ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇ ತಡ ಅವರ ಮುಖ್ಯಮಂತ್ರಿ ಆಯ್ಕೆಯ ಸರ್ಕಸ್ ಇನ್ನೂ ನಡೆಯುತ್ತಿದೆ. ಆದರೆ ಮತದಾರ ಪ್ರಭು ಮಾತ್ರ ಸಂಪೂರ್ಣ ರಿಲಾಕ್ಸ ಮೂಡ್ ನಲ್ಲಿದ್ದು ಸೋಶಿಯಲ್ ಮಿಡಿಯಾ ಮುಖಾಂತರ ಈಗಿಂದಲೇ ಟ್ರೋಲ್ ಮಾಡುವ ಮೂಲಕ ಸರ್ಕಾರ ನೀಡಿರುವ ಆಶ್ವಾಸನೆಗಳತ್ತ ಚಾಟಿ ಬೀಸುತ್ತಿದ್ದಾರೆ.
ಅವುಗಳಲ್ಲಿ ಪ್ರಮುಖವಾದವುಗಳೆಂದರೆ
೧) ಬೆಚ್ಚನೆ ಮನೆಯೊಳಗೆ ಪುಕ್ಕಟೆ ವಿದ್ಯುತ್ ಇರಲು
ವೆಚ್ಚಕೆ 2000 ಹೊನ್ನಿರಲು
ಉದ್ಯೋಗ ಮಾಡದೆ ಸಿಗುವ ಭರಪೂರ ಭತ್ಯೆ ಇರಲು
ಇಚ್ಚೆಯನರಿತು 10 ಕೆಜಿ ಅಕ್ಕಿ ಕೊಡುವಸರ್ಕಾರವಿರಲು
ಮನೆಯೊಡತಿಗೆ ಬೇಜಾರಾದಾಗ ತವರಿಗೆ ಹೋಗಲು
ಪುಕ್ಕಟೆಬಸ್ ಇರಲು ಆಸ್ವರ್ಗಕ್ಕೆ ಕಿಚ್ಚು – ಹಚ್ಚೆಂದ…
ಮತದಾರ
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು…..!
೨)ಮೋದಿಯವರ ಡಬಲ್ ಇಂಜಿನ್ ಸರ್ಕಾರದ ಬದಲು
ಇಂದು ನಮ್ಮ ರಾಜ್ಯದಲ್ಲಿ ಡಬಲ್ ಸ್ಟೇರಿಂಗ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಒಬ್ಬರು ಎಡವಾದರೆ ಮತ್ತೊಬ್ಬರು ಬಲಕ್ಕೆ ಯಾವ ಗುರಿ ತಲುಪಲಿದೆ ನಮ್ಮ ರಾಜ್ಯ ?
೩)ಅಸ್ತಿತ್ವಕ್ಕೆ ಬಂದ ನಂತರ ೨೦೦ ಯುನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಘೋಷಿಸಿದ ರಾಜ್ಯ ಸರ್ಕಾರದ ಮಾತನ್ನು ಬಲವಾಗಿ ನಂಬಿದ ಜನ ಮುಂದಿನ ತಿಂಗಳಿಂದ ವಿದ್ಯುತ್ ಬಿಲ್ಲ್ ತುಂಬುವುದಿಲ್ಲ ಎಂದು ತಮ್ಮಲ್ಲೆ ಮಾತನಾಡಿಕೊಂಡು ಖುಷಿಯಲ್ಲಿದ್ದಾರೆ.
೪)ಮತ್ತೊಂದು ಟ್ರೇಡ್ ಎಂದರೆ ಸುದೀಪ್ ಅಭಿನಯದ ಕಿಚ್ಚ
ಕನ್ನಡ ಚಿತ್ರದ ತುಣುಕು ಎಲ್ಲ ಕಡೆ ಹರಿದಾಡುತ್ತಿದೆ. ಅದರಲ್ಲಿ ಸುದೀಪ್ ಪ್ರಸ್ತುತ ಕಾಂಗ್ರೆಸ್ ನೀಡಿರುವ ಎಲ್ಲ ಭಾಗ್ಯಗಳನ್ನು ಆ ಸಮಯದಲ್ಲೇ ಮತದಾರರಿಗೆ ಹೇಳುತ್ತಾರೆ. ಈಗ ಟ್ರೋಲಿಗರ ವಾದವೇನೆಂದರೆ ಅದೇ ಚಲನಚಿತ್ರದ ಸಂಭಾಷಣೆಯನ್ನೇ ಕಾಂಗ್ರೆಸ ಪಕ್ಷದವರು ತಮ್ಮ ಪ್ರನಾಳಿಕೆ ಯಲ್ಲಿ ಬಳಿಸಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದರೆ.
೫)ಮತ್ತೊಂದು ಎಲ್ಲ ಕಡೆ ಹರಿದಾಡುತ್ತಿರುವ ಟ್ರೊಲ್ ಎಂದರೆ ರಾಹುಲ ಗಾಂಧಿಯವರು ನಮ್ಮ ಸರ್ಕಾರ ಅಸ್ಥಿತ್ವಕ್ಕೆ ಬರಲೇ ಬಾರದಿತ್ತು ಹಾಯಾಗಿರಬಹುದಿತ್ತು ಆದರೆ ಈಗ ಸರ್ಕಾರ ಬಂದಿದ್ದೇ ತಡ ಇಲ್ಲದ ತಲೆನೋವಾಗಿ ಪರಿಣಮಿಸಿದೆ ಎಂದು ಹೇಳುವಂತಹ ಟ್ರೋಲ್ ಸೋಷಿಯಲ್ ಮಿಡಿಯಾದಲ್ಲಿ ಹರದಾಡುತ್ತಿವೆ.
೬) “ಮುಖ್ಯಮಂತ್ರಿ ಯಾರಾಗುತ್ತರೆ ಎಂದು ಟಿ.ವಿ ನೋಡಿ ನೋಡಿಯೇ ೩೦೦ ಯುನಿಟ್ ವಿದ್ಯುತ್ ಖರ್ಚಾಗಿದೆ. ”
ಇದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವೇ ಸೀಮಿತವಾಗಿಲ್ಲ ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೂ ಹಬ್ಬಿದೆ.
ಡಬಲ್ ಇಂಜಿನ್ ಸರ್ಕಾರ ಎಂದು ಬೀಗುತ್ತಿರುವ ಬಿಜೆಪಿ ಕಡೆಯಲ್ಲಿ ತನ್ನ ಸ್ಟೇರಿಂಗ್ ಅನ್ನೇ ಕಳೆದುಕೊಂಡಿದೆ ಎಂದು ಜನ ಟ್ರೋಲ್ ಮಾಡುತ್ತಿದ್ದರೆ, ಮತ್ತೊಂದೆಡೆ ಗುಜರಾತಿಗಳ ಕಲಾ ಪ್ರದರ್ಶನಕ್ಕೆ ನಮ್ಮ ರಾಜ್ಯದ ಜನರು ಮರುಳಾಗಲಿಲ್ಲ ಎಂದಲೂ ಸಹ ಜನ ಮಿಮ್ ಮಾಡುತ್ತಿದ್ದಾರೆ.
ಇನ್ನು ಚುನಾವಣೋತ್ತರ ಸಮೀಕ್ಷೆಯಲ್ಲಿ ಅತಂತ್ರ ಸರ್ಕಾರ ಎಂದು ಬಿಂಬಿತವಾದಾಗ ಅತ್ಯಂತ ಖುಷಿಯಾದ ವ್ಯಕ್ತಿಗಳೆಂದರೆ ಜೆಡಿಎಸ್ ಪಕ್ಷದ ನಾಯಕರು ಎಂತಲೂ ಸಹ ಸಾಮಾಜಿಕ ಜಾಲತಾಣದಲ್ಲಿ ಚಾಟಿ ಬೀಸುತ್ತಿದ್ದರೆ
ಮತ್ತೋಂದು ಕಡೆ ಖುಷಿಯ ಭರಾಟೆಯ ಮಧ್ಯ ಕುಮಾರಣ್ಣ ಈಗಾಗಲೆ ಹೊಸ ಪಂಚೆ ಮತ್ತು ಶರ್ಟ್ ಖರೀದಿಸಿ ಪ್ರಮಾಣವಚನಕ್ಕೆ ಸಿದ್ದರಾಗಿದ್ದರೆ ಎಂತಲೂ ಸಹ ಜನ ಟ್ರೋಲ್ ಮಾಡಿದ್ದಾರೆ.
ಅದೇನೆ ಇರಲಿ ಟ್ರೋಲ್ ಮಾಡಿದರು ಅದರ ಹಿಂದೆ ಈ ಟ್ರೋಲ್ಗಳು ನಿಜವಾಗದಿರಲಿ ಎಂಬ ಆಶಯ ಎಲ್ಲ ಮತದಾರನ್ನದ್ದಾಗಿದೆ. ಅದೇ ಪುಕ್ಕಟೆ ಭಾಗ್ಯಗಳನ್ನು ಅನುಭವಿಸಲು ಸಿದ್ಧರಾಗಿರುವ ಜನ ಈ ಆಶ್ವಾಸನೆಗಳನ್ನು ಸರ್ಕಾರ ಪೂರ್ಣಗೋಳಿಸಲಿ ಎಂದು ಆಶಿಸುತ್ತಿದ್ದಾರೆ.