ನಂತೂರು ಜಂಕ್ಷನ್ನಿಂದ ಕೆಪಿಟಿ ಜಂಕ್ಷನ್ನವರೆಗೆ 1.6 ಕಿಮೀ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ವೆಹಿಕ್ಯುಲರ್ ಓವರ್ ಪಾಸ್(ವಿಒಪಿ) ನಿರ್ಮಾಣ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ರಸ್ತೆಯ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆಯ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯಲು ಪರಿಸರ ಆಸಕ್ತರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ವಾಹನಗಳು, ಮಂಗಳೂರು ನಗರ ಪ್ರದೇಶಕ್ಕೆ ಬರುವ ವಾಹನಗಳು ಮತ್ತು ಮಂಗಳೂರು ನಗರದಿಂದ ವಿಮಾನ ನಿಲ್ದಾಣ ಮತ್ತು ಇತರೆ ಜಿಲ್ಲಾ ಕೇಂದ್ರಗಳಿಗೆ ಹೋಗುವ ವಾಹನಗಳು ಹಾಗೂ ಮಂಗಳೂರು ನಗರದ ಪೋರ್ಟ್ಗೆ ಬಂದು ಹೋಗುವ ವಾಹನಗಳಿಂದ ಆಗುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ವೆಹಿಕ್ಯುಲರ್ ಓವರ್ಪಾಸ್ ಅನ್ನು ನಿರ್ಮಿಸಿ ಪ್ರಸ್ತಾಪಿತ ರಸ್ತೆಯ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆಯನ್ನು (ಪಾದಚಾರಿ ರಸ್ತೆ) ಮಾಡಲು ಯೋಜನೆ ರೂಪಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅರಣ್ಯ ಇಲಾಖೆಯಿಂದ ಕೆಲವು ವರ್ಷಗಳಿಂದ ನೆಟ್ಟು ಬೆಳೆಸಿದ 602 ಮರಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿಯ ಅಂಗ ಸಂಸ್ಥೆಯಾದ ನ್ಯೂ ಮಂಗಳೂರು ಪೋರ್ಟ್ ರೋಡ್ ಕಂಪೆನಿ ಲಿಮಿಟೆಡ್ ರವರು ಗುರುತಿಸಿರುತ್ತಾರೆ. ಈ 602 ಮರಗಳ ಪೈಕಿ ಸ್ಥಳಾಂತರಿಸಲು ಯೋಗ್ಯವಾದ ಸುಮಾರು 370 ಸಸಿ ಮರಗಳನ್ನು ಸ್ಥಳಾಂತರಿಸಲು ನಿರ್ಧಾರಿಸಲಾಗಿದೆ. ಇನ್ನುಳಿದ 232 ಮರಗಳನ್ನು ಪ್ರಸ್ತಾಪಿತ ವೆಹಿಕ್ಯುಲರ್ ಓವರ್ಪಾಸ್ ಕಾಮಗಾರಿಯ ಸಂಬಂಧ ಕಡಿಯಲೇಬೇಕಾದ ಅನಿವಾರ್ಯತೆ ಕಂಡುಬರುವುದರಿಂದ ಹಾಗೂ ಈ ಮರಗಳನ್ನು ಸ್ಥಳಾಂತರಿಸಲು ಸಾಧ್ಯವಾಗದೇ ಇರುವ ಕಾರಣ ಕಡಿಯುವ ಅನಿವಾರ್ಯತೆ ಇದೆ. ಆದರೆ ಇದಕ್ಕೆ ಪರಿಸರ ಆಸಕ್ತರು ಮರ ಕಡಿಯವಾರದು ಎಂದು ಸಾಮಾಜಿಕಜಾಲಗಳಲ್ಲಿ ಚಳುವಳಿಯನ್ನು ಪ್ರಾರಂಭಿಸಿದ್ದಾರೆ.
ಇ-ಮೈಲ್ ಚಟುವಳಿ ಆರಂಭಿಸಿದ ಪರಿಸರಾಸ್ತಕರು:
ಮರಕಡಿಯದೇ ಕಾಮನಗಾರಿ ನಡೆಯಬೇಕು ಎಂದು ಆಗ್ರಹಿಸಿ ಪರಿಸರ ಆಸಕ್ತರು ಇ-ಮೈಲ್ ಚಳುವಳಿಯನ್ನು ಆರಭಿಸಿದ್ದಾರೆ. ಡಿಸಿಎಫ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಂಗಳೂರುಪಾಲಿಕೆ, ಜಿಲ್ಲಾಡಳಿತ, ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಹಿತ ಸಂಬಂಧಿತ ಅಧಿಕಾರಿಗಳಿಗೆ ಇ-ಮೈಲ್ ಕಳುಹಿಸಲಾಗುತ್ತಿದೆ. ಒಂದೇ ದಿನ ಈವರೆಗೆ ಸುಮಾರು 1500ಕ್ಕೂ ಹೆಚ್ಚಿನ ಇ-ಮೈಲ್ಗಳು ಹೋಗಿದ್ದು, ಜುಲೈ 10 ರೊಳಗೆ ಒಟ್ಟು 5000 ಇ-ಮೈಲ್ ಕಳುಹಿಸುವ ಗುರಿಯನ್ನು ಹೊಂದಲಾಗಿದೆ.
ಜುಲೈ 10ರಂದು ಸಾರ್ವಜನಿಕ ಅಹವಾಲು ಸಭೆ :
ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಯ ಕಲಂ (1) (3) (ಗಿII) 50 ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದಲ್ಲಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಇದೇ ಜುಲೈ 10ರ ಸಂಜೆ 4 ಗಂಟೆಗೆ ಮಂಗಳೂರು ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆ ಕರೆಯಲಾಗಿದೆ.
ಇನ್ನು ಕೆಪಿಟಿ ಮತ್ತು ನಂತೂರು ಜಂಕ್ಷನ್ಗಳಲ್ಲಿ ನಿರಂತರ ಅಪಘಾ ತಗಳು ನಡೆಯುತ್ತಿರುವುದರಿಂದ ಮತ್ತು ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗಿರುವ ಹಿನ್ನೆಲೆಯಲ್ಲಿ ಫ್ಲೈ ಓವರ್ ಅಥವಾ ಓವರ್ಪಾಸ್ ನಿರ್ಮಿಸಬೇಕೆಂದು ಹಲವಾರು ವರ್ಷಗಳಿಂದ ಆಗ್ರಹಗಳು ಕೇಳಿಬಂದಿವೆ. ಪಾಲಿಕೆಯ ಸಾಮಾನ್ಯ ಸಭೆ, ಕೆಡಿಪಿ ಸಭೆ, ಹೆದ್ದಾರಿ ಇಲಾಖೆಯ ಸಭೆಗಳಲ್ಲಿಯೂ ಪ್ರಸ್ತಾವಗೊಂಡಿತ್ತು. ಎರಡೂ ಜಂಕ್ಷನ್ಗಳಲ್ಲಿ ಸಂಚಾರಿ ಪೊಲೀಸ್ರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಕೆಪಿಟಿಯಲ್ಲಿ ಸಂಚಾರ ನಿರ್ವಹಣೆಗೆ ತಾತ್ಕಾಲಿಕ ಪರಿಹಾರಕ್ಕಾಗಿ ಎಪ್ರಿಲ್ನಿಂದ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ನಂತೂರಿನಲ್ಲಿ ಸಿಗ್ನಲ್ ಲೈಟ್ ಅಳವಡಿಸುವ ಚಿಂತನೆ ಇತ್ತಾದರೂ ಅದನ್ನು ಕೈಬಿಡಲಾಗಿದೆ. ವೃತ್ತವನ್ನು ಕಿರಿದು ಮಾಡಲಾಗಿದೆ. ಆದಾಗ್ಯೂ ವಾಹನ ಸಂಚಾರ ಸುಗಮಗೊಂಡಿಲ್ಲ. ಶಾಶ್ವತ ಪರಿಹಾರವಾಗಿ ಓವರ್ಪಾಸ್ ನಿರ್ಮಾಣ ಅತ್ಯವಶ್ಯ ಎಂಬುದು ಸಾರ್ವಜನಿಕರ ಅಭಿಪ್ರಾಯ