ಕೇಂದ್ರ ಸರ್ಕಾರದಿಂದ ರಸಗೊಬ್ಬರದ ಮೇಲೆ ರೈತರಿಗೆ ಸಹಾಯಧನ ನೀಡುವ ಪ್ರಸ್ತಾವನೆಗೆ ಅನುಮೋದನೆಯನ್ನು ನೀಡಲಾಗಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆಯನ್ನು ನೀಡಲಾಗಿದ್ದು, 1.08 ಲಕ್ಷ ಕೋಟಿ ರೂ ಮೊತ್ತವನ್ನು ರಸಗೊಬ್ಬರದ ಸಬ್ಸಿಡಿ ಹಣವಾಗಿ ಬಿಡುಗಡೆ ಮಾಡಲು ನಿರ್ಧಾರಿಸಲಾಗಿದೆ ಎಂದು ಕೇಂದ್ರ ಆರೋಗ್ಯ, ರಸಗೊಬ್ಬರ ಮತ್ತು ರಾಸಾಯನಿಕಗಳ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದರು.
ದೇಶವು ಯೂರಿಯಾ ಸೇರಿದಂತೆ ಎಲ್ಲಾ ಪ್ರಮುಖ ರಸಗೊಬ್ಬರಗಳ ಸಾಕಷ್ಟು ದಾಸ್ತಾನು ಹೊಂದಿದೆ. ರಸಗೊಬ್ಬರಗಳ ಲಭ್ಯತೆಯ ಮೇಲೆ ಭಾರತದ ಕೃಷಿ ವ್ಯವಸ್ಥೆಯು ಸಂಬಂಧ ಹೊಂದಿರುವುದರಿಂದ ಈ ಸಬ್ಸಿಡಿಯು ಲಕ್ಷಾಂತರ ರೈತರಿಗೆ ಸಹಾಯವಾಗಲಿದೆ ಎಂದು ಸಚಿವರು ಹೇಳಿದರು.
ಅಂತಾರಾಷ್ಟ್ರೀಯ ರಸಗೊಬ್ಬರಗಳ ದರಗಳು ಸ್ವಲ್ಪ ಕಡಿಮೆಯಾಗಿದೆ. ಆದ್ದರಿಂದ ರೈತರಿಗೆ ಸಕಾಲದಲ್ಲಿ ರಸಗೊಬ್ಬರಗಳು ಸಿಗುತ್ತವೆ ಮತ್ತು ಯಾವುದೇ ಆರ್ಥಿಕ ಹೊರೆಯನ್ನು ಹೆಚ್ಚಾಗುವುದಿಲ್ಲ, ರೈತರಿಗೆ ಖಾರಿಫ್ ಹಂಗಾಮಿಗೆ ರಸಗೊಬ್ಬರ ಬೆಲೆಯಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಅವರು ತಿಳಿಸಿದರು.
ಭಾರತವು ತನ್ನ ದೇಶದಾದ್ಯಂತ ಒಟ್ಟು ರಸಗೊಬ್ಬರ ಬೇಡಿಕೆಯನ್ನು ಪೂರೈಸಲು ಆಮದನ್ನು ಅವಲಂಬಿಸಿದೆ. ಉಕ್ರೇನ್ ಸಂಘರ್ಷದಿಂದಾಗಿ 2022-23ರಲ್ಲಿ ವಿವಿಧ ಕೃಷಿ ರಾಸಾಯನಿಕಗಳ ಜಾಗತಿಕ ಬೆಲೆಗಳು ಗರಿಷ್ಠ ಮಟ್ಟಕ್ಕೆ ಏರಿತು, ಇದರ ಪರಿಣಾಮವಾಗಿ ಒಟ್ಟು ರಸಗೊಬ್ಬರ ಸಬ್ಸಿಡಿ ಬಿಲ್ ₹ 2.56 ಲಕ್ಷ ಕೋಟಿಗೆ ತಲುಪಿದೆ ಎಂದು ಸಚಿವರು ಹೇಳಿದರು.
ರಸಗೊಬ್ಬರ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಅಂತರ್ಜಾಲ ಸೌಲಭ್ಯ ಹೊಂದಿರುವ ಗ್ರಾಮೀಣ ಮಳಿಗೆಗಳ ಮೂಲಕ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತವೆ. ನಂತರ ಸರ್ಕಾರವು ಮಾರುಕಟ್ಟೆ ರಿಯಾಯಿತಿಯ ದರಗಳನ್ನು ಸರ್ಕಾರ ಸಂಸ್ಥೆಗಳಿಗೆ ಪಾವತಿಸುತ್ತದೆ. 2023-24ಕ್ಕೆ, ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ನಲ್ಲಿ ₹ 1.75 ಲಕ್ಷ ಕೋಟಿಯನ್ನು ನಿಗದಿಪಡಿಸಲಾಗಿದೆ, ಆದರೆ ರಸಗೊಬ್ಬರ ದರಗಳು ಸ್ಥಿರವಾಗಿದ್ದರೂ ಸಹ ಪೂರ್ಣ ವರ್ಷದ ಖರ್ಚು ಮತ್ತೆ ₹ 2 ಲಕ್ಷ ಕೋಟಿ ದಾಟಬಹುದು ಎಂದು ಮಾಂಡವಿಯಾ ಹೇಳಿದರು.
ದೇಶದ ಒಟ್ಟು ಕೃಷಿ ಪ್ರದೇಶವು 140 ಮಿಲಿಯನ್ ಹೆಕ್ಟೇರ್ ಎಂದು ಅಂದಾಜಿಸಲಾಗಿದೆ. “2022-23 ರಲ್ಲಿ ಅಂತಿಮ ರಸಗೊಬ್ಬರ ಸಬ್ಸಿಡಿ ವೆಚ್ಚವನ್ನು ನೀಡಿದರೆ, ಇದು ರಸಗೊಬ್ಬರಗಳ ಮೇಲಿನ ಪ್ರತಿ ಹೆಕ್ಟೇರ್ ಸಬ್ಸಿಡಿ ವೆಚ್ಚಕ್ಕೆ ₹ 8909 ರಷ್ಟಿದೆ” ಎಂದು ಸಚಿವರು ಹೇಳಿದರು.
ಭಾರತದಲ್ಲಿ ಅಂದಾಜು 120 ಮಿಲಿಯನ್ ರೈತರಿದ್ದು, 2022-23ರಲ್ಲಿ ಪ್ರತಿ ಬೆಳೆಗಾರನಿಗೆ ರಸಗೊಬ್ಬರ ಸಬ್ಸಿಡಿಯಾಗಿ ಸರ್ಕಾರ ಸುಮಾರು ₹ 21000 ಖರ್ಚು ಮಾಡಿದೆ ಎಂದು ಸಚಿವರು ಹೇಳಿದರು.
ಡಿಎಪಿ ಚೀಲದ ನಿಜವಾದ ಬೆಲೆ ₹ 4,000 ಆದರೆ ರೈತರಿಗೆ ಪ್ರತಿ ಚೀಲಕ್ಕೆ ₹1,350 ದರದಲ್ಲಿ ಸಿಗಲಿದೆ. ಪ್ರತಿ ಚೀಲಕ್ಕೆ ₹2,461 ಸಬ್ಸಿಡಿಯಾಗಿದೆ’ ಎನ್ಪಿಕೆ ಪ್ರತಿ ಚೀಲಕ್ಕೆ ₹ 1,639ಸಬ್ಸಿಡಿ ಆಗಿದ್ದರೆ, ಎಂಒಪಿ ಪ್ರತಿ ಚೀಲಕ್ಕೆ ₹ 734 ಸಬ್ಸಿಡಿ ಆಗಿದೆ. ಕೇಂದ್ರವು ಪ್ರತಿ ಚೀಲ ಯೂರಿಯಾಕ್ಕೆ ₹2,196 ಸಬ್ಸಿಡಿ ನೀಡಲಿದೆ ಎಂದು ಸಚಿವರು ತಿಳಿಸಿದರು.