ಸಾಮಾನ್ಯವಾಗಿ ರೈತರು ಬೆಳೆಗಳಿಗೆ ಬರುವ ಕೀಟಗಳ ಹತೋಟಿಗೆ ರೈತರು ರಾಸಾಯನಿಕ ಕ್ರಿಮಿನಾಶಕಗಳನ್ನು ಬಳಸುತ್ತಾರೆ. ಇದರಿಂದ ಬೆಳೆಗಳ ಮೇಲೆ ವ್ಯತಿರಿಕ ಪರಿಣಾಮ ಬೀರುವುದಲ್ಲದೇ ಪರಿಸರದ ಮೇಲೂ ಪ್ರಭಾವ ಬೀರುತ್ತದೆ. ಹಾಗೆಯೇ ರೈತರಿಗೆ ಸಾಕಷ್ಟು ಹಣವು ವ್ಯರ್ಥವಾಗುತ್ತದೆ. ಆದರೂ ಇದರ ಫಲಿತಾಂಶ ತಾತ್ಕಾಲಿಕ. ಇದಕ್ಕೆ ಪರಿಹಾರವಾಗಿ ಪರಿಸರ ಸ್ನೇಹಿ ಕೀಟ ಭಕ್ಷಕಗಳನ್ನು ಹೊಲಗಳ ಮಧ್ಯೆ ಬೆಳೆಯುವುದರಿಂದ ಬೆಳೆಗಳನ್ನು ಕೀಟಗಳಿಂದ ರಕ್ಷಿಸಿಕೊಳ್ಳಬಹುದು.
ಕೀಟಗಳನ್ನು ಹಿಡಿದು ತಿನ್ನುವ ಸಸ್ಯಗಳಲ್ಲಿ ಡ್ರಾಸಿರಾ ಕೂಡ ಒಂದು. ಈ ಸಸ್ಯ ಭಾರತ ಮಾತ್ರವಲ್ಲದೆ ಆಫ್ರಿಕಾ ಮತ್ತುಆಸ್ಟ್ರೇಲಿಯಾಗಳಲ್ಲೂ ಬೆಳೆಯುತ್ತದೆ. ಡ್ರಾಸಿರಾ ಬುರ್ಮಾನಿ, ಡ್ರಾಸಿರಾ ಇಂಡಿಕಾ ಹಾಗೂ ಬ್ಲಾಡರ್ವರ್ಟ್ ಜಾತಿಯ ಯುಟ್ರಿಕ್ಯೂಲೇರಿಯಾ ಸಿರೂಲಿಯಾ ಎಂಬ ನಾಲ್ಕು ಪ್ರಬೇಧದ ಸಸ್ಯಗಳು ಹೆಚ್ಚಿನ ಪ್ರಮಾಣದಲ್ಲಿವೆ. ರೈತರು ಇಂತಹ ಸಸ್ಯಗಳನ್ನು ಹೊಲಗಳಲ್ಲಿ ಬೆಳೆಯುವುದರಿಂದ ಫಸಲು ಹಾಳು ಮಾಡುವ ಕೀಟಗಳನ್ನು ನಿಯಂತ್ರಿಸಬಹುದು.
ಡ್ರಾಸಿರಾ ಸಸ್ಯ ಕೀಟಗಳು ಕಬಳಿಸುವುದು ಹೇಗೆ?
ಕೀಟ ಭಕ್ಷಕ ಸಸ್ಯಗಳು ಜೌಗು ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಆದರೆ ಜೌಗು ಪ್ರದೇಶದಲ್ಲಿ ಸಾರಜನಕದ ಕೊರತೆ ಯಥೇಚ್ಛವಾಗಿರುತ್ತದೆ. ಸಸ್ಯಗಳು ತಮಗೆ ಬೇಕಾದ ಸಾರಜನಕ ಪಡೆಯಲು ಕೀಟಗಳನ್ನು ಬಲಿ ತೆಗೆದುಕೊಳ್ಳುತ್ತವೆ. ಕಿಣ್ವಗಳ ಸಹಾಯದಿಂದ ಅವನ್ನು ಜೀರ್ಣಿಸಿಕೊಳ್ಳುತ್ತವೆ.
ಆಕರ್ಷಕ ಬಣ್ಣ ಹಾಗೂ ರೂಪದಿಂದ ಕೀಟಗಳನ್ನು ಸೆಳೆದು ಕೀಟಗಳನ್ನು ತಿನ್ನುವ ಡ್ರಾಸಿರಾ ಕೀಟಗಳಿಂದ ಪಡೆದ ಸಾರಜನಕ ಮತ್ತುಪೋಷಕಾಂಶಗಳನ್ನು ಹಿರಿ ಸಂಗ್ರಹಿಸುವ ವ್ಯವಸ್ಥೆ ಆದರ ಎಲೆಗಳಲ್ಲಿ ಇದೆ.
ಡ್ರಾಸಿರಾ ಸಸ್ಯದ ಎಲೆಯ ಮೇಲೆ ಅಂಟು ಅಂಟಾದ ಸಿಹಿ ದ್ರವ ಇದ್ದು, ಕೂದಲಿನಾಕಾರದ ರಚನೆಗಳು ಕೀಟಗಳನ್ನು ಆಕರ್ಷಿಸುತ್ತದೆ. ಬ್ಲ್ಯಾಡರ್ವರ್ಟ್ದಲ್ಲಿ ನೂರಾರು ಚೀಲದಾಕಾರ ಗುಳ್ಳೆಗಳಿವೆ. ಇಲಿ ಹಿಡಿಯುವ ಬೋನಿನಂತಹ ವ್ಯವಸ್ಥೆ ಇದೆ. ಇರುವೆ, ಮಿಡತೆ, ನೊಣ ಇತ್ಯಾದಿ ಸಣ್ಣ ಕೀಟಗಳು ಬಲಿ ಹೋದ ಕೂಡಲೇ ಅವುಗಳನ್ನು ಡ್ರಾಸಿರಾ ಕಬಳಿಸಿ ಬಿಡುತ್ತದೆ.
ಡ್ರಾಸಿರಾ ಔಷಧಿಯ ಗುಣಗಳು:
ಕೀಟಗಳ ಪಾಲಿಗೆ ರಾಕ್ಷಸನಾಗಿರುವ ಡ್ರಾಸಿರಾ ಹಲವರು ಔಷಧಿ ಗುಣಗಳನ್ನು ಹೊಂದಿದೆ. ಡ್ರಾಸಿರಾ ಸಸ್ಯದ ಎಲೆ ಮತ್ತು ಹೂವುಗಳು ಕಫ ಸಮಸ್ಯೆ ರಾಮಬಾಣವಾಗಿದೆ. ಅಸ್ತಮಾ, ಶೀತ, ವಾಂತಿ, ಗಂಟಲು ಕೆರೆತ ಮುಂತಾದ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ಅನೇಕ ಕಂಪನಿಗಳು ಡಾಸಿರಾವನ್ನು ಬಳಸಿಕೊಂಡು ಕಾಫ್ ಸಿರಪ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.