ಇತ್ತೀಚಿನ ದಿನಗಳಲ್ಲಿ ಮಧುಮೇಹಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಬದಲಾದ ನಮ್ಮ ಜೀವನಶೈಲಿ . ಸಾಕಷ್ಟು ದೈಹಿಕ ವ್ಯಾಯಾಮ ಇಲ್ಲದಿರುವುದು, ಆಹಾರಶೈಲಿ ಇವೆಲ್ಲಾ ಮಧುಮೇಹದ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ. ಮಧುಮೇಹ ಸಮಸ್ಯೆ ಬಗೆಹರಿಸಲು ದುಬಾರಿ ಔಷಧಿಗಳಲ್ಲದೇ ಹಲವಾರು ನೈಸರ್ಗಿಕ ವಿಧಾನಗಳಿವೆ,ಅದರಲ್ಲಿ ಒಂದು ನಿತ್ಯಪುಷ್ಪ ಹೂ. ಸಾಮಾನ್ಯವಾಗಿ ಈ ಹೂವಿನ ಗಿಡ ಬಹುತೇಕ ಮನೆಗಳಲ್ಲಿ ಇದ್ದೇ ಇರುತ್ತದೆ. ಇದನ್ನು ಹೆಚ್ಚಾಗಿ ಎಲ್ಲರೂ ಸಾಮಾನ್ಯ ಹೂ ಎಂದು ಕಡೆಗಣಿಸುತ್ತಾರೆ ಆದರೆ ಇದರಿಂದ ಮಧುಮೇಹಿಗಳಿಗೆ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಾಧ್ಯ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.
ನಿತ್ಯಪುಷ್ಪದಲ್ಲಿ ಆ್ಯಂಟಿಆಕ್ಸಿಡೆಂಟ್ ಹಾಗೂ ಕ್ಯಾನ್ಸರ್ನಾಶಕ ಗುಣಗಳಿದೆ. ಇದನ್ನು ಅನೇಕ ಬಗೆಯ ಕ್ಯಾನ್ಸರ್ಗುಣಪಡಿಸಲು ಬಳಸಲಾಗುವುದು, ಅಲ್ಲದೆ ಮಧುಮೇಹ, ಅತ್ಯಧಿಕ ರಕ್ತದೊತ್ತಡ ಸಮಸ್ಯೆ ತಡೆಗಟ್ಟಲು ಕೂಡ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
ನಿತ್ಯ ಪುಷ್ಪದ ಬಳಕೆ:
ನಿತ್ಯಪುಷ್ಪಾ ಹೂ ಹಾಗೂ ಎಲೆಗಳನ್ನು ಮಧುಮೇಹ ನಿಯಂತ್ರಣಕ್ಕೆ ಔಷಧಿಯಾಗಿ ಬಳಸಬಹುದು. ಇದರ ಎಲೆಯ ರಸ ಅಥವಾ ಇದರ ಬೇರು, ಕಾಂಡ ಇವುಗಳನ್ನು ಮಧುಮೇಹಿಗಳಿಗೆ ನೀಡಬಹುದು. ಮಧುಮೇಹಿಗಳು ದಿನಾ ಇದರ 4-5 ಎಲೆಗಳನ್ನು ತಿಂದರೆ ಮಧುಮೇಹ ನಿಯಂತ್ರಣದಲ್ಲಿಡಬಹುದು.
ನೀವು ಇಡೀ ಗಿಡವನ್ನು ಒಣಗಿಸಿ ಪುಡಿ ಮಾಡಿ ಅದನ್ನು ದಿನ ನಿತ್ಯ ಒಂದು ಚಮಚ ಬಳಸಬಹುದು. * 6-7 ಎಲೆಗಳನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣದಲ್ಲಿಡಬಹುದು.
ಅಲ್ಸರ್, ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಇದು ಒಳ್ಳೆಯದಲ್ಲ ಇನ್ನೂ ಗರ್ಭಿಣಿಯರು ಬಳಸಬೇಡಿ ಹಾಗೂ ಎದೆಹಾಲುಣಿಸುವ ತಾಯಂದಿರು ಬಳಸಬೇಡಿ.