ನಮ್ಮ ಪ್ರಾಚೀನರು ಅನುಸರಿಸುತ್ತಿದ್ದ ಪ್ರತಿಯೊಂದು ಕಾರ್ಯದಲ್ಲೂ ಒಂದಲ್ಲ ಒಂದು ರೀತಿಯ ವೈಜ್ಞಾನಿಕ ಹಿನ್ನೆಲೆ ಮತ್ತು ಸಂಗತಿಗಳನ್ನು ಹೊಂದಿದ್ದವು ಆದರೆ ಅವುಗಳನ್ನು ತಿಳಿಯದ ನಾವುಗಳು ಅವಕ್ಕೆ ಅಂಧವಿಶ್ವಾಸ ಮತ್ತು ಡಾಂಬಿಕತೆಯ ಹೆಸರನ್ನು ನೀಡಿ ಅವುಗಳನ್ನು ಹೀಯಾಳಿಸುತ್ತೆವೆ ಆದರೆ ಇಲ್ಲಿವೆ ಕೆಲವೊಂದು ಆಚರಣೆಯ ವೈಜ್ಙಾನಿಕ ಹಿನ್ನೆಲೆಗಳು.
ಕು೦ಕುಮ ಅಥವಾ ತಿಲಕ ಧಾರಣೆ
ಪುರಾತನರು ದೇಹದ ಮುಖ್ಯ ನರಮ೦ಡಲದ ನೆತ್ತಿಯ ಎರಡು ಹುಬ್ಬುಗಳ ನಡುವೆ ತಿಲಕ ಧರಿಸುತ್ತಿದ್ದರು. ತಿಲಕ ಧಾರಣೆಯು ದೇಹದ ಶಕ್ತಿ ಅಪವ್ಯಯ ವಾಗದ೦ತೆ ತಡೆಯುತ್ತದೆ ಎ೦ಬ ನ೦ಬಿಕೆ. ಅದಲ್ಲದೆ ಏಕಾಗ್ರತೆಯ ಸಂಕೇತವೆಂದೂ ನಂಬಿದ್ದರು. ಕುಂಕುಮ ಧಾರಣೆ ಕೇಂದ್ರದಲ್ಲಿರುವ ಚಕ್ರದ ಮೇಲೆ ಒತ್ತಡ ಬೀರಿ ಮುಖದಲ್ಲಿನ ನರಮಂಡಲಕ್ಕೆ ರಕ್ತ ಸಂಚಾರ ಮಾಡುತ್ತದೆ.
ಪಾದ ಸ್ಪಶಿ೯ಸುವುದರಿಂದಾಗುವ ಪ್ರಯೋಜನಗಳು
ಹಿರಿಯರ ಪಾದಗಳನ್ನು ಮುಟ್ಟಿ ನಮಸ್ಕರಿಸುವುದು ರೂಢಿ. ಅವರ ಪಾದಸ್ಪರ್ಶ ಮಾಡುವುದರಿಂದ ನಮ್ಮಲ್ಲಿನ ದುರಭಿಮಾನಗಳು ದೂರವಾಗುವುವು. ಅವರ ಆಶೀರ್ವಾದ ನಮಗೆ ದೊರೆಯುವುದು. ಅವರ ಹೆಬ್ಬೆರಳುಗಳ ಸ್ಪರ್ಶದ ಮೂಲಕ ಕೊಸ್ಮಿಕ್ ಎನರ್ಜಿ ಎರಡೂ ದೇಹಗಳ ಮೇಲೆ, ಹೃದಯದ ವರೆಗೂ ಪರಿಣಾಮ ಬೀರುವುದು. ಮೆದುಳಿನಿಂದ ಹೊರಡುವ ನರಗಳ ದೇಹ ಪೂರ್ತಿಯಾಗಿ ಆವರಿಸುತ್ತದೆ. ಇದೇ ರೀತಿ ಕೈ ಮತ್ತು ಕಾಲು ಬೆರಳುಗಳ ಕೊನೆ ಸ್ಪರ್ಶಿಸುವುದರಿಂದ ಕೊಸ್ಮಿಕ್ ಎನರ್ಜಿ ಲಭಿಸುವುದು. ಎರಡು ದೇಹಗಳ ಕೈ ಬೆರಳುಗಳು ಪರಸ್ಪರ ತಾಗುವುದರಿಂದಲೂ ಈ ಶಕ್ತಿ ಉತ್ಪತ್ತಿ ಆಗುವುದು.
ಕಾಲುಂಗುರ ಧರಿಸುವುದು
ಸಾಮಾನ್ಯವಾಗಿ ಹೆಬ್ಬೆರಳಿನ ಪಕ್ಕದ ಕಿರುಬೆರಳಿಗೆ ಕಾಲುಂಗುರವನ್ನು ಧರಿಸುವುದು. ಈ ಬೆರಳಿನ ನರ ಶರೀರದ ಮೂತ್ರನಾಳಕ್ಕು ಮತ್ತು ಹೃದಯಕ್ಕೂ ಸಂಬಂಧ ಕಲ್ಪಿಸಿಕೊಂಡಿದೆ. ಇದರಿಂದ ಮೂತ್ರನಾಳದ ತೊಂದರೆ ನಿವಾರಣೆಯಾಗುವುದು. ಇದು ಮೂತ್ರನಾಳದ ರಕ್ತದ ಆರೋಗ್ಯದ ಜೊತೆಗೆ ರಕ್ತನಾಳದಿಂದ ಮೂತ್ರವನ್ನು ಕ್ರಮೀಕರಿಸುತ್ತದೆ.
ಕಿವಿಗಳನ್ನು ಏಕೆ ಚುಚ್ಚಬೇಕು?
ಭಾರತದ ಜನರ ಆಚಾರದಲ್ಲಿ ಕಿವಿ ಚುಚ್ಚುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಭಾರತದ ವೈದ್ಯರು ಮತ್ತು ತಂತ್ರಜ್ಞಾನಿಗಳು ಬುದ್ಧಿ ಹೆಚ್ಚಳಕ್ಕೆ ಕಿವಿ ಚುಚ್ಚುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಯೋಚನಾ ಶಕ್ತಿ ಹೆಚ್ಚಳ ಮತ್ತು ವಿಮರ್ಶನಾ ಶಕ್ತಿ ಹೆಚ್ಚಳವಾಗುತ್ತದೆ ಎಂದು ತಿಳಿಸಿದ್ದಾರೆ. ಅತಿ ಮಾತು ದೇಹದ ಶಕ್ತಿಯನ್ನು ಕುಂಠಿತಗೋಳಿಸುತ್ತದೆ. ಮೇಲಾಗಿ ಮಾತಿನ ತಪ್ಪುಗಳನ್ನು ತಿದ್ದಲು ಅನುಕೂಲವಾಗುತ್ತದೆ.
ಅಶ್ವಥ ಮರದ ಪೂಜೆ
ಸಾಮಾನ್ಯರಿಗೆ ಅಶ್ವಥ ವೃಕ್ಷವು ಅಪ್ರಯೋಜಕವೆನೆಸಿ ಅದು ಕೇವಲ ನೆರಳಿಗೆ ಮಾತ್ರ ಎಂದು, ರುಚಿಕರವಾದ ಹಣ್ಣನ್ನು ನೀಡದು ,ಅದರ ಮರ ಟೊಳ್ಳು ಉಪಯೋಗಕ್ಕೆ ಬಾರದು. ವಿಷಯ ಹೀಗಿರುವಾಗ ಸಾಮಾನ್ಯ ಜನರರೂ ಸಹ ಇದನ್ನು ಪೂಜಿಸುತ್ತಾರೆ. ಮತ್ತು ರಕ್ಷಿಸುತ್ತಾರೆ ಕಾರಣ ? ಪುರಾತನರಿಗೆ ಮಾತ್ರ ಇದರ ಉಪಯೋಗ ತಿಳಿದಿತ್ತು. ಅದು ಮಾನವನಿಗೆ ಅಗತ್ಯವಾದ ಆಮ್ಲಜನಕವನ್ನು ರಾತ್ರಿಯ ವೇಳೆಯಲ್ಲೂ ನೀಡಿ ನಮ್ಮ ಪ್ರಾಣವನ್ನು ಉಳಿಸಲು ಸಹಕಾರಿಯಾಗಿದೆ.
ಸೂರ್ಯ ನಮಸ್ಕಾರ
ಹಿಂದೂ ಸಂಪ್ರದಾಯದಲ್ಲಿ ಪ್ರಾತಃ ಕಾಲದಲ್ಲಿ ಉದಯಿಸುವ ಸೂರ್ಯನಿಗೆ ಕೃತಜ್ಞತೆಯನ್ನು ಸಲ್ಲಿಸುವದು ರೂಢಿ . ಜೊತೆಗೆ ಅತಿ ಮುಖ್ಯವೆಂದರೆ ಆ ಸಮಯದಲ್ಲಿ ಸೂರ್ಯನ ಕಿರಣಗಳನ್ನು ನೋಡುವುದರಿಂದ ವಿಟಾಮಿನ್ ಡಿ ಎಂಬ ಪೋಷಕಾಂಶ ಕಣ್ಣಿನ ಮಸೂರಗಳ ಬಲವರ್ಧನೆಗೆ ಸಹಾಯಕವಾಗೂವದಲ್ಲದೆ ದೃಷ್ಟಿ ಯ ಸೂಕ್ಷ್ಮತೆ ಹೆಚ್ಚುವುದು ಹಾಗೂ ದಿನದ ಬೆಳಗಿನ ಕಾರ್ಯ ಚಟುವಟಿಕೆಗೆ ಉತ್ತೇಜನ ನೀಡುತ್ತದೆ .
ಎರಡು ಅಂಗೈಯನ್ನು ಜೋಡಿಸಿ ನಮಸ್ಕರಿಸುವದು
ಅತಿಥಿಗಳನ್ನು ಸ್ವಾಗತಿಸಲು ಈರೀತಿ ಭಂಗಿಯಲ್ಲಿರುವದನ್ನು ನಮಸ್ಕಾರ ಎನ್ನುತ್ತೇವೆ. ಈರೀತಿ ನಮಸ್ಕಾರ ಮಾಡುವುದು ಗೌರವ ಸೂಚಕವು ಹೌದು . ವೈಜ್ಞಾನಿಕವಾಗಿ ತಿಳಿದಾಗ ಈ ಕ್ರಮ ಬೆರಳಿನ ಕೊನೆ, ಕಿವಿಯ, ಕಣ್ಣಿನ ಮತ್ತು ಮನಸ್ಸಿನ ಕಾರ್ಯದ ಮೇಲೆ ಒತ್ತಡ ಬೀರಿ ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ಆದರೆ ಪರಸ್ಪರ ಕೈ ಕುಲುಕುವದರಿಂದ ಕ್ರಿಮಿಗಳು ಅಂಟಿಕೊಂಡು ಅನಾರೋಗ್ಯಕ್ಕೆ ಕಾರಣವಾಗಬಹುದು.
ಹೋಮ ಹವನದಿಂದ ಆಗುವ ಪ್ರಯೋಜನಗಳು
ಹೋಮ, ಹವನ, ಯಜ್ಞ, ಯಾಗ ಈ ಎಲ್ಲ ಪದಗಳು ಒಂದೆ ವಿಧವಾದ ಅರ್ಥವನ್ನು ಕೊಡುವಂತಹದ್ದೇಯಾಗಿವೆ. ಅಗ್ನಿಯ ಆರಾಧನೆ ಎನ್ನುವುದು ಈ ಎಲ್ಲ ಹೆಸರನ್ನು ಹೊಂದಿದೆ. ಅನೇಕ ಫಲಗಳನ್ನು ಕೊಡುವ ದೇವತೆಗಳ ಸಂಪ್ರೀತಿಯೇ ಇವುಗಳ ಮುಖ್ಯ ಉದ್ದೇಶ. ಯಜ್ಞದಲ್ಲಿ ಉಪಯೋಗಿಸಲ್ಪಡುವ ತುಪ್ಪ ಹಾಲು ಮತ್ತು ಯಾಜ್ನೆಯ ವೃಕ್ಷಗಳಾದ ಅಶ್ವಥ, ಮುತ್ತುಗ, ಅತ್ತಿ ಮುಂತಾದುವುಗಳ ಸಮಿತ್ತುಗಳು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಶರೀರ ಮತ್ತು ವಾತಾವರಣದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಯಜ್ಞವು ಪ್ರಕೃತಿಕವಾದ ವಸ್ತುಗಳೊಡನೆ ನಡೆಯುವುದರಿಂದ ಇದೊಂದು ಪ್ರಕೃತಿಯಾರಾಧನೆ ಆಗಿದೆ.
ದೇವಾಲಯದಲ್ಲಿ ಘಂಟೆಗಳ ಬಳಕೆ
ಜನರು ದೇವಾಲಯದ ಮೂಲ ಬಿಂಬದ ದರ್ಶನಕ್ಕೆ ಹೋಗಿ ಪ್ರವೇಶಿಸಿದಾಗ ಘಂಟಾನಾದ ಮಾಡುವ ಪದ್ಧತಿ ಇದೆ. ಈ ಘಂಟಾನಾದದಿಂದ ದುಷ್ಟ ಶಕ್ತಿಗಳು ಹೊರ ಹೋಗುವುದೆಂದು ಮತ್ತು ದೇವರಿಗೆ ಆನಂದವಾಗುವುದು ಎಂದು ಆಗಮ ಶಾಸ್ತ್ರ ತಿಳಿಸುತ್ತದೆ. ವೈಜ್ಞಾನಿಕವಾಗಿ ಚಿಂತಿಸಿದರೆ ನಮ್ಮ ಮನದಲ್ಲಿರುವ ದುರ್ಭಾವನೆಗಳು ದೂರವಾಗಿ ಏಕಾಗ್ರ ಚಿತ್ತದಿಂದ ಅಂದಿನ ದೈವೀಕಾರ್ಯಗಳು ಸುಸೂತ್ರವಾಗಿ ನಡೆಸಲು ಪೂರಕವೆನಿಸುತ್ತದೆ.
ಜೊತೆಗೆ ಘಂಟೆಗಳು ಸೂಸುವ ಧ್ವನಿ ಮೆದುಳಿನ ಎಡ ಮತ್ತು ಬಲಭಾಗದ ಮೆದುಳನ್ನು ರಸಾದ್ರಗೊಳಿಸುತ್ತದೆ. ಘಂಟೆನಾದ ಮಾಡಿದಾಗ ಅದು ಸುಮಾರು ೭ ಸೆಕೆಂಡುಗಳು ಸಮಯದ ಪ್ರತಿಧ್ವನಿ ಏಕಾಗ್ರಚಿತ್ತವನ್ನಾಗಿಸುತ್ತದೆ. ಆ ಧ್ವನಿ ನಮ್ಮ ದೇಹದ ಮೇಲೆ ಉತ್ತಮ ಪರಿಣಾಮ ಬೀರಿ ಘಂಟೆಗಳ ರಚನಾ ಕ್ರಮದಿಂದ ಹೊರಬರುವ ನಾದ ನಮ್ಮ ಮೆದುಳಿನ ಎಡ ಮತ್ತು ಬಲದ ಶಕ್ತಿಯನ್ನು ಒಂದುಗೂಡಿಸುತ್ತದೆ. ಒಮ್ಮೆ ಬಾರಿಸಿದ ಧ್ವನಿ ೭ ಸೆಕೆಂಡುಗಳ ಕಾಲ ಪ್ರತಿಧ್ವನಿಸುತ್ತಿದ್ದು ಏಕಗ್ರತೆಯನ್ನು ಹೆಚ್ಚಿಸುತ್ತದೆ.
ಪದ್ಮಾಸನಸ್ಥರಾಗಿ ಆಹಾರ ಸೇವನೆ ಮಾಡುವುದು
ಈ ಕ್ರಮ ಕೇವಲ ಸಂಪ್ರದಾಯವೆಂದು ಭಾವಿಸಬಾರದು. ಈ ಪದ್ಮಾಸನವನ್ನು ನಾವು ಯೋಗಾಸನಗಳಲ್ಲಿ ಒಂದು ಭಾಗ ಈ ಸುಖಾಸನ ಅಥವಾ ಅರ್ಧ ಪದ್ಮಾಸನ ಆಹಾರ ಸೇವಿತ ಪದಾರ್ಥಗಳು ನೇರವಾಗಿ ಜೀರ್ಣಾಂಗಗಳಿಗೆ ಸೇರಬೇಕಾಗಿರುವುದನ್ನು ತಲುಪಿಸುತ್ತದೆ ಹಾಗೂ ಜಠರದಲ್ಲಿ ಸುಲಭವಾಗಿ ಜರುಗಲು ಈ ಕ್ರಮ ಸಹಕಾರಿ.
ತುಳಸಿಯನ್ನು ಸೇವಿಸುವುದು(ಪೂಜಿಸುವುದು ) ಏಕೆ ?
ಹಿಂದೂಗಳು ತುಳಸಿಯನ್ನು ತಾಯಿಯೆಂದು ಪೂಜಿಸುತ್ತಾರೆ. ಇದನ್ನು ಪುಣ್ಯದ ಕಾರ್ಯವೆಂದು ಸಹ ನಂಬುತ್ತಾರೆ. ತುಳಸಿಯ ಪ್ರತಿಯೊಂದು ಭಾಗವು ಪವಿತ್ರವೆಂದು ಸಹ ಅನೇಕರು ತಿಳಿಸಿದ್ದಾರೆ. ವೇದ ಕಾಲದ ಋಷಿ ಮುನಿಗಳು ಅಕ್ಷರಸ್ಥ ಮತ್ತು ಅನಕ್ಷರಸ್ಥ ಎಂದು ಭೇದವಿಲ್ಲದೆ ಎಲ್ಲರಿಗೂ ಇದರ ಪ್ರಯೋಜನ ದೊರೆಯಲಿ ಎಂಬ ಸದುದ್ದೇಶದಿಂದ ತುಳಸಿಯ ಕುರಿತಂತೆ ಅನೇಕ ಪ್ರಯೋಜನವನ್ನು ತಿಳಿಸಿದ್ದಾರೆ. ತುಳಸಿಯ ದಳವನ್ನು ಬೆಳಗಿನ ಪೇಯದೊಡನೆ ಸೇವಿಸಿದರೆ ದೇಹಕ್ಕೆ ಪುಷ್ಟಿ ದೊರೆಯುತ್ತದೆ. ಇದನ್ನು ಮನೆಯ ಮುಂದೆ ನೆಟ್ಟು ಪೂಜಿಸುವುದರಿಂದ ಯಾವುದೇ ರೀತಿಯ ವಿಷಯುಕ್ತ ಕ್ರಿಮಿಕೀಟಗಳು ಮನೆಯಲ್ಲಿ ಬರುವುದಿಲ್ಲ ಎಂಬ ಉದ್ದೇಶದಿಂದ ನಮ್ಮ ಪೂರ್ವಜರು ಮನೆಯ ಅಂಗಳದಲ್ಲಿ ತುಳಸಿಯನ್ನು ನೆಟ್ಟು ಅದನ್ನು ಪೂಜಿಸುವ ಸಂಪ್ರದಾಯವನ್ನು ಹೊಂದಿದ್ದರೆ.
ನಾವು ಉಪವಾಸವನ್ನು ಏಕೆ ಮಾಡಬೇಕು ?
ಆಯುರ್ವೇದದಲ್ಲಿ ಉಪವಾಸದ ಬಗ್ಗೆ ಈ ಕೆಳಕಂಡ ತತ್ವಗಳು ಅಡಗಿವೆ. ವೈದ್ಯಕೀಯ ದೃಷ್ಟಿಯಿಂದ ಗಮನಿಸಿದಾಗ ಹಲವಾರು ಕಾಯಿಲೆಗಳು ಸಂಗ್ರಹಿಸಲ್ಪಟ್ಟ ವಿಷಪೂರಿತ ವಸ್ತುಗಳು ನಮ್ಮ ಜೀರ್ಣಾಂಗದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆ ವಿಷಪೂರಿತ ವಸ್ತುಗಳು ಹೊರ ಹೋಗಿ ಆರೊಗ್ಯಕ್ಕೆ ಕಾರಣವಾಗುತ್ತದೆ. ಅಲ್ಲದೆ ಜೀರ್ಣಾಂಗಗಳು ವಿಶ್ರಮಿಸಿಕೊಂಡು ಶುದ್ಧೀಕರಣಗೊಂಡು ಮುಂದಿನ ಉತ್ತಮ ಕಾರ್ಯನಿರ್ವಹಣೆಗೆ ಸಿದ್ಧವಾಗುತ್ತದೆ. ಪೂರ್ಣನಿರಾಹಾರ ಆರೋಗ್ಯಕ್ಕೆ ಉತ್ತಮ ಮತ್ತು ಆ ಅವಧಿಯಲ್ಲಿ ಸಾಂದರ್ಭಿಕವಾಗಿ ಬಿಸಿ ನೀರಿನಿಂದ ಕೂಡಿದ ನಿಂಬೆರಸ ದೇಹದ ಉಷ್ಣತೆಯನ್ನು ಸುಧಾರಿಸುತ್ತದೆ.
ಆಯುರ್ವೇದದಲ್ಲಿ ದೇಹವು ೮೦% ಶತ ನೀರಿನಿಂದ , ೨೦% ಶತ ಗಟ್ಟಿ ಪದಾರ್ಥದಿಂದ ಭೂಮಿಯಂತೆ ಕೂಡಿದೆ. ಚಂದ್ರನ ಗುರುತ್ವಾಕರ್ಷಣೆ ದ್ರವಾಹಾರದ ಮೇಲೆ ಪರೀಣಾಮ ಬೀರುವುದು, ಅದು ದೇಹದ ಸಮತೋಲನವನ್ನು ಹೆಚ್ಚಿಸುವುದು ಮತ್ತು ಜಾಗೃತಗೊಳಿಸುವುದು.
ಅದು ದೇಹದ ಕೊಳೆ(ಮಲ) ವಿಸರ್ಜನೆ ಮೊದಲಾದವುಗಳಿಂದ ಅಸಿಡಿಟಿಯನ್ನು ಹೋಗಲಾಡಿಸುತ್ತದೆ. ಜೊತೆಗೆ ಸಂಶೋದಕರು ಮುಖ್ಯವಾಗಿ ಆರೋಗ್ಯಕ್ಕೆ ಅಗತ್ಯವಾದಷ್ಟು ಕ್ಯಾಲರಿ ಆಹಾರವನ್ನು ಒದಗಿಸಿ ಕ್ಯಾನ್ಸರ್, ಸಕ್ಕರೆ ಕಾಯಿಲೆ, ಮಲಬದ್ಧತೆ ಮೊದಲದ ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ.
ನಾವು ಬಾಳೆಯಲ್ಲಿ ಏಕೆ ಊಟವನ್ನು ಮಾಡಬೇಕು ?
ಬಾಳೆ ಎಲೆಗಳಲ್ಲಿ ನೈಸರ್ಗಿಕ ಉತ್ಕರ್ಷಣ ನಿರೋಧಕಗಳಾದ ದೊಡ್ಡ ಪ್ರಮಾಣದ ಪಾಲಿಫಿನಾಲ್ಗಳಿವೆ. ಸಸ್ಯ ಆಧಾರಿತ ಅನೇಕ ಆಹಾರಗಳು ಮತ್ತು ಹಸಿರು ಚಹಾಗಳಲ್ಲಿ ಇವು ಕಂಡುಬರುತ್ತವೆ. ಬಾಳೆ ಎಲೆಗಳಲ್ಲಿ ಬಡಿಸುವ ಆಹಾರವು ಪಾಲಿಫಿನಾಲ್ಗಳನ್ನು ಹೀರಿಕೊಳ್ಳುತ್ತದೆ, ಇದು ಅನೇಕ ಜೀವನಶೈಲಿ ಕಾಯಿಲೆಗಳನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ. ಅವುಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಅದು ಆಹಾರದಲ್ಲಿನ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ.
ಬಾಳೆ ಎಲೆಗಳು ಆಹಾರವನ್ನು ಹೊಂದಿರುವುದು ಅತ್ಯಂತ ಆರ್ಥಿಕ ಮತ್ತು ಅಗ್ಗದ ಆಯ್ಕೆಗಳಲ್ಲಿ ಒಂದಾಗಿದೆ. ಅಲ್ಲದೆ ಬಾಳೆ ಎಳೆಯು ಪರಿಸರ ಸ್ನೇಹಿಯು ಹೌದು. ಬಾಳೆ ಎಲೆಗಳನ್ನು ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿದರೆ ಅವುಗಳು ಬಹಳ ಕಡಿಮೆ ಸಮಯದಲ್ಲಿ ಕೊಳೆಯುತ್ತವೆ ಮಾತ್ರವಲ್ಲದೆ ಹೆಚ್ಚಿನ ರೀತಿಯಲ್ಲಿ ಜೈವಿಕ ರಸ ಗೊಬ್ಬರವನ್ನು ತಯಾರಿಸ ಬಹುದು. ಆದರೆ ಸ್ಟೀಲ್ ಪಾತ್ರೆ ತೊಳೆಯುವಲ್ಲಿ ಹೆಚ್ಚುವರಿ ಸಮಯ ಮತ್ತು ಶ್ರಮವನ್ನು ಸಹ ಅದು ಉಳಿಸುತ್ತದೆ. ರಾಸಾಯನಿಕ ಆಧಾರಿತ ಖಾದ್ಯ ತೊಳೆಯುವ ಸಾಬೂನು ಮತ್ತು ದ್ರವಗಳು ಅಂತರ್ಜಲವನ್ನು ಮತ್ತಷ್ಟು ಪ್ರವೇಶಿಸುತ್ತವೆ ಮತ್ತು ದೀರ್ಘಾವಧಿಯಲ್ಲಿ ನೀರಿನ ಮೂಲಕ್ಕೆ ಹಾನಿಯಾಗಬಹುದು.
ತಾಮ್ರದ ಪಾತ್ರೆಯಲ್ಲಿ ನೀರು ಸೇವಿಸುವುದೇಕೆ?
ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯುವುದರಿಂದ ಕಫ, ಪಿತ್ತ ಮತ್ತು ವಾತವನ್ನು ಸಮತೊಲನದಲ್ಲಿಡುವ ಗುಣವನ್ನು ತಾಮ್ರವು ಹೊಂದಿದ್ದು ದೇಹಕ್ಕೆ ಮಾರಕವಾಗಿರುವ ದೋಷಗಳನ್ನು ನಿವಾರಿಸಲು ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯಬೇಕು ಎಂಬುದಾಗಿ ವಿಜ್ಞಾನ ಲೋಕ ತಿಳಿಸಿದೆ . ತಾಮ್ರದಲ್ಲಿರುವ ಎಳೆಕ್ಟ್ರೋಲೈಟ್ ಗಳು , ನೀರು ಹಾಳಾಗುವುದನ್ನು ತಡೆಗಟ್ಟುತ್ತದೆ .ತಾಮ್ರವು ನೀರನ್ನು ಶುದ್ಧೀಕರಿಸುವ ಗುಣಗಳನ್ನು ತನ್ನಲ್ಲಿ ಒಳಗೊಂಡಿದೆ . ಅದರಲ್ಲೂ ಬ್ಯಾಕ್ಟೀರಿಯಾದ ಮೇಲೆ ಪರಿಣಾಮಕಾರಿಯಾಗಿ ಕೆಲೆಸ ಮಾಡುತ್ತದೆ .
ಮನೆ ಮುಂದೆ ರಂಗೋಲಿ ಏಕೆ ಹಾಕಬೇಕು ?
ಮನೆ ಮುಂದೆ ರಂಗೋಲಿ ಹಾಕುವುದು ಭಾರತೀಯರ ಬಹಳ ಹಳೆಯ ಸಂಪ್ರದಾಯ ರಂಗೋಲಿ ಶುಭ ಸಂಕೇತ . ಉತ್ಸಾಹದ ಸಂಕೇತ ,ಸಂತೋಷದ ಸಂಕೇತ.ಕಲಾಭಿವ್ಯಕ್ತಿಯ ಮಾಧ್ಯಮ, ಚಿತ್ತವನ್ನು ಅರಳಿಸುವ ಸೌಂದರ್ಯ ಮಧ್ಯಮ, ಮನಸ್ಸಿಗೆ ಸಂತೋಷ ಆನಂದ ಶಾಂತಿ ಮತ್ತು ನೆಮ್ಮದಿಯನ್ನು ಕೊಡುತ್ತದೆ . ಮನೆಯ ಮುಂದೆ ರಂಗೋಲಿಯನ್ನು ಹಾಕುವುದರಿಂದ ಅದರಲ್ಲಿ ತರಂಗದಂತೆ ಹರಿದಿರುವ ರೇಖೆಗಳು ಮನೆಯನ್ನು ಪ್ರವೆಶಿಸುವವನ ಮನಸ್ಸನ್ನು ಶಾಂತಗೊಳಿಸುತ್ತದೆ . ಅವು ಮೆದುಳಿನ ಮೇಲೆ ಪ್ರಭಾವ ಬೀರಿ ಸಂತೋಷದ ನರಗಳನ್ನು ಪ್ರಚೋದಿಸುತ್ತದೆ .ನೆಲವನ್ನು ಗುಡಿಸುವಾಗ ಅಥವಾ ಹಸುವಿನ ಸಗಣಿ ಹಾಕುವಾಗ, ಅದರ ಮೇಲೆ ಸೂಕ್ಷ್ಮ ರೇಖೆಗಳನ್ನು ರಚಿಸಲಾಗುತ್ತದೆ. ಇವು ಕೆಲವು ಆವರ್ತನಗಳನ್ನು ಹೊಂದಿವೆ. ಈ ಸಾಲುಗಳು ಅನಿಯಮಿತವಾಗಿರುವುದರಿಂದ, ಅವುಗಳ ಕಂಪನಗಳು ಸಹ ಅನಿಯಮಿತವಾಗಿರುತ್ತವೆ. ಇವು ದೇಹ, ಕಣ್ಣು ಮತ್ತು ಮನಸ್ಸಿಗೆ ಹಾನಿಕಾರಕ. ಶಂಕುಗಳು ಮತ್ತು ಶುಭ ಚಿಹ್ನೆಗಳನ್ನು ಸುತ್ತುವರಿದ ಅಥವಾ ಹೊದಿಸಿದ ನೆಲದ ಮೇಲೆ ರಂಗೋಲಿಯೊಂದಿಗೆ ವ್ಯವಸ್ಥಿತವಾಗಿ ಚಿತ್ರಿಸಿದರೆ ಈ ಪ್ರತಿಕೂಲವಾದ ಆವರ್ತನಗಳನ್ನು ನಿವಾರಿಸಲು; ಗುಡಿಸುವುದು ಮತ್ತು ಸ್ಮೀಯರಿಂಗ್ನ ದುಷ್ಪರಿಣಾಮಗಳನ್ನು ನಿವಾರಿಸಲಾಗುತ್ತದೆ ಮತ್ತು ಅನುಕೂಲಕರ ಫಲಿತಾಂಶಗಳನ್ನು ಪಡೆಯಲಾಗುತ್ತದೆ.