ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಈಗಾಗಲೇ ಕೆಳ ಅಂತಸ್ಥಿನ ನಿರ್ಮಾಣ ಕಾರ್ಯ ಕೊನೆಯ ಹಂತ ತಲುಪಿದೆ. ಈ ನಿಟ್ಟಿನಲ್ಲಿ ಜ.22ಕ್ಕೆ ರಾಮಲಲ್ಲಾನ ಪ್ರಾಣ ಮೂರ್ತಿಯನ್ನು ಮಂದಿರದಲ್ಲಿ ಪ್ರತಿಷ್ಠಾಪಿಸುವ ಬಗ್ಗೆ ಎಲ್ಲೆಡೆ ಮಾಹಿತಿ ಹರಿದಾಡುತ್ತಿದೆ.
ಈ ನಡುವೆ ರಾಮಲಲ್ಲಾನ ಅದ್ಭುತ ಮೂರ್ತಿಗಾಗಿ ಕಲಾವಿದರು ಹೆಚ್ಚಿನ ಶ್ರಮವಹಿಸಿ ರಾಮಲಲ್ಲಾನ ಮೂರ್ತಿ ಕೆತ್ತುವ ಕೆಲಸ ನಡೆಯುತ್ತಿದೆ. ಈಗಿನ ಮಾಹಿತಿ ಪ್ರಕಾರ ರಾಮನ 3ನೇ ಮೂರ್ತಿಯ ಕೆತ್ತನೆ ನಡೆಯುತ್ತಿದ್ದು, ಅದರಲ್ಲಿ ಅದ್ಭುತವಾದ ಒಂದನ್ನು ಆಯ್ಕೆ ಮಾಡಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.
ನೃಪೇಂದ್ರ ಮಿಶ್ರಾ, ರಾಮಮಂದಿರ ನಿರ್ಮಾಣ ಟ್ರಸ್ಟ್ ನ ಮುಖ್ಯಸ್ಥರು ನೀಡಿರುವ ಮಾಹಿತಿ ಪ್ರಕಾರ, ರಾಮನ ಮೂರ್ತಿಯು 51 ಇಂಚು ಇರಲಿದ್ದು, ಅದರಲ್ಲಿ ಶ್ರೀರಾಮನ ಮೂರ್ತಿಯು 4-5 ವರ್ಷದ ಮಗುವಿನ ಹಾಗೆ ಇರಲಿದೆ. ರಾಮನನ್ನು ಕಮಲದ ಮೇಲೆ ಪ್ರತಿಷ್ಠಾಪಿಸಲಿದ್ದು, ಈ ಮೂಲಕ ಒಟ್ಟು 8 ಅಡಿ ಎತ್ತರದ ರಾಮಲಲ್ಲಾನ ಮೂರ್ತಿ ಜನರಿಗೆ ನOಡ ಸಿಗುತ್ತದೆ ಎಂದಿದ್ದಾರೆ.
ಇನ್ನು ಈ ಹಿಂದೆ ನೀಡಿದ ಮಾಹಿತಿಯಂತೆ ಶ್ರೀರಾಮನವಮಿಯಂದು ಶ್ರೀರಾಮನ ಮೂರ್ತಿಯ ಮೇಲೆ ಸೂರ್ಯನ ಬೆಳಕಿನ ಕಿರಣಗಳು ಬೀಳುವಂತೆ ತಂತ್ರಜ್ಞಾನ ಸಿದ್ದವಾಗುತ್ತಿದ್ದು, ರಾಮ ನವಮಿಯಂದು ಮಧ್ಯಾಹ್ನ 12 ಗಂಟೆ ಹೊತ್ತಿಗೆ ಮೂರ್ತಿಯ ಹಣೆಯ ಮೇಲೆ ಸೂರ್ಯನ ಕಿರಣಗಳು ಸ್ಪರ್ಶಿಸುವಂತೆ ಸಿದ್ದತೆ ಮಾಡಲಾಗುತ್ತಿದೆ.
ಈ ಶ್ರೀರಾಮನ ಮೂರು ಮೂರ್ತಿಗಳ ಕೆತ್ತನೆ ಕೆಲಸಗಳು ಅಕ್ಟೋಬರ್ ತಿಂಗಳಲ್ಲಿ ಮುಗಿಯುವ ಹಾಗೆ ಅವಧಿ ನೀಡಲಾಗಿತ್ತು. ಈ ಮೂರ್ತಿಗಳನ್ನು ಬೆಂಗಳೂರು, ಮೈಸೂರು ಹಾಗೂ ಜೈಪುರದಲ್ಲಿ ಕೆತ್ತನೆ ಮಾಡಲು ನೀಡಲಾಗಿದೆ. ಈ ಬಗ್ಗೆ ಶಿಲ್ಪಿಗಳು ಯಾರಿಗೂ ಮಾಹಿತಿ ನೀಡಬಾರದು ಎಂದು ಸೂಚಿಸಲಾಗಿದೆ. ಜೊತೆಗೆ ಅಲ್ಲಿ ಪೊಲೀಸರು, ಸೆಕ್ಯುರಿಟಿ ಗಾರ್ಡ್ ಗಳನ್ನು ಕೂಡ ಕಣ್ಗಾವಲಿಗೆ ಇರಿಸಲಾಗಿದೆ.