ಇಡೀ ದಿನದ ಸುದ್ದಿ ಸಾರಾಂಶ: ಇಲ್ಲಿದೆ ಇಂದಿನ ನ್ಯೂಸ್ ರೌಂಡ್ ಅಪ್
ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಜೋಡಿ ಪಟುಗಳು
ಇಂಡೋನೇಷ್ಯಾದ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಭಾರತ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ- ಚಿರಾಗ್ ಶೆಟ್ಟಿ ಇತಿಹಾಸ ನಿರ್ಮಿಸಿದ್ದಾರೆ.
ಫೈನಲ್ ಗೆ ಲಗ್ಗೆ ಇಟ್ಟು ವರ್ಲ್ಡ್ ಟೂರ್ ಸೂಪರ್ 1000 ನಲ್ಲಿ ಸಾಧನೆಗೈದ ಮೊದಲಿಗರು ಎಂಬ ಹಿರಿಮೆಗೆ ಪಾತ್ರರಾಗಿದ್ದರು.
ಮಲೇಷ್ಯಾದ ಆರೋನ್ ಚಿಯಾ ಮತ್ತು ವೂಯಿ ಯಿಕ್ ಸೊಹ್ ಜೋಡಿಯನ್ನು ಪ್ರಶಸ್ತಿ ಸುತ್ತಿನಲ್ಲಿ ಸಾತ್ವಿಕ್-ಚಿರಾಗ್ 21-17, 21-18 ಸೆಟ್ ಗಳಲ್ಲಿ ಸೋಲಿಸಿದರು.
ಅಂತಿಮ ಪಂದ್ಯದ ವೇಳೆ, ಸಾತ್ವಿಕ್-ಚಿರಾಗ್ ಮೊದಲ ಗೇಮ್ನ ಆರಂಭದಲ್ಲಿ ನಿರಾಶೆಯ ಪ್ರದರ್ಶನ ನೀಡಿದ ಜೋಡಿ ನಂತರ ತಮ್ಮ ವೇಗವನ್ನು ಹೆಚ್ಚಿಸಿದರು. ಎರಡನೆ ಗೇಮ್ನಲ್ಲಿ ಸಾತ್ವಿಕ್-ಚಿರಾಗ್ ಅದ್ಬುತವಾಗಿ ಆರಂಭಿಸಿದರು.
ಆಟದ ಮಧ್ಯಂತರ ವಿರಾಮದವರೆಗೆ 11-9 ಮುನ್ನಡೆ ಸಾಧಿಸಿದರು. ಫೈನಲ್ ಪಂದ್ಯ 43 ನಿಮಿಷಗಳ ಕಾಲ ನಡೆಯಿತು.
ವಿಶ್ವ ರ್ಯಾಂಕಿಂಗ್ನಲ್ಲಿ 6ನೇ ಸ್ಥಾನದಲ್ಲಿರುವ ಭಾರತದ ಜೋಡಿ ಇದೇ ಮೊದಲ ಬಾರಿಗೆ ಸೂಪರ್-1000 ಟೂರ್ನಿಯ ಫೈನಲ್ ಪ್ರವೇಶಿಸಿತ್ತು.
ನೆಗೆಟಿವ್ ವಿಮರ್ಶೆಗಳ ನಡುವೆಯೂ ಎರಡೇ ದಿನಕ್ಕೆ 240 ಕೋಟಿ ರೂ. ಗಳಿಸಿದ ಆದಿಪುರುಷ್
ಬಹುನಿರೀಕ್ಷಿಸಿದ ಪೌರಾಣಿಕ ಮಹಾಕಾವ್ಯ ಚಿತ್ರ ಆದಿಪುರುಷ್ ಬಿಡುಗಡೆಯಾಗಿ ಎರಡೇ ದಿನಕ್ಕೆ 240 ಕೋಟಿ ರೂ. ಗಳಿಸಿದೆ.
ಜೂನ್ 16 ರಂದು ಬಿಡುಗಡೆಯಾದ ಚಿತ್ರದಲ್ಲಿ ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ನಟಿಸಿದ್ದಾರೆ. ಮೊದಲ ದಿನವೇ ವಿಶ್ವದಾದ್ಯಂತ ರೂ 140 ಕೋಟಿ ಗಳಿಸಿದ್ದು, ಇನ್ನು ಎರಡನೇ ದಿನ 100 ಕೋಟಿ ಗಳಿಕೆ ಮಾಡಿದ್ದು ಒಟ್ಟಾರೆ ಎರಡು ದಿನದಲ್ಲಿ 240 ಕೋಟಿ ರೂ. ಗಳಿಸಿದೆ ಎಂದು ನಿರ್ಮಾಪಕ ಸಂಸ್ಥೆ ಟಿ-ಸೀರಿಸ್ ಟ್ವೀಟ್ ಮಾಡಿದೆ.
ಚಿತ್ರ ಬಿಡುಗಡೆಯಾದ ದಿನದಿಂದಲೂ ಚಿತ್ರದ ಮೇಕಿಂಗ್, ಸಂಭಾಷಣೆ, ದೃಶ್ಯಗಳಿಗೆ ಸಾಕಷ್ಟು ಟೀಕೆಗಳು ಮತ್ತು ಟ್ರೋಲ್ ಗೆ ಗುರಿಯಾಗಿದೆ.
ಮಿಶ್ರ ವಿಮರ್ಶೆಗಳ ನಡುವೆಯೂ ಆದಿಪುರುಷ್ ಗಲ್ಲಾಪೆಟ್ಟಿಗೆಯಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡುತ್ತಿದೆ.
ಇದು ಪಠಾಣ್ನ ಎರಡು ದಿನದ ಕಲೆಕ್ಷನ್ 219 ಕೋಟಿಯ ಲಾಭವನ್ನು ಹಿಂದಿಕ್ಕಿದೆ.
ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಸಂಗ್ರಹಣೆಯಾದ ಒಟ್ಟು ವಿಷಯದಲ್ಲಿ ಆದಿಪುರುಷ್ ಆರಂಭಿಕ ದಿನದ ಪ್ರದರ್ಶನ ನಾಲ್ಕನೇ ಸ್ಥಾನದಲ್ಲಿದೆ.
ಆರ್.ಆರ್.ಆರ್- 222 ಕೋಟಿ ರೂ., ಬಾಹುಬಲಿ 2- 214 ಕೋಟಿ ರೂ., ದಿ ಕನ್ಕ್ಲೂಷನ್ ಮತ್ತು ಕೆಜಿ ಎಫ್ 164.5 ಕೋಟಿ ರೂ.ಗಳೊಂದಿಗೆ ಅಧ್ಯಾಯ 2 ಪಟ್ಟಿಯಲ್ಲಿರುವ ಮೊದಲ ಮೂರು ಸಿನಿಮಾಗಳಾಗಿದೆ.
7 ವರ್ಷಗಳ ಬಳಿಕ ಸೌದಿ-ಯೆಮೆನ್ ನಡುವೆ ವಿಮಾನ ಹಾರಾಟ ಆರಂಭ
ಸೌದಿ ಮತ್ತು ಯೆಮೆನ್ ಅರೇಬಿಯಾ ನಡುವಿನ ಪರಿಸ್ಥಿತಿ ಸುಧಾರಿಸಿದ್ದು, ಬರೋಬ್ಬರಿ 7 ವರ್ಷಗಳ ನಂತರ ಮತ್ತೆ ವಾಣಿಜ್ಯ ವಿಮಾನ ಹಾರಾಟ ಪ್ರಾರಂಭಿಸಿದೆ.
ಯೆಮೆನ್ ನಿಂದ ಹೊರಟ ವಿಮಾನದಲ್ಲಿ ಸುಮಾರು 270 ಕ್ಕೂ ಹೆಚ್ಚು ಮುಸ್ಲಿಂ ಯಾತ್ರಿಕರು ಪ್ರಯಾಣಿಸಿದ್ದಾರೆ. ಯೆಮೆನ್ ನ ಬಂಡುಕೋರರ ಹಿಡಿತದಲ್ಲಿರುವ ರಾಜಧಾನಿ ಸನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆಗಿತ್ತು.
ಇನ್ನು 4 ವಿಮಾನಗಳು ಹಾರಾಟ ನಡೆಸಲು ಸಜ್ಜಾಗಿದೆ. ಈ ವಿಮಾನಗಳು ಭಾನುವಾರ ಮತ್ತು ಸೋಮವಾರ ಸೌದಿಗೆ ಹೊರಡುತ್ತದೆ. ಬಳಿಕ ಎರಡು ವಿಮಾನಗಳನ್ನು ವೇಳಾಪಟ್ಟಿಗೆ ಸೇರ್ಪಡೆಗೊಳ್ಳಲಿವೆ.
ಮುಂದಿನ ವಾರದಿಂದ ಹಜ್ ಯಾತ್ರೆಗಾಗಿ ವಿಶ್ವದಾದ್ಯಂತ ಲಕ್ಷಾಂತರ ಮುಸ್ಲೀಮರು ಸೌದಿ ಅರೇವಿಯಾದ ಮೆಕ್ಕಾ ನಗರದ ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಸದ್ಯ ವಿಮಾನ ಹಾರಾಟ ಪ್ರಾರಂಭವಾಗಿರುವುದು ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಕಡಿಮೆಯಾಗುವ ಸೂಚನೆ ಇದೆ.
ಯೆಮೆನ್ ರಾಜಧಾನಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ಹಿಡಿತದಲ್ಲಿದೆ. ಇನ್ನು ಸೌದಿ ಅರೇಬಿಯಾ ಬಂಡುಕೋರರ ಆಕ್ರಮಣದಿಂದ ಸುಧಾರಿಸಿಕೊಳ್ಳಲಾಗಲಿಲ್ಲ. 2016ರಲ್ಲಿ ಹೌತಿ ಬಂಡುಕೋರರು ಸನಾ ವಿಮಾನ ನಿಲ್ದಾಣವನ್ನು ಮುಚ್ಚಿದ್ದರು.
ರಾಜ್ಯದಲ್ಲಿ ಏಕಾಏಕಿ ವಿದ್ಯುತ್ ಏರಿಕೆ: ಬಂದ್ ಗೆ ಕರೆ ನೀಡಿದ ಕೆಸಿಸಿಐ
ಕರ್ನಾಟಕ ರಾಜ್ಯ ಸರ್ಕಾರ ಏಕಾಏಕಿ ವಿದ್ಯುತ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ವಾಣಿಜ್ಯೋದ್ಯಮ ಸಂಸ್ಥೆ ಒಂದು ದಿನದ ಬಂದ್ ಗೆ ಕರೆ ನೀಡಿದೆ. ಇದೇ ಮೊದಲ ಬಾರಿಗೆ ವಾಣಿಜ್ಯೋದ್ಯಮ ಸಂಸ್ಥೆಯೊಂದು ವಿದ್ಯುತ್ ದರ ಏರಿಕೆಯ ವಿರುದ್ಧ ಧ್ವನಿ ಎತ್ತಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ ಕೆಸಿಸಿಐ, ಜೂನ್ 22 ರಂದು ಎಲ್ಲಾ ವಾಣಿಜ್ಯ ಚಟುವಟಿಕೆಗಳು, ಕೈಗಾರಿಕೆಗಳನ್ನು ಬಂದ್ ಮಾಡಬೇಕೆಂದು ಕರೆ ನೀಡಿದೆ.
ಇದಲ್ಲದೆ ಎಲ್ಲಾ ಎಸ್ಕಾಂಗಳೂ ಕೂಡಲೇ ಏರಿಕೆ ಮಾಡಿರುವ ದರವನ್ನು ಮೊದಲಿನ ಸ್ಥಿತಿಗೆ ತರಬೇಕು, ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದೆ.
ವಿದ್ಯುತ್ ದರ ಏರಿಕೆಯ ಪರಿಣಾಮಗಳ ಗಂಭೀರತೆಯನ್ನು ಮನವರಿಕೆ ಮಾಡಲು ಯತ್ನಿಸಿದೆ. ಆದರೆ, ಅಧಿಕಾರಿಗಳು ಅಥವಾ ಸರ್ಕಾರರದಿಂದ ಯಾವುದೇ ಪರಿಹಾರ ದೊರತಿಲ್ಲ.
ರಾಜ್ಯದಲ್ಲಿ ಒಂದೆಡೆ ವಿದ್ಯುತ್ ದರ ಏರಿಕೆ ಮಾಡಿರುವ ಸರ್ಕಾರ, ಮತ್ತೊಂದೆಡೆ ರಾಜ್ಯದ 2 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ನೀಡಲು ಹೊರಟಿದೆ.