ಋಗ್ವೇದ ಕಾಲದ ಕವಿಗಳ ಮನಸ್ಸಿನಲ್ಲಿ ಸಾರ್ವಭೌಮನ ಕಲ್ಪನೆ ಇತ್ತು ಮತ್ತು ವೇದಗಳ ತರವಾಯದ ಗ್ರಂಥಗಳಲ್ಲಿ ಪ್ರಪಂಚದ ಎಲ್ಲ ಭಾಗಗಳಿಗೂ ದಿಗ್ವಿಜಯಮಾಡಲು ಹೊರಟ ರಾಜರು ಬಗ್ಗೆ ಉಲ್ಲೇಖವಿದೆ. ಆದರೆ ಈ ದಾಳಿಗಳಿಂದ ಸೋತ ಜನರ ಪ್ರಾಂತ್ಯಗಳು ಶಾಶ್ವತವಾಗಿ ಸ್ವಾಧೀನ ಕ್ಕೊಳಪಡುತ್ತಿರಲಿಲ್ಲವಾದರೂ ಆಗಾಗ್ಗೆ ಸಣ್ಣ ಪುಟ್ಟ ಜನಾಂಗಗಳು ಸಾಮಂತ ಜನಾಂಗಗಳಾಗಿ, ದಾಳಿ ಮಾಡಿದ ರಾಜನಿಂದ ನೇಮಕಗೊಂಡ ರಾಜರ ಆಳ್ವಿಕೆಗೆ ಒಳಪಡುತ್ತಿದ್ದರು. ಆದರೆ ಕ್ರಿ.ಪೂ. ೬ನೇ ಶತಮಾನದಿಂದ ಭಾರತೀಯ ರಾಜನೀತಿಯಲ್ಲಿ ಹೊಸ ಬೆಳವಣಿಗೆಯನ್ನು ಕಾಣಬಹುವಾಗಿದೆ. ಬ್ರಾಹ್ಮಣ ಗ್ರಂಥಗಳಲ್ಲಿ ಹೇಳಿರುವಂತೆ ‘ಸಾಮ್ರಾಜ್ಯ’ವೆಂಬ ಪ್ರಭುತ್ವವಿದ್ದ ಪೂರ್ವಭಾರತದಲ್ಲಿ ಅನೇಕ ಬಲಿಷ್ಠ ರಾಜ್ಯಗಳು ಅಭಿವೃದ್ಧಿಗೊಂಡವು, ಈ ರಾಜ್ಯಗಳು ಕ್ರಮೇಣ ನೆರೆಹೊರೆಯ ರಾಜ್ಯ ಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದವು. ಅಂತಿಮವಾಗಿ ಒಂದು ದೊಡ್ಡ ರಾಜ್ಯ ಇವುಗಳೆಲ್ಲವನ್ನೂ ವಶಪಡಿಸಿಕೊಂಡು, ಕೊನೆಗೆ ಹಿಂದೂಕುಷ್ ಪರ್ವತಗಳಿಂದ ಮೈಸೂರಿನ ಉತ್ತರಜಿಲ್ಲೆ ಗಳವರೆಗೆ ವ್ಯಾಪಿಸಿಕೊಂಡು ಒಂದು ಮಹಾಚಕ್ರಾಧಿಪತ್ಯಕ್ಕೆ ಮೂಲವಾಯಿತು. ಈ ಗಮನಾರ್ಹವಾದ ರಾಜಕೀಯ ಪರಿವರ್ತನೆಯ ಇತಿಹಾಸವನ್ನು ಪರಿಶೀಲಿಸುವುದಕ್ಕೆ ಮೊದಲು ಬ್ರಾಹ್ಮಣಗಳ ಹಾಗೂ ‘ ಉಪನಿಷತ್ಗಳ ಕಾಲದಿಂದ ಭಾರತದ ನಕ್ಷೆಯಲ್ಲಾದ ಬದಲಾವಣೆಗಳನ್ನು ಗಮನಿಸುವುದು ಆವಶ್ಯಕ.
ಬ್ರಾಹ್ಮಣ ಗ್ರಂಥಗಳ ಕಾಲದ ಆರ್ಯರಿಗೆ ತಿಳಿದಿದ್ದ ವಿಶಾಲವಾದ ಪ್ರದೇಶವನ್ನು ‘ಐತ್ತರೇಯ ಬ್ರಾಹ್ಮಣ’ದಲ್ಲಿ ವಿವರಿಸಲಾಗಿದೆ. ಆರ್ಯಪ್ರದೇಶದ ಎಲ್ಲೆಯ ಹಿಮಾಲಯದ ಆಚಿನ ಉತ್ತರ ಕುರು ಗಳ ಮತ್ತು ಉತ್ತರ ಮಾದ್ರರ ದೇಶಗಳಿಂದ, ಛಂಬಲ್ ಮತ್ತು ಯಮುನಾ ನದಿಗಳ ದಕ್ಷಿಣದಲ್ಲಿರುವ ಸತ್ಪತರ (ಭೋಜರ) ನಾಡಿನವರೆಗೂ, ಪಶ್ಚಿಮದಲ್ಲಿ ನೀಚರ ಮತ್ತು ಅಪಾಚ್ಯರ ಪ್ರಾಂತ್ಯಗಳಿಂದ ಪೂರ್ವದಲ್ಲಿ ಪ್ರಾಚ್ಯರ ದೇಶಗಳವರೆವಿಗೂ ವ್ಯಾಪಿಸಿದ್ದಿತು. ನೀಚ್ಯ ಹಾಗೂ ಪ್ರಾಚ್ಯರ ಸರಿಯಾದ ಭಾರತದ ಸ್ಥಾನವನ್ನು ನಿರ್ಧರಿಸಲಾಗುವುದಿಲ್ಲ. ಆದರೆ ಗ್ರೀಕ್ ಬರೆಹಗಾರರು ಪ್ರಾ ಎಂದು ಕರೆದ, ಅಂದರೆ ಮಗಧ ಹಾಗೂ ಅದರ ಸುತ್ತಮುತ್ತಣ ಪ್ರಾಂತ್ಯಜರೇ ನಿಸ್ಸಂದೇಹವಾಗಿ ಪ್ರಾಚ್ಯ ಜನರಾಗಿರುತ್ತಾರೆ, ಮಗಧದ ಹೊರಗಡೆ ಉತ್ತರ ಬಂಗಾಳದ ಪುಂಡ್ರರು ಮತ್ತು ಮಧ್ಯ ಹಾಗೂ ಪೂರ್ವಜರದ ವಂಗರು ವಾಸಿಸುತ್ತಿದ್ದರು. ಇವರೆಲ್ಲರೂ ಆರ್ಯಚಕ್ರಾಧಿಪತ್ಯದ ಹೊರಭಾಗದಲ್ಲಿದ್ದವರು. ಬ್ರಾಹ್ಮಣ ದಲ್ಲಿ ಮಾಗಧರ ಬಗ್ಗೆ ಉಲ್ಲೇಖಿತವಾಗಿಲ್ಲ. ಆದರೆ ಪ್ರಾಯಶಃ ಅರಣ್ಯಕಗಳಲ್ಲಿ ಅವರ ಬಗ್ಗೆ ಉಲ್ಲೇಖವಿದೆ ದಕ್ಷಿಣದಲ್ಲಿ ಆರ್ಯಪ್ರದೇಶಗಳ ಭೋಜರಲ್ಲದ ಗೋದಾವರಿ ಕಣಿವೆಯ ಅಂಧ್ರರನ್ನೂ ಹಾಗೂ ವಿಂಧ್ಯಪರ್ವತದ ಕಾಡುಗಳಲ್ಲಿನ ಹಲವು ಆದಿವಾಸಿ ಜನಾಂಗಗಳನ್ನೂ ಕಾಣುತ್ತೇವೆ.
ಬ್ರಾಹ್ಮಣ ಧರ್ಮದ ಹಿಂದೂಗಳ ಅನಂತ ಕಾಲದ ಗ್ರಂಥಗಳು ಮತ್ತು ಬೌದ್ಧಮತೀಯರ ಪವಿತ್ರಗ್ರಂಥಗಳು ಹಲವು ಹೊಸ ರಾಜ್ಯಗಳನ್ನು ಹೆಸರಿಸುತ್ತವೆ. ಉದಾಹರಣೆಗೆ, ಒರಿಸ್ಸಾದಲ್ಲಿ ವೈತರಣೀ ನದಿಯಿಂದ ಗೋದಾವರಿಯ ಪಕ್ಕದವರೆಗೆ ಹರಡಿದ್ದ ಕಳಿಂಗ, ಮೇಲಣ ಗೋದಾವರಿಯ ಅತ್ಮಾಕ ಮತ್ತು ಮೂಲಕ, ಮಾಳ್ವದಲ್ಲಿ ಆವಂತಿ, ಕಾಥೇವಾಡದಲ್ಲಿ ಸೌರಾಷ್ಟ್ರ, ಸಿಂಧೂ ಕೆಳಗಣ ಕಣಿವೆಯಲ್ಲಿನ ಸಿಂಧೂ ಸೌವೀರ ಮುಂತಾದುವು. ಬೌದ್ಧ ಮತದ ಮೊದಲ ಗ್ರಂಥವೊಂದರಲ್ಲಿ ಬೌದ್ಧ ಮತದ ಅಭ್ಯುದಯಕ್ಕೆ ಸ್ವಲ್ಪ ಮೊದಲು ಕಾಬೂಲ್ ಕಣಿವೆಯಿಂದ ಗೋದಾವರಿಯ ದಂಡೆಯವರೆಗೆ ಹರಡಿದ್ದ ಹದಿನಾರು ದೊಡ್ಡ ದೇಶಗಳ ಹೆಸರುಗಳಿವೆ. ಆ ದೇಶಗಳು ಯಾವುವೆಂದರೆ : ಅಂಗ (ಪೂರ್ವ ಬಿಹಾರ್), ಮಗಧ (ದಕ್ಷಿಣ ಬಿಹಾರ್), ಕಾಶಿ (ಬನಾರಸ್), ಕೋಸಲ (ಔದ್), ವೃಷ್ಟಿ (ಉತ್ತರ ಬಿಹಾರ್), ಮಲ್ಲ (ಗೋರಖ್ ಪರ ಜಿಲ್ಲೆ), ಚೇದಿ (ನರ್ಮದಾ ಮತ್ತು ಯಮುನಾ ನದಿಗಳ ಮಧ್ಯಭಾಗ), ವತ್ಸ (ಅಲಹಾಬಾದ್ ಪ್ರಾಂತ್ಯ), ಕುರು (ತಾನೇಶ್ವರ್, ದೆಹಲಿ ಮತ್ತು ಮಾರತ್ ಜಿಲ್ಲೆಗಳು), ಪಾಂಚಾಲ (ಬರೈಲಿ, ಬುದ್ನ್ ಮತ್ತು ಫರುಕಾಬಾದ್ ಜಿಲ್ಲೆಗಳು), ಮತೃ (ಜಯಪುರ), ಶೂರಸೇನ (ಮಧುರಾ), ಆಶಾಕ (ಗೋದಾವರಿ ದಂಡೆಯಮೇಲೆ), ಅವಂತಿ (ಮಾಳವದಲ್ಲಿ), ಗಾಂಧಾರ (ಪೆಷಾವರ್ ಮತ್ತು ರಾವಲ್ ಪಿಂಡಿ ಜಿಲ್ಲೆಗಳು) ಮತ್ತು ಕಾಂಬೋಜ (ನೈರುತ್ಯ ಮತ್ತು ಕಾಫೀರಿಸ್ತಾನದ ಭಾಗಗಳು), ಕುರು ಮತ್ತು ಪಾಂಚಾಲರ ಜಯಪ್ರದ ದಿನಗಳು ಇಷ್ಟು ಹೊತ್ತಿಗೆ ಮುಗಿದು ರಾಜಕೀಯ ಪ್ರಾಮುಖ್ಯ ಪೂರ್ವಕ್ಕೆ ಬದಲಾಯಿಸಿದ್ದಿತು.
ಮಗಧ ರಾಜ್ಯದ ಏಳಿಗೆಯ ಪ್ರಾರಂಭದಲ್ಲಿ ನಾಗರಿಕತೆ
ಆಡಳಿತ:
ಅರಸುತನ ಬಹುಮಟ್ಟಿಗೆ ವಂಶ ಪಾರಂಪರಾಗತಉತ್ತರಾಧಿಕಾರಿ ಯಾರೆಂಬುದನ್ನು ಘೋಷಿಸುತ್ತಿದ್ದನ ಬಗ್ಗೆ ಚುನಾವಣೆ ನಡೆದ ಸಂದರ್ಭಗಳನ್ನು ಉಲ್ಲೇಖಿಸ ದವರಿಗೆ ಮಾತ್ರ ಮಿಸಲಾಗಿದ್ದರೂ, ಕೆಲವು ಸಂಸ್ಥೆ ತ್ರಿದ್ದರು. ಪಂಜಾದ್ ಜಿಲ್ಲೆಯೊಂದರಲ್ಲಿ ಅತ್ಯಂತ ತ್ತಿದ್ದರು ಎಂದು ಗ್ರೀಕ್ ಇತಿಹಾಸಕಾರನೊಬ್ಬ ಸ್ವಾಮ್ಯವಾಗಿಯೇ ಉಳಿದಿರಲಿಲ್ಲ: ಆ ಕಾಲದ ಬಲಿ ರಾಜ್ಯಗಳ ಬೆಳವಣಿಗೆ ಮತ್ತು ಹೊಸ ಪ್ರದೇಶಗಳನ್ನು ಒಳಗೊಂಡಿದೆ. ಈ ಅವಧಿಯ ಆರಂಭದಲ್ಲಾಗಲಿ ಅಥವಾ ಅಂತ್ಯದಲ್ಲಾಗಲಿ, ಪೂರ್ವ ಮತ್ತು ಪಶ್ಚಿಮಭಾರತದಲ್ಲಿ ರಾಜಕೀಯ ವ್ಯವಸ್ಥೆಯಲ್ಲಿ ರಾಜತಂತ್ರವೊಂದೇ (Monarchy) ಸರ್ಕಾರದ ಸ್ವರೂಪವಾಗಿರಲಿಲ್ಲ. ದಕ್ಷಿಣ ಬಿಹಾರ್ ಮತ್ತು ಔದ್ ಹಾಗೂ ಮಾಳವ ಮತ್ತು ಪಂಜಾಬ್ಗಳಲ್ಲಿ, ನೆರೆಹೊರೆಯವರಿಗೆ ಹಾನಿಯನ್ನುಂಟುಮಾಡಿಯಾದರೂ ತಮ್ಮ ಅಧಿಕಾರವನ್ನು ವಿಸ್ತರಿಸಲು ಮತ್ತು ನಿಜವಾದ ಚಕ್ರಾಧಿಪತ್ಯಗಳನ್ನು ಸ್ಥಾಪಿಸಲು ಹೋರಾಡುತ್ತಿದ್ದ ಬಲಿಷ್ಠ ರಾಜರು ಇದ್ದುದರ ಸಂದೇಹವಿಲ್ಲ. ಆದರೆ, ಅಂತಹ ರಾಜರು ಸ್ವತಂತ್ರರೂ ಯುದ್ಧ ಪ್ರಿಯರೂ ಆದ ಮತ್ತು ತಮ್ಮಹಿರಿಯರಿಂದಲೇ ಆಳಲ್ಪಡುತ್ತಿದ್ದರು.
ಅರಸುತನ ಬಹುಮಟ್ಟಿಗೆ ವಂಶಪಾರಂಪರ್ಯವಾಗಿತ್ತು ಮತ್ತು ಕೆಲವು ವೇಳೆ ಆಳರಸರು ತನ್ನ ಉತ್ತರಾಧಿಕಾರಿ ಯಾರೆಂಬುದನ್ನು ಘೋಷಿಸುತ್ತಿದ್ದನು, ಆದರೆ, ಚರಿತ್ರಕಾರರೆಲ್ಲಾ ಅರಸನ ನೇಮಕದ ಬಗ್ಗೆ ಚುನಾವಣೆ ನಡೆದ ಸಂದರ್ಭಗಳನ್ನು ಉಲ್ಲೇಖಿಸುತ್ತಾರೆ. ಈ ಆಯ್ಕೆಯು ಕೇವಲ ರಾಜಮನೆತನ ದವರಿಗೆ ಮಾತ್ರ ಮೀಸಲಾಗಿದ್ದರೂ, ಕೆಲವು ಸಂದರ್ಭಗಳಲ್ಲಿ ಹೊರಗಡೆಯಿಂದಲೂ ಆರಿಸಲ್ಪಡು ತ್ರಿದ್ದರು. ಪಂಜಾಬ್ ಜಿಲ್ಲೆಯೊಂದರಲ್ಲಿ ಅತ್ಯಂತ ಸುಂದರ ಯುವಕನನ್ನು ರಾಜನನ್ನಾಗಿ ನೇಮಿಸು ತಿದ್ದರು ಎಂದು ಗ್ರೀಕ್ ಇತಿಹಾಸಕಾರನೊಬ್ಬ ಹೇಳಿದ್ದಾನೆ. ಅರಸುತನವು ಕೇವಲ ಕ್ಷತ್ರಿಯರ ಸ್ವಾಮ್ಯವಾಗಿಯೇ ಉಳಿದಿರಲಿಲ್ಲ: ಆ ಕಾಲದ ಬಲಿಷ್ಟ ರಾಜ್ಯವೊಂದರಲ್ಲಿ ಶೂದ್ರವಂಶದ ಅರಸರಿದ್ದರು.
ರಾಜ್ಯಗಳ ಬೆಳವಣಿಗೆ ಮತ್ತು ಹೊಸ ಪ್ರದೇಶಗಳ ಸೇರ್ಪಡೆಯಿಂದಾಗಿ, ರಾಜಪ್ರತಿನಿಧಿಯ ಮತ್ತು ಪ್ರಾಂತ್ಯಾಧಿಕಾರಿಯ ಅಧಿಕಾರವು ಹೆಚ್ಚು ಹೆಚ್ಚು ಪ್ರಾಮುಖ್ಯಕ್ಕೆ ಬಂದಿತು. ಹಲವಾರು ಜಾತಕ ಕಥೆಗಳಿಂದ ಮತ್ತು ರಾಮಾಯಣದಿಂದ ನಮಗೆ ತಿಳಿದುಬರುವಂತೆ ಕಾಪಿನೀಸಲದಲ್ಲಿ ರಾಜ್ಯದ ಇತರ ಅಧಿಕಾರಿಗಳ ಪೈಕಿ ಫರೋಹಿತನು ವಿಶಿಷ್ಟ ಸ್ಥಾನ ಹೊಂದಿದ್ದನು. ಮತ್ತೊಂದು ಕಡೆ, ಕುರುಪಾಂಚಾಲ ಮತ್ತು ಮತ್ತ್ವ ದೇಶಗಳಲ್ಲಿ ರಾಜನ ಬಂದು ಅಥವಾ ರಾಜಕುಲಕ್ಕೆ ಸೇರಿದ ಸೇನಾಪತಿ ಹೊಂದುತ್ತಿದ್ದ ಸ್ಥಾನ ದಿಂದ ಪುರೋಹಿತನು ಮುನ್ನೆಲೆಗೆ ಬರುತ್ತಿದ್ದನು.
ಮುಂದುವರೆಯುತ್ತದೆ..