ಚುನಾವಣೆಯ ಸೊಸ್ತಿಲಲ್ಲಿ ವಿವಿಧ ಯೋಜನೆಗಳನ್ನು ಆಶ್ವಾಸನೆಗಳನ್ನು ನೀಡಿ ಪ್ರಚಾರಮಾಡಿ ಜನರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೇಸ್ ಈಗ ತನ್ನ ಭರವಸೆಗಳನ್ನು ಪೂರೈಸುವುದಾಗಿ ಮುಂದಾಗಿದೆ.
ಐದು ಗ್ಯಾರಂಟಿ ಘೋಷಣೆಗಳಿಗೆ ತಾತ್ವಿಕ ಒಪ್ಪಿಗೆ ಸಿಕ್ಕಿದಾಗಿದೆ. ಮುಂದಿನ ಕ್ಯಾಬಿನೆಟ್ ಸಭೆಯ ಬಳಿಕ ಅಧಿಕೃತವಾಗಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿಕೆಯನ್ನು ನೀಡಿದ್ದಾರೆ.
ಐದು ಗ್ಯಾರಂಟಿ ಯೋಜನೆಗಳು ಗೃಹಲಕ್ಷ್ಮಿ, ಗೃಹಜ್ಯೋತಿ,ಅನ್ನ ಭಾಗ್ಯ, ಯುವನಿಧಿ, ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ.
ಈ ಯೋಜನೆಯ ಘೋಷಣೆ ಮಾಡಬೇಕಾದರೆ ಅಥವಾ ಇದನ್ನು ನಂಬಿರುವ ಜನರು ಯೋಚನೆ ಮಾಡಿರಲು ಸಾಧ್ಯವಿಲ್ಲ ಇದೆಲ್ಲ ಸಾಧ್ಯವೇ ಅಂತ. ಸರ್ಕಾರದ ಬೊಕ್ಕಸದಿಂದ ಎಷ್ಟು ಕೋಟಿ ಖರ್ಚಾಗಬಹುದು ಎಂಬ ಲೆಕ್ಕಚಾರವನ್ನು ಯಾರು ಊಹಿಸಿರಲು ಸಾಧ್ಯವಿಲ್ಲ.
ಈಗ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಹೇಳಿಕೆಯ ಪ್ರಕಾರ ಐದು ಗ್ಯಾರಂಟಿ ಯೋಜನೆ ಈಡೇರಿಕೆಗೆ ರಾಜ್ಯದಲ್ಲಿ ಒಂದು ಲೆಕ್ಕಚಾರದ ಪ್ರಕಾರ ೫೦ ಸಾವಿರ ಕೋಟಿ ರೂ ಬೇಕಾಗುತ್ತದೆ. ರಾಜ್ಯದ ಬಜೆಟ್ ಮೂರು ಲಕ್ಷದ ಹತ್ತು ಸಾವಿರ ಕೋಟಿ ರೂ. ಈ ಐದು ಯೋಜನೆಗಳನ್ನು ಐದು ವರ್ಷದ ಅವಧಿಯಲ್ಲಿ ಈಡೇರಿಕೆ ಮಾಡುವಂತದ್ದು.
ಇದರಲ್ಲಿ ಯುವನಿಧಿ ಯೋಜನೆಯು ಈಗಾಗಲೇ ಯುವಕರನ್ನು ನಿರಾಶೆಗೊಳಿಸಿದೆ. ಯಾಕೆಂದರೆ ಈ ಯೋಜನೆಯು ೨೦೨೨-೨೩ ನೇ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ನಿರೋದ್ಯೋಗಿ ಪದವಿದಾರರಿಗೆ ೩೦೦೦ ಮತ್ತು ಡಿಪ್ಲೊಮ ಪದವಿದಾರರಿಗೆ ೧೫೦೦ ಮಾಸಿಕ ಭತ್ಯೆ ಕೇವಲ ಎರಡು ವರ್ಷಗಳ ಕಾಲಕ್ಕೆ ಅನ್ವಯವಾಗುತ್ತದೆ.ಉದ್ಯೋಗ ಸಿಕ್ಕಿದಲ್ಲಿ ನಿರುದ್ಯೋಗ ಭತ್ಯೆಯನ್ನು ನಿಲ್ಲಿಸಲಾಗುವುದು. ಈ ತರದ ಒಂದು ಷರತ್ತನ್ನು ಅನ್ವಯಗೊಳಿಸಿದೆ.
ಇನ್ನು ಉಳಿದ ಯೋಜನೆಗಳ ಷರತ್ತು ಮತ್ತು ವ್ಯಾಲಿಡಿಟಿಯ ಬಗ್ಗೆ ಇನ್ನಷ್ಟು ಮಾಹಿತಿಗಳು ಸದ್ಯಕ್ಕೆ ನಿಗೂಢವಾಗಿದೆ. ಅಧಿಕೃತ ಘೋಷಣೆಯ ಸಂದರ್ಭದಲ್ಲಿ ಎಲ್ಲವು ಹೊರಬೀಳಬಹದು. ಎನೇ ಆಗಲಿ ಸರ್ಕಾರದ ಘೋಷಣೆಯ ಈಡೇರಿಕೆ ಆಗುವಲ್ಲಿ ಜನಸಾಮನ್ಯರಿಗೆ ಯಾವುದೇ ರೀತಿಯಲ್ಲಿ ಆರ್ಥಿಕ ಬರೆ ಬೀಳದಿದ್ದರೆ ಸಾಕು ಎಕೆಂದರೆ ಈ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲು ತಗಲುವ ವೆಚ್ಚವು ತೆರಿಗೆಯನ್ನು ಕಟ್ಟುನಿಟ್ಟಾಗಿ ಸಂಗ್ರಹ ಮಾಡುವ ಮೂಲಕ ಕಾರ್ಯರೂಪಕ್ಕೆ ಬರಲಿದೆ.