ಭಾರತವು ರಾಜ್ಯಗಳ ಒಕ್ಕೂಟವೆಂದು ಕರೆಯಲ್ಪಡುತ್ತದೆ. ಅದರಂತೆ ನಮ್ಮ ಸಂವಿಧಾನದಲ್ಲಿ ವಾಸಿಸುವ ಹಕ್ಕನ್ನು ಮೂಲಭೂತಹಕ್ಕುಗಳಲ್ಲಿ ಒಂದನ್ನಾಗಿ ಪ್ರಜೆಗಳಿಗೆ ನೀಡಲಾಗಿದೆ. ಭಾರತದ ಪ್ರಜೆಗಳಾದ ನಾವು ನಮ್ಮ ಸಂವಿಧಾನವನ್ನು ಶಿರಸಾ ವಹಿಸಿ ಪಾಲಿಸುತ್ತೆವೆ. ಮತ್ತು ಪಾಲಿಸಲೂ ಬೇಕು ಅದು ನಮ್ಮ ಆದ್ಯ ಕರ್ತವ್ಯವು ಹೌದು. ಅದರಂತೆ ನಮ್ಮ ನಾಡು ನುಡಿ ಬಗ್ಗೆಯೂ ಅಷ್ಟೇ ಗೌರವವನ್ನು ಸಲ್ಲಿಸುವುದು ನಮ್ಮ ಕರ್ತವ್ಯವಲ್ಲವೆ ? ನಮ್ಮರಾಜ್ಯದಲ್ಲಿ ನೋಡಿದರೆ ಕನ್ನಡಿಗರೆ ಹೊರಗಿನಿಂದ ಬಂದವರು ; ತಮಿಳು ತೆಲಗು ಮರಾಠಿ ಹಿಂದಿವಾಲಾಗಳೇ ಮೂಲ ನಿವಾಸಿಗಳು ಎಂಬಂತೆ ಇಲ್ಲಿ ಬಂದು ನಮ್ಮ ಪ್ರದೇಶಗಳನ್ನು ಆಕ್ರಮಿಸಿದ್ದಾರೆ. ಆದರೆ ಮೂಲ ನಿವಾಸಿಗಳು ತಮ್ಮ ಊರಿನಲ್ಲಿ, ತಮ್ಮ ರಾಜ್ಯದಲ್ಲೇ ತಮ್ಮ ಅಸ್ಥಿತ್ವವನ್ನು ಕಳೆದುಕೊಂಡು ತಮ್ಮ ಭಾಷೆಯನ್ನೇ ಇಂದು ಮರೆಮಾಚುವ ಪರಿಸ್ಥಿತಿ ಎದುರಾಗಿದೆ.
ಇದು ಕೇವಲ ಕರ್ನಾಟಕದ ಸಮಸ್ಯೆಯಲ್ಲ ಎಲ್ಲ ಮಹಾನಗರ ಮತ್ತು ಗಡಿನಗರಗಳಲ್ಲಿನ ಸಾಮಾನ್ಯ ಸಮಸ್ಯೆಯಾಗಿದೆ.ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್, ಚೆನೈ ಈ ಎಲ್ಲ ಊರುಗಳಲ್ಲಿ ಇಂತಹ ಭಾಷಾ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಕೆಲವು ಬಾರಿ ಎಲ್ಲ ರಾಜ್ಯದಲ್ಲೂ ಒಬ್ಬ ರಾಜ್ ಠಾಕ್ರೆಯಂತಹ ವ್ಯಕ್ತಿ ಇರಬಾರದಿತ್ತೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ೮ ಜನ ಬಿಹಾರ ರಾಜ್ಯದವರೆ ರೈಲ್ವೆ ಮಂತ್ರಿಗಳಾಗಿದ್ದಾರೆ ಇವರು ಮಾಡಿದ್ದು ಇಷ್ಟೇ ರೇಲ್ವೆ ನೇಮಕಾತಿಯಲ್ಲಿ ಬಿಹಾರ ಮತ್ತು ಉತ್ತರಪ್ರದೇಶದ ಜನರನ್ನು ನೇಮಿಸಿದ್ದು ಇದರ ಪರಿಣಾಮವಾಗಿ ಇಂದಿಗೂ ನಾವು ದಕ್ಷಿಣ ಭಾರತದಲ್ಲೂ ಉತ್ತರಭಾರತೀಯರನ್ನೇ ರೇಲ್ವೆ ವಿಭಾಗದಲ್ಲಿ ಕಾಣುತ್ತೇವೆ. ಆದರೆ ನಮ್ಮ ಒಬ್ಬ ಮಂತ್ರಿಯೂ ಇಂತಹ ಕೆಲಸವನ್ನು ಮಾಡಲಿಲ್ಲ.
ಈ ಹಿಂದೆ ಇಂತಹ ಒಂದು ನೇಮಕಾತಿ ನಡೆಯುವ ಸಮಯದಲ್ಲಿ ಮುಂಬೈನಲ್ಲಿ ರಾಜ್ ಠಾಕ್ರೆ ಜನರ ಮೇಲೆ ಹಲ್ಲೆ ಮಾಡಿಸಿದ್ದು ಎಲ್ಲ ಕಡೆ ವ್ಯಾಪಕವಾಗಿ ಪ್ರಚಾರ ಪಡೆದುಕೊಂಡು ಕಡೆಗೆ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಕ್ಷಮಾಪಣೆ ಕೇಳುವ ಮಟ್ಟಕ್ಕೆ ರಾಜಕೀಯ ತಿರುವು ಪಡೆದುಕೊಂಡಿತು ಆದರೆ ಇದರ ಹಿಂದಿನ ಪ್ರಾದೇಶಿಕತೆಯ ಹಿನ್ನೆಲೆಯನ್ನು ಯಾರೂ ಗಮನಿಸಲೇ ಇಲ್ಲ. 1956ರಲ್ಲಿ ಪ್ರಾದೇಶಿಕ ಭಾಷಾವಾರು ವಿಂಗಡನೆಯಾಗಿದ್ದು ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಳ್ಳಲಿ ಎಂಬ ಕಾರಣಕ್ಕೆ ಅಲ್ಲವೆ ? ಇಂತಹ ಮಹಾ ನಗರದಲ್ಲಿ ಅನ್ಯರಾಜ್ಯದವರೆ ತುಂಬಿಕೊಂಡರೆ ಸ್ಥಳಿಯರು ಏನು ಮಾಡುವುದು ? ಇಂದು ನಮ್ಮ ರಾಜ್ಯವನ್ನೇ ತೆಗೆದುಕೊಳ್ಳಿ ಎಲ್ಲ ಕಡೆ ಉತ್ತರ ಭಾರತೀಯರೇ ಬೇರು ಬಿಟ್ಟಿದ್ದಾರೆ. ಅವರು ಇಲ್ಲಿ ಬಂದು ನಮ್ಮವರ ಅಧೀನದಲ್ಲೇ ಉದ್ಯೋಗ ವನ್ನು ಪ್ರಾರಂಭಿಸಿ ಇಂದು ನಮ್ಮ ಜನರ ಅವರ ಬಳಿ ಕೆಲಸಕ್ಕಾಗಿ, ಅಂಗಲಾಚುತ್ತಿದ್ದಾರೆ. P.G ರಿಯಲ್ ಎಸ್ಟೇಟ್ ಅಷ್ಟೇ ಏಕೆ ಪಾನಿಪುರ ಮಾರುವುದರಲ್ಲೂ ತಮ್ಮ ಪಾರಮ್ಯವನ್ನು ಮೆರೆದಿದ್ದಾರೆ. ನಮ್ಮ ಜನ ಹೆಚ್ಚಿಗೆ ಹಣದ ವ್ಯಾಮೋಹಕ್ಕೆ ಬಿದ್ದು ವಿದೇಶದಲ್ಲಿ ಅಥವಾ ಬೇರೆ ನಗರಗಳಲ್ಲಿ ವಾಸಿಸಲು ತೆರಳಿ ಅಲ್ಲಿ ಮತ್ತೊಬ್ಬರ ಕೈಯಾಳಾಗಿ ದುಡಿಯವಂತಹ ಪರಿಸ್ಥಿತಿಯನ್ನು ತಂದುಕೊಂಡಿದ್ದೇವೆ.
ನಮ್ಮ ಜನರು ತಮ್ಮ ಭಾಷಾ ಸ್ವಾಭಿಮಾನವನ್ನು ಬಿಟ್ಟು ಬೇರೆ ಭಾಷೆಯಲ್ಲಿ ಬರೆದ ಬೋರ್ಡ್ ಗಳನ್ನು ತಮ್ಮ ಅಂಗಡಿಯ ಮುಂದೆ ನೇತು ಹಾಕುತ್ತಿದ್ದಾರೆ. ಒಂದು ವೇಳೆ ಅಭಿಮಾನದಿಂದ ತಮ್ಮ ಭಾಷೆಯಲ್ಲಿ ಬೋರ್ಡ್ ಹಾಕಿದ್ದರೆ ವ್ಯವಹರಿಸಲು ಬರುತ್ತಿದ್ದ ವ್ಯಕ್ತಿ ಕನ್ನಡದಲ್ಲಿ ಅಥವಾ ಆಯಾ ಪ್ರದೇಶದ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದ ಇದು ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಜಾರಿಗೆ ತಂದಿದ್ದು ಇದನ್ನೇ ಇದರಲ್ಲಿ ತಪ್ಪೇನಿದೆ ಎಂದು ವಿಚಾರ ಮಾಡಿದಾಗ ಕನ್ನಡಕ್ಕೊಬ್ಬ ರಾಜ್ ಠಾಕ್ರೆಯ ಅವಶ್ಯಕತೆ ಇದೆಯಲ್ಲವೇ ? ಮುಂದುವರೆಯುತ್ತದೆ.