ಕಿರುತೆರೆಯಿಂದ ಸಿನಿಮಾಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಈ ಸಾಲಿಗೆ ಈಗ ಮತ್ತೊಬ್ಬ ನಟಿಯ ಸೇರ್ಪಡೆಯಾಗಿದೆ.
ಸೀರಿಯಲ್ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಎಷ್ಟೋ ಕಲಾವಿದರು ಹಿರಿತೆರೆಗೆ ಬಂದು ಯಶಸ್ವಿಯಾಗುತ್ತಿದ್ದಾರೆ. ಈಗ ಮೈಸೂರಿನ ಅಮೂಲ್ಯ ಗೌಡ ಸಹ ಕಿರುತೆರೆಯಿಂದ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದು, ‘ಕುರುಡು ಕಾಂಚಾಣ’ ಸಿನಿಮಾದ ಮೂಲಕ ಸಿನಿಮಾ ಪರೀಕ್ಷೆಗೆ ಇಳಿದಿದ್ದಾರೆ.
‘ಅಪರಂಜಿ’ ಸೀರಿಯಲ್ನಲ್ಲಿ ಹೀರೋಯಿನ್ ಆಗಿದ್ದ ಅವರು ‘ಅಗ್ನಿ ಸಾಕ್ಷಿ’, ‘ನನ್ನರಸಿ ರಾಧೆ’ಯಂತಹ ಮೆಗಾ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸ್ಯಾಂಡಲ್ವುಡ್ನ ಖ್ಯಾತ ಪೋಷಕ ನಟ ಅಶ್ವತ್ಥ್ ನೀನಾಸಂ ಅವರ ದೂರದ ಸಂಬಂಧಿಯೂ ಆಗಿರುವ ಅಮೂಲ್ಯ ಗೌಡ ಮಾಡೆಲಿಂಗ್ ಆಗಿ , ಅಷ್ಟೇ ಅಲ್ಲದೆ ಖಾಸಗಿ ವಾಹಿನಿಯಲ್ಲಿ ನಿರೂಪಣೆ ಕೂಡ ಮಾಡಿದ್ದರು.
ನಟನೆ ಮಾಡಬೇಕು ಎಂಬುದು ನನ್ನ ಬಹಳ ದಿನಗಳ ಕನಸು. ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಮೇಲೆ ಒಮ್ಮೆ ನನಗೆ ವಿ. ಮನೋಹರ್ ಪರಿಚಯ ನನ್ನ ಸಹೋದರ ಅಶ್ವತ್ಥ್ ಅವರಿಂದ ಆಯಿತು. ಅವರು ನನ್ನ ಧ್ವನಿ ಕೇಳಿ ಹಾಡು ಹಾಡಬಹುದು ಮತ್ತು ಡಬ್ಬಿಂಗ್ ಮಾಡಬಹುದು ಎಂದಿದ್ದರು. ಅದರಂತೆ ಅವರ ಜತೆಗೆ ಕೆಲಸ ಮಾಡಿದೆ. ಜತೆಗೆ ಮಾಡೆಲಿಂಗ್ ಕೂಡ ಮಾಡಿ ಒಂದೆರಡು ಟೈಟಲ್ಗಳನ್ನು ಗೆದ್ದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಈಗ ‘ಕುರುಡು ಕಾಂಚಾಣ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿದ್ದು, ಈ ಪಾತ್ರ ಹೊಸ ರೀತಿಯಲ್ಲಿದ್ದು, ಇದರ ಜತೆಗೆ ಮತ್ತೊಂದು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು.
ನಟಿ ಅಮೂಲ್ಯ ಗೌಡ ‘ಕುರುಡು ಕಾಂಚಾಣ’ ಸಿನಿಮಾದಲ್ಲಿ ನಟಿ ಆಗಿ ಅಭಿನಯಿಸುತ್ತಿದ್ದು, ಕಿರಣ್ ರಾಜ್ ಎಂಬುವರು ಆ ಸಿನಿಮಾದ ನಾಯಕರಾಗಿ ನಟಿಸಲಿದ್ದಾರೆ. ನಾಗೇಂದ್ರ ಅರಸ್, ರೆಮೋ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. ‘ಕುರುಡು ಕಾಂಚಾಣ’ ನನ್ನ ಮೊದಲ ಕನ್ನಡ ಸಿನಿಮಾ. ಒಳ್ಳೊಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತಾ ನಟಿಸುತ್ತೇನೆ. ಇದುವರೆಗೆ ನಾನು ಕಿರುತೆರೆಯಲ್ಲಿ ಉತ್ತಮ ಪಾತ್ರಗಳಲ್ಲಿಯೇ ನಟಿಸಿ ಗೆದ್ದಿದ್ದೇನೆ ಎಂದು ನಟಿ ಅಮೂಲ್ಯ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.