ಆದರೇ ಸ್ವತಂತ್ರ ಇಲ್ಲವೇ ಸಮ್ಮಿಶ್ರ ಇದು ಬಹು ಮುಖ್ಯವಾಗಿ ಅಧಿಕಾರಕ್ಕೆ ಏರುವ ತವಕದಲ್ಲಿರುವ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಅಂಬೋಣ ಎನ್ನುವಂತಾಗಿದೆ…!!
ಹೌದು ಜೆಡಿಎಸ್ ಪಕ್ಷ ಸ್ವಂತ ಬಹುಮತ ಮೇಲೆ ಅಧಿಕಾರಕ್ಕೆ ಏರುವುದು ಅಸಾಧ್ಯವಾದ ಮಾತು. ಸೀಮಿತ ಜಿಲ್ಲೆಗಳಿಗೆ ಮಾತ್ರ ತನ್ನ ಕಾರ್ಯವ್ಯಾಪ್ತಿ ಇಟ್ಟುಕೊಂಡಿರುವ ಜೆಡಿಎಸ್ ಶತಗತಾಯ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಬೇಕು ಎಂದು ಕನಸು ಕಾಣತೊಡಗಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತದ ವಿಶ್ವಾಸದಲ್ಲಿದೆ. ಆದರೇ ಬಿಜೆಪಿ ಹೊಸ ದಾಳ ಉರುಳಿಸಿ ಮತ್ತೆ ಅಧಿಕಾರ ಗದ್ದುಗೆ ಎರಲು ಸಿದ್ದವಾಗಿದೆ.
ಆದರೇ ಉತ್ತರ ಭಾರತದಂತೆ ದಕ್ಷಿಣ ಭಾರತದ ರಾಜಕೀಯ ಚಿತ್ರಣ ಸುಲಭದ ಮಾತಲ್ಲ. ರಾತ್ರೋರಾತ್ರಿ ಲೆಕ್ಕಚಾರವೇ ಬದಲು ಮಾಡಿದ ಉದಾಹರಣೆಗಳು ಇವೆ. ಹೀಗಾಗಿ ಬಿಜೆಪಿ ದೆಹಲಿ ನಾಯಕರ ಮೂಲಕ ತನ್ನ ಆಟ ಶುರುವಿಟ್ಟುಕೊಂಡಿದೆ. ಇದೇ ಕಾರಣಕ್ಕೆ ಹಾಲಿ, ಮಾಜಿ ಶಾಸಕರ ಟಿಕೆಟ್ ತಪ್ಪುವ ಆತಂಕ ಮನೆ ಮಾಡಿದೆ. ಅಳಿದು ತೂಗಿ ಹೆಜ್ಜೆ ಇಡುವ ನಿರ್ಧಾರ ಮಾಡಿರುವ ಬಿಜೆಪಿ ರಾಜ್ಯಮಟ್ಟದ ನಾಯಕರ ವಿಶ್ವಾಸದ ಜೊತೆಗೆ ಅವರ ಆಪ್ತ ಶಾಸಕರ ಜೊತೆ ನೇರ ಸಂಪರ್ಕ ಸಾಧಿಸಿ ನಾನಾ ಕಸರತ್ತು ಮಾಡತೊಡಗಿದೆ. ಆಕಸ್ಮಾತ ಬಹುಮತ ತಪ್ಪಿದಲ್ಲಿ ಜೆಡಿಎಸ್ನೊಂದಿಗೆ ಸಮ್ಮಿಶ್ರ ಸರ್ಕಾರ ಮಾಡುವ ಕಾರ್ಯ ತಂತ್ರವು ಇದೇ ಎನ್ನುವುದು ಬಿಡಿಸಿ ಹೇಳಬೇಕಿಲ್ಲ. ಆದರೇ ಬಿಜೆಪಿಯೊಂದಿಗೆ ಮೈತ್ರಿ ಬಗ್ಗೆ ಜೆಡಿಎಸ್ ಸುಲಭವಾಗಿ ಒಪ್ಪಿಕೊಳ್ಳುತ್ತಾ ಕಾದು ನೋಡಬೇಕು.
ಟಿಕೆಟ್ ಹಂಚಿಕೆ ಮೇಲೆ ಇದು ಬಹುತೇಕ ನಿರ್ಧಾರವಾಗಲಿದೆ ಎನ್ನುವುದು ಮಾತು.
ಬಿಜೆಪಿಯ ಅತ್ಯಂತ ಮಹತ್ವದ ಸಭೆ
ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಜಾಣ್ಮೆಯ ನಡೆ ಅನುಸರಿಸುತ್ತಿದೆ. ದಕ್ಷಿಣ, ಉತ್ತರ ಕರ್ನಾಟಕ ಭಾಗದಲ್ಲಿ ಅಪಸ್ವರ ಎದ್ದೇಳಬಾರದು ಎನ್ನುವ ಕಾರಣಕ್ಕೆ ರಾಜ್ಯದಲ್ಲಿ ಲಿಂಗಾಯತರ ಸಮುದಾಯಕ್ಕೆ ನಾಯಕತ್ವ ನೀಡಿದ್ದರೇ ಒಕ್ಕಲಿಕ ಸಮುದಾಯದ ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಅವರಿಗೆ ಉತ್ತಮ ಸ್ಥಾನ ನೀಡಿ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಿತ್ತು. ಇದೀಗ ರಾಜ್ಯದ ಚುನಾವಣೆ ಮುಂದಿನ ಲೋಕಸಭಾ ಚುನಾವಣೆ ದಿಕ್ಕಸೂಚಿ ಅಂತ ಭಾವಿಸಿರುವ ಬಿಜೆಪಿ ಜಿಲ್ಲಾವಾರು ಕೋರ್ ಕಮಿಟಿ ಟೀಮ್ ಜೊತೆ ರಾಜ್ಯ ಕೋರ್ ಕಮಿಟಿ ಸಭೆ ನಡೆಸುತ್ತಿದೆ.
ಮೊದಲ ಹಂತದಲ್ಲಿ ಒಟ್ಟು ೧೬ ಜಿಲ್ಲೆಯ ಕೋರ್ ಕಮಿಟಿಗಳ ಸದಸ್ಯರ ಜೊತೆ ರಾಜ್ಯ ಕೋರ್ ಕಮಿಟಿ ಸಭೆ ನಡೆಸಿದೆ. ತುಮಕೂರು ವಿಭಾಗ, ಧಾರವಾಡ ವಿಭಾಗ, ಬೆಳಗಾವಿ ವಿಭಾಗ, ಬಳ್ಳಾರಿ ವಿಭಾಗ ಸೇರಿದಂತೆ ನಾಲ್ಕು ವಿಭಾಗಗಳ ೧೬ ಜಿಲ್ಲೆಗಳನ್ನು ಪ್ರಮುಖವಾಗಿ ಟಾರ್ಗೆಟ್ ಮಾಡಿದೆ. ತುಮಕೂರು ವಿಭಾಗದಲ್ಲಿ ತುಮಕೂರು, ದಾವಣಗೆರೆ, ಚಿತ್ರದುರ್ಗ, ಮಧುಗಿರಿ, ಧಾರವಾಡ ವಿಭಾಗದಲ್ಲಿ ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ಬೆಳಗಾವಿ ವಿಭಾಗದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ, ಬಳ್ಳಾರಿ ವಿಭಾಗದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆ.
ಕಾಂಗ್ರೆಸ್ನವರು ಮುಂದಿವ ಮುಖ್ಯಮಂತ್ರಿಯಾಗಬೇಕಾದರೆ ಕನಿಷ್ಟ ಪಕ್ಷ ೧೧೨-೧೨೦ ಸ್ಥಾನ ಗಳಿಸಲೇಬೇಕು. ಬಿಜೆಪಿಯವರು ಮುಖ್ಯಮಂತ್ರಿಯಾಗಬೇಕಾದರೆ ಬಿಜೆಪಿ ೯೫-೧೦೦ ಸ್ಥಾನ ಗಳಿಸಿದರೆ ಸಾಕು. ಆದರೆ ಜೆಡಿಎಸ್ಗೆ ೪೦ ಸ್ಥಾನ ಸಿಕ್ಕರೂ ಕುಮಾರಣ್ಣ ಮುಖ್ಯಮಂತ್ರಿಯಾಗ್ತಾರೆ. ಬಿಜೆಪಿ, ಜೆಡಿಎಸ್ ಯಾವತ್ತೂ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಬಹುಮತ ಪಡೆದಿಲ್ಲ. ಆದರೂ ಎರಡೂ ಪಕ್ಷಗಳು ಕಳೆದ ೧೯ ವರುಷಗಳಲ್ಲಿ ಒಮ್ಮೆಯೂ ಜನಾದೇಶವಿಲ್ಲದಿದ್ದರೂ ಅತೀ ಹೆಚ್ಚು ಬಾರಿ ಸರ್ಕಾರ ರಚಿಸಿದ ಹೆಗ್ಗಳಿಕೆ ಪಾತ್ರವಾಗಿದೆ.
ಈ ನಿಟ್ಟಿನಲ್ಲಿ ಬಿಜೆಪಿ ಕೇಂದ್ರಿಕೃತ ಲೆಕ್ಕಚಾರದಲ್ಲಿ ತೊಡಗಿದೆ. ೧೦೦ ಸಮೀಪ ಸೀಟ್ ಗೆದ್ದು ಬಂದಲ್ಲಿ ಆಪರೇಷನ್ ಕಮಲದ ಮೂಲಕ ಮತ್ತೆ ಅಧಿಕಾರ ಗದ್ದುಗೆ ಏರುವ ತವಕದಲ್ಲಿ ಇದೆ. ಅದಕ್ಕಿಂತ ಕಡಿಮೆ ಬಂದಲ್ಲಿ ಜೆಡಿಎಸ್ನೊಂದಿಗೆ ಒಪ್ಪಂದದ ಸರ್ಕಾರಕ್ಕೆ ಚಿಂತಿಸ ತೊಡಗಿದೆ. ಈ ಗುಟ್ಟು ತಿಳಿಯುತ್ತಿದ್ದಂತೆ ಒಳಗೊಳಗೆ ಕುದಿಯುತ್ತಿರುವ ಬಿಜೆಪಿ ಹಿರಿಯ ನಾಯಕರು ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಪಕ್ಷಾಂತರ ಪರ್ವಕ್ಕೆ ನಾಂದಿ ಹಾಡುವ ಯತ್ನದಲ್ಲಿದ್ದಾರೆ. ಇದಕ್ಕಾಗಿ ಟಿಕೆಟ್ ಹಂಚಿಕೆಗಾಗಿ ಕಾಯುತ್ತಿದ್ದಾರೆ. ಕಾಂಗ್ರೆಸ್ ಎರಡು ಲಿಸ್ಟ್ ಮಾಡಿದ್ದರೆ ಅನೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಭರವಸೆ ನೀಡಿಲ್ಲ.
ಜಂಪಿಂಗ್ ಸ್ಟ್ರಾರಸಗಳ ಲೆಕ್ಕಚಾರ ನೋಡಿಕೊಂಡು ಮುಂದಿನ ಹೆಜ್ಜೆ ಇಡುವ ತೀರ್ಮಾಣಕ್ಕೆ ಬಂದಿದೆ ಕಾಂಗ್ರೆಸ್. ಒಟ್ಟಿನಲ್ಲಿ ಟಿಕೆಟ್ ಹಂಚಿಕೆ ಮೇಲೆ ಎಲ್ಲವು ನಿಂತಿದೆ ಎನ್ನುವುದು ಬಹಿರಂಗ ಸತ್ಯ.