ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲವು ದಿನಗಳಿಂದ ಕನ್ನಡದ ಹಾಡೊಂದು ಸಖತ್ ಟ್ರೆಂಡ್ ಆಗುತ್ತಿದೆ. ”ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ” ಎಂಬ ಜನಪದ ಹಾಡನ್ನು ಬಳಸಿ ಹಲವರು ರೀಲ್ಸ್ ಮಾಡುತ್ತಿದ್ದಾರೆ. ಸಿಂಗಲ್ ಹುಡುಗರನ್ನು ರೇಗಿಸಲು ರೀಲ್ಸ್ಗಳಲ್ಲಿ ಈ ಹಾಡು ಅತಿಯಾಗಿ ಬಳಕೆಯಾಗುತ್ತಿದೆ. ಹಾಡಿನ ಸಾಹಿತ್ಯ, ಹಾಡನ್ನು ಹಾಡಿರುವ ಅಪ್ಪಟ ಜನಪದ ದನಿ ಕೇಳುಗರನ್ನು ಸೆಳೆಯುತ್ತಿದೆ. ಅಂದಹಾಗೆ ಈ ಹಾಡು ಯಾವುದು? ಹಾಡು ಹಾಡಿದವರು ಯಾರು?
ಈ ಸುಂದರವಾದ ಹಾಡನ್ನು ಅಷ್ಟೆ ಅದ್ಭುತವಾಗಿ ಹಾಡಿರುವುದು ನಾಡಿನ ಜನಪ್ರಿಯ ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ. ಈಗ ವೈರಲ್ ಆಗಿರುವ ‘ಈ ಸುಂದರನ ಸನ್ಯಾಸಿ ಮಾಡಬಹುದೆ’ ಹಾಡು ಅವರು ಹಾಡಿರುವ ಅರ್ಜುನನ ಜೋಗಿ ಹಾಡು ಎಂಬ ಕತೆಯಲ್ಲಿ ಬರುತ್ತದೆ. ಅರ್ಜುನನ ಜೋಗಿ ಹಾಡನ್ನು ಮಳವಳ್ಳಿ ಮಹದೇವಸ್ವಾಮಿಯವರು ಲಹರಿ ಮ್ಯೂಸಿಕ್ಗಾಗಿ ಕೆಲವು ವರ್ಷಗಳ ಹಿಂದೆ ಹಾಡಿದ್ದರು. ಅದು ಯೂಟ್ಯೂಬ್ನಲ್ಲಿ ಹಲವು ಭಾಗಗಳಲ್ಲಿ ಲಭ್ಯವಿದೆ.
ಈಗ ವೈರಲ್ ಆಗಿರುವ ಈ ಸುಂದರನ ಸನ್ಯಾಸಿ ಮಾಡಬಹುದೆ ಹಾಡಿನ ಹಿನ್ನೆಲೆಯನ್ನು ಕತೆಯಲ್ಲಿ ವಿವರಿಸಿದ್ದಾರೆ ಮಳವಳ್ಳಿ ಮಹದೇವಸ್ವಾಮಿಯವರು. ಕರ್ನಾಟಕದಲ್ಲಿ ಸದ್ಯ ಜಾನಪದ ಶೈಲಿಗೆ ಸೋಷಿಯಲ್ ಮಿಡಿಯಾಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಕಡಿಮೆ ಅವಧಿಯಲ್ಲಿ ಸಖತ್ ವೃರಲ್ ಆಗಿದೆ. ಹಾಗದರೆ ಈ ಸಾಂಗ್ ಯಾವುದು? ಹಾಡಿದವರು ಯಾರು? ಅನ್ನೋದು ಇಲ್ಲಿದೆ .
ಈ ಸುಂದರನ ಸನ್ಯಾಸಿ ಮಾಡಬಹುದೇ ಹಾಡು ಸಿನಿಮಾದ ಹಾಡಲ್ಲ, ಇದೊಂದು ಅಪ್ಪಟ ಜಾನಪದ ಗೀತೆಇವರು ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕೃಷ್ಣಾಪುರ ಗ್ರಾಮದವರು. ಇವರು ಬರೋಬ್ಬರಿ 1000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಇವರ ತಂದೆ ತಾಯಿ ಇಬ್ಬರು ಸಂಗೀತ ಕಲಾವಿದರೆ.
ನಾಡಿನ ಜನಪ್ರಿಯ ಜನಪದ ಹಾಡುಗಾರ ಮಳವಳ್ಳಿ ಮಹದೇವಸ್ವಾಮಿಯವರು ಮಲೆ ಮಾದೇಶ್ವರನ ಹಾಡಿನಿಂದಾಗಿ ಬಹಳ ಖ್ಯಾತಿ ಪಡೆದಿದ್ದಾರೆ. ಮಾದೇಶ್ವರ ದಯ ಬಾರದೆ ಹಾಡು ಹಾಡಿದ್ದು ಇವರೆ. ಅರ್ಜುನನ ಜೋಗಿ ಹಾಡು ಸೇರಿದಂತೆ ಹಲವು ಕತೆಗಳನ್ನು ಸೊಗಸಾಗಿ ಮಳವಳ್ಳಿ ಮಹದೇವಸ್ವಾಮಿ ಹಾಡುತ್ತಾರೆ. ಅವರ ಮಲೆ ಮಾದೇಶ್ವರನ ಕತೆ, ಶಿವಶರಣೆ ಸಂಕವ್ವನ ಕತೆ ಇನ್ನೂ ಹಲವಾರು ಕತೆಗಳು ಬಹಳ ಪ್ರಸಿದ್ಧಿ.