“ಹಿಂದೂ” ಒಂದು ಮಹಾನದಿ
ಇದು ನಿರ್ವಿವಾದದ ವಿಷಯ. ಹಿಂದೂ ಧರ್ಮವು ಮೋನಿಯರ್ ವಿಲಿಯಮ್ಸ್ ಹೇಳಿದಂತೆ ಒಂದು ಸರಳ ಹೊಳೆ ಅಥವಾ ನದಿ ಅಲ್ಲ; ಹಲವು ನದಿಗಳನ್ನು ಕೂಡಿಸಿಕೊಂಡು ಹರಿಯುವ ಗಂಗೆಯಂತೆ ಮಹಾನದಿ, ಸತ್ಯವು ಬಹುಮುಖಿ ಎಂಬ ಅರಿವು ಆ ಸಿದ್ಧಾಂತದಲ್ಲೇ ಇರುವುದರಿಂದ ಸಹನೆ ಅದರ ಪ್ರಮುಖ ಗುಣ, ಶೈವ, ವೈಷ್ಣವ, ಶಾಕ್ತ ಪಂಥಗಳಿಗಾಗಲಿ ಶಂಕರ, ರಾಮಾನುಜ, ಮಧ್ವ, ವಲ್ಲಭಾಚಾರರಂಥ ತತ್ತ್ವಜ್ಞರಿಗಾಗಲಿ ಬಸವ, ಜ್ಞಾನೇಶ್ವರ್, ಕನಕದಾಸ, ಪುರಂದರದಾಸ, ಮೀರಾರಂಥ ಭಕ್ತರಿಗಾಗಲೀ, ದಯಾನಂದ ಸರಸ್ವತಿ, ರಾಮಕೃಷ್ಣ ಪರಮಹಂಸ, ಅರಬಿಂದೋರಂಥ ಸಾಧಕರಿಗಾಗಲಿ, ವೇದಗಳೇ ಮೂಲ ಸ್ಫೂರ್ತಿ. ಆ ಮಹನೀಯರಲ್ಲಿ ಒಂದಿಬ್ಬರ ಮಾತುಗಳಲ್ಲಿ ಅಕಸ್ಮಾತ್ ವೇದಗಳ ಖಂಡನೆ ಬಂದಿದ್ದರೆ ಅದು ಸಾರಾಸಗಟಾದ ಖಂಡನೆ ಅಲ್ಲ; ವೇದಗಳನ್ನು ಬಾಯಲ್ಲಿ ಪಠಿಸುತ್ತ ಅನಾಚಾರದ ಬದುಕನ್ನು ಬದುಕುತ್ತಿದ್ದವರ ಖಂಡನೆ ಮಾತ್ರ ಇದು ಮುಖ್ಯ ನಮಗೆ, ವೇದಗಳು ಹಿಂದೂಧರ್ಮದ ಸಿದ್ಧಾಂತ ಮತ್ತು ಮತಾಚಾರಗಳಿಗೆ ಅಡಿಗಲ್ಲು ಎಂಬುದನ್ನು ಸರ್ವೋಚ್ಚ ನ್ಯಾಯಾಲಯದ ಪೂರ್ಣಪೀಠವೇ ಒಪ್ಪಿದೆ. ವೇದಗಳಲ್ಲಿ ಏನಿದೆ ಎಂಬುದು ಮುಖ್ಯ. ಮುಂದೆ ಅವುಗಳನ್ನು ಅವಲಂಬಿಸಿ ಬಂದಿರುವ ಸ್ಮೃತಿ, ವ್ಯಾಖ್ಯಾನಗಳಲ್ಲಿ ಏನಿದೆ ಎಂಬುದು ಅಲ್ಲ. ಬ್ರಾಹ್ಮಣರ ಜೀವನ ವಿಧಾನವೇ ಹಿಂದೂಧರ್ಮ ಎಂಬಂತಹ ಭ್ರಮಾಮೂಲದ ಭಾವನೆಯನ್ನು ನಮ್ಮ ಮನಸ್ಸಿನಿಂದ ಕಿತ್ತುಹಾಕುವುದು ಅಗತ್ಯವಾಗಿದೆ. ಈ ಭ್ರಮೆಯನ್ನು ತಮ್ಮ ಆಡಳಿತ ಮತ್ತು ಧರ್ಮಗಳನ್ನು ಭಾರತದಲ್ಲಿ ಆಳವಾಗಿ ಬೇರೂರಿಸಲು ಬ್ರಿಟಿಷರು ಬಿತ್ತಿದರು. ಬರೀ ಬ್ರಾಹ್ಮಣರೇ ಹಿಂದೂ ಸಮುದಾಯವಲ್ಲ. ಹಿಂದೂ ಸಮುದಾಯದಲ್ಲಿ ದಲಿತರಿಂದ ಹಿಡಿದು ಅನೇಕ ವರ್ಗಗಳಿವೆ.
ಹಿಂದೂ ಧರ್ಮದಲ್ಲಿ ಪರಿಸರ ಮತ್ತು ಆಚರಣೆಗಳ ಸಮ್ಮಿಲನ
ಈ ಲೇಖನದಲ್ಲಿ ಹಿಂದೂ ಧರ್ಮದಲ್ಲಿರುವ ಆಚರಣೆಗಳು ಹೇಗೆ ಪರಿಸರದ ಮೇಲೆ ಅವಲಂಬಿತವಾಗಿವೆ ಎಂಬುದನ್ನು ತಿಳಿಯಲಿದ್ದೆವೆ. ನಮ್ಮ ಧರ್ಮದಲ್ಲಿ ನಮ್ಮ ಆಚರಣೆಗಳು ವೈಜ್ಞಾನಿಕವಾಗಿ ಎಷ್ಟು ಸರಿ ಎಂದು ನಿಖರವಾಗುತ್ತಿಯೋ ಪರಿಸರದ ಮೇಲೆಯು ಅಷ್ಟೇ ಅವಲಂಬಿತವಾಗಿದೆ ಎಂಬುದು ಸತ್ಯ.
ಅದರ ಹಲವಾರು ಉದಾಹರಣೆಗಳು ನಮ್ಮ ಗಮನಕ್ಕೆ ಬಾರದಿದ್ದರೂ ಸಹ ನಾವು ಅದನ್ನು ಅನುಕರಣೆ ಮಾಡುತ್ತಿರುತ್ತೆವೆ. ಇವು ಇಂದು ನಿನ್ನೆಯ ಆಚರಣೆ ಅಥವಾ ಪದ್ದತಿಗಳಲ್ಲ ಅನಾದಿ ಕಾಲದಿಂದಲೂ ಅವ್ಯಾಹತವಾಗಿ ನಡೆದುಕೊಂಡು ಬಂದ ಅವಿಚ್ಛಿನ್ನ ಪರಂಪರೆ ತ್ರೇತಾಯುಗ, ದ್ವಾಪರಾದಿ ಯುಗಗಳಿಂದ ನಮ್ಮ ಆರಾಧನೆಗಳು ನಮ್ಮ ಸುತ್ತ ಮುತ್ತಲಿನ ಕಾಡು ಬೆಟ್ಟ ಗುಡ್ಡ ಮರ ಗಿಡಗಳನ್ನು ಅವಲಂಬಿತವಾಗಿಯೇ ನಡೆದು ಕೊಂಡು ಬಂದಿವೆ ಅದಕ್ಕೆ ಪೂರಕವಾಗಿ ರಾಮಾಯಣ ಮಹಾಭಾರತಾದಿ ಗ್ರಂಥದಲ್ಲಿ ಮತ್ತು ಅನೇಕ ಪುರಾಣದಲ್ಲಿ ಪ್ರಕೃತಿಯ ಆರಾಧನೆಯ ಕತೆಗಳನ್ನು ಮಹತ್ವವನ್ನು ತಿಳಿದಿದ್ದೆವೆ, ಅದೇ ಪರಂಪರೆ ಮುಂದುವರೆದು ಮುಂದೆ ಹರಪ್ಪಾ ಸಂಸ್ಕೃತಿಯಲ್ಲೂ ಪ್ರಕೃತಿಯನ್ನೇ ಅವರು ಸಹ ದೈವವೆಂದು ನಂಬಿ ಮರ ಗಿಡ ಆಕಾಶ ಅಗ್ನಿಯನ್ನು ದೇವರೆಂದು ಮತ್ತು ಪ್ರಾಣಿಗಳಲ್ಲಿಯೂ ಸಹ ದೇವರನ್ನು ಕಾಣಲು ಪ್ರಾರಂಭಿಸಿದರು ಅದಕ್ಕೆ ಉದಾಹರಣೆಯಾಗಿ ಪಶುಪತಿಯನ್ನು ಮತ್ತು ಎಕಶೃಂಗಿಯನ್ನು ಪೂಜಿಸುತ್ತಿದ್ದ ಉದಾಹರಣೆಯನ್ನು ಕಾಣುತ್ತೆವೆ. ಅದೇ ಮುಂದುವರೆದಂತೆ ವೇದಿಕ ಸಂಸ್ಕೃತಿಯಲ್ಲಯೂ ಪ್ರಕೃತಿ ಹಾಗೂ ಪುರುಷನ ಆರಾಧನೆಗಳನ್ನು ಕಾಣುತ್ತವೆ. ಸೂರ್ಯ,ಅಗ್ನಿ ವಾಯು, ಆಕಾಶ, ಜಲವೆಂಬ ಪಂಚ ಮಹಾಭೂತಗಳ ಪರಿಕಲ್ಪನೆ ಹುಟ್ಟಿಕೊಂಡು ಅದು ಈ 21 ನೇ ಶತಮಾನದಲ್ಲಿಯೂ ಆಚರಣೆಯಲ್ಲಿದೆ ಎಂದರೆ ನಮ್ಮ ಆಚರಣೆಗಳಲ್ಲಿನ ವಿಶ್ವಾಸ ಎಂತಹದ್ದು ಎಂದು ತೋರಿಸುತ್ತದೆ.
ಮುಂದುವರೆಯುತ್ತದೆ….