ಈ ದಿನದ ಟಾಪ್ 4 ಸುದ್ದಿಗಳು: ಇಲ್ಲಿದೆ ರೌಂಡ್ ಅಪ್
ವಿಶ್ವ ಸುಂದರಿಗೆ ಇಷ್ಟವಂತೆ ಭಾರತದ ನಾನ್ ವೆಜ್ ತಿನಿಸು!
ವಿಶ್ವ ಸುಂದರಿ ಕರೊಲಿನಾ ಬಿಯಾಲವಸ್ಕಾ ಅವರು ಭಾರತಕ್ಕೆ ಭೇಟಿ ನೀಡಲು ಕಾತರದಿಂದಿದ್ದಾರೆ.
ಹೌದು, ಈ ವರ್ಷಾಂತ್ಯದಲ್ಲಿ 71ನೇ ವಿಶ್ವಸುಂದರಿ ಸ್ಪರ್ಧೆಗೆ ಭಾರತಕ್ಕೆ ಆಗಮಿಸಲಿರುವ ಅವರು, ಆ ವೇಳೆ ತಮಗೆ ಇಷ್ಟವಾದ ಬಾಲಿವುಡ್ ಸಿನಿಮಾ ವೀಕ್ಷಿಸುವ ಹಾಗೂ ನಾನ್ ವೆಜ್ ತಿನಿಸುಗಳನ್ನು ಸೇವಿಸುವ ಬಗ್ಗೆ ಪಟ್ಟಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪಿಟಿಐ ನೊಂದಿಗೆ ಮಾತನಾಡಿದ ಅವರು, ಭಾರತದ ಭೇಟಿ ವೇಳೆ ಡಯಟ್ ವರ್ಕ್ ಆಗೋದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ನನಗೆ ಚಿಕನ್ ಟಿಕ್ಕಾ ಮಸಾಲಾ ಅಂದರೆ ತುಂಬಾ ಇಷ್ಟ, ಬಟರ್ ಚಿಕನ್ ಕೂಡ ಇಷ್ಟ. ಭಾರತದ ಆಹಾರ ಅತ್ಯಂತ ರುಚಿಕರವಾಗಿರುತ್ತದೆ ಎಂದರು.
ಮಣಿಪುರ, ಆಗ್ರಾ ಈ ಸಲ ಭಾರತದ ಭೇಟಿ ವೇಳೆ ವೀಕ್ಷಿಸಬೇಕೆಂದಿರುವ ಸ್ಥಳಗಳಾಗಿದ್ದು, ಗೋವಾ, ಮುಂಬೈಗೆ ಕೂಡ ಭೇಟಿ ನೀಡಬೇಕು ಎಂದಿದ್ದಾರೆ.
ಪುಣೆ- ಮುಂಬೈ ಎಕ್ಸ್ ಪ್ರೆಸ್ ವೇನಲ್ಲಿ ಬೆಂಕಿ ಅವಘಡ: ನಾಲ್ವರ ಸಾವು
ಪುಣೆ- ಮುಂಬೈ ಎಕ್ಸ್ ಪ್ರೆಸ್ ವೇ ನಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ, ಲಾರಿ ಹೊತ್ತಿ ಉರಿದ ಘಟನೆ ನಡೆದಿದೆ. ಇದರ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.
ಈ ಘಟನೆ ಇಂದು ಲೋನಾವಾಲಾ-ಖಂಡಾಲಾ ಮಾರ್ಗದಲ್ಲಿ ಸಂಭವಿಸಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ.
ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ಅವಘಡ ಸಂಭವಿಸಿದ್ದು, ಲಾರಿ ಪಲ್ಟಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ತೀವ್ರತೆಯಿಂದ ಎಕ್ಸ್ ಪ್ರೆಸ್ ವೇ ನಲ್ಲಿ ಸಂಚರಿಸುತ್ತಿದ್ದವರಿಗೆ ಬೆಂಕಿ ತಗುಲಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಬಿಪೋರ್ ಜಾಯ್ ಚಂಡಮಾರುತ: ವಿಪತ್ತು ನಿರ್ವಹಣೆಗೆ 8 ಸಾವಿರ ಕೋಟಿ ಯೋಜನೆ ಘೋಷಣೆ
ದೇಶದಲ್ಲಿ ಬಿಪೋರ್ ಜಾಯ್ ಚಂಡಮಾರುತದಿಂದ ದೇಶದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 8 ಸಾವಿರ ಕೋಟಿ ರೂ. ಮೌಲ್ಯದ ವಿಪತ್ತು ನಿರ್ವಹಣೆಗಾಗಿ ಮೂರು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ.
ಈ ಬಗ್ಗೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಸಚಿವರುಗಳ ಜತೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯಗಳಲ್ಲಿ ಅಗ್ನಿಶಾಮಕ ಸೇವೆಗಳನ್ನು ವಿಸ್ತರಿಸಿ, ಆಧುನೀಕರಿಸಲು 5,000 ಕೋಟಿ ರೂ. ಯೋಜನೆ.
ಜನಸಂಖ್ಯೆ ಹೆಚ್ಚಿರುವ ದೇಶದ 7 ಮಹಾನಗರಗಳಿಗೆ ಮುಂಬೈ, ಚೆನ್ನೈ, ಕೋಲ್ಕತ್ತಾ ಬೆಂಗಳೂರು, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆಗೆ 2,500 ಕೋಟಿ ರೂ. ಹಣ ಅನುದಾನ ಯೋಜನೆ.
ನಗರಗಳಲ್ಲಿ ಪ್ರವಾಹದ ಅಪಾಯ ಕಡಿಮೆ ಮಾಡಲು ಮತ್ತು ಭೂಕುಸಿತ ತಗ್ಗಿಸಲು 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 825 ಕೋ. ರೂ.ಗಳ ಯೋಜನೆಯನ್ನು ಗೃಹ ಸಚಿವರು ಘೋಷಿಸಿದ್ದಾರೆ.
ಈ ವೇಳೆ ಪರಮಾಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ರಾಜ್ಯಗಳಿಗೆ ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅನುಸರಿಸಲು ಕಟ್ಟುನಿಟ್ಟಾದ ಪ್ರೋಟೋಕಾಲ್ ನೀಡಲಾಗಿದೆ ಎಂದರು.
ಅಮೆರಿಕದಲ್ಲೂ ಟ್ರಕ್ ಸವಾರಿ ಮಾಡಿದ ರಾಹುಲ್ ಗಾಂಧಿ: ವೀಡಿಯೋ ನೋಡಿ
ಇತ್ತೀಚಿಗೆ ಅಮೆರಿಕ ಪ್ರವಾಸ ತೆರಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಾಷಿಂಗ್ಟನ್ ನಿಂದ ನ್ಯೂಯಾರ್ಕ್ ವರೆಗೆ ಟ್ರಕ್ ನಲ್ಲಿ ಪ್ರಯಾಣಿಸಿದ್ದಾರೆ.
ಈ ಬಗ್ಗೆ ಯೂಟ್ಯೂಬ್ ಹಾಗೂ ಟ್ವಿಟರ್ ನಲ್ಲಿ ರಾಹುಲ್ ಗಾಂಧಿ ಅವರು ವೀಡಿಯೋ ಹಂಚಿಕೊಂಡಿದ್ದು, ಅದರಲ್ಲಿ ರಾಹುಲ್ ಗಾಂಧಿ ಅವರು ಟ್ರಕ್ ಚಾಲಕನೊಂದಿಗೆ ಮಾತನಾಡುತ್ತಾ, ಹಾಡುಕೇಳುತ್ತಾ ಸಂಚರಿಸಿದ್ದನ್ನು ನೋಡಬಹುದಾಗಿದೆ.
“कितना कमा लेते हो?”
“कुछ गाने बजा लें? सिद्धू मूसेवाला के?”
“हम ट्रक वालों के कारण ही मैन्युफैक्चरर्स का काम चलता है।”
अमेरिका में एक भारतीय ड्राइवर के साथ ट्रक यात्रा, उनके अनुभव और कहानियां!
पूरा वीडियो यूट्यूब पर:https://t.co/AxWYEHoka7 pic.twitter.com/KQ8OJq8Vrg
— Rahul Gandhi (@RahulGandhi) June 13, 2023
ವಾಷಿಂಗ್ಟನ್ ನಿಂದ ನ್ಯೂಯಾರ್ಕ್ ವರೆಗೂ ಭಾರತೀಯ ಮೂಲದ ಟ್ರಕ್ ಚಾಲಕರೊಂದಿಗೆ ಪ್ರಯಾಣ ಮಾಡಿದ್ದು, ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಕೆಲವುದಿನಗಳ ಹಿಂದೆ ದೆಹಲಿಯಿಂದ ಚಂಡೀಗಢಕ್ಕೆ ರಾಹುಲ್ ಗಾಂಧಿ ಟ್ರಕ್ ನಲ್ಲಿ ಪ್ರಯಾಣಿಸಿದ್ದರು. ಅಂದು ಕೂಡ ಡ್ರೈವರ್ ಗಳೊಂದಿಗೆ ಮಾತನಾಡಿ ಅವರ ಕಷ್ಟಗಳನ್ನು ಆಲಿಸಿದ್ದರು.
ವಾಷಿಂಗ್ಟನ್ ನಲ್ಲಿ ಚಾಲಕ ತಲ್ಜಿಂದರ್ ಸಿಂಗ್ ವಿಕ್ಕಿ ಗಿಲ್ ಮತ್ತು ಅವರ ಸಹಚರ ರಂಜೀತ್ ಸಿಂಗ್ ಬಾನಿಪಾಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.