ಮಂಗಳೂರು : ಪಂಪವೆಲ್ ನಿಂದ ಪಡೀಲ್ ಗೆ ಹೋಗುವ ಚತುಸ್ಪಥ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದ್ದು ಹಲವು ಕಡೆಗಳಲ್ಲಿ ಅಪೂರ್ಣವಾಗಿದೆ. ಇದು ಪ್ರಯಾಣಿಕರಿಗೆ ಸಂಚಕಾರವಾಗಿದೆ.
ವರ್ಷದ ಹಿಂದೆಯೇ ಕಾಮಗಾರಿ ಆರಂಭಗೊಂಡಿದ್ದು ಆಮೆಗತಿಯ ಕೆಲಸದಿಂದ ರಸ್ತೆ ಕಾಮಗಾರಿ ಪೂರ್ಣ ಗೊಳ್ಳುವ ಲಕ್ಸಣಗಳು ಕಾಣುತ್ತಿಲ್ಲ. ಚತುಸ್ಪಥ ರಸ್ತೆಯ ಕೆಲಸ ಕಾರ್ಯಗಳು ಪ್ರಗತಿಯಲ್ಲಿದ್ದು, ಪಂಪವೆಲ್ ಭಾಗದಿಂದ ಅಲ್ಪ ಪ್ರಮಾಣದಲ್ಲಿ ರಸ್ತೆ ರಸ್ತೆ ನಿರ್ಮಾಣಗೊಂಡಿದೆ. ರಸ್ತೆ ಅಭಿವೃದ್ದಿ ಗೊಂಡಿದೆ ಎಂದು ನಿಟ್ಟುಸಿರು ಬಿಟ್ಟರೆ ಪ್ರಯಾಣಿಕರಿಗೆ ಮತ್ತೆ ಅಲ್ಲಲ್ಲಿ ಅರೆಬರೆ ಕಾಮಗಾರಿ ಗೋಚರವಾಗುತ್ತದೆ. ನಗರಕ್ಕೆ ಆಗಮಿಸುವ ಪ್ರಮುಖ ರಸ್ತೆ ಇದಾದ ಕಾರಣ, ವಾಹನ ಸವಾರರಿಗೆ ಈ ರಸ್ತೆಯಲ್ಲಿ ಸುಮಾರು 3 km ಸಂಚಾರ ತ್ರಾಸದಾಯಕವಾಗಿದೆ.
ಪೈಪ್ ಲೈನ್ಗಳು ಕಾಮಗಾರಿ ವೇಗ ವಾಗಿ ನಡೆಸಲು ಅಡ್ಡಿಯಾಗುತ್ತಿದೆ. ಇದೇ ಕಾರಣಕ್ಕೆ ಈ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಈ ರಸ್ತೆಯಲ್ಲಿ ಹಲವು ನೀರಿನ ಪೈಪ್ಲೈನ್ಗಳಿದ್ದು, ರಸ್ತೆ ಅಗೆಯುವ ವೇಳೆ ಸಮಸ್ಯೆಗೆ ಕಾರಣವಾಗುತ್ತಿದೆ. ಈ ವೇಳೆ ಪೈಪ್ಲೈನ್ ಒಡೆದು ಸೋರಿಕೆ ಯಾಗುತ್ತಿದೆ. ಪೈಪ್ಲೈನ್ ಸ್ಥಳಾಂತರ ಮಾಡುವ ಪ್ರಕ್ರಿಯೆ ಕಾರಣಕ್ಕೆ ವೇಗದ ಕಾಮಗಾರಿ ಸಾಧ್ಯವಾಗುತ್ತಿಲ್ಲ
24 ಮೀ. ಅಗಲದ ಚತುಷ್ಪಥ ರಸ್ತೆ ಈ ರಸ್ತೆ ಕಾಮಗಾರಿ ಮುಕ್ತಾಯಕ್ಕೆ ಎರಡು ವರ್ಷ ನಿಗದಿತ ಅವಧಿ ಇತ್ತು.ಆದರೆ ಇನ್ನೂ ಅಲ್ಲಲ್ಲಿ ಕಾಮಗಾರಿ ಬಾಕಿ ಇದ್ದು ಕೆಲಸಕ್ಕೆ ವೇಗ ನೀಡಲು ಸ್ಮಾರ್ಟ್ಸಿಟಿ ನಿರ್ಧರಿಸಬೇಕಿದೆ. ಸುಮಾರು 2.8 km. ಉದ್ದವಿರುವ ಈ ರಸ್ತೆ 24 ಮೀ. ಅಗಲಕ್ಕೆ ಚತುಷ್ಪಥ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತನೆಯಾಗಲಿದೆ. ಇದರಲ್ಲಿ 3.50 ಮೀ. ಅಗಲದ 4 ಲೇನ್ ಕಾಂಕ್ರೀಟ್ ವೇ, ರಸ್ತೆ ಇಕ್ಕೆಲದಲ್ಲಿ 3 ಮೀ. ಅಗಲದ ಇಂಟರ್ಲಾಕ್ ಅಳವಡಿಸಲಾಗುತ್ತದೆ. ರಸ್ತೆ ಇಕ್ಕೆಲದಲ್ಲಿ ಫುಟ್ಪಾತ್, ಚರಂಡಿ, ಯುಟಿಲಿಟಿ ಡಕ್ಟ್ ರಸ್ತೆ ಮಧ್ಯೆ ಮೀಡಿಯನ್ ಜತೆಗೆ ದಾರಿ ದೀಪ ವ್ಯವಸ್ಥೆ ಇರುತ್ತದೆ.
ಪಂಪ್ವೆಲ್-ಪಡೀಲ್ ನಡುವಣ ಕಾಂಕ್ರೀಟ್ ರಸ್ತೆ ಕಾಮಗಾರಿ ಯೋಜನ ವೆಚ್ಚ ಒಟ್ಟು 26 ಕೋ.ರೂ. ಆಗಿದ್ದು – ರಾಜ್ಯ ಸರಕಾರ ಪೂರಕ ಕೆಲಸಗಳಿಗಾಗಿ 4 ಕೋ.ರೂ. ಒದಗಿಸಲಿದೆ. ಆದರೂ ಕಾಮಗಾರಿ ವಿಳಂಬ ಸೇರಿದಂತೆ ಯೋಜನೆ ಪೂರ್ಣಗೊಳಿಸಲು ಮತ್ತಷ್ಟು ವಾಯ ಅನುದಾನ ಬೇಕಾಗಬಹುದು ಎನ್ನುತ್ತಾರೆ ಅಧಿಕಾರಿಗಳು.
ಆಗೆದ ರಸ್ತೆ ಕಾಮಗಾರಿ ಅಪೂರ್ಣವಾಗಿದೆ .ಕಂಕನಾಡಿ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯ ಒಂದು ಭಾಗದಲ್ಲಿ ಕಾಂಕ್ರೀಟ್ ಅಳವಡಿಸಲಾಗಿದ್ದು, ಮತ್ತೊಂದು ಭಾಗ ಅಗೆಯಲಾಗಿದೆ.ಆದರೆ ಅದೇ ರಸ್ತೆಯಲ್ಲಿ ಕಷ್ಟಪಟ್ಟು ವಾಹನಗಳು ಸಂಚರಿಸಬೇಕಾದ ಅನಿವಾರ್ಯವಿದೆ. ಕಾಂಕ್ರೀಟ್ ಕಾಮಗಾರಿ ಅಲ್ಲಲ್ಲಿ ನಡೆಸಿ ಅರ್ಧಕ್ಕೆ ನಿಲ್ಲಿಸಿರುವ ಕಾರಣದಿಂದ ಸಂಚಾರ ಕಷ್ಟಕರವಾಗಿದೆ.
ರಸ್ತೆ ಕಾಮಗಾರಿ ನಡೆದಿರುವ ಹಲವು ಕಡೆಗಳಲ್ಲಿ ಮುಖ್ಯವಾಗಿ ಪಡೀಲ್ ಸಮೀಪದಿಂದ ಆಗಮಿಸುವ ವೇಳೆ ತಿರುವು ಭಾಗದಲ್ಲಿ ಹಾಗೂ ಪಂಪ್ ವೆಲ್ ಸಮೀಪದಲ್ಲಿ ರಸ್ತೆಯ ಪಕ್ಕದಲ್ಲಿ ಅಗೆಯಲಾಗಿದೆ. ಆದರೆ ಯಾವುದೇ ರೀತಿಯ ಸುರಕ್ಷಿತ ಕ್ರಮ ವಹಿಸಿಲ್ಲ, ಇದು ಅಪಘಾತಕ್ಕೆ ಆಹ್ವಾನ ನೀಡುವಂತಿದೆ.
ಪಡೀಲ್ನಿಂದ ನಾಗುರಿಯತ್ತ ತೆರಳುವ ವೇಳೆ ರಸ್ತೆಯ ಎರಡೂ ಭಾಗದಲ್ಲೂ ಅಗೆಯಲಾಗಿರುವ ಬಿ ಕಾರಣ ಸುಗಮ ಸಂಚಾರಕ್ಕೆ ಅಡ್ಡಿ ಈ ಯಾಗಿದೆ. ಅಲ್ಲಲ್ಲಿ ವಾಹನ ದಟ್ಟಣೆ ೨ ಸಾಮಾನ್ಯವಾಗಿದ್ದು, ಬೆಳಗ್ಗೆ ಸಂಜೆ ವೇಳೆ ನ್ಯೂ ಟ್ರಾಫಿಕ್ ಜಾಮ್ ಆಗುತ್ತಿದೆ.