ಮನುಕುಲದ ಯುವ ಜನತೆಗೆ ಆದರ್ಶಪ್ರಾಯರಾದವರು ಸ್ವಾಮಿ ವಿವೇಕಾನಂದರು. ಮಹಾತ್ಮಾ ಗಾಂಧೀಜಿ ಅವರು ಹೇಳಿದ ಹಾಗೆ ಶ್ರೀಕೃಷ್ಣನನ್ನು ತಿಳಿಯಬೇಕಾದರೆ ಗೀತೆಯನ್ನು ಓದಿ ಮತು ಭಾರತವನ್ನು ತಿಳಿಯಬೇಕಾದರೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಓದಿ, ಇಂತಹ ಮಹಾನ್ ಚೇತನ ಕರ್ನಾಟಕದ ಸಂಚಾರದಲ್ಲಿದ್ದಾಗ ಬೆಳಗಾವಿಗೆ ಬಂದು ವಾಸ್ತವ್ಯ ಮಾಡಿದ್ದು ಅತ್ಯಂತ ವಿಶೇಷ.
ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಹೀಗೆಂದು ಯುವಕರಿಗೆ ಕರೆ ಕೊಟ್ಟ ವಿವೇಕಾನಂದರಿಗೆ ಯುವಶಕ್ತಿಯ ಮೇಲೆ ಅಪಾರವಾದ ನಂಬಿಕೆ. ಯುವಶಕ್ತಿಗೆ ಮೀಗಿಲಾದದು ಯಾವದು ಇಲ್ಲಾ, ಯಾರೂ ಹೇಡಿಗಳಾಗಬಾರದು, ಪುರುಷ ಸಿಂಹಗಳಾಗಬೇಕು. ನಿಮ್ಮ ಜೀವನದ ಶಿಲ್ಪಿಗಳು ನೀವೇ ಆಗಬೇಕೆ ಹೊರತು ಮತ್ತೊಬ್ಬರಲ್ಲ. ಎಂದು ಪ್ರತಿಪಾದಿಸುತ್ತಿದ್ದರು. ಇಂತಹ ಮಹಾನ ವ್ಯಕ್ತಿಗಳು 1893 ಸಪ್ಟೆಂಬರ್ 11ರಂದು ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮದಲ್ಲಿ ಭಾಗವಹಿಸಿ ಹಿಂದೂ ಧರ್ಮದ ಮಹತ್ವವನ್ನು ಎತ್ತಿ ಹಿಡಿದರು. ದೇಶ ವಿದೇಶಗಳಲ್ಲಿ ಹಿಂದೂಧರ್ಮದ ತತ್ವಗಳನ್ನು ಸಾರಿದರು. ಇಂತಹ ಮಹಾನ ವ್ಯಕ್ತಿಗಳು ನಮ್ಮ ಬೆಳಗಾವಿ ಬಂದಿದ್ದರು. ಇಲ್ಲಿ ಕೆಲ ದಿನಗಳ ವರೆಗೆ ವಾಸವಿದ್ದರು. ಎಂಬುದೇ ಬೆಳಗಾವಿ ನಗರದ ಭಾಗ್ಯ. ಅವರು ಅಕ್ಟೋಬರ್ 16 1892ರಲ್ಲಿ ಆಗಮಿಸಿದ್ದರು. ಮತ್ತು ಬೆಳಗಾವಿಯಲ್ಲಿ ಸುಮಾರು 9 ದಿನಗಳವರೆಗೆ ವಾಸವಾಗಿದ್ದರು. ಅವರು ಇಲ್ಲಿ ಬೆಳಗಾವಿಯಲ್ಲಿ ಇದ್ದಾಗ ಅನೇಕ ಚರ್ಚೆಗಳು ಚಿಂತನೆಗಳನ್ನು ನಡೆಸಿದ್ದರು. ಆಗಿನ ಪ್ರಸಿದ್ಧ ವಕೀಲರಾದ ಜಿ.ಎಸ್. ಭಾಟೇ ಅವರ ಮನೆಯಲ್ಲಿ ವಾಸವಿದ್ದರು. ಅವರು ವಾಸವಿದ್ದ ಆ ಮನೆ ಇಂದು ಭಾಟೇವಾಡಾ ಎಂದು ಪ್ರಸಿದ್ಧವಾಗಿದೆ.
ಗುರು ಪರಮಹಂಸರ ಮರಣದ ನಂತರ ವಿವೇಕಾನಂದರು ಬಾರಾಮತಿಯ ಒಂದು ಭೂತದ ಬಂಗ್ಲೆಯಲ್ಲಿ ಧ್ಯಾನಕ್ಕೆ ಕುಳಿತಿರುತ್ತಾರೆ. ಆಗ ಸ್ವಪ್ನದಲ್ಲಿ ಬಂದು ಇಲ್ಲಿ ಆರಾಮವಾಗಿ ಕುಳಿತುಕೊಂಡಿರುವುದು ದೊಡ್ಡ ತಪ್ಪು. ಏಳು ಎದ್ದು ಸಮಾಜ ಸುಧಾರಣೆಯನ್ನು ಮಾಡು, ಹಿಂದೂ ಧರ್ಮದ ಸಂಸ್ಕೃತಿಯನ್ನು ಸಾರಲು ಹೋಗು ಎಂದು ಹೇಳುತ್ತಾರೆ. ಈ ದೇಶದಲ್ಲಿ ಅನೇಕ ಯುವಕರು ಕಾಯ್ತಾ ಇದ್ದಾರೆ ಹೋಗು ಎಂದು ಗುರುಗಳು ಹೇಳುತ್ತಾರೆ. ಹೀಗೆ ಶಿಷ್ಯರನ್ನು ಹುಡುಕುತ್ತಾ, ತಮ್ಮ ವಿಚಾರ ಧಾರೆಗಳನ್ನು ಎಲ್ಲಡೆ ಪಸರಿಸಲು ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಬಂದರು. ಬೆಳಗಾವಿಗೆ ಬರುವಾಗ ವಿವೇಕಾನಂದರ ಬಳಿ ಕೋಲ್ಹಾಪುರದ ರಾಜನ ಪತ್ರವನ್ನು ತಂದಿದ್ದರು, ಆ ಪತ್ರವನ್ನು ಭಾಟೆಯವರಿಗೆ ತೋರಿಸಿ ವಾಸಿಸಲು ಅನುಮತಿಯನ್ನು ಕೇಳಿದರು. ಕೆಲ ಸಮಯ ಭಾಟೆಯವರು ಸ್ವಾಮಿ ವಿವೇಕಾನಂದರೊಂದಿಗೆ ಮಾತನಾಡಿದ ನಂತರ ಭಾಟೆಯವರಿಗೆ ವಿವೇಕಾನಂದರ ಪಾಂಡಿತ್ಯದ ಪರಿಚಯವಾಯಿತು. ಭಾಟೆಯವರ ಮಗ ಅಷ್ಟಾಧ್ಯಾಯದಲ್ಲಿ ತಪ್ಪುತ್ತಿದ್ದಾಗ ವಿವೇಕಾನಂದರು ಅದನ್ನು ಕೇಳಿ ಸರಿಪಡಿಸಿದರು. ನಂತರ ಭಾಟೆಯವರು ಓರ್ವ ಹರಿಪದ (ಬಂಗಾಲಿ)ಯವರ ಮನೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಮತ್ತೆ ವಿವೇಕಾನಂದರು ಭಾಟೆಯವರ ಮನೆಗೆ ತಿರುಗಿ ಬರುತ್ತಾರೆ. ನಂತರ ವಿವೇಕಾನಂದರು ಬೆಳಗಾವಿಯ ಎಲ್ಲ ಧರ್ಮದ ಗಣ್ಯ ಮಾನ್ಯರನ್ನು ಭೇಟಿಯಾಗಿ ಚರ್ಚೆ ಮಾಡುತ್ತಾರೆ. ಅವರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸುತ್ತಾರೆ. ಸೂರ್ಯನು ಹೇಗೆ ಬೆಳಗ್ಗೆ, ಮಧ್ಯಾನ್ಹ, ಸಂಜೆ ಬೇರೆ ಬೇರೆ ಬಣ್ಣದಲ್ಲಿ ಕಾಣುತ್ತಾನೋ ಅದೇ ರೀತಿ ಎಲ್ಲ ಧರ್ಮಗಳು ಸತ್ಯವನ್ನೇ ಹೇಳುತ್ತವೆ ಆದರೆ ತಿರುಳು ಮಾತ್ರ ಬೇರೆ ಬೇರೆಯಾಗಿರುತ್ತದೆ ಎಂದು ಹೇಳಿದರು. ಎಲ್ಲಾ ಧರ್ಮಗಳು ಒಂದೇ ಸತ್ಯದ ರೂಪ ಎಂದು ಸ್ವಾಮೀಜಿ ಹೇಳಿದ್ದು ಬೆಳಗಾವಿಯಲ್ಲೇ ಮೊದಲು ರಾಜನಾದ ಮೇಲೆ ಆಮೇಲೆ ಬಡವನಾಗಲು ಸಾಧ್ಯವಿಲ್ಲಯೋ ಅಂತೆಯೇ ಒಮ್ಮೆ ದೇವರ ಭಕ್ತ ಆಸ್ತಿಕನಾದ ಮೇಲೆ ದೇವರ ಮೇಲೆ ನಂಬಿಕೆ ಕಳೆದುಕೋಂಡು ನಾಸ್ತಿಕನಾಗಲು ಸಾಧ್ಯವಿಲ್ಲವೆಂದು ವಿವೇಕಾನಂದರು ಹೇಳಿದರು. ಆದರೆ ಯಾರೂ ಕೂಡ ರಾಜನಾಗುವುದು ಹೇಗೆ ಎಂದು ಹೇಳಿಕೊಡುತ್ತಿಲ್ಲ ಆದರೆ ಅದನ್ನು ಹೇಳಿ ಕೊಟ್ಟವರೆಂದರೆ ಸ್ವಾಮಿ ವಿವೇಕಾನಂದರು ಮಾತ್ರ. ಮತ್ತು ಇಂತಹ ಪುಣ್ಯ ಬೆಳಗಾವಿ ಜನರಿಗೆ ಮಾತ್ರವೆ ದೊರೆತಿದೆ.
ಅಂದು ವಿವೇಕಾನಂದರು ಬೆಳಗಾವಿಗೆ ಬಂದಿದ್ದರ ಪರಿಣಾಮವೇ ಇಂದು ಬೆಳಗಾವಿ ರಾಮಕೃಷ್ಣ ಮಿಷನ್ ಬೆಳಗಾವಿಯಲ್ಲಿ ಪ್ರಾರಂಭವಾಗಿದೆ. ಮತ್ತು ಈ ಆಶ್ರಮ ಸಮಾಜ ಸುಧಾರಣೆಯಲ್ಲಿ ಎತ್ತಿ ಹಿಡಿದಿದೆ. ಈ ರೀತಿ ಸ್ವಾಮಿ ವಿವೇಕಾನಂದರ ಮತ್ತು ಬೆಳಗಾವಿ ಮಧ್ಯೆ ಶತಮಾನಗಳ ಸಂಭಂಧವಿದೆ. ಕೆಲ ದಿನಗಳ ನಂತರ ಭಾಟ್ಯಾ ಅವರು ಮನೆ ಬಿಟ್ಟು ಬೇರೆ ಕಡೆ ವಾಸಿಸಲು ಪ್ರಾರಂಭಿಸುತ್ತಾರೆ ಆಗ ಅವರ ಮನೆ ಹಾಳುಬಿದ್ದಿತ್ತು. ಅದನ್ನು ರಾಮಕೃಷ್ಣ ಆಶ್ರಮದವರು ಮುಂದಾಗಿ ಭಾಟ್ಯಾವಾಡಾವನ್ನು ಪುನರಾವರ್ತನೆಯನ್ನು ಮಾಡಿ ಮಹಾನ್ ಸನ್ಯಾಸಿ ವಿವೇಕಾನಂದರರು ಉಪಯೋಗಿಸಿದ ವಸ್ತುಗಳನ್ನು ಪ್ರದರ್ಶನ ಮತ್ತೆ ಆ ಮನೆಯನ್ನು ಸರಿಪಡಿಸಿದರು.ಈಗ ಅದು ಸ್ವಾಮಿ ವಿವೇಕಾನಂದ ವಸ್ತು ಸಂಗ್ರಹಾಲಯವಾಗಿ ಮಾರ್ಪಾಡು ಈ ರೀತಿ ಸ್ವಾಮಿ ವಿವೇಕಾನಂದರ ಮತ್ತು ನಮ್ಮ ಬೆಳಗಾವಿಯ ಸಂಭಂದವಿತ್ತು.