ತಾರಕ ಮೆಹ್ತಾ ಕಾ ಉಲ್ಟಾ ಚಸ್ಮಾ ಎಂಬ ಕಾರ್ಯಕ್ರಮದ ಹೆಸರನ್ನು ಕೇಳದವರು ಬಹುಶಃ ಯಾರು ಇರಲಿಕ್ಕಿಲ್ಲ. ಒಂದು ಬಾರಿ ಈ ಕಾರ್ಯಕ್ರಮದ ಗೀಳು ನಿಮಗೆ ಹತ್ತಿದರೆ ಮುಗಿತು ಕೊನೆಯವರೆಗೆ ಇದು ನಿಮ್ಮನ್ನು ನಗೆಗಡಲಲ್ಲಿ ತೆಲಿಸಿಕೊಂಡು ಹೋಗುತ್ತದೆ. ಒಂದು ಬೆಳಗ್ಗೆ ಈ ಕಾರ್ಯಕ್ರಮ ಪ್ರಾರಂಭವಾದರೆ ಮುಗಿತು ರಾತ್ರಿಯವರೆಗೆ ಸಮಯ ಕಳೆದದ್ದೇ ತಿಳಿಯುವುದಿಲ್ಲ.
ಸೋನಿ ಸಬ್ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮ ಪ್ರಾರಂಭವಾಗಿ ಸುಮಾರು 15 ವರ್ಷಗಳಾಗಿದ್ದು ಇಲ್ಲಿಯವರೆಗೆ ಸುಮಾರು 5500ಕ್ಕೂ ಅಧಿಕ ಎಪಿಸೋಡಗಳು ತೆರೆಕಂಡಿವೆ ಅಂದರೆ ಇದರ ಪ್ರಸಿದ್ಧಿಯನ್ನು ಅಂದಾಜಿಸಬಹುದು. ಕೇವಲ ಹಾಸ್ಯವನ್ನೇ ಪ್ರಧಾನ ಆಶಯವನ್ನಾಗಿ ಇಟ್ಟುಕೊಂಡು ಅದರ ಮೇಲೆ ಇಷ್ಟೋಂದು ದೊಡ್ಡ ಪ್ರಮಾಣದ ಹೆಸರು ಮಾಡಿದೆ ಎಂದರೆ ನಿಜಕ್ಕೂ ಆಶ್ಚರ್ಯವೇ ಸರಿ.
ಈ ಕಾರ್ಯಕ್ರಮದ ನಿರ್ದೇಶ ಆಸಿತ್ ಕುಮಾರ ಮೋದಿ ಇವರು ಗುಜರಾತಿ ಹಾಸ್ಯ ಸಾಹಿತಿ ಪದ್ಮಶ್ರೀ ತಾರಕ ಮೇಹ್ತಾ ಅವರು ಪುಸ್ತಕವನ್ನು ದೃಶ್ಯರೂಪಕ್ಕೆ ಮತ್ತು ಕಥಾ ವಿಸ್ತೀರ್ಣವನ್ನು ಮಾಡಿದ್ದಾರೆ.
ಇದರಲ್ಲಿ ಬರುವ ಒಂದೊಂದು ಪಾತ್ರಗಳು ಮುಖದಲ್ಲಿ ನಗೆಯನ್ನು ಮೂಡಿಸುವಂತವು. ಧಾರಾವಾಹಿಯ ಮುಖ್ಯ ಪಾತ್ರ ಜೇಠಾಲಾಲ್ ಒಬ್ಬ ಗುಜರಾತಿ ವ್ಯಾಪಾರಿಯಾಗಿದ್ದು ಆತನ ದೈನಂದಿನ ಜೀವನದಲ್ಲಿ ನಡೆಯುವ ಘಟನೆಗಳೆ ಈ ಧಾರಾವಾಹಿಯ ಕಥಾ ಹೂರಣವಾಗಿದೆ. ದಿನನಿತ್ಯದಲ್ಲಿ ಬರುವ ಸಣ್ಣ ತೊಂದರೆಗಳನ್ನೇ ಇಟ್ಟುಕೊಂಡು ಅದರಲ್ಲಿ ಹಾಸ್ಯ ಭರಿತ ಸಂಭಾಷಣೆಯನ್ನು ಸಮ್ಮೇಳಿಸಿ ನೊಡುಗರಿಗೆ ಮನೋರಂಜನೆಯನ್ನು ನೀಡುತ್ತದೆ.
ಈ ಕಾರ್ಯಕ್ರಮದ ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಮನೋರಂಜನೆಯ ಜೊತೆ ಜೊತೆಗೆ ಮಾನವಿಕ ಮೌಲ್ಯಗಳನ್ನು ಸಹ ತಿಳಿಸಿಕೊಡುತ್ತದೆ. ಇದರಿಂದ ನೋಡುಗನಿಗೆ ಮೌಲ್ಯದೊಂದಿಗೆ ಮನೊರಂಜನೆ ದೊರೆಯುತ್ತದೆ. ಅದು ಕ್ಯಾನ್ಸರ್ ರೋಗಿಯ ಭಾವನೆಯಿರಬಹುದು, ಚಿಕ್ಕ ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬೀರುವುದಾಗಲಿ ಅಥವಾ ದೇಶದ ಗೌರವ ಮತ್ತು ಅಖಂಡತೆಯನ್ನು ತಿಳಿಸುವುದಾಗಲಿ, ಬಾಲ ಕಾರ್ಮಿಕ, ವರದಕ್ಷಿಣೆಯ ಸಮಸ್ಯೆ ಸ್ತ್ರೀ ಭ್ರೂಣಹತ್ಯೆ , ಮತದಾನದ ಮಹತ್ವ , ಸ್ವಚ್ಚ ಭಾರತ ಅಭಿಯಾನದಂತಹ ಅನೇಕ ಜ್ವಲಂತ ಸಮಸ್ಯೆಗಳಿಗೆ ತಮ್ಮದೇ ಯಾದ ರೀತಿಯಲ್ಲಿ ಪರಿಹಾರವನ್ನು ನೀಡುತ್ತದೆ.
ಈ ಕಾರ್ಯಕ್ರಮದ ಅಭಿಮಾನಿಗಳ ದೊಡ್ಡ ಬಳಗೆ ಇದೆ ಅದರಲ್ಲಿ ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೊದಿಯವರು ತಮ್ಮ ಸ್ವಚ್ಚ ಭಾರತ ಅಭಿಯಾನಕ್ಕೆ ಸಂಪೂರ್ಣ ಧಾರಾವಾಹಿ ತಂಡವನ್ನೇ ರಾಯಭಾರಿಯನ್ನಾಗಿ ನೇಮಿಸಿದ್ದಾರೆ, ಅಲ್ಲದೆ ಚಿತ್ರರಂಗದ ಪ್ರಮುಖರಾದ ಅಮಿತಾಭ ಬಚ್ಚನ್, ಧರ್ಮೇಂದ್ರ, ಹೇಮಾಮಾಲಿನಿ, ಶಾರೂಖ ಖಾನ , ಸಲ್ಮಾನ ಖಾನ ದೀಪಿಕಾ ಪಡಕೋಣೆ ಹೀಗೆ ಅನೇಕ ಪ್ರಖ್ಯಾತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ದೈನಂದಿನ ಜೀವನದ ಝಂಜಾಟದಲ್ಲಿ ಇಂತಹ ಕಾರ್ಯಕ್ರಮವನ್ನು ಅರ್ಧಗಂಟೆ ನೋಡಿದರೆ ಸಾಕು ಒತ್ತಡವು ಕಡಿಮೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಮತ್ತು ಇಂತಹ ಕಾರ್ಯಕ್ರಮಗಳು ಎಲ್ಲ ಭಾಷೆಯಲ್ಲಿ ಮೂಡಿ ಬರಲಿ ಎಂಬುದೇ ಆಶಯ.