ಭೃಂಗರಾಜ ಮನೆಯ ಗಾರ್ಡನ್ ಏರಿಯದಲ್ಲಿ ಅಥವಾ ಕಳೆಕುಂಟೆಗಳ ಮಧ್ಯದಲ್ಲಿ ಹೇರಳವಾಗಿ ಬೆಳೆಯುತ್ತದೆ. ಮನೆ ಮದ್ದು ಆಗಿರುವ ಭೃಂಗರಾಜ ಗಾಯಗಳಿಗೆ ಹಚ್ಚಿದರೆ ಬೇಗನೆ ಗುಣವಾಗುತ್ತದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ.
ನೀರಿನ ಪಸೆ ಇರುವಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಇದರ ಔಷಧೀಯ ಗುಣ ಬಲ್ಲವರು ಸರಿಯಾದ ರೀತಿಯಲ್ಲಿ ಬಳಸುತ್ತಾರೆ. ಭೃಂಗರಾಜ ಚರ್ಮರೋಗ, ಗಂಟಲು ನೋವು, ಕಣ್ಣಿನ ಆರೈಕೆ, ತಲೆನೋವು, ಹಲ್ಲು ನೋವು ಹಾಗೂ ದೇಹವನ್ನು ತಂಪಾಗಿಸಲು ಸಹಕಾರಿ.
ಯಾವೆಲ್ಲ ರೀತಿಯಲ್ಲಿ ಭೃಂಗರಾಜವನ್ನು ಕೂದಲಿನ ಆರೈಕೆಗೆ ಬಳಸಬಹುದು ಗೊತ್ತಾ?
ವಿಧಾನ-01
ಭೃಂಗರಾಜದ ಎಲೆಗಳನ್ನು ಒಣಗಿಸಿ ಅದನ್ನು ಪುಡಿ ಮಾಡಿ ಮೆಂತ್ಯ ಪುಡಿಯೊಂದಿಗೆ ನೀರನ್ನು ಮಿಶ್ರಗೊಳಿಸಿ ಕೂದಲಿನ ಬುಡಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನ ಮಾಬೇಕು.
ವಿಧಾನ-02
ಸಾಧ್ಯವಾದಲ್ಲಿ ದಿನ ಅಥವಾ ವಾರಕ್ಕೆ ಎರಡು ಬಾರಿ ಭೃಂಗರಾಜದ ಎಲೆಯ ರಸವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಕುದಿಸಿ ತಣ್ಣಗಾದ ಮೇಲೆ ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದರುವುದನ್ನು ತಡೆಗಟ್ಟಬಹುದು.
ವಿಧಾನ-03
ಭೃಂಗರಾಜದ ಎಲೆಯನ್ನು ಒಣಗಿಸಿ, ಕರಿಬೇವಿನ ಎಲೆಯನ್ನು ಕೂಡ ಒಣಗಿಸಿ ತೆಂಗಿನ ಎಣ್ಣೆಯಲ್ಲಿ ಬೆರೆಸಿ ಕುದಿಸಿ ತಣ್ಣಗಾದ ಮೇಲೆ ತಲೆಗೆ ಹಚ್ಚಿದಲ್ಲಿ ಕೂದಲು ಸೊಂಪಾಗಿ ಬೆಳೆಯುತ್ತದೆ. ಜೊತೆಗೆ ಕೂದಲು ಕಪ್ಪಾಗಾಗುತ್ತದೆ. ಬಿಳಿ ಕೂದಲಿನ ಸಮಸ್ಯೆ ಕಡಿಮೆಯಾಗುತದೆ.