ಪಾಕಿಸ್ತಾನದ ಜೈಲಿನಲ್ಲಿ ಬಂಧಿತರಾಗಿದ್ದ 198 ಭಾರತೀಯ ಮೀನುಗಾರರನ್ನು ಪಾಕ್ ಸರ್ಕಾರ ಬಿಡುಗಡೆ ಮಾಡಿದೆ. ಬಿಡುಗಡೆಯಾಗಿರುವ ಮೀನುಗಾರರು ಈ ಹಿಂದೆ ಅರಬ್ಬೀ ಸಮುದ್ರದಲ್ಲಿ ಜಗ ಗಡಿ ದಾಟಿದ ಕಾರಣಕ್ಕೆ ಬಂಧಿಸಲಾಗಿತ್ತು.
ಗುರುವಾರ ಭಾರತೀಯ ಮೀನುಗಾರರ ಬಿಡುಗಡೆಯಾಗಿದ್ದು, ಲಾಹೋರ್ ಗೆ ತೆರಳುವ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಬಿಡುಗಡೆಯಾಗಬೇಕಾದ ತಂಡದ ಮೊದಲ ಗುಂಪಿನಲ್ಲಿ 200 ಮೀನುಗಾರರಿದ್ದರು, ಆದರೆ ಅನಾರೋಗ್ಯದ ಕಾರಣ ಇಬ್ಬರು ಪ್ರಯಾಣ ಮಾಡುತ್ತಿಲ್ಲ ಎಂದು ಪಾಕಿಸ್ತಾನ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೀನುಗಾರರ ಸುರಕ್ಷಿತ ಪ್ರಯಾಣದ ಹೊಣೆಯನ್ನು ಇಧೀ ಫೌಂಡೇಷನ್ ಹೊತ್ತುಕೊಂಡಿದೆ. ಲಾಹೋರ್ ತಲುಪಿದ ನಂತರ ಅವರನ್ನು ಫೆಡರ್ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗುತ್ತದೆ. ಬಳಿಕ ಅವರನ್ನು ವಾಘಾ ಗಡಿ ಮೂಲಕ ಬಿಡುಗಡೆ ಮಾಡಲಾಗುತ್ತದೆ.
ಪುರುಷರ ಜೂನಿಯರ್ ಏಷ್ಯಾಕಪ್ 2023 ಹಾಕಿ ಫೈನಲ್ನಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು ಸೋಲಿಸಿ, ನಾಲ್ಕನೇ ಬಾರಿಗೆ ಟ್ರೋಫಿ ತನ್ನದಾಗಿಸಿಕೊಂಡಿದೆ.
ಇಂದು ಒಮನ್ನ ಸಲಾಲಾದಲ್ಲಿ ನಡೆದ ಪುರುಷರ ಜೂನಿಯರ್ ಏಷ್ಯಾಕಪ್ 2023 ರೋಚಕ ಹಾಕಿ ಫೈನಲ್ನಲ್ಲಿ ಪಂದ್ಯಾವಳಿಯಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು 2-1 ಗೋಲುಗಳಿಂದ ಸೋಲಿಸಿದೆ.
ಭಾರತ ತಂಡದ ಅಂಗದ್ ಬೀರ್ ಸಿಂಗ್ ಹಾಗೂ ಅರಿಜೀತ್ ಸಿಂಗ್ ಹುಂದಾಲ್ ಗಳಿಸಿದ ಆರಂಭಿಕ ಗೋಲುಗಳು ಭಾರತದ ಗೆಲುವಿಗೆ ಸಹಾಯವಾಯಿತು. ಭಾರತ 2-1 ಅಂತರದಲ್ಲಿ ಪಾಕಿಸ್ತಾನವನ್ನು ಮಣಿಸಿ 4ನೇ ಬಾರಿಗೆ ಪ್ರಶಸ್ತಿ ಬಾಚಿಕೊಂಡಿತು.
ಏಷ್ಯಾಕಪ್ನಲ್ಲಿ ಗರಿಷ್ಠ ಪ್ರಶಸ್ತಿಗಳನ್ನು ಭಾರತ ಪುರುಷರ ಜೂನಿಯರ್ ಗೆದ್ದು ದಾಖಲೆ ನಿರ್ಮಿಸಿದೆ. ಭಾರತ 2004, 2008 ಮತ್ತು 2015 ರಲ್ಲಿ ಪ್ರಶಸ್ತಿಯನ್ನು ಗೆದ್ದಿತ್ತು. ಪಾಕಿಸ್ತಾನವು 1988, 1992, 1996 ರಲ್ಲಿ ಪ್ರಶಸ್ತಿ ಗೆದ್ದಿದೆ.
ಕಳೆದ ವಾರ ಮೆಕ್ಸಿಕೋದಲ್ಲಿ ನಾಪತ್ತೆಯಾದ 8 ಮಂದಿಯ ಹುಡುಕಾಟದಲ್ಲಿದ್ದ ಅಧಿಕಾರಿಗಳಿಗೆ ಮನುಷ್ಯರ ಶವಗಳು ತುಂಬಿದ್ದ 45 ಚೀಲಗಳು ಪಶ್ಚಿಮ ಮೆಕ್ಸಿಕನ್ ನ ಜಾಲಿಸ್ಕೊದ ಕಮರಿನಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೃಹತ್ ಕೈಗಾರಿಕಾ ಕೇಂದ್ರ ಗುಡಾಲಜರದ ಉಪನಗರ ಜಾಪೊಪನ್ ನಗರದಲ್ಲಿ 40 ಮೀಟರ್ ಆಳದ ಕಮರಿನಲ್ಲಿ ಈ ಚೀಲಗಳು ಪತ್ತೆ ಮಾಡಲಾಗಿದ್ದು, ಪುರುಷರು ಮತ್ತು ಮಹಿಳೆಯರ ಅವಶೇಷಗಳು ಚೀಲದಲ್ಲಿ ಪತ್ತೆಯಾಗಿದೆ ಎಂದು ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮೇ.20ರಂದು ಸುಮಾರು 30 ವರ್ಷದ ವಯಸ್ಸಿನ ಇಬ್ಬರು ಮಹಿಳೆಯರು ಮತ್ತು 6 ಮಂದಿ ಪುರುಷರು ನಾಪತ್ತೆಯಾಗಿದ್ದು, ಇನ್ನು ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶದಲ್ಲಿ ನೀಡುವ ಹೇಳಿಕೆಯಿಂದ ಬಿಜೆಪಿ- ಕಾಂಗ್ರೆಸ್ ನಡುವೆ ವಾಕ್ಸಮರ ಪ್ರಾರಂಭವಾಗುತ್ತದೆ. ಇದೇ ರೀತಿ ಇಂಡಿಯನ್ ಯೂನಿಯನ್ ಆಫ್ ಮುಸ್ಲಿಂ ಲೀಗ್ ಪಕ್ಷ ಸಂಪೂರ್ಣ ಜಾತ್ಯಾತೀತ ಎಂದು ಹೇಳುವ ಮೂಲಕ ಮತ್ತೆ ವಾಗ್ವಾದ ಸೃಷ್ಟಿ ಮಾಡಿದ್ದಾರೆ.
ವಾಷಿಂಗ್ಟನ್ ನ ನ್ಯಾಷನಲ್ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಸಂವಾದದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಈ ವೇಳೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಂ ಲೀಗ್ ಸಂಪೂರ್ಣವಾಗಿ ಜಾತ್ಯಾತೀತ ಪಕ್ಷವಾಗಿದೆ. ಅದರಲ್ಲಿ ಜಾತೀಯ ರಹಿತ ಅಂಶವಿಲ್ಲ. ನನಗೆ ಪ್ರಶ್ನೆ ಕಳುಹಿಸಿದವರು ಮುಸ್ಲಿಂ ಲೀಗ್ ಕುರಿತು ಅಧ್ಯಯನ ಮಾಡಿದಂತಿಲ್ಲ ಎಂದು ರಾಹುಲ್ ಉತ್ತರಿಸಿದ್ದಾರೆ.