ಮಂಗಳೂರು: ನೀರಿಲ್ಲದೆ ಮಂಗಳೂರು ಜನರ ಬದುಕು ಅತಂತ್ರವಾಗಿದೆ. ಎಲ್ಲೆಲ್ಲೂ ನೀರಿಗೆ ಆಹಾಕಾರ. ದಕ್ಷಿಣ ಕನ್ನಡ ಎಂದರೆ ಜಲ ಸಂಪತ್ತ್ ಭರಿತ ಪ್ರದೇಶ ಎಂಬ ಕಲ್ಪನೆ ಇತ್ತು. ಈ ಕಲ್ಪನೆಯನ್ನು ನಿಜವೆಂದು ಭಾವಿಸಿ ದೊಡ್ಡ ಮನುಷ್ಯರು ಎತ್ತಿನ ಹೊಳೆ ಯೋಜನೆ ಎಂಬ ಹಣದ ಹೊಳೆಯ ಯೋಜನೆಗೆ ಕೈ ಹಾಕಿದನ್ನು ಕೂಡ ಸ್ಮರಿಸಬಹದು.
ಜಲ ಸಂಪತ್ತ್ ಭರಿತ ಪ್ರದೇಶ ಈಗ ಬರೀದಾಗಿದೆ. ಎಲ್ಲೆಲ್ಲೂ ನೀರು ನೀರು ಎಂದು ಜನ ಪರದಾಡುತ್ತಿದ್ದಾರೆ. ಇಡೀ ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿ ಕುಮಾರಧಾರ ಒಡಲು ಬತ್ತಿ ಬಯಲು ಪ್ರದೇಶವಾಗಿದೆ.
ಇತ್ತ ಇಡೀ ಮಂಗಳೂರಿಗೆ ನೀರು ಪೂರೈಸುವ ತುಂಬೆ ವೆಂಟಡ್ ಡ್ಯಾಂಮ್ನಲ್ಲೂ ನೀರಿನ ಮಟ್ಟ ಸಾಕಷ್ಟು ಕುಸಿತ ಕಂಡಿದೆ. ಪರಿಸ್ಥಿಯ ಗಂಭೀರತೆ ಅರಿತ ಮಂಗಳೂರು ಮಹಾನಗರ ಪಾಲಿಕೆ ಆರಂಭದಲ್ಲಿ ಒಂದು ದಿನ ಬಿಟ್ಟು ಒಂದು ದಿನ ನೀರನ್ನು ಪೂರೈಸಿತ್ತು. ಈಗ ಪರಿಸ್ಥಿತಿ ಇನ್ನು ಬಿಗಾಡಯಿಸಿದೆ ಮೂರು ದಿನಗಳಾದರೂ ನಲ್ಲಿಯಲ್ಲಿ ನೀರು ಕಾಣೆ.
ಬಾವಿ ಇರುವ ಮನೆವರು ಕೊಂಚ ನಿಟ್ಟುಸಿರು ಬಿಡುತ್ತಿದ್ದಾರೆ, ಆದರೆ ಕೆಲವು ಕಡೆ ಬಾವಿಗಳು ಕೂಡ ಸಂಪೂರ್ಣ ಬತ್ತಿದ್ದರೆ ಇನ್ನು ಕೆಲವಡೆ ನೀರಿನ ಮಟ್ಟ ತೀರ ತಳದಲ್ಲಿದೆ. ಕೆಲವರು ಟ್ಯಾಂಕರ್ ಮೂಲಕ ನೀರನ್ನು ತರಿಸಿಕೊಳ್ಳತ್ತಿದ್ದಾರೆ. ಅದು ಕೂಡ ದುಬಾರಿ ಬೆಲೆ ನೀಡಿ.
ಇತ್ತ ಮಳೆರಾಯನ ಕೃಪೆ ಸಂಪೂರ್ಣವಾಗಿ ಬೆಂಗಳೂರು ನಗರದ ಜನರ ಮೇಲಿದೆ ಎಂದು ಅನಿಸುತ್ತಿದೆ. ಇಡೀ ಬೆಂಗಳೂರು ಕೊಚ್ಚಿ ಹೋಗುವ ಮಾದರಿ ಮಳೆರಾಯನ ಕೃಪೆಯಾಗಿದೆ. ಆದರೆ ದಕ್ಷಿಣ ಕನ್ನಡದ ಮೇಲೆ ಇನ್ನು ಕೃಪಕಟಾಕ್ಷವನ್ನು ಅಷ್ಟಾಗಿ ಬೀರಿಲ್ಲ. ಅಲ್ಲಲ್ಲಿ ಮಳೆಯಾದ ವರದಿಯಾದರೂ ಇದು ನದಿ ಕೆರೆ ತೋರೆಗಳು ತುಂಬುವ ಮಟ್ಟಕ್ಕೆ ಜಲಧಾರೆ ಹರಿಯಲ್ಲಿಲ್ಲ.
ಇದು ಪ್ರಕೃತಿಯ ಪಾಠನ ಅಥವಾ ಮುನ್ನೆಚ್ಚರಿಕೆಯ ಘಂಟೆನಾ? ಇನ್ನಾದರೂ ನೀರಿನ ಮಹತ್ವ ತಿಳಿದುಕೊಳ್ಳಬೇಕು. ನೀರಿನ ಮಿತ ಬಳಕೆಯ ನಿಯಮವನ್ನು ಸ್ವಯಂ ಪ್ರೇರಿತವಾಗಿ ಅಳವಡಿಸಿಕೊಳ್ಳ ಬೇಕು. ನೀರು ಇಂಗಿಸುವಿಕೆ, ಮಳೆ ನೀರು ಕೊಯ್ಲು ಇಂತಹ ಪ್ರಯೋಜನಕಾರಿ ವಿಧಾನಗಳನ್ನು ಅನುಸರಿಸಿದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯನ್ನು ದೂರ ಮಾಡಬಹುದು.