ನನಗೆ ದಿನಪತ್ರಿಕೆ ಓದುವ ಹವ್ಯಾಸ ಚಿಕ್ಕಂದಿನಿಂದ ಇದೆ. ಪುಸ್ತಕ ಓದುವುದು, ದಿನಪತ್ರಿಕೆಯಲ್ಲಿ ಬರುವ ಸುಡುಕುಗಳನ್ನು ಬಿಡಿಸುವುದು ನನ್ನ ನೆಚ್ಚಿನ ಹವ್ಯಾಸವಾಗಿತ್ತು. ಈಗ ಜಂಗಮವಾಣಿ ಬಂದ ಮೇಲೆ ಇದರಲ್ಲೇ ಸುಡುಕು ಗೇಮ್ಸ್, ಸ್ಪಾಟಿಫಯ್ ಆಪ್ ನಲ್ಲಿ ಕತೆ ಕೇಳೋದು ಶುರುವಾಗಿದೆ.
ಆದರೆ ಅವಾಗೆಲ್ಲ ದಿನಪತ್ರಿಕೆ ಓದೋವಾಗ ಮೊದಲು ನೋಡ್ತಿದ್ದ ಪೇಜ್ ‘ದಿನ ಭವಿಷ್ಯ’. ಅದನ್ನ ಓದಿ, ಆಮೇಲೆ ಉಳಿದ ನ್ಯೂಸ್ ಕಡೆ ಕಣ್ಣು ಹಾಯ್ಸ್ತೀದ್ದೆ. ಅದೊಂತರ ಓಸಿ ಡಿ ಕಾಯಿಲೆ ಹಾಗೆ. ಓದದಿದ್ದರೆ ಏನೋ ತಳಮಳ. ಅದರಲ್ಲಿ ನಮ್ಮ ರಾಶಿ ಬಗ್ಗೆ ಒಳ್ಳೇದಾಗಿ ಬರೆದಿದ್ದರೆ ಆ ದಿನ ತುಂಬಾ ಎನರ್ಜಿ, ಪಾಸಿಟಿವ್ ಆಗಿರ್ತಿತ್ತು. ಮತ್ತೆ ಬೇರೆಯವರಿಗೂ ಅವರ ರಾಶಿ ಬಗ್ಗೆ ಹೇಳಿ, ಎಚ್ಚರಿಸೋದಿತ್ತು. ಅವಾಗೆಲ್ಲ ಅಷ್ಟಾಗಿ ತಲೆಕೆಡಿಸಿಕೊಳ್ಳದ ನಾನು, ಇವಾಗೆಲ್ಲ ಈ ಜ್ಯೋತಿಷ್ಯ ಶಾಸ್ತ್ರ ಮತ್ತು ವಿಜ್ಞಾನಕ್ಕೆ ಏನೋ ಸಂಬಂಧ ಇರಬಹುದೇನೋ ಅನ್ಕೊಂಡಿದ್ದೀನೆ. ಅದಕ್ಕೆ ಪುಷ್ಟಿ ಕೊಡುವಂತ ವಿಷಯಗಳನ್ನು ನಾನು ಕೇಳ್ಪಟ್ಟೆ.
ಜ್ಯೋತಿಷ್ಯವನ್ನು ಒಂದು ವಿಜ್ಞಾನವಾಗಿ ಬೆಂಬಲಿಸುವ ಒಂದು ವಾದವೆಂದರೆ ಅದನ್ನು ಸಾವಿರಾರು ವರ್ಷಗಳಿಂದ ವಿವಿಧ ಸಂಸ್ಕೃತಿಗಳು ಮತ್ತು ಸಮಾಜಗಳಲ್ಲಿ ಜಗತ್ತನ್ನು ಅರ್ಥಮಾಡಿಕೊಳ್ಳುವ ಮತ್ತು ವ್ಯಾಖ್ಯಾನಿಸುವ ಸಾಧನವಾಗಿ ಬಳಸಲಾಗುತ್ತಿದೆ. ಹವಾಮಾನ ಮಾದರಿಗಳು, ನೈಸರ್ಗಿಕ ವಿಪತ್ತುಗಳು ಮತ್ತು ರಾಜಕೀಯ ಘಟನೆಗಳನ್ನು ಊಹಿಸಲು ಜ್ಯೋತಿಷ್ಯವನ್ನು ಬಳಸಲಾಗುತ್ತದೆ. ಅನೇಕ ಸಂಸ್ಕೃತಿಗಳು ಮತ್ತು ಸಮಾಜಗಳು ಇದನ್ನು ಬಹಳ ಸಮಯದಿಂದ ಅವಲಂಬಿಸಿವೆ ಎಂಬ ಅಂಶವು ಅದರಲ್ಲಿ ಏನಾದರೂ ಇರಬಹುದು ಎಂದು ಸೂಚಿಸುತ್ತದೆ.
ಜ್ಯೋತಿಷ್ಯವನ್ನು ಒಂದು ವಿಜ್ಞಾನವಾಗಿ ಬೆಂಬಲಿಸುವ ಮತ್ತೊಂದು ವಾದವೆಂದರೆ ಅದು ಗಣಿತ ಮತ್ತು ಖಗೋಳ ಲೆಕ್ಕಾಚಾರಗಳ ಸಂಕೀರ್ಣ ವ್ಯವಸ್ಥೆಯನ್ನು ಆಧರಿಸಿದೆ. ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನಗಳನ್ನು ಬಹಳ ನಿಖರವಾಗಿ ಲೆಕ್ಕಹಾಕಲಾಗುತ್ತದೆ. ಜ್ಯೋತಿಷ್ಯವು ಕೇವಲ ನಕ್ಷತ್ರಗಳು ಮತ್ತು ಗ್ರಹಗಳ ಬಗ್ಗೆ ಮಾತ್ರವಲ್ಲ, ಅವು ಮತ್ತು ಭೂಮಿಯ ನಡುವಿನ ಸಂಬಂಧ ಮತ್ತು ಆ ಸಂಬಂಧವು ಮಾನವ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ.
ಜ್ಯೋತಿಷ್ಯ ಶಾಸ್ತ್ರವು ಮಾನಸಿಕ ಅಂಶವನ್ನು ಸಹ ಹೊಂದಿದೆ, ಇದನ್ನು ಸ್ವಯಂ-ಅನ್ವೇಷಣೆ, ವೈಯಕ್ತಿಕ ಬೆಳವಣಿಗೆ ಮತ್ತು ಒಬ್ಬರ ಸ್ವಂತ ಸ್ವಭಾವದ ಒಳನೋಟದ ಸಾಧನವಾಗಿ ಬಳಸಬಹುದು. ಜ್ಯೋತಿಷ್ಯವು ಜನರು ತಮ್ಮನ್ನು ಮತ್ತು ಜಗತ್ತಿನಲ್ಲಿ ತಮ್ಮ ಸ್ಥಾನವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಒಂದು ಸಣ್ಣ ಉದಾಹರಣೆ ಕೊಡುವುದಾದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರನನ್ನ ಮನಃ ಕಾರಕ ಅಂತ ಕರೀತಾರೆ. ಚಂದ್ರನ ಕ್ಷೇತ್ರದಲ್ಲಿ ಇರುವ ಗ್ರಹಗಳು ಚೆನ್ನಾಗಿದ್ದಾರೆ ಅವತ್ತಿನ ದಿನ ನಮ್ಮ ಮನಸ್ಸು ಆಹ್ಲಾದವಾಗಿರುತ್ತದೆ. ಅದು ಎಷ್ಟರ ಮಟ್ಟಿಗೆ ಸತ್ಯವೋ ಸುಳ್ಳೋ ಗೊತ್ತಿಲ್ಲ, ಆದರೆ ನಮ್ಮ ಹಿರಿಯರು ಮಾಡಿರುವ ಕೆಲವು ಆಚರಣೆಗಳು, ವಿಜ್ಞಾನಕ್ಕೆ ಸವಾಲಾಗಿರುವುದು ಸುಳ್ಳಲ್ಲ.