ಬೆಂಗಳೂರು: ಆಫ್ರಿಕಾದ ಕೀನ್ಯಾದಲ್ಲಿ ಹಲವು ದಿನಗಳಿಂದ ಮಾನವ-ವನ್ಯಜೀವಿ ಸಂಘರ್ಷ ತಾರಕಕ್ಕೇರಿದೆ.
ಕೀನ್ಯಾದ ಜನತೆ ಸಿಂಹಗಳನ್ನೇ ಗುರಿಯಾಗಿಸಿ ಹತ್ಯೆ ಮಾಡುತ್ತಿದ್ದಾರೆ. ಕಳೆದ ವಾರದಲ್ಲಿ ಬರೋಬ್ಬರಿ 10 ಸಿಂಹಗಳನ್ನು ಹತ್ಯೆಗೈದಿದ್ದಾರೆ ಎಂದು ಸಿಎನ್ ಎನ್ ವರದಿ ಮಾಡಿದೆ. ಇನ್ನು ಶನಿವಾರ ಒಂದೇ ದಿನ 6 ಸಿಂಹಗಳನ್ನು ಹತ್ಯೆ ಮಾಡಲಾಗಿದೆ ಎಂದು ಕೀನ್ಯಾದ ವನ್ಯ ಜೀವಿ ಸೇವಾ ವಿಭಾಗ ಮಾಹಿತಿ ನೀಡಿದೆ.
ಇತ್ತೀಚಿಗಷ್ಟೆ ಹತ್ಯೆಯಾದ ಕೀನ್ಯಾದ ಅತ್ಯಂತ ಹಿರಿಯ ಸಿಂಹ ಲೂನ್ ಕಿಟೋ ವನ್ನು ಹತ್ಯೆ ಮಾಡಿದ್ದರು. ಕೀನ್ಯಾದಲ್ಲಿ ದನಗಾಹಿಗಳು, ಕುರಿಗಾಹಿಗಳು ಹೆಚ್ಚಾಗಿದ್ದಾರೆ. ಕೆಲವು ದಿನಗಳಿಂದ ಸಿಂಹಗಳು ಸಾಕಿದ್ದ 11 ಮೇಕೆಗಳನ್ನು ಹತ್ಯೆ ಮಾಡಿದ್ದವು. ಇದರಿಂದ ರೊಚ್ಚಿಗೆದ್ದ ಜನರು ಸಿಂಹಗಳನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆಯ್ಕೆಗಾಗಿ ಕಾಂಗ್ರೆಸ್ ಅಖಾಡದಲ್ಲಿ ಬಿರುಸಿನ ಸಭೆ ನಡೆಯುತ್ತಿದೆ. ಈಗಾಗಲೇ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಹೋಗಬೇಕಿತ್ತು. ಆದರೆ ಈಗ ಡಿಕೆಶಿ ತಮ್ಮ ಪ್ರವಾಸವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನೋ ಸೋಂಕಾಗಿದೆ, ಹೊಟ್ಟೆ ನೋವು ಇದೆ, ವೈದ್ಯರು ಈಗ ಬರುತ್ತಿದ್ದಾರೆ ಹಾಗಾಗಿ ದೆಹಲಿ ಪ್ರವಾಸವನ್ನು ರದ್ದುಗೊಳಿಸುತ್ತಿರುವುದಾಗಿ ಹೇಳಿದ್ದಾರೆ.
ಭಾರತ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ದೊರಕಿಸಿಕೊಂಡಿರುವ 71 ಸಾವಿರ ಜನರಿಗೆ ಪ್ರಧಾನಿ ನರೇಂದ್ರ ಮೋದಿ ನಾಳೆ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.
ದೇಶದ 45 ವಿವಿಧ ಸ್ಥಳಗಳಲ್ಲಿ ಈ ಉದ್ಯೋಗ ಮೇಳ ನಡೆಯಲಿದ್ದು, ಕೇಂದ್ರಾಡಳಿತ ಪ್ರದೇಶಗಳು, ಎಲ್ಲಾ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹುದ್ದೆ ಪಡೆದುಕೊಂಡಿರುವವರಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಕಾರ್ಡ್ ಡೋಕನೈಸೇಷನ್ ವ್ಯವಸ್ಥೆ ಆಯ್ಕೆ ಮಾಡಿಕೊಂಡಿರುವ ರುಪೇ ಕಾರ್ಡ್ ಗ್ರಾಹಕರು ಇನ್ನು ಮುಂದೆ ಸಿವಿವಿ ಇಲ್ಲದೆ ವ್ಯವಹಾರ ಮಾಡಬಹುದು ಎಂದು ಎನ್ ಪಿಸಿಐ ತಿಳಿಸಿದೆ.
ಗ್ರಾಹಕರು ಸಿವಿವಿ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ ಎಂದು ಎನ್ ಪಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಡೆಬಿಟ್, ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ತಮ್ಮ ವಹಿವಾಟಿನ ವೇಳೆಯಲ್ಲಿ ಯಾವುದೇ ಕಾರ್ಡ್ ವಿವರ ನೀಡದೇ ಇರಬಹುದಾಗಿದೆ.
ಅದಾನಿ ಸಮೂಹದ ಬಗ್ಗೆ 2016ರಿಂದ ಯಾವುದೇ ರೀತಿಯ ತನಿಖೆ ನಡೆದಿಲ್ಲ ಎಂದು ಸೆಕ್ಯುರಿಟಿ ಮತ್ತು ಎಕ್ಸ್ ಚೇಂಜ್ ಬೋರ್ಡ್ (ಸೆಬಿ) ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಅದಾನಿ ಕಂಪನಿ ವಿರುದ್ದ ಹಿಂಡೆನ್ಬರ್ಗ್ ಮಾಡಿದ ಆರೋಪದ ಕುರಿತು ತನಿಖೆ ನಡೆಸಲು 6 ತಿಂಗಳ ಕಾಲಾವಕಾಶ ಬೇಕೆಂದು ಸೆಬಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಮುಖ್ಯ ನ್ಯಾ. ಡಿ.ವೈ. ಚಂದ್ರಚೂಡ್, ನ್ಯಾ. ಪಿ.ಎಸ್. ನರಸಿಂಹ ಮತ್ತು ನಾ. ಜೆ. ಬಿ. ಪರ್ದಿವಾಲಾ ಪೀಠದಲ್ಲಿ ನಡೆಯಿತು.
ಈ ವೇಳೆ ಸೆಬಿ ತನಿಖೆ ನಡೆಸಲು ಸಮಯ ವಿಸ್ತರಣೆಯ ಅಗತ್ಯವಿದೆ ಎಂದು ಕೋರಿತು, ಇದಕ್ಕೆ ಉತ್ತರಿಸಿದ ನ್ಯಾಯಪೀಠ, ಈಗ 6 ತಿಂಗಳು ಸಮಯ ನೀಡಲು ಸಾಧ್ಯವಿಲ್ಲ, ಒಂದು ತಂಡವನ್ನು ರಚಿಸಿ ಕೆಲಸ ಮಾಡಿ, ಆಗಸ್ಟ್ ಮಧ್ಯದಲ್ಲಿ ಪ್ರಕರಣವನ್ನು ಪಟ್ಟಿ ಮಾಡಬಹುದು ಎಂದು ಆದೇಶಿಸಿದೆ.
ಅದಾನಿ ಸಮೂಹ ಮ್ಯಾರಿಷಸ್ ಮೂಲದ ಶೆಲ್ ಕಂಪನಿಗಳನ್ನು ಬಳಸಿ ಷೇರ್ ಮಾರುಕಟ್ಟೆಯಲ್ಲಿ ಬೆಕೆಯನ್ನು ಕೃತಕವಾಗಿ ಹೆಚ್ಚಳ ಮಾಡುತ್ತಿದೆ ಎಂದು ಹಿಂಡನ್ಬರ್ಗ್ ಆರೋಪಿಸಿತ್ತು.