ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಸಾಕು ಮನೆಯಲ್ಲಿರುವ ಬಲ್ಬ್ಗಳ, ಟ್ಯೂಬ್ ಲೈಟ್ಗಳ ಮೇಲೆ ಕೀಟಗಳು ಕುಳಿತುಕೊಳ್ಳುತ್ತವೆ. ನಾವು ಎಷ್ಟೇ ಪ್ರಯತ್ನಿಸಿದರೂ ಅವುಗಳು ಆ ಸ್ಥಳ ಬಿಟ್ಟು ಹೋಗುವುದಿಲ್ಲ.
ಮಳೆಗಾಲವು ಪ್ರಕೃತಿಯು ಸಾಮರಸ್ಯ ಮತ್ತು ಸಮತೋಲನವನ್ನು ಸೃಷ್ಟಿಸುವ ಸಮಯವಾಗಿದೆ. ಎಷ್ಟೋ ಜನರಿಗೆ ಮಳೆಗಾಲ ಅಂದರೆ ತುಂಬಾ ಇಷ್ಟ. ಈ ಸಮಯದಲ್ಲಿ ಬೀಸುವ ಶುದ್ಧ ಗಾಳಿ, ಬೀಳುವ ಇಬ್ಬನಿ ಎಲ್ಲರ ಮನಸ್ಸಿಗೂ ಮುದ ನೀಡುತ್ತದೆ. ಆದರೆ ಕ್ರಿಮಿ ಕೀಟಗಳಿಗೆ ಮಾತ್ರ ಮಳೆಗಾಲ ಸಂಕಷ್ಟ ತಂದುಬಿಡುತ್ತದೆ.
ಆದರೆ ಮಾನ್ಸೂನ್ನಲ್ಲಿ ಈ ಕೀಟಗಳನ್ನು ಓಡಿಸುವುದು ಹೇಗೆ ಎಂಬುದರ ಬಗ್ಗೆ ತಿಳಿಯುವುದಾದರೆ
ಮಾರಿಗೋಲ್ಡ್ ಮತ್ತು ತುಳಸಿ: ಮನೆಯ ಮೂಲೆಯಲ್ಲಿ ಮಾರಿಗೋಲ್ಡ್ ಹೂವುಗಳು ಅಥವಾ ತುಳಸಿ ಎಲೆಗಳನ್ನು ಇಡುವುದರಿಂದ ಮನೆಗೆ ಪ್ರವೇಶಿಸುವ ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದಾಗಿದೆ.
ಮನೆಯನ್ನು ಸ್ವಚ್ಛವಾಗಿಡಿ: ಮಳೆಗಾಲದಲ್ಲಿ ಮನೆಯನ್ನು ಶುಚಿಗೊಳಿಸುತ್ತಾ ಇರಬೇಕು. ಕಿಟಕಿ, ಬಾಗಿಲು, ಟ್ಯೂಬ್ ಲೈಟ್, ಬಲ್ಬ್ ಗಳನ್ನು ಸ್ವಚ್ಛಗೊಳಿಸಲು ಎರಡು ಕಪ್ ನೀರಿಗೆ, ಒಂದು ಕಪ್ ವಿನೆಗರ್ ಮತ್ತು ನಿಂಬೆ ರಸದ ಮಿಶ್ರಣವನ್ನು ಸೇರಿಸಿ ಈ ಮಿಶ್ರಣದಲ್ಲಿ ಬಟ್ಟೆಯನ್ನು ಅದ್ದಿ ಕಿಟಕಿಗಳು ಮತ್ತು ಬಾಗಿಲುಗಳ ಜೊತೆಗೆ ಬಲ್ಬ್ಗಳು ಮತ್ತು ಟ್ಯೂಬ್ಲೈಟ್ಗಳನ್ನು ಸ್ವಚ್ಛಗೊಳಿಸಬೇಕು. ಇದರಿಂದಾಗಿ ಕೀಟಗಳು ಮನೆಯೊಳಗೆ ಹೆಚ್ಚಾಗಿ ಬರುವುದಿಲ್ಲ.
ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ: ಸಂಜೆ ಲೈಟ್ ಆನ್ ಮಾಡುವ ಮುನ್ನ, ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಡಬೇಕು. ಹೀಗೆ ಮಾಡುವುದರಿಂದ ಕೀಟಗಳು ಮನೆಗೆ ಒಮ್ಮೆಲೆ ಪ್ರವೇಶಿಸುವುದಿಲ್ಲ. ಇದರಿಂದ ಕಿಟಗಳ ಪ್ರವೇಶವನ್ನು ತಡೆಯಬಹುದು.
ಲೈಟ್ ಆಫ್ ಮಾಡಿ: ಮಳೆಗಾಲದಲ್ಲಿ ಮನೆಯಲ್ಲಿ ಟ್ಯೂಬ್ ಲೈಟ್ಗಳಿದ್ದರೆ, ಲೈಟ್ ಗಳಿಗೆ ಹುಳಗಳು ಬರುತ್ತವೆ ಅದಕ್ಕೆ ನಾವು ಆ ಹುಳ ಬಂದ ಕೂಡಲೇ ಲೈಟನ್ನು ಆಫ್ ಮಾಡಬೇಕು. ಬಂದ್ ಮಾಡಿದರೆ ಮನೆಗೆ ಬರುವ ಕೀಟ, ನೊಣಗಳು ದೂರವಾಗುತ್ತವೆ.
ಏರ್ ಫ್ರೆಶ್ನರ್ ತಯಾರಿಸಿ: ಮಳೆಗಾಲದಲ್ಲಿ ಮನೆಗೆ ಬರುವ ಕೀಟಗಳನ್ನು ತಡೆಯಲು ಒಂದು ಬಟ್ಟಲಿನಲ್ಲಿ ಅಡುಗೆ ಸೋಡಾ, ಕೆಲವು ಹನಿ ನೀಲಗಿರಿ, ಸಿಟ್ರೊನೆಲ್ಲಾ, ಸಾರಭೂತ ತೈಲ, ನಿಂಬೆ ರಸವನ್ನು ಮಿಶ್ರಣ ಮಾಡಿ ಏರ್ ಫ್ರೆಶ್ನರ್ ಸಿದ್ಧಪಡಿಸಿಕೊಂಡು. ನಂತರ ಸಿದ್ಧಪಡಿಸಿದ ಮಿಶ್ರಣವನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಮತ್ತು ದಿನದಲ್ಲಿ ಕೆಲವು ಬಾರಿ ಮನೆಗೆ ಸಿಂಪಡಿಸುತ್ತಾ ಇರಬೇಕು. ಇದರಿಂದ ನೊಣಗಳು ಮತ್ತು ಕೀಟಗಳು ಮನೆಯೊಳಗೆ ಬರುವುದು ಸ್ವಲ್ಪ ಮಟ್ಟಿಗೆ ಕಡಿಮೆ ಆಗಬಹುದು.