ಕೃತಕ ಬುದ್ದಿಮತ್ತೆಯನ್ನು ಸಾಮನ್ಯವಾಗಿ ಎಐ ಎಂದು ಕರೆಯಲಾಗುತ್ತದೆ. ಇದು ಇತ್ತೀಚಿನ ಸ್ಮಾರ್ಟ್ ಪೀಳಿಗೆ ಇಷ್ಟಪಡುವ ಸಾಧನವಾಗಿದೆ.
ವಿಶ್ವದೆಲ್ಲೆಡೆಯ ರಾಜಕೀಯ ಸಂವಹನ, ಕಾರ್ಯತಂತ್ರಗಳಿಗೆ ಈ ಕೃತಕ ಬುದ್ದಿಮತ್ತೆ ಸಹಕಾರಿಯಾಗಿದೆ.
ಇಷ್ಟು ಮಾತ್ರವಲ್ಲ ಈಗಿನ ರಾಜಕೀಯ ಪಂಡಿತರ ಕೈನಲ್ಲಿ ಜೋತಿಷ್ಯಕ್ಕೆ ಹೋಲುವ ಸಾಧನವಾಗಿ ಈ ಎಐ ಕೆಲಸ ಮಾಡುತ್ತದೆ. ಈ ಮೂಲಕ ರಾಜಕೀಯ ಗುರುಗಳು ತಮ್ಮ ತಂಡಗಳಿಗೆ ಕಮಾಂಡ್ ನೀಡಲು, ಬೋಧಿಸಲು ದಾರಿ ಸೃಷ್ಟಿಸಿವೆ.
2018ರಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣವನ್ನು ಎಐ ಭೇದಿಸಿದಾಗ ಐಟಿ ಲೋಕದಲ್ಲಿ ಎಐ ಅನ್ನೋದು ಕೇವಲ ಒಂದು ಮಗುವಾಗಿತ್ತು. ಆದರೆ ರಾಜಕೀಯ ಕ್ಷೇತ್ರವು ಎಐ ನ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಇತ್ತೀಚಿಗೆ ನಡೆದ ಕರ್ನಾಟಕ ಚುನಾವಣೆ ಕೂಡ ಇಂತಹ ಮುನ್ಸೂಚನೆಗಳನ್ನಿಟುಕೊಂಡೆ ಹೋರಾಟ ನಡೆಸಿದ್ದು. ಹೇಗೆ ಗೆಲ್ಲಬೇಕು ಅಥವಾ ಉತ್ತಮ ನಾಳೆಗಾಗಿ ಏಕೆ ಸೋಲಬೇಕು? ಅನ್ನೋ ಊಹೆಗಳಲ್ಲಿಯೇ ಕಾಂಗ್ರೆಸ್ ಹಾಗೂ ಬಿಜೆಪಿ ಹೋರಾಡಿದ್ದು.
ಕಾಂಗ್ರೆಸ್ ತನ್ನ ಸರಿಯಾದ ಪ್ರಿಡಿಕ್ಷನ್ ನಿಂದಲೇ ಚುನಾವಣೆ ಗೆದ್ದಿರಬಹುದು. ಆದರೆ ಬಿಜೆಪಿಯ ಸೋಲು ಲಾಭವಾಗಿದೆಯೇ ಎಂದು ತಿಳಿಯೋಕೆ 2024ರ ಲೋಕ ಸಭಾ ಚುನಾವಣೆ ಸ್ಪಷ್ಟತೆ ನೀಡಲಿದೆ. ಎಐ ಬುದ್ದಿಮತ್ತೆ ಬೆಳೆಯುತ್ತಿರುವ ಕಾರಣ ಈಗಿನ ರಾಜಕಾರಣಿಗಳು ಕೂಡ ತಮ್ಮ ಮಾತು, ನಡವಳಿಕೆಗಳನ್ನು ಬದಲಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದು ಒಂದು ಕಡೆ ರಾಜಕೀಯ ಲಾಭವಾದರೆ ಮತ್ತೊಂದೆಡೆ ಇದು ರಿವರ್ಸ್ ಆಟ ಆಡುತ್ತದೆ ಎಂದು ನಿಮಗೆ ಗೊತ್ತಾ?
ಹೌದು, ನೀವು ಆಡುವ ಮಾತು, ನೀವು ಯೋಚಿಸುವ ವಿಷಯಗಳನ್ನೂ ಅದೇ ನಿಮ್ಮ ಮುಂದಿರಿಸುತ್ತದೆ.
ಇಷ್ಟು ಮಾತ್ರವಲ್ಲ ಈ ಮೂಲಕ ನೀವು ನಿಮ್ಮ ಆಲೋಚನೆಯನ್ನು ಕಾರ್ಯರೂಪ ಗೊಳಿಸುವವರೆಗೂ ಬಿಡುವುದಿಲ್ಲ. ಅದು ಯಾವುದೇ ಮೊಬೈಲ್ ಅಥವಾ ಗ್ಯಾಜೆಟ್ ಆದರೂ ಸಹ. ಹೀಗೆ ರಾಜಕೀಯದಲ್ಲೂ ಗೆಲುವು ಸಾಧಿಸೋದು.
ಇತ್ತೀಚಿನ ಕರ್ನಾಟಕದ ಚುನಾವಣೆಯಲ್ಲಿಯೂ ಇಂತಹ ಸಾಧನಗಳನ್ನು ಬಳಸಲಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ವಿಶ್ಲೇಷಣೆ ರಾಜಕೀಯ ಪಕ್ಷಕ್ಕೆ ಪವಿತ್ರ ಗ್ರಂಥವಾಗಿದೆ.
ಈ ಹಿಂದೆ ರಾಜಕೀಯ ತಜ್ಞರು ಚುನಾವಣಾ ಪ್ರಣಾಳಿಕೆಗಳನ್ನು ಬರೆಯುತ್ತಿದ್ದರು, ಆದರೆ ಇತ್ತೀಚೆಗೆ ನಡೆದ ಕರ್ನಾಟಕ ಚುನಾವಣೆಯಲ್ಲಿ ಮಾಜಿ ಅಧಿಕಾರಿಯ ನೇತೃತ್ವದ ಸಂಶೋಧನಾ ಸಮಿತಿಯು ಗೆಲ್ಲುವ ಪಕ್ಷಗಳ ಪ್ರಣಾಳಿಕೆಯನ್ನು ಮಾತ್ರ ರಚಿಸಿತು. ಇದು ಕೂಡ ಇತ್ತೀಚಿನ ಚುನಾವಣೆಯಲ್ಲಿ ಬಳಸಲಾದ ಡೇಟಾ ಸೈನ್ಸ್ ನ ಎಐ ತಂತ್ರಜ್ಞಾನವೆನ್ನಬಹುದು.
ಅದೇ ಎಐ ಪರಿಕರಗಳು ಯಾರಿಗಾದರೂ ಏಕೆ ಮತ್ತು ಹೇಗೆ ಚುನಾವಣೆಯಲ್ಲಿ ಸೋಲುತ್ತದೆ ಎಂದು ಸ್ಪಷ್ಟವಾಗಿ ತಿಳಿಸುತ್ತದೆ. ಆದರೆ ಅದು ಉತ್ತಮ ಬದಲಾವಣೆಗಾಗಿ.
ರಾಜಕೀಯ ತಜ್ಞರು ಕೃತಕ ಚೌಕಟ್ಟುಗಳಿಗೆ ಒಗ್ಗಿಕೊಂಡಾಗ ಯಾವುದು ಒಳ್ಳೆಯದು, ಯಾವುದು ಅಲ್ಲ. ಮತ್ತು ಗೆದ್ದರೆ ಎದುರಿಸಬೇಕಾದ ಪರಿಣಾಮಗಳು, ಯಾವುದು ಸೋತರೆ ಒಳ್ಳೆಯದು ಎಂದು ತಿಳಿದುಕೊಂಡರು.
ಈಗಂತು ನನ್ನ ಹಾಗೂ ನಿಮ್ಮದೂ ಇದೊಂದೆ ಏಕೈಕ ಭರವಸೆ ಆಗಿರಬಹುದು. ಅದುವೇ ಎಐ ಉಪಕರಣಗಳು ಪ್ರಕೃತಿಯ ಮನಸ್ಸನ್ನು ಬದಲಾಯಿಸಲಿ ಮತ್ತು ಸಕಾಲಿಕ ಮುಂಗಾರು ಮಳೆ ತರಲಿ, ಆದರೆ ಯಾವುದೇ ನೈಸರ್ಗಿಕ ಹಾನಿಯಾಗದಿರಲಿ ಎಂದು.