ಮಳೆಗಾಲ ಆಗಮಿಸುತ್ತಿದ್ದಂತೆ, ಭಾರತದ ನೈಋತ್ಯ ಕರಾವಳಿ ಮತ್ತು ಅದರ ಮಧ್ಯ ಮತ್ತು ಪೂರ್ವ ಪ್ರದೇಶಗಳಲ್ಲಿ ಗುಡುಗು ಅಣಬೆಗಳು ಹುಟ್ಟುತ್ತವೆ.
ಇದು ಮಣ್ಣಿನ ಪರಿಮಳವನ್ನು ಹೊಂದಿದದು, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಮೊದಲ ಮಳೆ ಬಂದಾಗ ಗುಡುಗು ಮತ್ತು ಮಿಂಚಿನ ಪ್ರಭಾವಕ್ಕೆ ಹುಟ್ಟುಕೊಳ್ಳುತ್ತದೆ.
ನೈಋತ್ಯ ಕರಾವಳಿಯಲ್ಲಿ, ಅವು ದೊಡ್ಡ ಬಂಡೆಗಳ ಸುತ್ತಲಿನ ತೇವಾಂಶದ ಮಣ್ಣಿನಲ್ಲಿ ಬೆಳೆಯುತ್ತವೆ. ಜಾರ್ಖಂಡ್ ಮತ್ತು ಛತ್ತೀಸ್ಗಢದಲ್ಲಿ, ಅವು ಸಾಲ್ ಮರಗಳ ಕೆಳಗೆ ಕಂಡುಬರುತ್ತವೆ. ಛತ್ತೀಸ್ ಗಢದಲ್ಲಿ ಸಾಲ್ ಬೋಡಾ, ಜಾರ್ಖಂಡ್ ನಲ್ಲಿ ರುಂಗ್ಡಾ ಮತ್ತು ಕರ್ನಾಟಕದ ತುಳುನಾಡಿನಲ್ಲಿ ಕಲ್ಲ ಲಾಂಬು ಎಂದು ಕರೆಯಲಾಗುತ್ತದೆ.
ಗುಡುಗಿನ ಅಣಬೆಗಳನ್ನು ಆದಿವಾಸಿಗಳು ಮಾತ್ರ ಗುರುತಿಸಿ ಸವಿಯುತ್ತಿದ್ದ ಸಮಯವಿತ್ತು. ಆದರೆ ಇಂದು, ಅದರ ಖ್ಯಾತಿ ಮತ್ತು ರುಚಿ ಸಮುದಾಯಗಳನ್ನು ಮೀರಿ ವಿಸ್ತರಿಸಿದೆ.
ಜಾರ್ಖಂಡ್ನಲ್ಲಿ, ಗುಡುಗು ಅಣಬೆಗಳು ಸಾಮಾನ್ಯವಾಗಿ ಜೂನ್ ಮಧ್ಯದಿಂದ ಜುಲೈವರೆಗೆ ಲಭ್ಯವಿರುತ್ತವೆ. ತುಳುನಾಡಿನಲ್ಲಿ ಕಲ್ಲ ಲಾಂಬೂ ಒಂದು ಸೇರಿಗೆ ೬೦೦-೭೦೦ ರೂಪಾಯಿಗೆ ಮಾರಾಟವಾಗುತ್ತದೆ.
ಇದು ಸಾಮಾನ್ಯ ಅಣಬೆಯಂತೆ ಛತ್ರಿ ಆಕಾರದಲ್ಲಿರದೆ ದುಂಡಗೆ ಆಕಾರದಲ್ಲಿರುತ್ತದೆ, ಆದರೆ ಅದನ್ನು ಸುಭವಾಗಿ ಗುರುತಿಸಲು ಸಾಧ್ಯವಿಲ್ಲ ಎಕೆಂದರೆ ನಮಗೆ ಅವು ಕಲ್ಲುಗಳಂತೆ ಕಾಣುತ್ತವೆ. ಈ ಕಾರಣಕ್ಕಾಗಿ ಈ ಅಣಬೆಗಳನ್ನು ಕಲ್ಲ ಲಂಬೂ ಎಂದೂ ಕರೆಯುತ್ತಾರೆ,
ಈ ಅಣಬೆ ಸಸ್ಯಹಾರಿ ಆಹಾರ ವರ್ಗಕ್ಕೆ ಸೇರಿದೆ, ಆದರೆ ಇದನ್ನು ಮಾಸಂಹಾರಿ ಆಹಾರ ವರ್ಗದಲ್ಲೂ ಸೇರಿಸಲಾಗಿದೆ. ಏಕೆಂದರೆ ಇದರ ಖಾದ್ಯವನ್ನು ಮಾಡುವವರು ಹೆಚ್ಚಾಗಿ ಕೋಳಿಗೆ ಅರೆಯುವ ಮಸಾಲ ರೆಸಿಪಿಯನ್ನು ಇದಕ್ಕೆ ಬಳಸುತ್ತಾರೆ. ಇದರ ರುಚಿ ಸವಿದವರು ಬಲ್ಲರು.
ಈ ಕಲ್ಲ ಲಾಂಬೂ ಬಲೂ ಅಪರೂಪ ಏಕೆಂದರೆ ಎಲ್ಲಕಡೆ ಇದು ಹುಟ್ಟಲ್ಲ. ಅದರಲ್ಲೂ ಇಂದು ಪರಿಸರ ಮಾಲಿನ್ಯ , ಮಣ್ಣಿನ ಮಾಲಿನ್ಯದಿಂದಾಗಿ ಬಹಳ ಕಡಿಮೆಯಾಗಿದೆ.. ಇದನ್ನು ಮಾರುಟ್ಟೆಯಲ್ಲಿ ಸಿಗುವ ಅಣಬೆಯಂತೆ ನಾವು ಕೃಷಿ ಮಾಡಲು ಅಥವಾ ಬೆಳೆಸಲು ಸಾಧ್ಯವಿಲ್ಲ. ಇದನ್ನು ಸಂಗ್ರಹಿಸಿ ಇಡಲು ಕೂಡ ಸಾಧ್ಯವಿಲ್ಲ. ಇದರ ಅಯುಷ್ಯ ಒಂದೇ ದಿನ ಮಾತ್ರ. ಮರು ದಿನಕ್ಕೆ ಇದು ಕೆಡುತ್ತದೆ.