ಬೆಂಗಳೂರು: ತೀವ್ರ ಕುತೂಹಲ ಸೃಷ್ಟಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾಂಗ್ರೆಸ್ ಭರ್ಜರಿ ಬಹುಮತ ಪಡೆದುಕೊಂಡಿದೆ. ಗೆಲುವಿನ ಸಂಭ್ರಮದಲ್ಲಿರುವ ಕಾಂಗ್ರೆಸ್ ನಾಯಕರಿಗೆ ಇನ್ನುಮುಖ್ಯಮಂತ್ರಿ ಸ್ಥಾನದತ್ತ ಮುಖಮಾಡಿದ್ದಾರೆ.
ಕರ್ನಾಟಕ ವಿಧಾನಸ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 136 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 65 ಕ್ಷೇತ್ರಗಳಲ್ಲಿ ಬಿಜೆಪಿ ಇನ್ನು 19 ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಇತರೆ ಅಭ್ಯರ್ಥಿಗಳು 4 ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ.
ಇನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನ ಪ್ರಮುಖರು ಆಘಾತಕಾರಿ ಸೋಲನುಭವಿಸಿದ್ದು, ಮತ್ತಿಬ್ಬರು ಅಚ್ಚರಿಯ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.
ಅಚ್ಚರಿಯ ಗೆಲುವು ಕಂಡ ಅಭ್ಯರ್ಥಿಗಳು:
ಲತಾ ಮಲ್ಲಿಕಾರ್ಜುನ್ (ಪಕ್ಷೇತರ)- ಹರಪ್ಪನಹಳ್ಳಿ
ವಿನಯ ಕುಲರ್ಣಿ (ಕಾಂಗ್ರೆಸ್)- ಧಾರವಾಡ
ಸೋಲು ಕಂಡ ಪ್ರಮುಖ ನಾಯಕರು:
ಸಿ.ಟಿ. ರವಿ (ಬಿಜೆಪಿ) – ಚಿಕ್ಕಮಗಳೂರು
ಶ್ರೀರಾಮುಲು (ಬಿಜೆಪಿ)- ಬಳ್ಳಾರಿ
ಮುರುಗೇಶ್ ನಿರಾಣಿ (ಬಿಜೆಪಿ) – ಬೀಳಗಿ
ಮಾಧುಸ್ವಾಮಿ (ಬಿಜೆಪಿ)- ಚಿಕ್ಕನಾಯಕನಹಳ್ಳಿ
ಪ್ರೀತಂ ಗೌಡ (ಬಿಜೆಪಿ)- ಹಾಸನ
ಜಗದೀಶ್ ಶೆಟ್ಟರ್ (ಕಾಂಗ್ರೆಸ್)- ಹುಬ್ಬಳ್ಳಿ-ಧಾರವಾಡ
ಕೆ. ಸುಧಾಕರ್ (ಬಿಜೆಪಿ)- ಚಿಕ್ಕಬಳ್ಳಾಪುರ
ಬಿ.ಸಿ.ನಾಗೇಶ್ (ಬಿಜೆಪಿ)- ತಿಪಟೂರು
ನಾರಾಯಣಗೌಡ (ಬಿಜೆಪಿ)- ಕೆ.ಆರ್. ಪೇಟೆ
ವಿ. ಸೋಮಣ್ಣ (ಬಿಜೆಪಿ)- ವರುಣಾ ಹಾಗೂ ಚಾಮರಾಜನಗರ
ಸಾ.ರಾ. ಮಹೇಶ್ (ಜೆಡಿಎಸ್)- ಕೆ. ಆರ್. ಪುರ
ನಿಖಿಲ್ ಕುಮಾರಸ್ವಾಮಿ (ಜೆಡಿಎಸ್)- ರಾಮನಗರ
ಸಿ.ಪಿ. ಯೋಗೇಶ್ವರ್ (ಬಿಜೆಪಿ)- ಚನ್ನಪಟ್ಟಣ
ಗೋವಿಂದ ಕಾರಜೋಳ (ಬಿಜೆಪಿ) -ಮುಧೋಳ
—
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಸೋಲು ಕಂಡಿದ್ದು, ಸೋಲಿನ ಹೊಣೆಯನ್ನು ತಾವೇ ಹೊರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ. ನಮ್ಮ ಸರ್ಕಾರ ಒಳ್ಳೆಯ ಕೆಲಸಗಳನ್ನು ಮಾಡಿದರೂ ಅನಿರೀಕ್ಷಿತ ಸೋಲನುಭವಿಸಿದೆ. ಇಡೀ ಸೋಲಿನ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ ಎಂದಿದ್ದಾರೆ.
ನಮ್ಮ ಸೋಲಿನ ಕಾರಣ ಹಾಗೂ ಫಲಿತಾಂಶದ ಅವಲೋಕನವನ್ನು ಮಾಡುತ್ತೇವೆ. ಯಾವ ಕಾರಣಕ್ಕೆ ಹಿನ್ನಡೆಯಾಗಿದೆ ಎಂಬುದನ್ನು ಅವಲೋಕನ ಮಾಡುತ್ತೇವೆ. ಈ ಮೂಲಕ ಲೋಕಸಭಾ ಚುನಾವಣೆಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು.
—
ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಬೆನ್ನಲ್ಲೇ ಜಯಭೇರಿ ಸಾಧಿಸಿದ ಕಾಂಗ್ರೆಸ್ ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು, ಜನರ ಆಶೋತ್ತರಗಳನ್ನು ಈಡೇರಿಸಯವಂತಾಗಲಿ ಎಂದು ಶುಭ ಕೋರಿದ್ದಾರೆ.
ಇನ್ನು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಕಾರ್ಯಕರ್ತರ ಶ್ರಮವನ್ನು ನಾನು ಪ್ರಶಂಸಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹುರುಪಿನಿಂದ ಕರ್ನಾಟಕ್ಕೆ ಸೇವೆ ಸಲ್ಲಿಸುತ್ತೇವೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
—
ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆಲುವು ಕಂಡಿದೆ. ಇನ್ನು ಮೊದಲ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕಕ್ಕೆ ನೀಡಿರುವ ಐದು ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಚುನಾವಣೆಯಲ್ಲಿ ಬಹುಮತದೊಂದಿಗೆ ಗೆದ್ದು ಸರ್ಕಾರ ರಚಿಸಲು ಕಾಂಗ್ರೆಸ್ ಸನ್ನದ್ದವಾಗಿದ್ದು, ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಕೂಡ ಸಂಭ್ರಮ ಮನೆಮಾಡಿದೆ. ಚುನಾವಣೆಗಾಗಿ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದ ತಿಳಿಸಿದ್ದಾರೆ.
—
ಐಪಿಎಲ್ ನ 16ನೇ ಆವೃತ್ತಿಯಲ್ಲಿ ಭಾನುವಾರ ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ.
ಈ ಬಾರಿಯ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ದ ಸೋಲನುಭವಿಸುವ ಮೂಲಕ ಟೂರ್ನಿಯ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿತ್ತು.ಬಳಿಕ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲುವಿನ ಬಳಿಕ 4ನೇ ಸ್ಥಾನಕ್ಕೇರಿದೆ
ಇದೀಗ ಪ್ಲೇ ಆಫ್ ಗಾಗಿಯಾದರೂ ಆರ್ ಸಿಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವಿಗೆ ಹೋರಾಟ ನಡೆಸಬೇಕಿದೆ. ಇನ್ನು ಈ ಪಂದ್ಯದಲ್ಲಿ ಪ್ಲೇಯಿಂಗ್ Xl ನಲ್ಲಿ ಕನ್ನಡಿಗೆ ವೈಶಾಕ್ ವಿಜಯ್ ಕುಮಾರ್ ಬದಲಿಗೆ ಸಿದ್ದಾರ್ಥ್ ಕೌಲ್ ಗೆ ಸ್ಥಾನ ನೀಡುವ ಸಾಧ್ಯತೆ ಇದೆ.