ಕುಸ್ತಿ ಪಟುಗಳ ದೋಷವಾದರೂ ಎನು ? ತಮಗಾದ ಅನ್ಯಾಯಕ್ಕೆ ನ್ಯಾಯ ಕೇಳಿದ್ದೇ ತಪ್ಪಾಯಿತ್ತೆ. ಬಿಜೆಪಿ ಸಂಸದರೂ ಆಗಿರುವ ಕುಸ್ತಿ ಸಂಸ್ಥೆಯ ಮುಖ್ಯಸ್ಥ ಬ್ರಿಜ್ ಭೂಷಣ್ ಅವರನ್ನು ಬಂದಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳು ಎಪ್ರೀಲ್ ೨೩ ರಿಂದ ನಿರಂತರವಾಗಿ ದೆಹಲಿಯಲ್ಲಿ ಪ್ರತಿಭಟಣೆಯನ್ನು ಮಾಡುತ್ತಿರುವ ಮಹಿಳಾ ಕುಸ್ತಿ ಪಟುಗಳು ನ್ಯಾಯಕ್ಕಾಗಿ ಹಂಬಲಿಸುತ್ತಿದ್ದಾರೆ.
ಇವರ ಪ್ರತಿಭಟನೆ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಸರ್ಕಾರ ಮತ್ತು ಕಾನೂನು ಇವರ ಪ್ರತಿಭಟಣೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ವಿಚಿತ್ರ ಎಂದರೆ ಪ್ರತಿಭಟಣೆ ಮಾಡಲು ಅನುಮತಿಯನ್ನು ಪಡೆಯಬೇಕಾಗಿರುವುದು. ಪ್ರತಿಭಟಣೆಯ ಹಕ್ಕನ್ನು ಕಿತ್ತುಕೊಂಡತ್ತಿದೆ.
ಕುಸ್ತಿಪಟುಗಳಾದ ಸಾಕ್ಷಿ ಮಲ್ಲಿಕ್, ವಿನೇಶ್ ಪೋಗಟ್ ಮತ್ತು ಬಜರಂಗ್ ಪುನಿಯಾ ಅವರು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿ ಐದು ದಿನಗಳ ಗಡುವನ್ನು ನೀಡಿ ಸಮಸ್ಯೆಗಳನ್ನು ಬಗೆಹರಿಸದಿದಲ್ಲಿ ತಾವು ಗೆದ್ದಂತಹ ಪದಕಗಳನ್ನು ಗಂಗಾ ನದಿಗೆ ಎಸೆಯುವುದಾಗಿ ಹೇಳಿಕೊಂಡಿದ್ದಾರೆ.
ದೇಶವನ್ನು ಪ್ರತಿನಿಧಿಸಿ ದೇಶಕ್ಕೆ ಕೀರ್ತಿ ತಂದ ಈ ಮಹಿಳಾ ಮಣಿಗಳನ್ನು ಅಂದು ಎಲ್ಲರು ಕೊಂಡಾಡಿದ್ದಾರೆ. ‘ದೇಶ್ ಕೀ ಬೇಟಿ’ ನಮ್ಮ ಹೆಮ್ಮೆ ಗೌರವ ಎಂದು ಎದೆ ತಟ್ಟಿ ಮಾತ್ತಾನಾಡಿದವರೆಲ್ಲ ಇಂದು ಸುಮ್ಮಾನಾಗಿದ್ದಾರೆ.
ಒಬ್ಬ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ ವ್ಯಕ್ತಿ ಕ್ರೀಡಾಪಟುವಾಗಿ ಹೊರಹೋಮ್ಮ ಬೇಕಾದರೆ ಅದರ ಹಿಂದೆ ಇರುವ ಪರಿಶ್ರಮ ಎಂತದ್ದು ಅನ್ನುವುದು ಊಹಿಸಲು ಸಾಧ್ಯವಿಲ್ಲ. ಅವರ ಜೀವನದಲ್ಲಿ ಯಾವುದೇ ಹಬ್ಬ ಸಂಭ್ರಮಗಳಿರುವುದಿಲ್ಲ. ಇಷ್ಟದ ಊಟ ತಿಂಡಿಯನ್ನು ತ್ಯಾಗ ಮಾಡಬೇಕು. ಎಲ್ಲರು ದೀಪಾವಳಿ ಆಚರಿಸುತ್ತಿರುವಾಗ ಇವರುಗಳು ಪ್ರಾಕ್ಟಿಸ್ ಮಾಡುತ್ತಿರುತ್ತಾರೆ.
ಇಂತಹ ಒಂದು ಕಠಿಣ ಪರಿಶ್ರಮದಲ್ಲಿ ಪಳಗಿ ಮುಂದೆ ಒಂದು ದಿನ ಪದಕ ಅವರನ್ನು ಅಲಂಕರಿಸಿದಾಗ ಬಿಕ್ಕಳಿಸಿ ಕಣೀರು ಬಂದಾಗಲೇ ಎಲ್ಲರಿಗೂ ಇವರ ಪರಿಶ್ರಮ ಎಂತದ್ದು ಎಂದು ಅರ್ಥವಾಗುವುದು. ಅಂದು ಎಲ್ಲರಿಗೂ ಇವರು ದೇಶ್ ಕೀ ಬೇಟಿ ಅನಿಸತೊಡಗುತ್ತದೆ. ಇಂದು ಇವರ ಸಮಸ್ಯೆ, ಆರೋಪ ಮಾತ್ರ ವೈಯಕ್ತಿವಾಗಿದೆ.
ಲೈಗಿಂಕ ಕಿರುಕುಳ ಎನ್ನುವುದು ಮಹಿಳೆಯರನ್ನು ಬೆನ್ನು ಬಿಡದ ಭೂತವಾಗಿದೆ. ಆದರೆ ಈಗ ಕ್ರೀಡಾ ಪಟುಗಳು ಕೂಡ ಇಂತಹದೇ ಆರೋಪವನ್ನು ಮಾಡುತ್ತಿದ್ದಾರೆ. ಇಲ್ಲಿ ಆರೋಪಿ ಒಬ್ಬ ಪ್ರಭಾವಿ ವ್ಯಕ್ತಿಯಾಗಿರುವುದೇ ಬಹುಶಃ ವ್ಯವಸ್ಥೆಗೆ ತಲೆನೋವಾಗಿದೆ. ಆರೋಪಿಯನ್ನು ಕನಿಷ್ಟ ವಿಚಾರಣೆಯನ್ನು ಮಾಡದಿರುವುದು ದುರದೃಷ್ಟವಾಗಿದೆ.
ಈ ಮಧ್ಯೆ ಪೋಲೀಸರು ಕ್ರೀಡಾ ಪಟುಗಳನ್ನು ನಡೆಸಿಕೊಂಡ ರೀತಿ ಎಲ್ಲರ ಮನತಟ್ಟುವಂತೆ ಮಾಡಿದೆ.ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ, ಭಾರತದ ಟ್ರ್ಯಾಕ್ ಅಂಡ್ ಫೀಲ್ಡ್ ಅಥ್ಲಿಟ್ ಮುರಳಿ ಶ್ರೀಶಂಕರ್ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಕೂಡ ಬೇಸರ ಹೊರಹಾಕಿದ್ದಾರೆ.
ಈ ಎಲ್ಲ ಬೆಳವಣಿಗೆಯನ್ನು ನೋಡುತ್ತಿದ್ದಾರೆ ಸ್ಲೋಗನ್ ಒಂದು ನೆನಪಾಗುತ್ತಿದೆ “ಬೇಟಿ ಬಚಾವೋ”.