ಅಮೂಲ್ಯವಾದ ನವರತ್ನಗಳು ಒಬ್ಬರ ಅದೃಷ್ಟವನ್ನು ಬದಲಾಯಿಸಲು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತದೆ. ನಿಖರವಾದ ಉತ್ತರವಿಲ್ಲ . ಆದರೆ ಫಲನುಭಾವಿಗಳು ಹೌದು ಅನ್ನುತ್ತಾರೆ.
ನವರತ್ನಗಳಲ್ಲಿ ಮುಖ್ಯವಾಗಿ ಮಾಣಿಕ್ಯ, ಮುತ್ತು, ಹವಳ, ಪಚ್ಚೆ, ಪುಷ್ಯರಾಗ, ವಜ್ರ, ನೀಲ ಗೋಮೇಧಿಕ ಮತ್ತು ವೈಡೂರ್ಯಗಳಾಗಿವೆ. ನವರತ್ನಗಳು ನವಗ್ರಹಗಳನ್ನು ಪ್ರತಿನಿಧಿಸುತ್ತವೆ. ರಾಮಾಯಣ, ಮಹಾಭಾರತ ಮತ್ತು ಋಗ್ವೇದದಗಳಲ್ಲಿ ಉಲ್ಲೇಖಿಸಲಾಗಿದೆ. ನವರತ್ನ ಧರಿಸುವುದರಿಂದ ಆರೋಗ್ಯ ಭಾಗ್ಯ, ಧನಲಾಭಗಳು ವೃದ್ಧಿಸುತ್ತವೆ ಎಂಬ ನಂಬಿಕೆಗಳಿವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬರ ಜಾತಕದ ಪ್ರಕಾರ ಅವರ ರಾಶಿಯು ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರುತ್ತದೆ. ಅದು ಸಕಾರಾತ್ಮಕ ಮತ್ತು ನಕರಾತ್ಮಕ ಎರಡು ವಿಧದಲ್ಲಿಯೂ ಆಗಿರಬಹುದು. ಸಾಮನ್ಯವಾಗಿ ನಕಾರಾತ್ಮಕ ಪ್ರಭಾವನ್ನು ಕಡಿಮೆಗೊಳಿಸಲು ಪೂಜೆ ಪುರಾಸ್ಕರಗಳನ್ನು ಮಾಡಲಾಗುವುದು.
ಇನ್ನು ಕೆಲವು ನಕಾರಾತ್ಮ ಪ್ರಭಾವನ್ನು ಕಡಿಮೆಗೋಳಿಸಲು, ಸಮಸ್ಯೆಗಳನ್ನು ಬಗೆಹರಿಸಲು ಅಥಾವ ಸುಧಾರಿಲು ರತ್ನಗಳನ್ನು ಸಲಹೆಯ ಮೇರೆಗೆ ಧರಿಸುತ್ತಾರೆ. ಇದರ ಪ್ರಭಾವದಿಂದ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಂಡಿವವರು ಇನ್ನೊಬ್ಬರಿಗೂ ಸಲಹೆಯನ್ನು ನೀಡುತ್ತಾರೆ.
ರಾಜ ಮಹರಾಜರ ಕಾಲದಲ್ಲಿ ವೈರಿ ರಾಜನ್ನು ಸದೆ ಬಡಿಯಲು ಸಾಧ್ಯವಾಗದ್ದಿದಾಗ ಆತನಿಗೆ ಮಿತ್ರತ್ವ ಉಡುಗರೆಯಾಗಿ ನಕರಾತ್ಮಕ ಪ್ರಭಾವ ಬೀರುವ ರತ್ನಗಳನ್ನು ಜೋಡಿಸಿರುವ ಉಂಗುರವನ್ನು ನೀಡುತ್ತಾರೆ. ಇದರಿಂದ ಆ ರಾಜನು ಸಂಪೂರ್ಣ ಧಾರಿದ್ಯಗೊಳ್ಳತ್ತಾನೆ ಮತ್ತು ಸಂಪೂರ್ಣ ರಾಜ್ಯವೇ ಪತನ ಹೊಂದುತ್ತವೆ ಎಂಬ ಕಥೆಯಿದೆ.
ಇನ್ನು ತಮ್ಮ ರಾಜ್ಯ ಸದಾ ಸಂಪತ್ ಭರಿತ ಹಾಗೂ ರಾಜನು ಉತ್ತಮ ಆಡಳಿತಗಾರನಾಗಿ ಆಡಳಿತ ನಡೆಸಲೆಂದು ಆತನ ಕೀರಿಟದಲ್ಲಿ ರಾಜನ ಜಾತಕ್ಕೆ ಸರಿಹೊಂದುವ ರತ್ನವನ್ನು ಅಥಾವ ರತ್ನ ಖಚಿತ ಆಭರಣವನ್ನು ಜೋಡಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.
ಇಲ್ಲಿ ಜನಸಾನ್ಯರು ಜೋತಿಷ್ಯರ ಸಲಹೆಯಂತೆ ತಮ್ಮ ಜಾತಕಕ್ಕೆ ಸರಿಹೊಂದುವ ರತ್ನವನ್ನು ಉಂಗುರದಲ್ಲಿ ಧರಿಸುತ್ತಾರೆ. ವ್ಯಾಪಾರ, ಉದ್ಯೋಗ, ಮದುವೆ,ವಿಧ್ಯಾಬ್ಯಾಸ ಹೀಗೆ ತಮ್ಮಗೆ ಎದುರಾಗುವ ಸಮಸ್ಯೆಗಳನ್ನು ಪರಿಹಾರಿಸಲು ನವರತ್ನದ ಅರಳನ್ನು ಧರಿಸುತ್ತಾರೆ. ಚಿನ್ನಾಭರಣದ ಮಳಿಗೆಗಳಲ್ಲಿ ಲಭ್ಯವಿರುವ ಈ ದುಭಾರಿ ರತ್ನಗಳು ಕೆಲವೊಂದು ಮಳಿಗೆಗಳು ಕೇವಲ ನವರತ್ನದ ಹರಳುಗಳನ್ನು ಮಾರಾಟಮಾಡುತ್ತವೆ.