ತ್ವಚೆಯ ಆರೈಕೆಗೆ ನೀವು ಕೆಲವು ಪದಾರ್ಥಗಳ ಬಳಕೆ ಮಾಡುವುದು ಸಹಜ. ಹಾಗೆ ಮಾಡುವುದರಿಂದ ಚರ್ಮದ ಆರೈಕೆ ಹೆಚ್ಚಿಗೆ ಆಗುತ್ತದೆ. ಮೃದುವಾದ, ಹೊಳೆಯುವ ಚರ್ಮಕ್ಕಾಗಿ ತೆಂಗಿನ ನೀರು ಬಳಸಿ. ಇದು ಮುಖವನ್ನು ತಾಜಾ ಮತ್ತು ಸ್ವಚ್ಛವಾಗಿಡುತ್ತದೆ. ಚರ್ಮದ ಮೇಲಿರುವ ಹೆಚ್ಚುವರಿ ಎಣ್ಣೆ ಮತ್ತು ಇತರ ಕಲ್ಮಶಗಳನ್ನು ತೆಗೆದು ಹಾಕುತ್ತದೆ.
ಯಾವುದೇ ಋತುಮಾನವಿರಲಿ ಅದು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸೂರ್ಯನ ಬೆಳಕು, ಧೂಳು, ರಾಸಾಯನಿಕ ಉತ್ಪನ್ನಗಳ ಬಳಕೆ, ಮಾಲಿನ್ಯ ಇತ್ಯಾದಿ ಕಾರಣಗಳಿಂದ ಚರ್ಮದ ಸಮಸ್ಯೆ ಹೆಚ್ಚುತ್ತದೆ. ಚರ್ಮದ ಸಮಸ್ಯೆಯಲ್ಲಿ ಮೊಡವೆ, ಸನ್ ಬರ್ನ್, ಶುಷ್ಕತೆ ಮತ್ತು ಮಂದ ಚರ್ಮ, ದದ್ದು, ಬೆವರು ಗುಳ್ಳೆ ಮುಂತಾದ ಸಮಸ್ಯೆ ಕಾಡುತ್ತವೆ.
ಚರ್ಮದ ಸಮಸ್ಯೆ ಕಡಿಮೆ ಮಾಡಲು ಆಹಾರದಲ್ಲಿ ಹಣ್ಣು, ತರಕಾರಿ ಸೇರಿಸಿಕೊಳ್ಳುವುದರಿಂದ ಚರ್ಮದ ಸಮಸ್ಯೆ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ತ್ವಚೆಯ ಆರೈಕೆಗೆ ನೀವು ಕೆಲವು ಪದಾರ್ಥಗಳ ಬಳಕೆ ಮಾಡುವುದು ಸೂಕ್ತ.
ಚರ್ಮದ ಮೇಲಿರುವ ಹೆಚ್ಚುವರಿ ಎಣ್ಣೆ ಮತ್ತು ಇತರ ಕಲ್ಮಶಗಳನ್ನು ತೆಗೆದು ಹಾಕಲು ತೆಂಗಿನ ನೀರಿಗೆ ಮುಲ್ತಾನಿ ಮಿಟ್ಟಿಯನ್ನು ಬೆರೆಸಿ ಪೇಸ್ಟ್ ತಯಾರಿಸಿ ಅದನ್ನು ಮುಖಕ್ಕೆ ಹಚ್ಚಬೇಕು. ಒಣಗಿದ ನಂತರ ಅದನ್ನು ತೊಳೆಯಿರಿ. ಇದು ತ್ವಚೆಯನ್ನು ನಯವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
ಸೌತೆಕಾಯಿ ರಸವು ಚರ್ಮವನ್ನು ಟೋನ್ ಮತ್ತು ತಾಜಾ ಆಗಿರಿಸುತ್ತದೆ. ಇದು ಚರ್ಮದಲ್ಲಿ ಕಾಣಿಸಿಕೊಳ್ಳುವ ರಂಧ್ರಗಳನ್ನು ಮುಚ್ಚುತ್ತದೆ. ಮತ್ತು ಚರ್ಮದಿಂದ ಎಣ್ಣೆಯುಕ್ತ ಸಮಸ್ಯೆ ಕಡಿಮೆ ಮಾಡುತ್ತದೆ. ಸೌತೆಕಾಯಿ ರಸವು ಚರ್ಮವನ್ನು ಮೃದುಗೊಳಿಸುತ್ತದೆ. ಕಣ್ಣಿನ ಸುತ್ತಲಿನ ಸೂಕ್ಷ್ಮ ಚರ್ಮಕ್ಕೆ ಉತ್ತಮವಾಗಿದೆ. ಇದು ಕಪ್ಪು ಸರ್ಕಲ್ ಕಡಿಮೆ ಮಾಡುತ್ತದೆ. ಸೌತೆಕಾಯಿ ರಸವನ್ನು ಕಣ್ಣಿನ ಸುತ್ತಲಿನ ಚರ್ಮದ ಮೇಲೆ ಪ್ರತಿದಿನ ಹಚ್ಚಬೇಕು. 15 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.
ಟ್ಯಾನ್ ಕಡಿಮೆ ಮಾಡಲು ಸೌತೆಕಾಯಿ ರಸಕ್ಕೆ ಹಾಲು ಮತ್ತು ಒಂದು ಮೊಟ್ಟೆಯ ಬಿಳಿಭಾಗ ಹಾಕಿ ಮಿಕ್ಸ್ ಮಾಡಿ. ಈ ಪೇಸ್ಟ್ ನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿರಿ. ಅರ್ಧ ಘಂಟೆಯ ನಂತರ ನೀರಿನಿಂದ ತೊಳೆಯಿರಿ. ಇದು ಟ್ಯಾನ್ ಅನ್ನು ತೆಗೆದು ಹಾಕುತ್ತದೆ. ಅಲ್ಲದೆ, ಸೌತೆಕಾಯಿ ರಸದ ಜೊತೆ ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ 20 ನಿಮಿಷದ ನಂತರ ತೊಳೆಯಿರಿ. ಇದು ತ್ವಚೆಯನ್ನು ಹೊಳಪಾಗಿಸುತ್ತದೆ. ಸೌತೆಕಾಯಿಯ ರಸವನ್ನು ಮಾಗಿದ ಪಪ್ಪಾಯಿಯ ತಿರುಳು ಮತ್ತು ಮೊಸರಿನೊಂದಿಗೆ ಬೆರೆಸಿ. ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ತೊಳೆದರು ಕೂಡ ಅದರಿಂದ ಚರ್ಮದ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ.