತದೆ. ಹೀಗೆ ಪ್ರಕೃತಿಯ ಕ್ರಿಯಾಶೀಲತೆಯ ಎಲ್ಲರನ್ನು ಬೆರಗಾಗುವಂತೆ ಮಾಡುತ್ತದೆ.
ಇಂತಹದೇ ಒಂದು ಕೌತುಕವು ಕೊಲಂಬಿಯಾದ ಕ್ಯಾನೊ ಕ್ರಿಸ್ಟೇಲ್ಸ್ ನದಿಯು ಕೆಂಪು, ನೀಲಿ, ಹಳದಿ, ಕಿತ್ತಳೆ ಮತ್ತು ಹಸಿರು ಬಣ್ಣಗಳಿಗೆ ತಿರುಗಿ ನೈಸರ್ಗಿಕವಾಗಿ ಎಲ್ಲರನ್ನು ರೋಮಾಂಚನಗೊಳಿಸುತ್ತಿದೆ.
ಆಂಡಿಸ್ ನದಿಯ ಪೂರ್ವಕ್ಕೆ, ಮಧ್ಯ ಕೊಲಂಬಿಯಾದ ಕ್ಯಾನೊ ಕ್ರಿಸ್ಟೇಲ್ಸ್ ಬಾಕಿ ನದಿಗಿಂತ ಭಿನ್ನವಾಗಿದೆ. ೧೦೦ ಕಿ.ಮೀ ಉದ್ದ ಇರುವ ಈ ನದಿ ಕೆಲವೊಮ್ಮೆ ವರ್ಷದ ಕೆಲವು ತಿಂಗಳುಗಳಲ್ಲಿ ಕೆಂಪು, ನೀಲಿ, ಹಳದಿ, ಕಿತ್ತಳೆ ಮತ್ತು ಹಸಿರು ಛಾಯೆಗಳೊಂದಿಗೆ ರೋಮಾಂಚಕವಾಗಿ ಹರಿಯುತ್ತದೆ. ಆದರಿಂದ ಕ್ಯಾನೊ ಕ್ರಿಸ್ಟೇಲ್ಸ್ ನದಿಯನ್ನು “ಲಿಕ್ವಿಡ್ ರೈನ್ ಬೊ” ಎಂದು ಕರೆಯಲಾಗುತ್ತಿದೆ.
ಕ್ಯಾನೊ ಕ್ರಿಸ್ಟೇಲ್ಸ್ ನ ನದಿ ಬಣ್ಣವು ಬದಲಾಗಲು ನೀರಿನಲ್ಲಿರುವ ಪಾಚಿ ಕಾರಣ ಎಂದು ಕೆಲವರ ಅಭಿಪ್ರಾಯ. ಆದರೆ ನಿಜವಾಗಿ ಮಕರೇನಿಯಾ ಕ್ಲಾವಿಗೆರಾ ಎಂದು ಕರೆಯಲ್ಪಡುವ ಸ್ಥಳೀಯ ಜಲವಾಸಿ ಸಸ್ಯ ಕಾರಣವಾಗಿದೆ. ಸರಿಯಾದ ನೀರಿನ ಮಟ್ಟ ಮತ್ತು ಸರಿಯಾದ ಪ್ರಮಾಣದ ಸೂರ್ಯನ ಬೆಳಕು ಸೇರಿದಂತೆ ನಿಖರವಾದ ಪ್ರಕಾಶಮಾನವಾದ ಬಣ್ಣಗಳಿಗೆ ತಿರುಗುತ್ತದೆ. ಈ ಲಿಕ್ವಿಡ್ ರೈನ್ ಬೊ ಬಣ್ಣಗಳನ್ನು ಜೂನ್ ನಿಂದ ಡಿಸೆಂಬರ್ ವರೆಗೆ ಮಾತ್ರ ನೋಡಬಹುದಾಗಿದೆ. ಜನವರಿಯಿಂದ ಮೇ ವರೆಗೆ ಶುಷ್ಕ ಋತು, ಆದುದರಿಂದ ಕ್ಯಾನೊ ಕ್ರಿಸ್ಟೇಲ್ಸ್ ಅನ್ನು ಪರಿಸರ ಸಂರಕ್ಷಣೆಗಾಗಿ ಪ್ರವಾಸಿಗರ ಪಾಲಿಗೆ ಮುಚ್ಚಲಾಗುತ್ತದೆ.
ಲಿಕ್ವಿಡ್ ರೈನ್ ಬೊದ ಬಣ್ಣಗಳು ಕೆಂಪು ಬಣ್ಣ, ತಿಳಿ ಗುಲಾಬಿಯಿಂದ ಕಡು ಗುಲಾಬಿಯವರೆಗೆ, ರಕ್ತ ಕೆಂಪು ಬಣ್ಣದಿಂದ ಮರೂನ್ ಬಣ್ಣಕ್ಕೆ ತಿರುಗುತ್ತದೆ. ಮಕರೇನಿಯಾ ಕ್ಲಾವಿಗೇರಾ ಸಸ್ಯವು ನೆರಳು ಇರುವ ಸ್ಥಳಗಳಲ್ಲಿ ಹಸಿರು ಬಣ್ಣಕ್ಕೆ ತಿರುಗುತ್ತದೆ.
ಕ್ಯಾನೊ ಕ್ರಿಸ್ಟೇಲ್ಸ್ ಪ್ರದೇಶವು ಹೊರ ಜಗತ್ತಿಗೆ ಮತ್ತು ಪ್ರವಾಸಿಗರಿಗೆ ಹೊಸದಾಗಿದೆ. ಆದರೆ ಈ ಪ್ರದೇಶದ ನಿವಾಸಿಗಳು ನದಿ ಮತ್ತು ಅದರ ಬಣ್ಣಗಳ ಬಗ್ಗೆ ತಲೆಮಾರುಗಳಿಂದ ತಿಳಿದಿದ್ದಾರೆ. ದ್ರವ ಕಾಮನಬಿಲ್ಲಿನ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ಥಳೀಯರು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ.
ಕ್ಯಾನೊ ಕ್ರಿಸ್ಟೇಲ್ಸ್ನ ಪ್ರವಾಸೋದ್ಯಮದ ಆರಂಭಿಕ ದಿನಗಳಲ್ಲಿ ಪ್ರವಾಸಿಗರನ್ನು ನಿಯಂತ್ರಿಸುವುದು ಕಷ್ಟಕರವಾಗಿತ್ತು, ಆದರೆ ನದಿತೀರದಲ್ಲಿ ಪಿಕ್ನಿಕ್ಗಳು ಇದರಿಂದ ಬರುವ ಕಸವು ಮತ್ತು ಮಾನವನ ಪ್ರಭಾವದಿಂದ ಸೂಕ್ಷ್ಮವಾದ ಮಕರೇನಿಯಾ ಕ್ಲಾವಿಗೆರಾಗೆ ಸಸ್ಯಗಳ ನಾಶಕ್ಕೆ ಕಾರಣವಾಗುತ್ತಿರುವುದನ್ನು ಸ್ಥಳೀಯರು ಶೀಘ್ರದಲ್ಲೇ ಅರಿತುಕೊಂಡರು. ಸಂದರ್ಶಕರು ನದಿಯ ದಡದಲ್ಲಿ ಮದ್ಯಪಾನ ಮಾಡುವುದು ಮತ್ತು ಸಸ್ಯಗಳ ಮೇಲೆ ನಡೆಯುವುದು ವಿಪರೀತವಾಗಿ ನಡೆಯತ್ತಿತ್ತು.
ಆದ್ದರಿಂದ ಕೆಲವು ಕಡ್ಡಾಯ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಯಿತು. ಏಳು ಜನರಿಗಿಂತ ಹೆಚ್ಚು ಜನರ ಗುಂಪಿನ ಮಿತಿ, ಈ ಪ್ರದೇಶಕ್ಕೆ ದಿನಕ್ಕೆ ೨೦೦ ಜನರ ಮಿತಿ, ನದಿಗೆ ಭೇಟಿ ನೀಡುವಾಗ ಕೀಟ ನಿವಾರಕ ಧರಿಸುವುದನ್ನು ಸಂಪೂರ್ಣ ನಿಷೇಧಿಸುವುದು ಮತ್ತು ಈಜಲು ಅನುಮತಿ ಇರುವ ಸೀಮಿತ ಪ್ರದೇಶ ಮತ್ತು ಪರಿಸರ ಸಂರಕ್ಷಣಾ ನಿಯಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೆ ತರಲಾಗಿದೆ.