ರುದ್ರನ ಅಕ್ಷಿಯೇ ರುದ್ರಾಕ್ಷಿ. ಹಿಂದೂ ಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತಿದೆ. ಅಲ್ಲದೆ, ರುದ್ರಾಕ್ಷಿಗೆ ಪೂಜೆ, ಪುನಸ್ಕಾರಗಳಲ್ಲಿ ವಿಶೇಷ ಸ್ಥಾನವಿದೆ. ಮತ್ತೊಂದು ಪುರಾಣದ ಕಥೆಯ ಪ್ರಕಾರ, ಶಿವನು ದೀರ್ಘ ಕಾಲ ಧ್ಯಾನ ನಿರತನಾಗಿ ನಂತರ ಕಣ್ಣು ಬಿಟ್ಟಾಗ ಅವನ ಕಣ್ಣಿನಿಂದ ಬಿದ್ದ ಒಂದು ಕಣ್ಣೀರ ಹನಿ (ಆನಂದ ಭಾಷ್ಪ) ರುದ್ರಾಕ್ಷಿಯಾಗಿ ಅದರಿಂದ ರುದ್ರಾಕ್ಷಿಯ ಮರ ಹುಟ್ಟಿತೆಂದು ಹೇಳಲಾಗುತ್ತದೆ.
ರುದ್ರಾಕ್ಷಿಯಲ್ಲಿ ಹಲವು ಬಗೆಗಳಿವೆ, ಏಕಮುಖಿ, ದಶಮುಖಿ, ತ್ರಯೋದಶಿ ಮುಖಿ ರುದ್ರಾಕ್ಷಿ, ಚತುರ್ದಶ ಮುಖದ ರುದ್ರಾಕ್ಷಿ ಹೀಗೆ ಅನೇಕ ವಿಧಗಳಿವೆ. ರುದ್ರಾಕ್ಷಿ ಧಾರಣೆಯಿಂದ ದೇಹ, ಮನಸ್ಸು ಮತ್ತು ಆತ್ಮದ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುವುದರ ಜೊತೆಗೆ ದುಷ್ಟ ಶಕ್ತಿಯಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ ಅನ್ನುವ ನಂಬಿಕೆ ಹಿಂದೂ ಧರ್ಮೀಯರಲ್ಲಿ ಇದೆ.
ರುದ್ರಾಕ್ಷಿಯನ್ನು ಹೆಚ್ಚಾಗಿ ಧ್ಯಾನ ಮಾಡುವ ವೇಳೆ ಸಾಧು ಸಂತರು ಬಳಸಿಕೊಳ್ಳುತ್ತಿದ್ದರಂತೆ. ಇದರಿಂದ ಅವರಿಗೆ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತಿತ್ತು ಮತ್ತು ವಿದ್ಯಾರ್ಥಿಗಳು ಕೂಡ ಇದನ್ನು ಬಳಸ ಬಹುದು ಎಂದು ಹೇಳಲಾಗುತ್ತದೆ.
ರುದ್ರಾಕ್ಷಿ ಧರಿಸುವುದರಿಂದ ಏಕಾಗ್ರತೆ ಉತ್ತಮಗೊಳ್ಳುವುದರ ಜೊತೆಗೆ ಮಾನಸಿಕ ಒತ್ತಡ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ರುದ್ರಾಕ್ಷಿಯನ್ನು ಹಾಗೆ ಸುಮ್ಮನೆ ಎಲ್ಲರೂ ಧರಿಸಲು ಸಾಧ್ಯವಿಲ್ಲ ಒಮ್ಮೆ ಧರಿಸಿದರೆ ಕೆಲವೊಂದು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕಾಗಿದೆ.
ರುದ್ರಾಕ್ಷಿಯನ್ನು ಯಾವೆಲ್ಲ ಸಮಯಕ್ಕೆ ಧರಿಸಬಾರದು ಎಂದರೆ
ರುದ್ರಭೂಮಿ(ಸ್ಮಶಾನ) ಸ್ಥಳಕ್ಕೆ ಹೋಗುವಾಗ ರುದ್ರಾಕ್ಷಿಯನ್ನು ಧರಿಸಿ ಹೋಗಬಾರದು.
ಆಲ್ಕೋಹಾಲ್ ಮತ್ತು ಮದ್ಯ ಮಾರಾಟ ಮಾಡುವ ಸ್ಥಳಗಳಿಗೆ ರುದ್ರಾಕ್ಷಿ ಧರಿಸಿ ಹೋಗಬಾರದು. ಅಷ್ಟೇ ಅಲ್ಲ ರುದ್ರಾಕ್ಷಿ ಧರಿಸಿ ಮದ್ಯ, ಮಾಂಸ ಸೇವಿಸುವುದು ಕೂಡಾ ನಿಷಿದ್ಧವಾಗಿದೆ.
ಮಗು ಜನ್ಮ ನೀಡಿದ ಸಂದರ್ಭದಲ್ಲಿ ರುದ್ರಾಕ್ಷಿ ಧರಿಸಿ ಮಗುವನ್ನು ನೋಡಲು ಹೋಗಬಾರದು.
ರಾತ್ರಿ ಮಲಗುವ ಮುನ್ನ ರುದ್ರಾಕ್ಷಿಯನ್ನು ತೆಗೆದಿಡಬೇಕು.
ಇನ್ನೂ ಅಮಾವಾಸ್ಯೆ, ಪೌರ್ಣಿಮೆ, ಶ್ರಾವಣ ಸೋಮವಾರ, ಶಿವರಾತ್ರಿ ಕಾಲದಲ್ಲಿ ರುದ್ರಾಕ್ಷಿ ಧರಿಸುವುದು ಶುಭಕರ.
ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ತುಂಬಾ ಮಹತ್ವವಿದೆ. ಮೊದಲಿನಿಂದಲೂ ರುದ್ರಾಕ್ಷಿಯು ತುಂಬಾ ಪವಿತ್ರ ಎಂದು ಭಾವಿಸಲಾಗುತ್ತದೆ. ರುದ್ರಾಕ್ಷಿಯ ಮಾಲೆ ಧರಿಸಿದರೆ ಅದರಿಂದ ದೇಹಕ್ಕೆ ವಿಶೇಷವಾದ ಶಕ್ತಿ ಸಿಗುವುದು ಎಂದು ನಂಬಲಾಗಿದೆ. ಪುರಾಣದಲ್ಲಿ ಕೂಡ ರುದ್ರಾಕ್ಷಿ ಮಾಲೆಯನ್ನು ಧರಿಸಿರುವಂತಹ ಋಷಿ ಮುನಿಗಳನ್ನು ನೋಡಿರುತ್ತೇವೆ. ರುದ್ರಾಕ್ಷಿಯು ವ್ಯಕ್ತಿತ್ವವನ್ನು ನಿರ್ಮಾಣ ಮಾಡಲು ನೆರವಾಗುವುದು ಮತ್ತು ಇದನ್ನು ಧರಿಸುವವರು ಕೇವಲ ಧನಾತ್ಮಕವಾದ ಸಂಜ್ಞೆಗಳನ್ನು ಪಡೆಯುವಂತೆ ಮಾಡುತ್ತದೆ ಎಂದು ಅಲ್ಲದೆ ಇದರಿಂದಾಗಿ ವ್ಯಕ್ತಿಗೆ ತಮಗೆ ಬೇಕಿರುವಂತಹ ಶಕ್ತಿ ಮತ್ತು ಗುಣಗಳನ್ನು ಪಡೆಯಲು ಸಾಧ್ಯವಾಗುವುದು. ರುದ್ರಾಕ್ಷಿಯನ್ನು ಧರಿಸಿದ ಎಲ್ಲಾ ವ್ಯಕ್ತಿಗಳಲ್ಲಿಯೂ ಕೂಡ ತುಂಬಾ ತಾಳ್ಮೆ ತರುವುದು. ಚತುಮುರ್ಖಿ ಮತ್ತು 6 ಮುಖದ ರುದ್ರಾಕ್ಷಿಯು ಜಾಣ್ಮೆ ತರುವುದು. ಅದೇ ನವ ಮುಖದ ರುದ್ರಾಕ್ಷಿಯು ಆತ್ಮವಿಶ್ವಾಸ ಹೆಚ್ಚಿಸುವುದು ಎಂದು ಹೇಳಲಾಗುತ್ತದೆ.