ಬೆಳಗಾಯಿತು ಎಂದರೆ ಬಿರುಸಿನಿಂದ ಎಲ್ಲರು ತಮ್ಮ ನಿತ್ಯ ಕಾರ್ಯಗಳನ್ನು ಮುಗಿಸಿ ಕೆಲವರು ಕೆಲಸಕ್ಕೆ, ಇನ್ನು ಕೆಲವರು ಶಾಲೆ, ಕಾಲೇಜಿಗೆ ಹೊರಡುವುದು. ಪ್ರತಿ ದಿನ ತರಾತುರಿಯಲ್ಲಿ ಹೊರಾಡುವಾಗ ಒಂದಿಷ್ಟು ಗೊಂದಲ. ಸರಿಯಾದ ಸಮಯಕ್ಕೆ ಬಸ್ಸು ಸಿಗತ್ತದೊ, ಸಿಕ್ಕರು ತುಂಬಿ ತುಳುಕಿದರೆ ಉಸಿರಾಡವುದು ಕೂಡ ಕಷ್ಟ. ಇದು ದಿನನಿತ್ಯವಾಗಿ ಪ್ರಯಾಣಿಸುವ ಪ್ರಯಾಣಿಕರು ಎದುರಿಸುವ ಸಮಸ್ಯೆ.
ಇತ್ತ ಬಸ್ಸಿನವರು ಸರಿಯಾಗಿ ಸಮಯದ ಪರಿಪಾಲನೆಯ ಚಕ್ಕರಲ್ಲಿ ಅಥವಾ ಇತರ ಬಸ್ಸಿನೊಂದಿಗಿನ ಪೈಪೋಟಿಯಿಂದ ಕೆಲವೊಮ್ಮೆ ಬಸ್ಸು ಹತ್ತುತ್ತಿರುವಾಗಲೇ ರೈಟ್ ಎಂದು ಹೇಳುತ್ತಾರೆ. ಇದು ಅಪಾಯಕ್ಕೆ ಎಡೆಮಾಡಿಕೊಟ್ಟಂತಿರುತ್ತದೆ. ಕಡಲ ತಡಿ ಮಂಗಳೂರಿನಲ್ಲಿ ಇದು ನಿತ್ಯದ ಕಥೆ.
ಹೆಚ್ಚಾಗಿ ಖಾಸಗಿ ಬಸ್ಸುಗಳ ದರ್ಬರ್ ಇರುವಲ್ಲಿ ಸರ್ವೇ ಸಾಮಾನ್ಯವಾಗಿ ಇಂತಹ ಘಟನೆಗಳು ನಡೆಯುತ್ತಿರುತ್ತದೆ. ಓವರ್ ಟೇಕ್ ಮಾಡಲು ಹೋಗಿ ಅಪಘಾತಗಳು ನಡೆದಿರುವ ಉದಾಹರಣೆಳು ಬೇಕಾದಿಷ್ಟು ಇವೆ. ಊರು ತುಂಬಾ ಖಾಸಗಿ ಬಸ್ಸುಗಳೇ ಓಡಾಡುತ್ತಿರುವಾಗ ಒಂದು ರೀತಿಯ ಪೈಪೋಟಿಯು ಕೂಡಾ ಬಸ್ಸುಗಳ ಮಧ್ಯೆ ನಡೆಸುತ್ತಾರೆ. ಈ ಪೈಪೋಟಿಗೆ ಬೆಲೆ ತೆತ್ತ ಬೇಕಾಗಿರುವುದು ಮಾತ್ರ ಪ್ರಯಾಣಿಕರು.
ಇನ್ನು ನಗರದಲ್ಲಿ ಬೆರಣಿಕೆಯಷ್ಟು ಮಾತ್ರ ಸರ್ಕಾರಿ ಬಸ್ಸುಗಳು ಒಡಾಡುತ್ತಿವೆ. ಮೊದಲಿನಿಂದಲೇ ಸರ್ಕಾರಿ ಬಸ್ಸುಗಳಿಗೆ ಬೇಡಿಕೆ ಇದ್ದರು ಕೂಡ ಸರ್ಕಾರ ಹೆಚ್ಚುವರಿ ಸರ್ಕಾರಿ ಬಸ್ಸುಗಳನ್ನು ಮಂಗಳೂರಿಗೆ ಪರಿಚಯಿಸುತ್ತಿಲ್ಲ. ಇನ್ನು ಕೆಲವು ಮಾಧ್ಯಮಗಳ ವರದಿಯ ಪ್ರಕಾರ ಕಾಣದ ಕೈಗಳು ಸರ್ಕಾರಿ ಬಸ್ಸುಗಳ ಮಂಜೂರಾತಿಗೆ ತಡೆಯೊಡ್ಡುತ್ತಿದೆ ಎಂದು ವರದಿಯನ್ನು ಪ್ರಕಟಿಸಿದೆ.
ಸಮಸ್ಯೆ ಎನೇ ಇರಲಿ ಬೆಳೆಯುತ್ತಿರುವ ನಗರಕ್ಕೆ ಸರ್ಕಾರಿ ಬಸ್ಸುಗಳ ಅವಶ್ಯಕತೆ ಇದೆ. ಗಾತ್ರದಲ್ಲಿ ಖಾಸಗಿ ಬಸ್ಸಿಗಿಂತ ಕೊಂಚ ಅಗಲ ಹಾಗೂ ಉದ್ದವಿದ್ದು ಪ್ರಯಾಣದ ಸಂದರ್ಭದಲ್ಲಿ ನರಕಯಾತನೆಯ ಅನುಭವಾಗುತ್ತಿಲ್ಲ. ಸರ್ಕಾರಿ ಬಸ್ಸುಗಳಿಗೆ ಯಾರ ಜೋತೆನೂ ಪೈಪೋಟಿ ಅಥವಾ ಓವರ್ ಟೇಕ್ ಮಾಡುವ ಅನಿವಾರ್ಯತೆನೂ ಇಲ್ಲ.
ನಗರಗಳಲ್ಲಿ ನಾಗಾಲೋಟದಿಂದ ಓಡಾಡುವ ಖಾಸಗಿ ಬಸ್ಸುಗಳು, ಜನರ ಪ್ರಾಣದ ಜೋತೆ ಜೆಲ್ಲಾಟವಾಡುವ ಬಸ್ಸುಗಳ ಹಾರಾಟಕ್ಕೆ ಕಡಿವಾಣ ಹಾಕಲೆ ಬೇಕಾಗಿದೆ.