ಡೆಕ್ಕನ್ ವಿದ್ಯಾಸಂಸ್ಥೆಯ ಆಜೀವ ಸದಸ್ಯತ್ವವನ್ನು ಬಿಡುವ ನಿಶ್ಚಯ ಮಾಡಿದ ನಂತರ ತಿಲಕರ ಪ್ರತಿಯೊಂದು ಕಾರ್ಯಚಟುವಟಿಕೆಯೂ ಅವರು ಜನರ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗುವುದಾಗಿ ಮಾಡಿದ್ದ ದೃಢ ನಿಶ್ಚಯದ ಕುರುಹಾಗಿದೆ. ಪ್ಲೇಗ್ ಮತ್ತು ಕಾಮದ ದುರಂತಕಾಲದ ಕಾರ್ಯದಲ್ಲಿಯಂತೂ ಅವರು ಮೈಮರೆತು ದುಡಿದರು. ಅವರ ಸ್ವಾರ್ಥತ್ಯಾಗ, ಈ ಕೆಲಸ ಮಾಡುವಾಗಿನ ಅವರ ಅಪಾರ ಧೈರ್ಯ ಸ್ಮರ್ಯ ಮತ್ತು ಲಾರ್ಡ್ ಹ್ಯಾರಿಸ್ ಮತ್ತು ಲಾರ್ಡ್ ಸ್ಯಾಂಡ್ಹರ್ಸ್ಟರನ್ನು ನಿರ್ದಾಕ್ಷಿಣ್ಯವಾಗಿ ಅವರು ಟೀಕಿಸುತ್ತಿದ್ದ ರೀತಿ ಇವೆಲ್ಲ ಸೇರಿ ಪಶ್ಚಿಮ ಭಾರತದ ಜನಜೀವನದಲ್ಲಿ ಅವರಿಗೆ ಗೌರವ ಮತ್ತು ವಿಶಿಷ್ಟಸ್ಥಾನ ಕಲ್ಪಿಸಿಕೊಟ್ಟುವು. ಇವರ ಎಲ್ಲ ಕೆಲಸಗಳನ್ನೂ ಸರ್ಕಾರವು ಎಚ್ಚರಿಕೆಯಿಂದಲೇ ಗಮನಿಸುತ್ತಿತ್ತು. ಹಿಂದೂ-ಮುಸ್ಲಿಂ ಗಲಭೆಯ ವಿಷಯದಲ್ಲಿಯಂತೂ, ಸರ್ಕಾರೀ ವಲಯಗಳೊಂದಿಗೆ ತಿಲಕರಿಗಾದ ಘರ್ಷಣೆ, ಸರ್ಕಾರವು ಮುಸ್ಲಿಮರ ಪರವಾಗಿ ಅಪಾಯಕಾರೀ ಪಕ್ಷಪಾತ ತೋರುತ್ತಿದೆಯೆಂದು ತಿಲಕರು ಬಿಚ್ಚು ಮಾತಿನಿಂದ ಆರೋಪಿಸಿದುದು, ಸರ್ಕಾರದ ರಾಜಕೀಯ ಧೋರಣೆಯೇ ಈ ರೀತಿಯ ಗಲಭೆಗಳಿಗೆ ಉತ್ತೇಜನವಾಗಿದೆಯೆಂದು ನೇರವಾಗಿ ಆಪಾದನೆ ಮಾಡಿದುದು, ಇವೆಲ್ಲ ಸೇರಿ ಯಾವುದರಿಂದಲೂ ಬಗ್ಗಿ ಬಡಿಯದ ಅಪಾರ ಧೈರ್ಯದ ಟೀಕಾಕಾರರೆಂದೂ ಎತ್ತಿ ತೋರಿದುವು. ಪ್ಲೇಗ್ ಪರಿಹಾರ ಚಟುವಟಿಕೆಗಳಲ್ಲಿ ತಿಲಕರು ನಿಸ್ವಾರ್ಥವಾಗಿ ಸಲ್ಲಿಸಿದ ಸೇವೆ, ಸರ್ಕಾರವು ಜನರಿಗೆ ನೆರವಾಗಲೆಂದು ಮಾಡಿದ್ದ ಪ್ಲೇಗ್ ನಿರೋಧಕ ನೀತಿಯ ದಬ್ಬಾಳಿಕೆ ಮತ್ತು ಕಲ್ಪನಾರಹಿತ
ಕೆಲಸಗಳನ್ನು ಕಟುವಾಗಿ ತಿಲಕರು ಟೀಕಿಸಿದುದು ಇವುಗಳಿಂದ ಅವರನ್ನು ಎಲ್ಲರೂ ನಿರ್ಭಯ ಜನಪ್ರತಿನಿಧಿಯೆಂದು ಗೌರವಿಸುವಂತಾಯಿತು. ೧೮೯೬ರಲ್ಲಿ ಬಂದ ಮಹಾ ಕಾಮದ ಅನಂತರ ಜನರನ್ನಾವರಿಸಿಕೊಂಡ ದುರಂತದಿಂದ ಜನರಿಗೆ ನೆರವು ದೊರಕಿಸಲು ಸರಿಯಾಗಿ ನಿಯೋಜಿಸಿದ ಖಚಿತವಾದ ಚಳುವಳಿಯನ್ನು ವ್ಯವಸ್ಥೆಗೊಳಿಸಿಕೊಂಡು ಬರುವ ತಿಲಕರ ಶಕ್ತಿ ಸಾಮರ್ಥ್ಯಗಳಿಂದ ಅವರೊಬ್ಬ ನಂಬಿಕಸ್ಥ ಸ್ನೇಹಿತ, ಗುರು ಮತ್ತು ವಿಚಾರ ಬೋಧಕರಾಗಿ ನೆಲೆನಿಂತರು. ಪ್ಲೇಗ್ ಮತ್ತು ಕಾಮಪರಿಹಾರ ಕಾರ್ಯ ನಡೆಸುತ್ತಿದ್ದಾಗಲೇ ತಿಲಕರು ಬಹಳ ತೀಕ್ಷವಾಗಿ ಅಧಿಕಾರಿಗಳ ದ್ವೇಷವನ್ನು ಸಂಪಾದಿಸಿದುದು. ಅಧಿಕಾರಿ ಪ್ರಪಂಚವು ತಿಲಕರನ್ನು ತಮ್ಮ ಪಕ್ಕಕ ಚುಚ್ಚಿದ ಮುಳ್ಳೆಂದು ಭಾವಿಸಲಾರಂಭಿಸಿದ್ದರು. ಅವರು ವಿದ್ರೋಹಿಯೆಂದೂ, ರಾಜದ್ರೋಹ ಪ್ರಚಾರಕರೆಂದೂ ಎಣಿಸಿ ಅವರಮೇಲೆ ಬಹಳ ಕಠಿಣ ಕಾವಲು ಹಾಕಿ, ಅವರ ಕೊರಳು ಹಿಸುಕಿ ಮತ್ತೆ ದನಿಯೇಳದಂತೆ ಮಾಡಲು ಸರಿಯಾದ ಅವಕಾಶಕ್ಕಾಗಿ ಸರ್ಕಾರವು ಕಾಯುತ್ತಿತ್ತು. ಇದಕ್ಕೆ ಅಗತ್ಯವಾದ ಪ್ರಚೋದನೆಯು ಆಂಗ್ಲೋ ಇಂಡಿಯನ್ ಪತ್ರಿಕೆಗಳಿಂದ ಸಿಗುತ್ತಿತ್ತು. ಕಾಮ ಕಾಲದಲ್ಲಿ ಭೂ ಕಂದಾಯವನ್ನು ಮನ್ನಾ ಮಾಡಬೇಕು, ಬಿಟ್ಟುಕೊಡಬೇಕೆಂದು ತಿಲಕರ ಒತ್ತಾಯ ಹೆಚ್ಚು ಪ್ರಬಲವಾಗಲು, ಈ ಒತ್ತಾಯವನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಕಂದಾಯ ನಿರಾಕರಣೆ ಚಳುವಳಿ” ಎಂದು ಕರೆದು ಐರ್ಲೆಂಡಿನ ಭೂಸಂಘ (Irish Land League) ಮತ್ತು ಅದರ ನಾಯಕ ಪಾರ್ನೆಲ್ ಅವರಿಗೂ ಇಲ್ಲಿಗೂ ಇದ್ದ ಸಾಮ್ಯವನ್ನು ಸೂಚಿಸಿತು. ಸರ್ಕಾರವು ಆಗಲೇ. ತಿಲಕರ ಮೇಲೆ ಮೊಕದ್ದಮೆ ಹೂಡುತ್ತದೆಂದು ಗಾಳಿಮಾತೆದ್ದಿತ್ತು. ಅವರ ಜೊತೆಗಾರರು ಮತ್ತು ಸಹಾಯಕರ ಮೇಲೆ ಮೊಕದ್ದಮೆಗಳನ್ನು ಜರುಗಿಸಿದ್ದರೂ, ಅವರ ಮೇಲೆ ಈಗ ಬೇಡವೆಂದು ಸರ್ಕಾರದ ಕಾನೂನು ಸಲಹೆಗಾರರು ಸೂಚಿಸಿದ್ದರು. ಆದರೂ ಸರ್ಕಾರವು ಅವರ ಮೇಲೆ ಎರಗಲು ಸದಾ ಸಿದ್ಧವಾಗಿಯೇ ಇತ್ತು. ೧೮೯೭ರ ಜೂನ್ ೨೨ರಂದು ರಾಂಡನ ಕೊಲೆಯಾದಾಗ ಸರ್ಕಾರಕ್ಕೆ ನೆಪ ಸಿಕ್ಕಿದಂತಾಯಿತು. ಆದರೂ ತಿಲಕರ ಮೇಲೆ ಆಗ ಇದ್ದುದಿದ್ದಂತೆ ಕ್ರಮ ಕೈಕೊಂಡುದು ಒಂದು ಅಚ್ಚರಿಯೇ ಆಗಿತ್ತು. ರಾಂಡನ ಕೊಲೆಯನ್ನು ಆತನು ಪ್ಲೇಗ್ ಪರಿಹಾರ ಕಾರ್ಯದಲ್ಲಿ ಜನರಿಗೆ ಕೊಟ್ಟಿ, ಹಿಂಸೆ ದಮನಗಳಿಗೆ ಪ್ರತೀಕಾರವಾಗಿ ಛಾಪೇಕರ್ ಸೋದರರು ಮಾಡಿದ್ದರು. ಕೊಲೆಯ ಮೊಕದ್ದಮೆಯನ್ನು ಅವರ ಮೇಲೆ ನಡೆಸಲಾಯಿತು. ಆದರೆ ತಿಲಕರ ಮೇಲೆ ರಾಜದ್ರೋಹದ ಆಪಾದನೆ ಹಾಕಲಾಯಿತು. ಶಿವಾಜಿ ಉತ್ಸವದ ಸಂದರ್ಭದಲ್ಲಿ ತಿಲಕರು ಕೇಸರಿಯಲ್ಲಿ ಪ್ರಕಟಿಸಿದ ಲೇಖನಗಳಲ್ಲಿ ರಾಜದ್ರೋಹ ತುಂಬಿದೆಯೆಂದು ಆರೋಪಣೆ ಮಾಡಲಾಯಿತು.
ಈ ಎರಡು ಘಟನೆಗಳಿಗೂ ಒಂದಕ್ಕೊಂದಕ್ಕೆ ಸಂಬಂಧವಿರಲಿಲ್ಲ. ತಿಲಕರು ಮಾಡಿದ್ದುದಾದರೂ ಇಷ್ಟೇ. ಉತ್ಸವದ ಕಾಲದಲ್ಲಿ ಯಾರೋ ಭಾಷಣಕಾರರು ಆ ಬಗ್ಗೆ ಪ್ರಾಸಂಗಿಕವಾಗಿ ಸೂಚಿಸಿದುದರಿಂದ ತಿಲಕರು ಶಿವಾಜಿಯ ಕೈಯಲ್ಲಿ ಅಫ್ಜಲ್ ಖಾನನ ಕೊಲೆಯನ್ನು ಸರಿಯೆಂದು ಸಾಧಿಸಿದ್ದರು. ತಿಲಕರು “ಭಾರತದ ಮೇಲೆ ಆಡಳಿತ ನಡೆಸಲು ಮೇಚ್ಚರಿಗೆ ತಾಮ್ರ ಶಾಸನ ಹಾಕಿಕೊಟ್ಟಿಲ್ಲ’ವೆಂದು ಹೇಳಿದುದನ್ನು ಒಬ್ಬ ನ್ಯಾಯಾಧೀಶರು’ ಅಪಾರ್ಥ ಮಾಡಿ, ಮೇಚ್ಛರೆಂದಿರುವುದು ಮುಸ್ಲಿಮರು ಕ್ರಿಶ್ಚಿಯನರು ಮತ್ತು ಯೂರೋಪಿಯನ್ನರಿಗೆ ಅನ್ವಯಿಸಿ ಇದು ಸರ್ಕಾರದ ವಿರುದ್ಧ ವಿದ್ರೋಹಕ್ಕೆ ಪ್ರಚೋದನೆಯಲ್ಲವೇ ಎಂದು ಕೇಳಿದರು. “ಪ್ಲೇಗ್ ಪರಿಹಾರ ಅಧಿಕಾರಿಗಳ ವಿರುದ್ಧವಾಗಿ ಸುಮ್ಮನೆ ಕೂಗುಹಾಕುವುದು ನಿಷ್ಕಲ್’ಎಂದು ತಿಲಕರು ಪಣಿಯ ನಾಯಕರಿಗೆ ತಿಳಿಯ ಹೇಳಿ, ಉರಿನಲ್ಲಿಯೇ ಇರುವುದು ಉತ್ತಮವೆಂದೂ, ಜನತು ಉಸ್ಸಾವಾರಿ ಸಮಿತಿಗಳನ್ನೇರ್ಪಡಿಸಿ, ಖಾಸಗಿ ಪ್ಲೇಗ್ ಆಸ್ಪತ್ರೆಗೆ ಧನ ಸಹಾಯ ಮಾಡಬೇಕೆಂದೂ ಸೂಚಿಸಿದ್ದರು, ಉಂಡನ ಕೊಲೆಯನಂತರ ಟೈಂಸ್ ಪತ್ರಿಕೆಯು ಈ ಭಾಗವನ್ನು ಉಲ್ಲೇಖಿಸಿ ರಾಂಡ್ ಮತ್ತು ಸಹಾಯಕರ ವಿರುದ್ಧವಾಗಿ ‘ಸುಮ್ಮನೆ ಕೂಗು ಹಾಕುವುದರ ವಿಫಲತೆಯ ಬಗ್ಗೆ ಗೌರವಾನ್ವಿತ ತಿಲಕರ ಹೇಲಿಕೆಗೆ ನ್ಯಾಯದರ್ಶಿಗಳೇನು ಹೇಳುವರೋ ನಮಗೆ ತಿಳಿಯದು, ಆದರೆ ಯಾರೋ ಕೈಯಲ್ಲಿ ಪಿಸ್ತೂಲನ್ನು ಪಡೆದವನು ಈ ಗೌರವಾನ್ವಿತ ಸದಸ್ಯರು ಸುಮ್ಮನೆ ಕೂಗು ಹಾಕುವುದರಿಂದ ಏನೂ ಪ್ರಯೋಜನವಿಲ್ಲವೆಂದುದನ್ನು ತನ್ನದೇ ರೀತಿಯಲ್ಲಿ ಒಪ್ಪಿಕೊಂಡಂತಿದೆ’ ಎಂದು ಬರೆಯಿತು, ರಾಂಡ್ ಮತ್ತು ಐಯರ್ಸ್ ಪ್ರಕರಣವು ಆಂಗ್ಲೋ ಇಂಡಿಯನರನ್ನು ಅತಿ ಗಾಬರಿಪಡಿಸಿತು. ಪುಣೆಯ ಬ್ರಾಹ್ಮಣರು ತೀವು ಒಳಸಂಚು ನಡೆಸುತ್ತಿರುವರೆಂದು ಅವರು ಬಹಿರಂಗವಾಗಿಯೇ ಹೇಳಲಾರಂಭಿಸಿದರು. ಕೊಲೆಗಾರನು ತಪ್ಪಿಸಿಕೊಂಡಾಗ ಆಂಗ್ಲೋ ಇಂಡಿಯನ್ನರು ತಮ್ಮ ಸೇಡನ್ನು ಭಾರತೀಯ ಪತ್ರಿಕೆಗಳ ಮೇಲೆ ಕಾರಿದರು. ಈ ಭಾರತೀಯ ಪತ್ರಿಕೆಗಳು ತಮ್ಮ ರಾಜದ್ರೋಹ ಪ್ರಚೋದನೆಗಳಿಂದ ಜನರನ್ನು ಕೆರಳಿಸಿದ್ದುವೆಂದು ಈ ಆಂಗ್ಲೋ ಇಂಡಿಯನ್ನರು ಆರೋಪಿಸಿದರು. ಇಂಡಿಯನ್ ಪೀನಲ್ ಕೋಡಿನ ೧೨೪. ಎ. ನಿಬಂಧನೆಯನ್ನನುಸರಿಸಬೇಕೆಂದೂ ಸರ್ಕಾರವನ್ನು ಕೋರಿದರು. ಅಲ್ಲದೆ ನುಣುಚಿಕೊಳ್ಳುವಂತಹ ಚಾಲೂಕಿನ ಭಾಷಣಕಾರರನ್ನೂ, ಲೇಖಕರನ್ನೂ ಹಿಡಿದು ಹಾಕಲು ಆ ನಿಬಂಧನೆಸಾಕೇ ಎಂಬ ಅನುಮಾನವನ್ನು ವ್ಯಕ್ತಪಡಿಸಿ ‘ರಾಜದ್ರೋಹ’ವೆಂದರೇನೆಂಬುದನ್ನು ಇನ್ನೂ ಕಠಿಣವಾಗಿರುವಂತೆ, ಖಚಿತವಾಗಿ ಗೊತ್ತುಪಡಿಸಬೇಕೆಂದೂ ಮನವಿ ಮಾಡಿದರು.
ಮುಂಬಯಿ ಶಾಸಕ ಸಭೆಗೆ ತಿಲಕರ ಮರುಚುನಾವಣೆಯನ್ನು ಒಪ್ಪುಕೂಡದೆಂದು ಲಾರ್ಡ್ ಸಾಂಡ್ ಹರ್ಸರಿಗೆ ಬಹಿರಂಗವಾಗಿಯೇ ಸೂಚನೆಯನ್ನು ಕೊಟ್ಟರು. ಪುಣೆಯ ಪತ್ರಿಕೆಗಳಿಂದ ಹಲಕೆಲವು ಭಾಗಗಳನ್ನೆತ್ತಿ ಪ್ರಕಟಿಸಿ, ಟೈಂಸ್ ಆಫ್ ಇಂಡಿಯಾ ಪತ್ರಿಕೆಯು ಕುತಂತ್ರದಿಂದ, ಈ ಎಲ್ಲವೂ ರಾಜದ್ರೋಹಕರವಾಗಿ ಇರುವುದರಿಂದ, ಏನಾದರೂ ಕ್ರಮ ಅಗತ್ಯವೆಂದು ಸೂಚಿಸಿತು. ಟೈಂಸ್ ಆಫ್ ಇಂಡಿಯಾ ಪತ್ರಿಕೆಯು ವ್ಯಂಗ್ಯವಾಗಿ “ಈ ದೈನ್ಯತೆಯ ಬೋಧನೆಗೂ ರಾಂಡನ ಕೊಲೆಯ ಆ ದುರಂತ ಘಟನೆಗೂ ಸಂಬಂಧ ಕಲ್ಪಿಸುವ ಕೆಲಸ ನಮ್ಮದಲ್ಲ. ಆದರೆ ಈ ರೀತಿಯ ಬೋಧನೆಯು ಸೃಜಿಸಿದ ವಾತಾವರಣವು ವ್ಯಕ್ತಿಯ ಮೇಲೆ ಹಿಂಸೆ, ಸರ್ಕಾರದ ಬಗ್ಗೆ ದ್ವೇಷ ಮತ್ತು ಕಾನೂನು ಮತ್ತು ಅಧಿಕಾರಿಗಳ ಬಗ್ಗೆ ತಿರಸ್ಕಾರಗಳನ್ನು ಬೆಳೆಸಲು ಸಹಕಾರಿಯಾದ ವಾತಾವರಣವೇ ಎಂಬುದು ಖಂಡಿತ’ವೆಂದು ಬರೆದಿತ್ತು. ಕಾಲದ ಅನುಕ್ರಮವೂ ಅರ್ಥಪೂರ್ಣವಾಗಿತ್ತು. ೧೮೯೭ರ ಮೇ ೧೧ರಂದು ತಿಲಕರು ‘ಬರಿಯ ಕೂಗಾಟದ ವಿಫಲತೆಯ ಬಗ್ಗೆ ಬರೆದಿದ್ದರು. ಜೂನ್ ೧೨ರಂದು ಶಿವಾಜಿಯು ಅಫ್ಜಲ್ ಖಾನನನ್ನು ಕೊಂದುದನ್ನು ಸಮರ್ಥಿಸಿದರು. ಇವೆರಡನ್ನೂ ಸೇರಿಸಿ, ರಾಜಕೀಯ ಕೊಲೆಯ ಸಮರ್ಥನೆ ಮತ್ತು ಅದೆ ಆಹ್ವಾನವಲ್ಲವೇ ಇದು ಎಂದು ಕೇಳಲಾಯಿತು. ಹೇಗಾದರೂ ಸರಿ, ಲಾರ್ಡ್ ಸಾಂಡ್ ಹರ್ಸ್ಟನ ಸರ್ಕಾರ ಅಷ್ಟು ಬುದ್ಧಿಗೇಡಿಯಾಗಲಿಲ್ಲ; ತಿಲಕರ ಚುನಾವಣೆಗೆ ಒಪ್ಪಿಗೆ ನೀಡಿತು. ಆದರೂ ೧೮೯೭ರ ಅಮರಾವತಿಯ ಕಾಂಗ್ರೆಸ್ ಅಧಿವೇಶನದ ಬಾಲ ಗಂಗಾಧರ ತಿಲಕ್ ಅಧ್ಯಕ್ಷ ಶಂಕರನ್ ನಾಯರ್ ಅವರ ಮಾತಿನಲ್ಲಿ ಹೇಳುವುದಾದರೆ, “ಈ ರೀತಿಯ ದ್ವೇಷಪೂರಿತ ಪ್ರಚಾರದಿಂದ ಆಂಗ್ಲೋ ಇಂಡಿಯನ್ನರಲ್ಲಿ ಪ್ರಚೋದಿತವಾದ ಅಕಾರಣ ಪ್ರಾಣಭಯ ಮತ್ತು ಇಂಗ್ಲಿಷ್ ಜನರಲ್ಲಿ ಉದ್ಯೋಗವನ್ನು ಕೆರಳಿಸಲು ಸಫಲ ಪ್ರಯತ್ನವಾದುದೂ ಸೇರಿ ಭಾರತದ (ಸೆಕ್ರೆಟರಿ ಆಫ್ ಸ್ಟೇಟ್) ಕಾರ್ಯದರ್ಶಿಯ ಕೈ ಕಟ್ಟಿದಂತಾಯಿತು. ಲಾರ್ಡ್ ಸಾಂಡ್ ಹರ್ಸ್ಟನು ಕೂಡ ಸ್ವತಂತ್ರವಾಗಿ ತಾನಾಗಿಯೇ ತೆಗೆದುಕೊಳ್ಳಲಿಷ್ಟವಿಲ್ಲದಂತಹ ಕ್ರಮಗಳನ್ನು ಜರುಗಿಸಬೇಕಾಯಿತು.”
ಪುಣೆಯು ಆಗ ವಿಕ್ಟೋರಿಯಾ ರಾಣಿಯ ಆಳ್ವಿಕೆಯ ವಜ್ರಹಬ್ಬವನ್ನಾಚರಿಸುತ್ತಿತ್ತು, ಮೂರು ಲೇಖನಗಳಲ್ಲಿ ತಿಲಕರು ಈ ಆಡಳಿತ ಕಾಲವನ್ನು ಮೆಚ್ಚಿಯೇ ಅವಲೋಕನ ಮಾಡಿದ್ದರು. ಸರ್ಕಾರಿ ಭವನ, ಗಣೇಶಖಂದಿನಲ್ಲಿ ಈ ಹಬ್ಬದ ಸಲುವಾಗಿ ಒಂದು ಭೋಜನಕೂಟ ಏರ್ಪಾಡಾಗಿತ್ತು, ತಿಲಕರು ಅದರಲ್ಲಿ ಭಾಗಿಗಳಾಗಿದ್ದರು. ಅಂದೇ ರಾತ್ರಿ ಆ ಭೀಕರ ಕೊಲೆ ಜರುಗಿತು. ಕೆಲವ ಗಂಟೆಗಳಲ್ಲಿ ಸುದ್ದಿ ಎಲ್ಲೆಡೆಗೂ ಹರಡಿತು. ಜನರು ಆಶ್ಚರ್ಯ ಮತ್ತು ಭಯಚಕಿತರಾದರು. ಪೋಲೀಸಿನವರು ತಕ್ಷಣ ಕಾರ್ಯನಿರತರಾಗಿ, ರಸ್ತೆಗಳನ್ನು ಮುಚ್ಚಿಸಿ, ಮನೆಗಳನ್ನು ಹುಡುಕಿ, ಅನುಮಾನದ ಮೇಲೆ ಕೆಲವರನ್ನು ಸೆರೆಹಿಡಿದರು. ಆಂಗ್ಲೋ ಇಂಡಿಯನ್ನರಂತೂ ಈ ಕೊಲೆಯ ಹಿಂದೆ ಬ್ರಾಹ್ಮಣರ ಒಳಸಂಚಿನ ವಾಸನೆ ಹಿಡಿದರು. ಸರ್ಕಾರವೇನೋ ಈ ಒಳಸಂಚಿನ ಮಾತಿಗೆ ಬೆಲೆಕೊಡದಿದ್ದರೂ, ಈ ಕೊಲೆಗೆ ಪುಣೆಯೇ ಹೊಣೆಯೆಂದು ತೀರ್ಮಾನಿಸಿ, ಅಲ್ಲಿಗೆ ಪುಂಡುದಂಡನೆಯ (Punitive) ಪೋಲೀಸರನ್ನು ಹಾಕಿದರು. ಆಗಿನ ಭಯಭೀತಿಗಳೆಷ್ಟೆಂದರೆ ಒಮ್ಮೆ ಮುಂಬಯಿಯ ಷರೀಫರಾಗಿದ್ದ ಡಾಕ್ಟರ್ ಕೊವಾಸ್ಟಿ ಜಹಾಂಗೀರರಾಗಲಿ ಮತ್ತು ಡಾಕ್ಟರ್ ಸರ್ ರಾಮಕೃಷ್ಣ ಭಂಡಾರ್ಕರರಾಗಲಿ ರಾಂಡನ ಶವಸಂಸ್ಕಾರಕ್ಕೆ ಹೋಗಲು ಅನುಮತಿ ಕೊಡಲಿಲ್ಲ. ಪುಣೆಯ ಸಜ್ಜನರೇ ಸಭೆ ಸೇರಿ ಈ ಕೊಲೆಯನ್ನು ಖಂಡಿಸಿದ್ದರೆ, ಸರ್ಕಾರದ ಸಂದೇಹ ಕೋಪಗಳು ಕೊಂಚವಾದರೂ ಇಳಿಯುತ್ತಿತ್ತೋ ಏನೋ. ಆದರೆ ಇದಕ್ಕೆ ಯಾರೂ ಮುಂದೆ ಬರಲಿಲ್ಲ. ಕೊನೆಗೆ ಪುಣೆಯ ಕಲೆಕ್ಟರ್ ಶ್ರೀ. ಲ್ಯಾಂಬನು ಮುಂದೆ ಬಂದು ಸಭೆಯನ್ನು ಕರೆದ. ಆ ಸಭೆಯಲ್ಲಿ ಆತನು ಕೇಸರಿ ಮತ್ತು ತಿಲಕರ ಮೇಲೆ ರಾಜದ್ರೋಹದ ಆಪಾದನೆಯನ್ನು ಸುತ್ತು ಮಾತಿನಲ್ಲಿ ಮಾಡಿ, ಒಂದು ವಾರಕ್ಕೆ ಮೊದಲು ಶಿವಾಜಿಯ ಉತ್ಸವದಲ್ಲಿ ಮಾಡಿದ್ದ ಭಾಷಣಗಳಿಗೆ ಪದೇ ಪದೇ ಗಮನ ಸೆಳೆದನು. ಹಿಂದೆ ಕೊಲಾಬಾದ ಕಲೆಕ್ಟರಾಗಿದ್ದು, ರಾಯಘಡದಲ್ಲಿ ಶಿವಾಜಿ ಉತ್ಸವವನ್ನು ನಡೆಸಲು ಅಪ್ಪಣೆಯನ್ನು ನಿರಾಕರಿಸಿದ್ದು, ಕೊನೆಗೆ ತಿಲಕರು ಸರ್ಕಾರದಿಂದ ನೇರವಾಗಿಯೇ ಅನುಮತಿ ತರಬೇಕಾದ ಪ್ರಸಂಗದ ಲ್ಯಾಂಬ್ ಈತನೇ, ಈ ರೀತಿಯ ಬೆದರಿಕೆಗಳಿಗೆ ಹೆದರಿ ಅಥವಾ ಬಾಗಿ ತಮ್ಮ ಕೆಲಸಕಾರ್ಯಗಳಾವುದನ್ನೂ ತಿಲಕರು ನಿಲ್ಲಿಸಲಿಲ್ಲ, ಬದಲಿಸಲಿಲ್ಲ. ವಾಸ್ತವವಾಗಿ ೧೮೯೭ರ ಜುಲೈ ೬ರ ಸಂಚಿಕೆಯಲ್ಲಿ ಪುಂಡು ದಂಡನೆಯ ಪೋಲಿಸರನ್ನು ಹಾಕಿದ ಬಗ್ಗೆ ಬರೆಯುತ್ತಾ ತಿಲಕರು “ಸರ್ಕಾರದ ತಲೆ ಭುಜದಮೇಲಿದೆಯೇ?” ಎಂದು ಕೇಳಿದರು. ಅದರ ಮುಂದಿನ ಸಂಚಿಕೆಯಲ್ಲಿ ಸರ್ಕಾರಕ್ಕೆ ನೇರವಾಗಿಯೇ ‘ಆಡಳಿತ ನಡೆಸುವುದೆಂದರೆ ಸೇಡು ತೀರಿಸುವುದಲ್ಲ” ಎಂದು ಬುದ್ಧಿ ಹೇಳಿದರು.
ಮುಂದುವರೆಯುತ್ತದೆ.