ಎರಡು ದಿನಗಳ ಹಿಂದೆ ಚೀನಾದ ಮೀನುಗಾರಿಕಾ ನೌಕೆ ಲು ಪೆಂಗ್ ಯುವಾನ್ ಯು 028 ಹಿಂದೂ ಮಹಾಸಾಗರದಲ್ಲಿ ಮುಳುಗಿತ್ತು. ಈ ಹಡಗಿನಲ್ಲಿ 39 ಜನರಿದ್ದರು. ಚೀನಾ ಸಾಕಷ್ಟು ಪ್ರಯತ್ನಪಟ್ಟರೂ ತನ್ನ ಪ್ರಜೆಗಳನ್ನು ಹುಡುಕಲಾಗಲು ಸಾಧ್ಯವಾಗಲಿಲ್ಲ. ನಂತರ ಚೀನಾ ಭಾರತೀಯ ನೌಕಾಪಡೆಯ ಸಹಾಯವನ್ನು ಕೇಳಿದರು. ಚೀನಾದ ಕೋರಿಕೆಯ ಮೇರೆಗೆ, ಭಾರತವು ತನ್ನ ನೌಕಾಪಡೆಯ ಮೂಲಕ ಚೀನಾದ ನಾಗರಿಕರನ್ನು ರಕ್ಷಿಸಲು ಸಮುದ್ರದಲ್ಲಿ ಪ್ರಮುಖ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಚೀನಾದ ಮನವಿ ಮೇರೆಗೆ ಭಾರತ ಮತ್ತೊಮ್ಮೆ ಉದಾರತೆ ತೋರಲು ಮುಂದಾಗಿದೆ.
ಪ್ರತಿಕೂಲ ಹವಾಮಾನದಲ್ಲಿಯು ವಿಮಾನವು ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಿದೆ. ಹಡಗಿಗೆ ಸೇರಿದ ಹಲವಾರು ವಸ್ತುಗಳನ್ನು ಪತ್ತೆ ಮಾಡಲಾಗಿದೆ. ತ್ವರಿತ ಮಾನವೀಯ ಕ್ರಿಯೆಯ ಭಾಗವಾಗಿ, ವಿಮಾನವು ಭಾರತದಿಂದ ಸುಮಾರು 900 ನಾಟಿಕಲ್ ಮೈಲುಗಳಷ್ಟು ದಕ್ಷಿಣ ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಹುಡುಕಾಟ ನಡೆಸಿತು. ಹಡಗಿನಲ್ಲಿ 17 ಚೀನಿಯರು, 17 ಇಂಡೋನೇಷಿಯನ್ನರು ಮತ್ತು 5 ಫಿಲಿಪಿನೋಸ್ ಸಿಬ್ಬಂದಿ ಇದ್ದರು ಎಂಬುದಾಗಿ ವರದಿ ನೀಡಿದ್ದಾರೆ.
ಮುಳುಗಿದ ಹಡಗಿನ ನಿಖರವಾದ ಸ್ಥಳವನ್ನು ಹೇಳುವಲ್ಲಿ ಚೀನಾ ಇನ್ನೂ ಯಶಸ್ವಿಯಾಗಲಿಲ್ಲ. ಆದರೆ ಭಾರತೀಯ ನೌಕಾಪಡೆ ಅದನ್ನು ಯಶಸ್ವಿಯಾಗಿ ಪತ್ತೆ ಮಾಡಿದೆ. ಚೀನಾ ತನ್ನ ಹಡಗನ್ನು ಹುಡುಕಲು ಎರಡು ಹಡಗುಗಳನ್ನು ನಿಯೋಜಿಸಿತು. ನೌಕಾಪಡೆಯ ವಿಮಾನಗಳು ಅವರಿಗೆ ಮಾರ್ಗದರ್ಶನ ನೀಡುತ್ತಿವೆ. P-8I ನೀರಿನಲ್ಲಿ ಮುಳುಗಿದವರ ವಸ್ತುಗಳನ್ನು ಹುಡುಕಿದೆ. ಅಲ್ಲದೆ, ಚೀನಾದ ಕೋರಿಕೆಯ ಮೇರೆಗೆ ಭಾರತೀಯ ವಿಮಾನದಿಂದ SAR ಉಪಕರಣಗಳನ್ನು ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿದೆ. ಸಮುದ್ರದಲ್ಲಿ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಭಾರತವು ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಪಾಲುದಾರನಾಗಿ ತನ್ನ ಜವಾಬ್ದಾರಿಗಳನ್ನು ಪೂರೈಸಿದೆ. ಭಾರತೀಯ ನೌಕಾಪಡೆಯ ಘಟಕಗಳು ಆ ಪ್ರದೇಶದಲ್ಲಿನ ಇತರ ಘಟಕಗಳೊಂದಿಗೆ SAR ಪ್ರಯತ್ನಗಳನ್ನು ಸಂಯೋಜಿಸಿದವು ಮತ್ತು PLA (N) ಯುದ್ಧನೌಕೆಗಳನ್ನು ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿದೆ.
ಭಾರತವಲ್ಲದೆ, ಆಸ್ಟ್ರೇಲಿಯಾ, ಶ್ರೀಲಂಕಾ, ಇಂಡೋನೇಷ್ಯಾ, ಮಾಲ್ಡೀವ್ಸ್ ಮತ್ತು ಫಿಲಿಪೈನ್ಸ್ ನಿಂದಲು ಹಡಗಿನ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಡ್ರಿಫ್ಟ್ ಮಾಡೆಲಿಂಗ್ ಅನ್ನು ಆಧರಿಸಿ, 12,000 ಚದರ ಕಿಮೀ ಪ್ರದೇಶವನ್ನು ಅನ್ವೇಷಣೆಗಾಗಿ ಗುರುತಿಸಲಾಗಿದೆ. ಚೀನಾ ಸರ್ಕಾರದ ಮಾಧ್ಯಮ ವರದಿಗಳ ಪ್ರಕಾರ, ಚೀನಾ ಇಬ್ಬರ ಶವಗಳನ್ನು ಸ್ವೀಕರಿಸಿದೆ. ಆದರೆ, ಮೃತರ ಗುರುತನ್ನು ಇನ್ನೂ ಚೀನಾ ಬಹಿರಂಗಪಡಿಸಿಲ್ಲ.