ಗೋಕರ್ಣವು ಕರ್ನಾಟಕ ರಾಜ್ಯದ ಉತ್ತರಕನ್ನಡ ಜಿಲ್ಲೆಯಲ್ಲಿರುವ ಕುಮಟಾ ತಾಲೂಕಿನ ಕಡಲ ತೀರದ ಒಂದು ಊರು. ಇದು ಜಿಲ್ಲಾ ಕೇಂದ್ರವಾದ ಕಾರವಾರದಿಂದ ಸುಮಾರು 65 ಕಿ.ಮೀ ದೂರದಲ್ಲಿದೆ.
ಗೋಕರ್ಣದಲ್ಲಿ ಮಹಾಗಣಪತಿ ಮತ್ತು ಮಹಾಬಲೇಶ್ವರ ದೇವಾಲಯಗಳಿದ್ದು ಪವಿತ್ರ ತೀರ್ಥಕ್ಷೇತ್ರವಾಗಿದೆ. ಈ ದೇವಾಲಯಗಳು ಸುಂದರವಾದ ಕಡಲತೀರದ ಸಮೀಪದಲ್ಲಿಯೇ ಇದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ ಇಲ್ಲಿಗೆ ದೇಶ ವಿದೇಶಗಳಿಂದಲೂ ಅನ್ಯ ಧರ್ಮದ ಪ್ರವಾಸಿಗರು ಸಹ ಆಗಮಿಸುತ್ತಾರೆ.
ಪುರಾಣದ ಪ್ರಕಾರ ಒಮ್ಮೆ ರಾವಣನು ಶಿವನಲ್ಲಿ ತಪಸ್ಸು ಮಾಡಿ, ತನ್ನ ತಾಯಿಗಾಗಿ ಆತ್ಮಲಿಂಗವನ್ನು ಅನುಗ್ರಹವಾಗಿ ಪಡೆದಿರುತ್ತಾನೆ. ಇದನ್ನು ತಿಳಿದ ತ್ರಿಲೋಕ ಸಂಚಾರಿ ಆದಲದರೂ ದೇವತೆಗಳಿಗೆ ತಿಳಿಸಿ ಗಣಪತಿಯ ಮೂಲಕ ರಾವಣನು ಶಿವಲಿಂಗವನ್ನು ಲಂಕಾ ನಗರಕ್ಕೆ ತೆಗೆದುಕೊಂಡು ಹೋಗುವುದನ್ನು ತಡೆಯಲು ವಿನಂತಿಸಿಕೊಳ್ಳುತ್ತಾರೆ. ಆಗ ಬುದ್ಧಿವಂತನಾದ ಗಣಪತಿಯು ಸಂಧ್ಯಾವಂದನೆಯ ಸಮಯದಲ್ಲಿ ರಾವಣನಿಂದ ಆತ್ಮ ಲಿಂಗವನ್ನು ಪಡೆದು ಭೂಮಿಯ ಮೇಲೆ ಇರಿಸಿಬಿಡುತ್ತಾನೆ. ರಾವಣನು ಎಷ್ಟೇ ಪ್ರಯತ್ನ ಪಟ್ಟರು ಶಿವಲಿಂಗವನ್ನು ಭೂಮಿಯಿಂದ ಕೀಳಲು ವಿಫಲನಾಗುತ್ತಾನೆ ಮತ್ತು ಬರಿಗೈಯಿಂದ ಲಂಕೆಗೆ ತೆರಳುತ್ತಾನೆ. ಭೂಮಿಯ ಮೇಲೆ ಶಿವನನ್ನು ಪ್ರಥಮವಾಗಿ ಗಣಪತಿಯು ಸ್ಥಾಪಿಸಿದ್ದರಿಂದ ಈ ಕ್ಷೇತ್ರವನ್ನು ಭೂಕೈಲಾಸ ವೆಂದು ಶಿವನ ಆಜ್ಞೆ ಪ್ರಕಾರ ಗಣಪತಿಗೆ ಮೊದಲು ಪೂಜಿಸಿ ನಂತರ ಮಹಾಬಲೇಶ್ವರನನ್ನು ಪೂಜಿಸಲಾಗುತ್ತದೆ.
ಗೋಕರ್ಣದಲ್ಲಿ ಪ್ರಸಿದ್ಧವಾದ ಓಂ ಬೀಚ್ ಮತ್ತು ಕುಡ್ಲ ಬೀಚ್ ಗಳಿದ್ದು ಪ್ರವಾಸಿಗರು ಸೂರ್ಯಸ್ತ ವೀಕ್ಷಕ ವೀಕ್ಷಣೆಗೆ ಮತ್ತು ಜಲ ಕ್ರೀಡೆಗಳನ್ನು ಆನಂದಿಸಲು ಇಷ್ಟಪಡುತ್ತಾರೆ.
ಓಂ ಬೀಚ್
ಎರಡು ಅರ್ಧ ಅರ್ಧಚಂದ್ರಾಕೃತಿಗಳು ಒಂದಕ್ಕೊಂದು ಸೇರಿಕೊಳ್ಳುವಂತೆ ಆಕಾರವನ್ನು ಹೊಂದಿದ್ದು, ಓಂ ಬೀಚ್ ನೋಡಲೇಬೇಕಾದ ಪ್ರಯಾಣದ ತಾಣವಾಗಿದೆ. ಈ ಸುಂದರವಾದ ಬೀಚ್ ತಾಣವು ಪ್ರಪಂಚದಾದ್ಯಂತದ ನೂರಾರು ಪ್ರವಾಸಿಗರಿಗೆ ಆಕರ್ಷಣೆಯ ಕಡಲ ತೀರವಾಗಿದೆ.
ಕುಡ್ಲೆ ಬೀಚ್
ಓಂ ಬೀಚ್ನಿಂದ ಕೆಲವು ನಿಮಿಷಗಳ ಅಂತರದಲ್ಲಿ ಕುಡ್ಲೆ ಬೀಚ್ ಇದ್ದು ಸ್ನೇಹಿತರು, ಪೋಷಕರು ಅಥವಾ ನಿಮ್ಮ ಸಂಗಾತಿಯೊಂದಿಗೆ ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದ ಬೀಚ್ ಆಗಿದೆ. ಸಮೀಪದಲ್ಲಿ ಕಿಯೋಸ್ಕ್ಗಳು ಮತ್ತು ತಿನಿಸುಗಳ ಲಭ್ಯತೆ ಇದ್ದು ಇಲ್ಲಿ ಹೆಚ್ಚು ಸಮಯವನ್ನು ಕಳೆಯಬಹುದು ಮತ್ತು ಮೋಜು ಮಾಡಬಹುದು.
ಗೋಕರ್ಣದಲ್ಲಿರುವ ಇತರ ಬೀಚ್ ಗಳೆಂದರೆ ಗೋಕರ್ಣ ಬೀಚ್, ಪ್ಯಾರಡೈಸ್ ಬೀಚ್, ಹಾಫ್ ಮೂನ್ ಬೀಚ್.
ಯಾಣ ಗುಹೆಗಳು:
ಸಾಹಸ, ವನ್ಯಜೀವಿ ಮತ್ತು ಧರ್ಮಕ್ಕೆ ಹೆಸರುವಾಸಿಯಾದ ಯಾಣ ಗುಹೆಗಳು ದೇವಾಲಯದಿಂದ ಸುಮಾರು 27 ಕಿಮೀ ದೂರದಲ್ಲಿವೆ.