ಪ್ಯಾರಿಸ್: ಕಳೆದ ಮೇ 29 ರಂದು 17 ವರ್ಷದ ಮುಸ್ಲಿಂ ಯುವಕನನ್ನು ಪೋಲೀಸ್ ಅಧಿಕಾರಿಯೊಬ್ಬ ಹತ್ಯೆ ಮಾಡಿದ ನಂತರ ಭುಗಿಲೆದ್ದ ಹಿಂಸಾಚಾರ ಐದನೇ ದಿನಾದ ಇನ್ನೂ ನಿಂತಿಲ್ಲ. ನಿನ್ನೆ ರಾತ್ರಿ ಮುಸ್ಲಿಂ ಪ್ರತಿಭಟನಾಕಾರರು ಪ್ಯಾರಿಸ್ ನ ದಕ್ಷಿಣ ಉಪನಗರದ ಮೇಯರ್ ವಿನ್ಸೆಂಟ್ ಜೀನ್ ಬ್ರನ್ ಅವರ ಮನೆಗೆ ರಾತ್ರಿ ಕಾರು ನುಗ್ಗಿಸಿ ಬೆಂಕಿ ಹಚ್ಚಿದ್ದಾರೆ.
ಹತ್ಯೆಗೀಡಾದ ಯುವಕ ನೆಹಲ್ ಟ್ರಾಫಿಕ್ ಸಿಗ್ನಲ್ ಗೆ ಕಾರು ನಿಲ್ಲಿಸದೆ ನಿಯಮಗಳನ್ನು ಉಲ್ಲಂಘಿಸಿಕೊಂಡು ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಆಗ ಪೋಲೀಸ್ ಅಧಿಕಾರಿ ತಡೆದಿದ್ದಾರೆ. ಆದರೂ ಆತ ವಾಹನ ನಿಲ್ಲಿಸದೆ ಚಲಾಯಿಸಿದ್ದಾನೆ. ಸಂಭಾವ್ಯ ಧಾಳಿ ಇರಬಹುದೆಂದು ಇದನ್ನು ತಡೆಯಲು ಪೋಲೀಸ್ ಅಧಿಕಾರಿ ಗುಂಡು ಹಾರಿಸಿದಾಗ ಯುವಕ ಮೃತಪಟ್ಟಿದ್ದಾನೆ.
ಆದರೆ ಈ ಸಮಯದಲ್ಲಿ ಮೇಯರ್ ಅವರು ಟೌನ್ ಹಾಲ್ ನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಬೆಂಕಿ ಹಚ್ಚಿದಾಗ ಮೇಯರ್ ಅವರ ಪತ್ನಿ ಮತ್ತು ಐದು ಮತ್ತು ಏಳು ವರ್ಷ ವಯಸ್ಸಿನ ಇಬ್ಬರು ಮಕ್ಕಳು ಮಲಗಿದ್ದರು. ಬೆಂಕಿ ಹಚ್ಚಿದ ನಂತರ ಮೇಯರ್ ಪತ್ನಿ ಮತ್ತು ಇಬ್ಬರು ಮಕ್ಕಳು ಮನೆಯ ಹಿಂಬಾಗಿಲನ ಉದ್ಯಾನವನದ ಮೂಲಕ ಹೊರಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೇಯರ್ ವಿನ್ಸೆಂಟ್ ಜೀನ್ಬ್ರನ್, ಈ ಘಟನೆಯನ್ನು ದುಷ್ಕರ್ಮಿಗಳಿಂದ “ನನ್ನ ಮತ್ತು ಕುಟುಂಬದವರ ಹತ್ಯೆ ಯತ್ನ” ಎಂದು ಹೇಳಿದ್ದಾರೆ ಮತ್ತು ಅಧಿಕಾರಿಗಳು ಅದನ್ನು ಕೊಲೆಯ ಪ್ರಯತ್ನವೆಂದು ಪರಿಗಣಿಸುತ್ತಿದ್ದಾರೆ ಎಂದು ಹೇಳಿದರು.
ದಂಗೆಕೋರರು ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳಿಗೆ ವಿಪರೀತ ಹಾನಿ ಮಾಡುತ್ತಿದ್ದಾರೆ. ಗುಂಡು ಹಾರಿಸಿದ ಪೊಲೀಸ್ ಕ್ಷಮೆ ಯಾಚಿಸಿದ್ದಾರೆ. ಅವರ ವಿರುದ್ಧ ಕೂಡ ಕಾನೂನು ಕ್ರಮ ಜರುಗಿಸಲಾಗಿದೆ. ಆದರೆ ಹಿಂಸಾಚಾರ ಮಾತ್ರ ನಿಲ್ಲುತ್ತಿಲ್ಲ. ಗಲಭೆಯಲ್ಲಿ ಪಾಲ್ಗೊಂಡು ಸುಮಾರು 719 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚುತ್ತಿರುವ ಗಲಭೆಕೋರರು ಅಂಗಡಿ-ಮುಂಗಟ್ಟುಗಳನ್ನೆಲ್ಲ ಧ್ವಂಸ ಮಾಡುತ್ತಿದ್ದಾರೆ.
ಐಷಾರಾಮಿ, ದುಬಾರಿ ಬೆಲೆಯ ಹ್ಯಾಂಡ್ಬ್ಯಾಗ್ ಕಂಪನಿ ಲೂಯಿಸ್ ವಿಟ್ಟಾನ್, ಬಟ್ಟೆ ಮತ್ತು ಬ್ಯಾಗ್ ಬ್ರ್ಯಾಂಡ್ ಝಾರಾ, ಶೂ ಬ್ರ್ಯಾಂಡ್ ನೈಕ್, ಆ್ಯಪಲ್ ಫೋನ್ ಶಾಪ್ಗಳನ್ನು ದೋಚುತ್ತಿದ್ದಾರೆ. ಇಡೀ ಮಳಿಗೆಗಳಲ್ಲಿ ಇದ್ದಿದ್ದನ್ನೆಲ್ಲ ಹೊತ್ತೊಯ್ಯುತ್ತಿದ್ದಾರೆ. ಈ ಬಗ್ಗೆ ಫ್ರಾನ್ಸ್ ಜನರು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಶನಿವಾರ ನಹೆಲ್ ನ ಅಂತ್ಯಕ್ರಿಯೆಯ ಬಳಿಕ ರಾತ್ರಿಯಾಗುತ್ತಿದ್ದಂತೆ, ಸಣ್ಣ ಜನಸಮೂಹವು ಎಲಿಸೀಸ್ನಲ್ಲಿ ಪ್ರತಿಭಟಿಸಲು ಜಮಾಯಿಸಿತ್ತು. ಪೊಲೀಸರು ಇದಕ್ಕೆ ಅವಕಾಶ ನೀಡದೇ ಪ್ರತಿಭಟನಾಕಾರರನ್ನು ಚದುರಿಸಿದ್ದರು. ನಹೆಲ್ ನಅಜ್ಜಿ, ಹಿಂಸಾಚಾರದ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ಭಾನುವಾರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಆದರೂ ಪ್ರತಿಭಟನೆಗಳು ಮುಂದುವರೆದಿವೆ.
ನಿಲ್ಲದ ಗಲಭೆಗಳ ಕುರಿತು ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆದಿವೆ. ಜರ್ಮನಿಯ ವೈದ್ಯರೊಬ್ಬರು ಗಲಭೆ ನಿಲ್ಲಿಸಲು ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯ ನಾಥ್ ಅವರನ್ನು ಕರೆಸಬೇಕೆಂದು ಟ್ವೀಟ್ ಮಾಡಿದ್ದಾರೆ. ಇದು ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.