ಹಾಸನ: ಕನಕಶ್ರೀ ಪ್ರಕಾಶನ ಬ್ಯಾಕೋಡ, ಇವರ ಆಯೋಜಕತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ದಾವಣಗೆರೆ ಇವರ ಸಹಕಾರದೊಂದಿಗೆ ಇದೆ ಬರುವ ದಿನಾಂಕ 18/6/2023 ರಂದು ದಾವಣಗೆರೆಯ ರಂಗಮಹಲ್ ನಲ್ಲಿ ನೆರವೇರಲಿರುವ ಅಖಿಲ ಕರ್ನಾಟಕ ದ್ವಿತೀಯ ಮಹಿಳಾ ಯುವ ಸಮ್ಮೇಳನದ ಅಧ್ಯಕ್ಷರಾಗಿ ಮೂಲತಃ ಕಾರ್ಕಳ ತಾಲೂಕಿನ ಎಣ್ಣೆ ಹೊಳೆಯವರಾದ ಶ್ರೀಮತಿ ರೇಷ್ಮಾ ಶೆಟ್ಟಿ ಗೊರೂರು ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕನಕಶ್ರೀ ಪ್ರಕಾಶನ ಬ್ಯಾಕೋಡದ ಮುಖ್ಯಸ್ಥರಾದ ಸಿದ್ದರಾಮ ನೀಲಜಗಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ರೇಷ್ಮಾ ಶೆಟ್ಟಿ ಗೊರೂರು ಅವರು ಯುವ ಸಾಹಿತಿಯಾಗಿದ್ದು ಈಗಾಗಲೇ ಇವರ ಎರಡು ಕೃತಿಗಳು ಲೋಕಾರ್ಪಣೆಗೊಂಡಿದ್ದು ಮತ್ತೆರಡು ಕೃತಿಗಳು ಸಿದ್ಧಗೊಳ್ಳುತ್ತಿವೆ ಇವರು ಜನಮಿಡಿತ ಪತ್ರಿಕೆಯ ಹಾಸನ ಜಿಲ್ಲಾ ಪ್ರತಿನಿಧಿಯಾಗಿದ್ದು, ಈಗಾಗಲೇ ತಮ್ಮ ಬರಹಗಳು, ಕಾರ್ಯಕ್ರಮ ನಿರೂಪಣೆ, ಪತ್ರಿಕಾ ಮಾಧ್ಯಮದ ಮೂಲಕ ಗುರುತಿಸಿಕೊಂಡಿದ್ದು ಅನೇಕ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.ಹಾಗೂ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯ ಕಾರ್ಯದರ್ಶಿ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗೊರೂರು ಘಟಕದ ಸಂಚಾಲಕರಾಗಿ, ಹೀಗೇ ಹತ್ತು ಹಲವಾರು ಸಂಘಟನೆಗಳಲ್ಲಿ ತೊಡಗಿ ಕೊಂಡಿದ್ದಾರೆ. ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಇವರನ್ನು ಮಹಿಳಾ ಯುವ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಲಾಗಿದೆ.