ಚಾರ್ಧಾಮ್ ಯಾತ್ರೆ ಈಗಾಗಲೇ ಪ್ರಾರಂಭವಾಗಿದ್ದು,ಉತ್ತರಾಖಂಡ ಸರ್ಕಾರವು ಚಾರ್ಧಾಮ್ ತೀರ್ಥ ಯಾತ್ರಿಕರಿಗೆ ಕನ್ನಡದಲ್ಲಿ ಆರೋಗ್ಯ ಸೂಚನೆಯನ್ನು ನೀಡಿದೆ.
ಈ ಹಿಂದೆ ಬರೀ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಆರೋಗ್ಯ ಸೂಚನೆಯನ್ನು ನೀಡುತ್ತಿದ್ದು, ಸಾಕಷ್ಟು ಯಾತ್ರಾರ್ಥಿಗಳಿಗೆ ಇದು ಪೂರ್ಣವಾಗಿ ಅರ್ಥವಾಗುತ್ತಿರಲಿಲ್ಲ. ಆದರಿಂದ ಈ ಭಾರಿ ಕನ್ನಡ ಸೇರಿದಂತೆ ೧೧ ಭಾಷೆಗಳಲ್ಲಿ ಆರೋಗ್ಯ ಸೂಚಿಯನ್ನು ಸರ್ಕಾರ ನೀಡಿದೆ. ಯಾತ್ರೆಗೂ ಮುನ್ನ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಬರೀ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸೂಚನೆ ನೀಡುವುದರಿಂದ ಎಲ್ಲರಿಗೂ ಅರ್ಥವಾಗುತ್ತಿರಲಿಲ್ಲ ಆದರಿಂದ ಆಯಾ ಊರಿನ ಭಾಷೆಯಲ್ಲಿ ಸೂಚನೆಯನ್ನು ನೀಡಿದರೆ ಯಾತ್ರಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುತ್ತದೆ ಎಂದು ಉತ್ತರಾಖಂಡ ಆರೋಗ್ಯ ಕಾರ್ಯದರ್ಶಿ ಆರ್ ರಾಜೇಶ್ ಕುಮಾರ್ ತಿಳಿಸಿದ್ದಾರೆ.
೨೭೦೦ ಮೀ ಎತ್ತರದ ಹಿಮಾಲಯ ಶ್ರೇಣಿಯಲ್ಲಿ ಚಾರ್ಧಾಮ ಇದ್ದು, ಅಲ್ಲಿ ಅತಿಯಾದ ಚಳಿ, ಕಡಿಮೆ ತೇವಾಂಶ ಹಾಗೂ ಆಮ್ಲಜನಕ ಕೊರತೆ ಇರುತ್ತದೆ. ಅಲ್ಟ್ರಾವೈಲೆಟ್ ರೇಡಿಯೇಷನ್ ಕೂಡ ಇರುವುದರಿಂದ ಈ ಜಾಗಕ್ಕೆ ತೆರಳಲು ಆರೋಗ್ಯ ಸೂಕ್ತವಾಗಿದೆಯೇ ಎಂದು ಮೊದಲೇ ವೈದ್ಯರು ತಪಾಸಣೆ ಮಾಡಿರಬೇಕು ಹಾಗಿದ್ದಾಗ ಮಾತ್ರ ಯಾತ್ರೆ ಹೋಗಲು ಸಾಧ್ಯ.
ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯವನ್ನು ಏಪ್ರಿಲ್ ೨೨ರಂದು, ಕೇದಾರನಾಥ ದೇವಾಲಯವನ್ನು ಏಪ್ರಿಲ್ ೨೫ರಲ್ಲಿ ತೆರಯಲಾಗಿತ್ತು. ಹಾಗೆಯೇ ಬದರಿನಾಥ್ ದೇವಾಲಯವನ್ನು ನಿನ್ನೆ ತೆರಯಲಾಗಿದೆ. ಕೇದಾರನಾಥ್ ಮತ್ತು ಬದರಿನಾಥ್ ದೇವಾಲಯಲದಲ್ಲಿ ಮೊದಲ ಪೂಜೆ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ನಡೆಯಿತು ಎಂದು ಅಲ್ಲಿನ ದೇವಾಲಯ ಸಮಿತಿಗಳು ತಿಳಿಸಿವೆ.