2000 ಸಾವಿರ ರೂಪಾಯಿ ಮುಖಬೆಲೆಯನ್ನು ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಲು ಆರ್ಬಿಐ ತಿಳಿಸಿದ್ದು, ನೋಟುಗಳ ವಿನಿಮಯಕ್ಕೆ ಯಾವುದೇ ನಮೂನೆಯನ್ನು ಭರ್ತಿ ಮಾಡದೆ, ಯಾವುದೇ ಶುಲ್ಕ ನೀಡದೆ, ಗುರುತಿನ ಚೀಟಿ ಅಂತ ಯಾವುದೇ ರೀತಿಯ ದಾಖಲೆಗಳನ್ನು ತೋರಿಸುವ ಅಗತ್ಯವಿರುವುದಿಲ್ಲ. ಒಂದು ದಿನಕ್ಕೆ 20 ಸಾವಿರ ಮೊತ್ತದ ಹಣವನ್ನು ಬದಲಾಯಿಸಿಕೊಳ್ಳಬಹುದಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಖ್ಯಮಮತ್ರಿ ಸಿದ್ದರಾಮಯ್ಯ ಈಗ ನೈತಿಕ ಪೊಲೀಸ್ ಗಿರಿ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ. ನೈತಿಕ ಪೊಲೀಸ್ಗಿರಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಆಯಾ ವಿಭಾಗದ ಡಿಸಿಪಿ ಹಾಗೂ ಎಸ್ಪಿಗಳೇ ಹೊಣೆಗಾರರಾಗುತ್ತಾರೆ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.ಸಮಾಜದ ಶಾಂತಿಗೆ ದಕ್ಕೆ ತರುವಂತಹ ಕೆಲಸವು ಸಂಘಟನೆಗಳನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಕಾಂಗ್ರೆಸ್ ಪಕ್ಷ ಭರವಸೆಯನ್ನು ನೀಡಿತ್ತು. ಹೀಗಾಗಿ ವಿದ್ಯುತ್ ಬಿಲ್ ಕಟ್ಟಲು ಬಸ್ ಟಿಕೆಟ್ ಪಡೆಯಲು ಸಾರ್ವಜನಿಕರು ನಿರಾಕರಿಸುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ.
ಚೆಸ್ಕಾಂ ಸಿಬ್ಬಂದಿ ವಾಹನಕ್ಕೆ ದ್ವನಿವರ್ಧಕ ಅಳವಡಿಸಿ ಹಳ್ಳಿಗಳನ್ನು ಸುತ್ತುತ್ತಾ ಬಿಲ್ ಪಾವತಿ ಮಾಡುವಂತೆ ಡಂಗುರ ಸಾರುತ್ತ ಜನರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ.
ಭಾರತದಲ್ಲಿ ಪ್ರತಿ 10 ವರ್ಷಕೊಮ್ಮೆ ನಡೆಸುವ ಜನಗಣತಿಯನ್ನು ಡಿಜಿಟಲೀಕರಣ ಮಾಡುವ ಚಿಂತನೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಮುಂಬರುವ ಸಂಸತ್ ಮುಂಗಾರು ಅಧಿವೇಶದಲ್ಲಿ ಹೊಸ ವಿಧೇಯಕ ಮಂಡಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.ಡಿಜಿಟಲ್ ಜನಗಣತಿಯ ವಿಶೇಷತೆ:
ನಿಖರ ಹಾಗೂ ತ್ವರಿತಗತಿಯಲ್ಲಿ ಮಾಹಿತಿ ದಾಖಲಿಸಬಹುದು.ಜನಗಣತಿಗೆ ಬಜೆಟ್ ನಲ್ಲಿ 87,54.23ಕೋಟಿ ಅನುವಾದ ನೀಡಲಾಗಿದೆ.
30 ಲಕ್ಷ ಸಿಬ್ಬಂದಿಗಳನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸುವ ಸಾಧ್ಯತೆ. ಟ್ಯಾಬ್ ಮತ್ತಿತರ ಡಿಜಿಟಲ್ ಪರಿಕರಗಳಲ್ಲಿ ಮಾಹಿತಿ ಸಂಗ್ರಹ. 35ಕ್ಕೂ ಹೆಚ್ಚು ಸಾಮಾಜಿಕ ಆರ್ಥಿಕ ಮಾನದಂಡಗಳನ್ನು ಬಳಸಿ ಸರ್ವೆ ಮಾಡಲಾಗುವುದು.
ಸಿದ್ದರಾಮಯ್ಯ ಸರ್ಕಾರದ ಅತ್ಯಂತ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟೀನ್ ಅನ್ನು ಮತ್ತೆ ಆರಂಭಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಬಡವರ ಪಾಲಿನ ಅಕ್ಷಯ ಪಾತ್ರೆಯಾಗಿದ್ದ ಇಂದಿರಾ ಕ್ಯಾಂಟೀನ್ ಅನ್ನು 243 ಸ್ಥಳಗಳಲ್ಲಿ ಆರಂಭಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಜಯರಾಮ್ ರಾಯ್ ಪುರ ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ ನಲ್ಲಿ ಉಪಹಾರ ಬೆಲೆ ಐದರಿಂದ ಹತ್ತು ರೂಪಾಯಿಗೆ ಏರಿಕೆ ಮಾಡಲಾಗುತ್ತದೆ. ರಾತ್ರಿ ಊಟಕ್ಕೆ ಬೇಡಿಕೆ ಕಡಿಮೆ ಅದು ಹಾಗೆ ಮುಂದುವರೆದಿದೆ.