ನಿರೂಪಕಿ ಅನುಶ್ರೀ ಅಂದರೆ ತುಂಬಾ ಪೇಮಸ್. ಅವಳೆಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಇವರು ಜೀ ಕನ್ನಡದ ಫೇಮಸ್ ನಿರೂಪಕಿ. ಹಲವು ವರ್ಷಗಳಿಂದ ಜೀ ಕನ್ನಡದಲ್ಲಿ ನಿರೂಪಣೆ ಮಾಡ್ತಾ ಇದ್ದಾರೆ. ನಿರೂಪಕಿ ಅನುಶ್ರೀ ಅವರು ಮೊದಲ ಬಾರಿ ಟ್ರೆಕ್ಕಿಂಗ್ ಹೋಗಿದ್ದಾರೆ. ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನೆನಪುಗಳ ಮಾತು ಎಷ್ಟು ಮಧುರ ಅಲ್ವಾ? ಕುದುರೆಮುಖದಲ್ಲಿ ನನ್ನ ಮೊದಲ ಟ್ರೆಕ್ಕಿಂಗ್ ಅನುಭವ ಎಂದು ಅನುಶ್ರೀ ಅವರು ಬರೆದುಕೊಂಡಿದ್ದಾರೆ. ಅನುಶ್ರೀ ಆಗಾಗ ಟ್ರಿಪ್ಗಳಿಗೆ ಹೋಗುತ್ತಿರುತ್ತಾರೆ. ಈ ಬಾರಿ ಸ್ನೇಹಿತರ ಜೊತೆ ಕುದುರೆಮುಖಕ್ಕೆ ಹೋಗಿದ್ದರಂತೆ. ಅಲ್ಲಿ ಸಕತ್ ಎಂಜಾಯ್ ಮಾಡಿದ್ದಾರೆ. ಅನುಶ್ರೀ ಅವರ ಫೋಟೋಗಳಿಗೆ 59 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ.
ಅನುಶ್ರೀ ಅವರು ತಮ್ಮ ಅದ್ಭುತವಾದ ಮಾತಿನಿಂದ ಈಡೀ ಕರುನಾಡ ಜನರ ಮನಸ್ಸು ಕದ್ದಿದ್ದಾರೆ. ಸದ್ಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಿರೂಪಣೆ ಮಾಡ್ತಾ ಇದ್ದಾರೆ. ಅನುಶ್ರೀ ಮಾತು ಕೇಳಲು ಎಷ್ಟೊಂದು ಜನ ಕಾರ್ಯಕ್ರಮ ನೋಡ್ತಾರೆ. ಅನುಶ್ರೀ ಕನ್ನಡ ಸಿನಿರಂಗದಲ್ಲಿ ಕಿರುತೆರೆ ನಿರೂಪಕಿಯಾಗಿ ಮತ್ತು ಚಿತ್ರನಟಿಯಾಗಿ ಸಕ್ರಿಯರಾಗಿದ್ದಾರೆ. ಮಂಗಳೂರಿನ ತುಳು ಕುಟುಂಬದಲ್ಲಿ ಜನಸಿದ ಇವರು `ಟೆಲಿ ಅಂತ್ಯಾಕ್ಷರಿ’ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಸಿನಿಪಯಣ ಆರಂಭಿಸಿದರು. ಅನುಶ್ರೀ ಅವರ ಮಾತೆಂದರೆ ಕಿರಿಯರಿಂದ ಹಿಡಿದು ಹಿರಿಯರವರೆಗೆ ಇಷ್ಟಪಡುತ್ತಾರೆ ಹಾಗಾಗಿ ಇವರು ನಿರೂಪಣೆ ಮಾಡುವ ಕಾರ್ಯಕ್ರಮಗಳಿಗೆ ಟಿಆರಪಿ ಹೆಚ್ಚಾಗಿ ಬರುತ್ತದೆ
ಈ ಟಿವಿ ಕನ್ನಡ ವಾಹಿನಿಯ `ಡಿಮಾಂಡಪ್ಪೋ ಡಿಮಾಂಡು’ ಕಾರ್ಯಕ್ರಮದ ಮೂಲಕ ಮನೆಮಾತಾದ ಇವರು ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ ಒಂದರಲ್ಲಿ ಭಾಗವಹಿಸಿದ್ದರು. ನಂತರ `ಬೆಂಕಿಪಟ್ಣ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ, ಇವರು 2011 ರಲ್ಲಿ ತೆರೆಕಂಡ `ಮುರಳಿ ಮೀಟ್ಸ್ ಮೀರಾ’ ಚಿತ್ರದ ಡಬ್ಬಿಂಗ್ ಗಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಹಾಗೆಯೇ 2015 ರಲ್ಲಿ ಜೀ ಕನ್ನಡದ ಪಾಪುಲರ್ ಆಂಕರ್ ಪ್ರಶಸ್ತಿ ಪಡೆದಿದ್ದಾರೆ. ಜೀ ಕನ್ನಡದ `ಸರಿಗಮಪ’ ರಿಯಾಲಿಟಿ ಶೋ ಕಾರ್ಯಕ್ರಮದ ಹಲವು ಸೀಸನ್ ಗಳನ್ನು ಯಶಸ್ವಿ ನಿರೂಪಣೆ ಮಾಡುತ್ತಿದ್ದಾರೆ. ಅವರ ಪಟ ಪಟ ಬರುವ ಮಾತೆ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ.
ಇಂತಾ ಅನುಶ್ರೀ ಎಲ್ಲಿ ಹೋದರೂ ಸದ್ದಾಗದೇ ಇರಲಾರದು. ಹಾಗಾಗಿ ಅವರು ಟ್ರಕ್ಕಿಂಗ್ ಹೋಗಿದ್ದ ವೀಡಿಯೋಸ್ ಗಳು ಫೋಟೋಸ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.