ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.) ಇದರ ನೂತನ ಅಧ್ಯಕ್ಷ ಆಲ್ವಿನ್ ಡಿಸೋಜ ಪನೀರ್ ಮತ್ತು ಪದಾಧಿಕಾರಿಗಳು ಮಂಗಳೂರು ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.
ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಧರ್ಮಾಧ್ಯಕ್ಷರು ಅಭಿನಂದಿಸಿದರು ಮತ್ತು ಶುಭ ಹಾರೈಸಿದರು.
ಆಧ್ಯಾತ್ಮಿಕ ನಿರ್ದೇಶಕರಾದ ಜೆ.ಬಿ.ಸಲ್ಡಾನ್ಹಾ, ನೋರ್ಬರ್ಟ್ ಮಿಸ್ಕಿತ್ ಸುರತ್ಕಲ್- ಉಪಾಧ್ಯಕ್ಷ, ಲೋರೆನ್ಸ್ ಡಿಸೋಜ ಸುರತ್ಕಲ್-ಉಪಾಧ್ಯಕ್ಷ, ವಿಲ್ಮಾ ಮೊಂತೆರೊ ದೇರೆಬೈಲ್ – ಕಾರ್ಯದರ್ಶಿ, ರೋಷನ್ ಬೊನಿಫಾಸ್ ಮಾರ್ಟಿಸ್ ಸೂರಿಕುಮೇರು – ಸಹ ಕಾರ್ಯದರ್ಶಿ, ಫ್ರಾನ್ಸಿಸ್ ಮೊಂತೆರೊ ತಲಪಾಡಿ – ಖಜಾಂಚಿ, ಸಂತೋಷ್ ಡಿಸೋಜ ಬಜ್ಪೆ – ಸಹ ಖಜಾಂಚಿ, ನಿಕಟ ಪೂರ್ವ ಅಧ್ಯಕ್ಷರಾದ ಸ್ಟ್ಯಾನಿ ಲೋಬೊ ಮತ್ತು ರೋಲ್ಫ್ ಡಿಕೋಸ್ತ ಉಪಸ್ಥಿತರಿದ್ದರು.