ಬಾಗಲಕೋಟೆ: ವಿಧಾನಸಭಾ ಚುನಾವಣೆ ಅಖಾಡ ದಿನೇ ದಿನೇ ರಂಗೇರುತ್ತಿದ್ದು, ನಾಮಪತ್ರ ವಾಪಸ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಚುನಾವಣೆ ಕಾವು ಮತ್ತಷ್ಟು ಏರತೊಡಗಿದೆ. ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಎಎಪಿ, ಜೆಡಿಎಸ್ ವಿವಿಧ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿ ಸೇರಿ ೧೫೬ ಜನ ನಾಮಪತ್ರ ಸಲ್ಲಿಕೆ ಮಾಡಿದ್ದರು. ೭೦ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ೧೫ ಅಭ್ಯರ್ಥಿಗಳು ವಾಪಸ್ ಪಡೆದುಕೊಂಡಿದ್ದಾರೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಏಳು ವಿಧಾನಸಭೆ ಮತಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರೇ, ಎಎಪಿ ೬ ಕ್ಷೇತ್ರಗಳಲ್ಲಿ, ಬಿಎಸ್ಪಿ ಒಂದು ಕ್ಷೇತ್ರದಲ್ಲಿ, ಜೆಡಿಯು, ಎನ್ಪಿಪಿಯಿಂದ ಯಾವುದೇ ಅಭ್ಯರ್ಥಿಗಳು ಕಣಕ್ಕೆ ಇಳಿದಿಲ್ಲ. ವಿವಿಧ ಪಕ್ಷಗಳಿಂದ ೧೮, ಸ್ವತಂತ್ರ ಅಭ್ಯರ್ಥಿಗಳಾಗಿ ೨೪ ಜನ ಸೇರಿ ಒಟ್ಟು ೭೦ ಜನ ಕಣದಲ್ಲಿ ಉಳಿದಿದ್ದಾರೆ. ಈ ಪೈಕಿ ಒಬ್ಬ ಮಹಿಳಾ ಅಭ್ಯರ್ಥಿಗಳು ಕಣದಲ್ಲಿ ಇಲ್ಲದಿರುವುದು ಗಮನಿಸಲೇ ಬೇಕಾದ ಸಂಗತಿ.
ಬೀಳಗಿ ಮತಕ್ಷೇತ್ರದಲ್ಲಿ ೧೦ ಜನ ಅಭ್ಯರ್ಥಿಗಳು:
ಬೀಳಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಜೆ.ಟಿ.ಪಾಟೀಲ, ಬಿಜೆಪಿಯಿಂದ ಮುರುಗೇಶ ನಿರಾಣಿ, ಎಎಪಿ ಪಕ್ಷದಿಂದ ಮುತ್ತಪ್ಪ ಕೋಮಾರ, ಜೆಡಿಎಸ್ನಿಂದ ರುಕುಮುದ್ದೀನ್ ಸೌದಾಗರ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ನರಸಿಂಹ ನಾಯ್ಕರ, ಕರ್ನಾಟಕ ರಾಷ್ಟ್ರ ಸಮಿತಿಪಕ್ಷದಿಂದ ಬಸವಲಿಂಗಯ್ಯ ರಾಜಶೇಖರಯ್ಯ ಹೊಂಬಾಳಿಮಠ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ರಾಜಕುಮಾರ ತಿಮ್ಮಣ್ಣ ನ್ಯಾಮಗೌಡ, ಸ್ವಾತಂತ್ರ್ಯ ಪಕ್ಷದಿಂದ ಕೃಷ್ಣಾ ಕಾಳೆ, ಪಕ್ಷೇತರ ಅಭ್ಯರ್ಥಿಯಾಗಿ ಯಲ್ಲಪ್ಪ ಹೆಗಡೆ, ಡಾ.ಎಲï.ಸಿ.ಪಾಟೀಲ ಕಣದಲ್ಲಿ ಇದ್ದಾರೆ.
ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ೧೨ ಅಭ್ಯರ್ಥಿಗಳು:
ತೇರದಾಳ ವಿಧಾನಸಭಾ ಮತಕ್ಷೇತ್ರದಲ್ಲಿ ೧೨ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಬಿಜೆಪಿ ಪಕ್ಷದಿಂದ ಸಿದ್ದು ಸವದಿ, ಕಾಂಗ್ರೆಸ್ ಪಕ್ಷದಿಂದ ಸಿದ್ದು ರಾಮಪ್ಪ ಕೊಣ್ಣೂರ, ಡಾ.ಪದ್ಮಜೀತ ನಾಡಗೌಡ, ಎಎಪಿ ಪಕ್ಷದಿಂದ ಅರ್ಜುನ ಹಲಗಿಗೌಡರ, ಎಸ್ಡಿಪಿಐ ಪಕ್ಷದಿಂದ ಯಮನಪ್ಪ ಗುಣದಾಳ, ಜಡಿಎಸ್ ಪಕ್ಷದಿಂದ ಸುರೇಶ ಮಡಿವಾಳ, ಪಕ್ಷೇತರ ಅಭ್ಯರ್ಥಿಗಳಾಗಿ ಡಾ.ಪದ್ಮಜೀತ ನಾಡಗೌಡ, ಸಂತೋಷ ಬಸಪ್ಪ ಹನಗಂಡಿ, ಅಂಬಾದಾಸ ರಾಮಮೂರ್ತಿ, ಅಡಿವೆಪ್ಪ ಉದ್ದಪ್ಪಗೋಳ, ಮಹಾಲಿಂಗಪ್ಪ ಹ್ಯಾಗಾಡಿ, ಆರ್ಪಿಐ ಪಕ್ಷದಿಂದ ಅಬ್ಬಾಸಲಿ ಮುಲ್ಲಾ, ಕೆಆರ್ಎಸ್ ಪಕ್ಷದಿಂದ ಧರೆಪ್ಪ ಧನಗೌಡ ಸೇರಿದಂತೆ ಕಣದಲ್ಲಿ ಉಳಿದಿದ್ದಾರೆ.
ಮುಧೋಳ ಮೀಸಲು ಕ್ಷೇತ್ರದಲ್ಲಿ ೮ ಜನ ಅಭ್ಯರ್ಥಿಗಳು:
ಮುಧೋಳ ವಿಧಾನಸಭಾ ಮತಕ್ಷೇತ್ರದಲ್ಲಿ ೮ ಜನ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಯಾವುದೇ ಅಭ್ಯರ್ಥಿಗಳು ನಾಮಪತ್ರ ಹಿಂದೆ ಪಡೆದುಕೊಂಡಿಲ್ಲ. ಬಿಜೆಪಿ ಪಕ್ಷದಿಂದ ಗೋವಿಂದ ಕಾರಜೋಳ, ಕಾಂಗ್ರೆಸ್ ಪಕ್ಷದಿಂದ ಆರ್.ಬಿ.ತಿಮ್ಮಾಪುರ, ಜೆಡಿಎಸ್ ಪಕ್ಷದಿಂದ ಧರ್ಮರಾಜ ವಿಠ್ಠಲ ದೊಡ್ಡಮನಿ, ಕೆಆರ್ಎಸ್ ಪಕ್ಷದಿಂದ ಮುತ್ತಪ್ಪ ಮರನೂರ, ಎಎಪಿ ಪಕ್ಷದಿಂದ ಗಣೇಶ ಪವಾರ, ಆರ್ಪಿಐ ಪಕ್ಷದಿಂದ ಮಹಾದೇವ ಮೇತ್ರಿ, ಕೆಜೆಪಿ ಪಕ್ಷದಿಂದ ಸಾಗರ ರೊಡ್ಡಪ್ಪನವರ ಹಾಗೂ ಪಕ್ಷೇತರ ಅಭ್ಯರ್ಥಿ ಸತೀಶ ಬಂಡಿವಡ್ಡರ ಅಖಾಡದಲ್ಲಿ ಉಳಿದಿದ್ದಾರೆ.
ಬಾದಾಮಿ ಮತಕ್ಷೇತ್ರದಲ್ಲಿ ೭ ಅಭ್ಯರ್ಥಿಗಳು:
ಬಾದಾಮಿ ಮತಕ್ಷೇತ್ರದಲ್ಲಿ ಏಳು ಜನ ಅಭ್ಯರ್ಥಿಗಳು ಕಣದಲ್ಲಿ ಇಳಿದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಭೀಮಸೇನ ಚಿಮ್ಮನಕಟ್ಟಿ, ಬಿಜೆಪಿ ಪಕ್ಷದಿಂದ ಶಾಂತಗೌಡ ಪಾಟೀಲ, ಜೆಡಿಎಸ್ ಪಕ್ಷದಿಂದ ಹನುಮಂತ ಮಾವಿನಮರದ, ಎಎಪಿ ಪಕ್ಷದಿಂದ ಶಿವರಾಯಪ್ಪ ಜೋಗಿನ, ಕೆಆರ್ಎಸ್ ಪಕ್ಷದಿಂದ ಆನಂದ ವಡ್ಡರ, ಪಕ್ಷೇತರ ಅಭ್ಯರ್ಥಿಯಾಗಿ ಭೀಮಪ್ಪ ತಳವಾರ, ಹನುಮಪ್ಪ ಕಾಟವನ್ನವರ ಕಣದಲ್ಲಿ ಉಳಿದಿದ್ದಾರೆ. ಕೆಜೆಪಿ ಅಭ್ಯರ್ಥಿ ಮಾರುತಿ ಜಮೀನ್ದಾರ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ.
ಹುನಗುಂದ ಕ್ಷೇತ್ರದಲ್ಲಿ ೧೧ ಜನ ಅಭ್ಯರ್ಥಿಗಳು:
ಹುನಗುಂದ ಮತಕ್ಷೇತ್ರದಲ್ಲಿ ಒಟ್ಟು ೧೧ ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ವಿಜಯಾನಂದ ಕಾಶಪ್ಪನವರ, ಬಿಜೆಪಿ ಪಕ್ಷದಿಂದ ದೊಡ್ಡನಗೌಡ ಪಾಟೀಲ, ಎಎಪಿ ಪಕ್ಷದಿಂದ ನಾಗರಾಜ ಹೊಂಗಲ್, ಜೆಡಿಎಸ್ ಪಕ್ಷದಿಂದ ಶಿವಪ್ಪ ಭೋಳಿ, ಕೆಆರ್ಎಸ್ ಪಕ್ಷದಿಂದ ದೇಸಾಯಿಗೌಡ ಗೌಡರ, ಕೆಆರ್ಪಿಪಿ ಪಕ್ಷದಿಂದ ಎಸ್.ಆರ್.ನವಲಿಹಿರೇಮಠ, ಪಕ್ಷೇತರ ಅಭ್ಯರ್ಥಿಗಳಾಗಿ ಸಿ.ಕೆ.ಅಕ್ಕಿ, ಸಿದ್ದಪ್ಪ ತುಡಬಿನಾಳ, ಮಾಳಪ್ಪ ರಾಮವಾಡಗಿ, ಶಿವನಗೌಡ ಮೇಣಸಗಿ, ಬಸನಗೌಡ ಹಿರೇಗೌಡರ ಕಣದಲ್ಲಿ ಇದ್ದಾರೆ.
ಜಮಖಂಡಿ ಮತಕ್ಷೇತ್ರದಲ್ಲಿ ೧೧ ಅಭ್ಯರ್ಥಿಗಳು:
ಜಮಖಂಡಿ ಮತಕ್ಷೇತ್ರದಲ್ಲಿ ಒಟ್ಟು ೧೧ ಜನ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಆನಂದ ನ್ಯಾಮಗೌಡ, ಬಿಜೆಪಿಯಿಂದ ಜಗದೀಶ ಗುಡಗುಂಟಿ, ಜೆಡಿಎಸ್ಪಕ್ಷದಿಂದ ಯಾಕ್ಯೂಬ ಕಪಡೆವಾಲೆ, ಬಿಎಸ್ಪಿ ಪಕ್ಷದಿಂದ ಶಿವಾನಂದ ಬಬಲೇಶ್ವರ, ಉತ್ತಮ ಪ್ರಜಾಕೀಯ ಪಾರ್ಟಿ ಅಂತೋಷ ಶಂಕರ ಸಹವಾಸೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸುರೇಶ ಬೂತಾಳೆಪ್ಪ ಹಂಚಿನಾಳ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಜಾರೆ ಹಸನ್ ಅಲಿ, ಪಕ್ಷೇತರ ಅಭ್ಯರ್ಥಿಗಳಾದ ಕಮರುದ್ದೀನ್ ಮುರಸಲ್, ಗುಡುಸಾಬ ಹ್ಯಾಳಕರ, ರವಿ ಶಿವಪ್ಪ ಪಡಸಲಗಿ, ಸುಶೀಲಕುಮಾರ ಬೆಳಗಲಿ ಕಣಕ್ಕೆ ಇಳಿದಿದ್ದಾರೆ.
ಬಾಗಲಕೋಟೆ ಮತಕ್ಷೇತ್ರದಲ್ಲಿ ೧೧ ಅಭ್ಯರ್ಥಿಗಳು :
ಬಾಗಲಕೋಟೆ ಮತಕ್ಷೇತ್ರದಲ್ಲಿ ಒಟ್ಟು ೧೧ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಕಾಂಗ್ರೆಸ್ ಪಕ್ಷದಿಂದ ಎಚ್.ವೈ.ಮೇಟಿ, ಬಿಜೆಪಿ ಪಕ್ಷದಿಂದ ಡಾ.ವೀರಣ್ಣ ಚರಂತಿಮಠ, ಜೆಡಿಎಸ್ ಪಕ್ಷದಿಂದ ಡಾ.ದೇವರಾಜ ಪಾಟೀಲ, ಎಎಪಿ ಪಕ್ಷದಿಂದ ರಮೇಶ ಬದ್ನೂರ, ಕರ್ನಾಟಕ ಜನಾತಾ ಪಕ್ಷದಿಂದ ಪ್ರಕಾಶ ಸರನಾಯಕ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಆರ್.ಡಿ.ಬಾಬು, ರೈತ ಭಾರತ ಪಕ್ಷದಿಂದ ಮುತ್ತಪ್ಪ ಹಿರೇಕುಂಬಿ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ನಾಗರಾಜ ಕಲಗುಡಕರ, ಮಲ್ಲಿಕಾರ್ಜುನ ಚರಂತಿಮಠ, ಪ್ರಶಾಂತ ಶರಣಪ್ಪ ರಾವ, ಎಂ.ಎಸ್.ಹಿರೇಮಠ ಇತರರು ಕಣದಲ್ಲಿದ್ದಾರೆ.