ಬೆಂಗಳೂರು: ಡಿ ಕೆ ಶಿವಕುಮಾರ್ ಭದ್ರಕೋಟೆ ಕನಕಪುರದಲ್ಲಿ ಡಿ. ಕೆ. ಸುರೇಶ್ ನಾಮ ಪತ್ರ ಸಲ್ಲಿಸಿ ರಾಜ್ಯ ರಾಜಕರಣದಲ್ಲಿ ಅಚ್ಚರಿಯನ್ನು ಮೂಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ನಾಮಪತ್ರ ಅನರ್ಹವಾಗಬಹುದು ಎಂಬ ಭೀತಿಯಲ್ಲಿ ಡಿಕೆಶಿ ತಮ್ಮ ಡಿಕೆ ಸುರೇಶ್ ಕನಕಪುರದಲ್ಲಿ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಮೇಲೆ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದು, ಅಕ್ರಮ ಹಣ ವರ್ಗಾವಣೆ ಇತ್ಯಾದಿ ಹಲವಾರು ಪ್ರಕರಣಗಳಿವೆ. ನಾಮಪತ್ರ ಸಲ್ಲಿಸುವ ವೇಳೆ ಅವರು ತಮ್ಮ ಆಸ್ತಿಯ ವಿವರ, ತಮ್ಮ ಮೇಲಿರುವ ಪ್ರಕರಣಗಳ ಬಗ್ಗೆ ನಿಯಮಗಳನುಸಾರವಾಗಿ ಅಫಿಡವಿಟ್ ಸಲ್ಲಿಸಿದ್ದಾರಾದರೂ ಎಲ್ಲೋ ಒಂದು ಕಡೆ ಅವರಿಗೆ ತಮ್ಮ ನಾಮಪತ್ರ ತಿರಸ್ಕೃತವಾಗಬಹುದು ಭೀತಿಯು ಕಾಡಿತ್ತು ಆ ಕಾರಣಕ್ಕಾಗಿಯೇ, ಅವರು ಮುಂಜಾಗ್ರತೆ ಕ್ರಮವಾಗಿ ಡಿಕೆ ಸುರೇಶ್ ಅವರನ್ನು ಬದಲಿ ಅಭ್ಯರ್ಥಿಯಾಗಿ ಕನಕಪುರದ ಕಣಕ್ಕಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪುತ್ರಿ ಐಶ್ವರ್ಯ ಅವರು ಕನಕಪುರದಲ್ಲಿ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಕಾಂಗ್ರೇಸ್ ಪಕ್ಷ ತನ್ನ ನಿರ್ಧಾರವನ್ನು ಬದಲಿಸಿ ಡಿ ಕೆ ಸುರೇಶ್ ಅವರನ್ನು ಕಣಕ್ಕೆ ಇಳಿಸಿದೆ.
ಡಿ.ಕೆ. ಶಿವಕುಮಾರ್ ಅವರ ಹಿಂದಿನ ಪ್ರಕರಣಗಳ ಕುರಿತು ನೋಟಿಸು ಬರುತ್ತಿದ್ದು, ನಾಲ್ಕು ದಿನಗಳ ಹಿಂದೆ ಚೆನ್ನೈನಿಂದ ಡಿಕೆಶಿ ಅವರು ಸ್ವತಃ ಬರಬೇಕು ಎಂದು ನೋಟಿಸ್ ನೀಡಿದ್ದಾರೆ. ಚುನಾವಣೆ ಇರುವ ಕಾರಣ ನಾವು ಒಂದು ತಿಂಗಳು ಬರಲು ಸಾಧ್ಯವಿಲ್ಲಆದರಿಂದ ನಿಮಗೆ ಏನು ಮಾಹಿತಿ ಬೇಕೋ ನಾವು ಕೊಡುತ್ತೇವೆ ಎಂದು ಡಿಕೆಶಿ ಉತ್ತರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಡಿ.ಕೆ. ಶಿವಕುಮಾರ್ ಅವರ ನಾಮಪತ್ರವೂ ತಿರಸ್ಕೃತಗೊಂಡು ಡಿಕೆ ಸುರೇಶ್ ಅವರು ಕಾಂಗ್ರೆಸ್ ನ ಮತ್ತೊಬ್ಬ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸದೇ ಇದ್ದರೆ ಆಗ ಆರ್. ಅಶೋಕ್ ಅವರ ನಿರಾಯಸವಾಗಿ ಗೆಲ್ಲುವ ಸಾಧ್ಯತೆಗಳಿವೆ . ಆದರಿಂದ ಕಾಂಗ್ರೇಸ್ ವರಿಷ್ಠರು ಡಿ ಕೆ ಸುರೇಶ್ ಅನ್ನು ಕಣಕ್ಕೆ ಇಳಿಸುವ ತಂತ್ರವನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.